• Home
  • About Us
  • ಕರ್ನಾಟಕ
Wednesday, November 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸ್ಥಿರಾಸ್ತಿ ನೋಂದಣಿ : ಜಮ್ಮು ಕಾಶ್ಮೀರದಲ್ಲಿ  ವಕೀಲರ ವ್ಯಾಪಕ ವಿರೋಧ

by
December 1, 2019
in ದೇಶ
0
ಸ್ಥಿರಾಸ್ತಿ ನೋಂದಣಿ : ಜಮ್ಮು ಕಾಶ್ಮೀರದಲ್ಲಿ  ವಕೀಲರ ವ್ಯಾಪಕ ವಿರೋಧ
Share on WhatsAppShare on FacebookShare on Telegram

ಕೇಂಧ್ರ ಸರ್ಕಾರ ಜಮ್ಮ ಮತ್ತು ಕಾಶ್ಮೀರದ 370 ನೇ ವಿಧಿಯನ್ನು ತೆಗೆದು ಹಾಕಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರ ಕಣಿವೆ ರಾಜ್ಯವು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಕಾಶ್ಮೀರದಲ್ಲಿ ನಾಗರಿಕರು ಎಂದಿನಂತೆ ಕೇಂದ್ರ ಸರ್ಕಾರದ ಕ್ರಮದ ವಿರುದ್ದ ಪ್ರತಿರೋಧವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸರ್ಕಾರದ ಆದೇಶವನ್ನು ಜಾರಿಗೆ ತರುವುದಕ್ಕಾಗಿ ಕಾಶ್ಮೀರದ ಆಡಳಿತ ನೂತನ ನೋಂದಾವಣೆ ಇಲಾಖೆಯನ್ನು ಸ್ಥಾಪಿಸುವುದಾಗಿ ಕಳೆದ ಅಕ್ಟೋಬರ್‌ 22 ರಂದು ಘೋಷಿಸಿದೆ.

ADVERTISEMENT

ಈ ಇಲಾಖೆಯನ್ನು ಸ್ಥಾಪಿಸುವ ಮೂಲಕ ಆಡಳಿತವು ನಾಗರಿಕರಿಗೆ ತಮ್ಮ ಸ್ಥಿರಾಸ್ಥಿಗಳ ನೋಂದಣಿ, ಮಾರಾಟ, ಭೋಗ್ಯ ಹಾಗೂ ಇನ್ನಿತರ ವ್ಯವಹಾರಗಳಿಗೆ ಅನುಕೂಲವಾಗಲಿದೆ ಎಂದು ಅಕ್ಟೋಬರ್‌ 23 ರಂದು ಬಿಡುಗಡೆ ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರು 464 ನೂತನ ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕಕ್ಕೂ ಅನುಮೋದನೆಯನ್ನು ನೀಡಿದ್ದಾರೆ. ಈ ಬದಲಾವಣೆಯು ಜಮ್ಮು ಕಾಶ್ಮೀರ ರಾಜ್ಯವು ಅನುಭವಿಸುತಿದ್ದ ಸಂವಿಧಾನದ 370 ನೇ ವಿಧಿಯಲ್ಲಿನ ವಿಶೇಷ ಸವಲತ್ತನ್ನು ರದ್ದುಗೊಳಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಡಿಸುವ ಪ್ರಯತ್ನದ ಮೊದಲ ಆಡಳಿತಾತ್ಮಕ ಕ್ರಮ ಆಗಿತ್ತು. ಇದರಲ್ಲಿ ಸಂವಿಧಾನದ 370 ನೇ ವಿಧಿಯನ್ವಯ ಇದ್ದ ರಾಜ್ಯದ ಅಧಿಕಾರ , ಅಲ್ಲದೆ ರಾಜ್ಯಕ್ಕೆ 35 ನೇ ಎ ಅನ್ವಯ ಇದ್ದ ರಾಜ್ಯದ ಪರಮಾಧಿಕಾರ ಹೊಂದಿದ್ದ ಆಸ್ತಿಯನ್ನು ಹೊಂದುವ ಹಕ್ಕೂ ಒಳಗೊಂಂಡಂತೆ ಕೆಲವು ವಿಷಯಗಳ ಎಲ್ಲ ಅಧಿಕಾರವನ್ನೂ ಮೊಟಕುಗೊಳಿಸುವುದಾಗಿತ್ತು.

ಸಂಸತ್ತು ಅನುಮೋದನೆ ಮಾಡಲಾದ ಜಮ್ಮು ಕಾಶ್ಮೀರ ದ ಪುನರ್ವಿಂಗಡನೆ ಕಾಯ್ದೆ ಯು ಇದು ಈ ಬೃಹತ್ ಆಡಳಿತಾತ್ಮಕ ಕೂಲಂಕುಷ ಬದಲಾವಣೆಗೆ ಮಾರ್ಗಸೂಚಿಯನ್ನು ನೀಡುತ್ತದೆ. ರದ್ದುಗೊಳಿಸಬೇಕಾದ 153 ರಾಜ್ಯ ಕಾನೂನುಗಳು ಮತ್ತು ಹೊಸ ಕೇಂದ್ರ ಪ್ರದೇಶಗಳ ಮೇಲೆ ವಿಧಿಸಲಾದ 106 ಕೇಂದ್ರ ಕಾನೂನುಗಳನ್ನು ಇದು ಪಟ್ಟಿ ಮಾಡಿದೆ. ಪಟ್ಟಿ ಮಾಡಲಾದ ರಾಜ್ಯ ಕಾನೂನುಗಳಲ್ಲಿ ಒಂದು ಜಮ್ಮು ಮತ್ತು ಕಾಶ್ಮೀರ ನೋಂದಣಿ ಕಾಯ್ದೆ, ಇದನ್ನು ಕೇಂದ್ರ ಕಾನೂನು 1908 ರ ನೋಂದಣಿ ಕಾಯ್ದೆಯಾಗಿ ಬದಲಾಯಿಸಲಾಗಿದೆ.

ಇದು ಆಗಸ್ಟ್ 5 ರ ನಿರ್ಧಾರದಿಂದ ಉಂಟಾದ ಪ್ರಮುಖ ಬದಲಾವಣೆಗಳಲ್ಲಿ ಮುಖ್ಯವಾದುದು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಖರೀದಿ ಮತ್ತು ಮಾರಾಟಕ್ಕೆ ನೀಡಿರುವ ಹಕ್ಕು. ಈಗಾಗಲೇ, ಇದು ರಾಜ್ಯದ ವಕೀಲರಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.

ನೂತನ ಪುನರ್ವಿಂಗಡಣಾ ಕಾಯ್ದೆಯ ಪ್ರಕಾರ ರಾಜ್ಯವು ಪರಮಾಧಿಕಾರ ಹೊಂದಿದ್ದ ಆಸ್ತಿಯನ್ನು ಹೊರಗಿನವರಿಗೆ ಮಾರಾಟ ಮಾಡುವ ಹಕ್ಕನ್ನು ಕಿತ್ತುಕೊಂಡಿದೆ. ಈಗ ದೇಶದ ಯಾವನೇ ಪ್ರಜೆ ಆಸ್ತಿಯನ್ನು ಖರೀದಿಸಬಹುದಾಗಿದೆ . ನೂತನ ನೋಂದಣಿ ಕಾಯ್ದೆಯೂ ಆಡಳಿತಕ್ಕೆ ಭೂ ವ್ಯವಹಾರಗಳನ್ನು ನಿಯಂತ್ರಿಸುವ ಅಧಿಕಾರವನ್ನು ನೀಡಿದೆ. ಮೊದಲು ಇದು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದ್ದು ನ್ಯಾಯಾಂಗವೂ ಪರಮಾಧಿಕಾರವನ್ನು ಹೊಂದಿತ್ತು.

ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯ ಮೂರ್ತಿಗಳು ರಾಜ್ಯದ ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ರಿಜಿಸ್ಟ್ರೇಷನ್ಸ್‌ ಗೆ ಸಮನಾದ ಹಕ್ಕು ಮತ್ತು ಅಧಿಕಾರವನ್ನು ಹೊಂದಿದ್ದರು. ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಜಿಲ್ಲಾ ನೋಂದಾವಣಾಧಿಕಾರಿಗಳ ಅಧಿಕಾರವನ್ನೂ ಹೊಂದಿದ್ದರು. ಹಿಂದಿದ್ದ ರಾಜ್ಯದ ಕಾನೂನು ಇಲಾಖೆ ನೋಂದಾವಣೆಯ ಆಡಳಿತ ನಿಯಂತ್ರಣವನ್ನು ಹೊಂದಿತ್ತು. ಆಡಳಿತವು ಆಸ್ತಿತ್ವಕ್ಕೆ ತಂದಿರುವ ನೂತನ ನೋಂದಾವಣೆ ಇಲಾಖೆಯು ಕಂದಾಯ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದ್ದು ಹೆಚ್ಚುವರಿ ಜಿಲ್ಲಾಧಿಕಾರಿಗಳು ನೋಂದಾವಣಾಧೀಕಾರಿಗಳಾಗಿಯೂ ಉಪ ವಿಭಾಗೀಯ ದಂಢಾಧಿಕಾರಿ ಮತ್ತು ಸಹಾಯಕ ಕಮೀಷನರ್‌ ಗಳು ಸಬ್‌ ರಿಜಿಸ್ಟ್ರಾರ್‌ ಗಳ ಕರ್ತವ್ಯವನ್ನೂ ನಿರ್ವಹಿಸಲಿದ್ದಾರೆ. ಕಂದಾಯ ಇಲಾಖೆಯ ಹಣಕಾಸು ವಿಭಾಗದ ಕಮೀಷನರ್‌ ಆಗಿದ್ದ ಪವನ್‌ ಕೋಟ್ವಲ್‌ ಅವರು ಈಗ ಇನ್ಸ್‌ಪೆಕ್ಟರ್‌ ಜನರಲ್‌ ಆಪ್‌ ರಿಜಿಸ್ಟ್ರೇಷನ್ಸ್‌ ಆಗಿ ಕಾರ್ಯ ವಹಿಸಿಕೊಂಡಿದ್ದಾರೆ.

ನ್ಯಾಯಾಂಗದಿಂದ ಕಾರ್ಯಾಂಗಕ್ಕೆ ಸಂಪೂರ್ಣ ಹಕ್ಕನ್ನು ವರ್ಗಾಯಿಸಿರುವುದು ಕೆಲವೊಂದು ಅನುಮಾನಗಳನ್ನೂ ಹುಟ್ಟು ಹಾಕಿದೆ ಎಂದು ಕೇಂದ್ರ ಕಾಶ್ಮೀರದ ಗಂಢೆರ್‌ ಬಾಲ್‌ ಜಿಲ್ಲೆಯ ಸಿವಿಲ್‌ ನ್ಯಾಯಾಲಯದ ವಕೀಲರ ಅಭಿಪ್ರಾಯವಾಗಿದೆ. ಏಕೆಂದರೆ ನ್ಯಾಯಾಂಗ ಇಲಾಖೆಯ ಪರಿಶೀಲನೆ ಅತ್ಯಂತ ಕಟ್ಟು ನಿಟ್ಟಿನಿಂದ ಕೂಡಿದ್ದು ಇದನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಮಾಡಲು ಸಾದ್ವವಿಲ್ಲ ಎನ್ನುತ್ತಾರೆ. ಈ ಅಧಿಕಾರವನ್ನು ನೀಡಿರುವುದಕ್ಕೆ ಜಮ್ಮು ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜಮ್ಮು ವಕೀಲರ ಸಂಘದ ಅದ್ಯಕ್ಷ ಅಭಿನವ್‌ ಶರ್ಮ ರ ನೇತೃತ್ವದಲ್ಲಿ ಎಲ್ಲ ವಕೀಲರೂ ನವೆಂಬರ್‌ ಒಂದರಂದು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು.

ಈ ಅಧಿಕಾರದ ವರ್ಗಾವಣೆಯಿಂದ ಸರ್ಕಾರ ಯಾವುದೇ ಅಧಿಕಾರಿಗೆ ಸ್ಥಿರಾಸ್ತೀ ವರ್ಗಾಯಿಸುವ ಅಧಿಕಾರ ನೀಡಬಹುದಾಗಿದೆ . ವಕೀಲರು ವಿರೋಧಿಸುತ್ತಿರುವ ಮೊದಲ ಕಾರಣವೆಂದರೆ ನ್ಯಾಯಾಂಗ ಇಲಾಖೆಯ ಅಧೀನದಲ್ಲಿ ಇದ್ದರೆ ಪಾರದರ್ಶಕತೆ ಇರುತ್ತದೆ ಜತೆಗೇ ಸಾರ್ವಜನಿಕರಿಗೂ ಹೆಚ್ಚಿನ ಅನುಕೂಲವಾಗುತ್ದದೆ. ಕಳೆದ ನವೆಂಬರ್‌ 21 ರಂದು ಜಮ್ಮುವಿನ ವಕೀಲರು ಈ ಹಕ್ಕನ್ನು ನ್ಯಾಯಾಂಗ ಇಲಾಖೆಗೆ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಪ್ತತಿಭಟನೆ ಆರಂಬಿಸುವ ಎಚ್ಚರಿಕೆ ನೀಡಿದ್ದಾರೆ .

ಜಮ್ಮುವಿನ ಬಿಜೆಪಿ ವಕ್ತಾರ ಸುನಿಲ್‌ ಸೇಥಿ ಅವರೂ ಕೇಂದ್ರ ಗೃಹ ಸಚಿವರಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ಜಮ್ಮು ಕಾಶ್ಮೀರದ ಬಾರ್‌ ಅಸೋಸಿಯೇಷನ್‌ ಕೂಡ ಪ್ರತಿಭಟನೆ ನಡೆಸುತಿದ್ದು ನ್ಯಾಯಾಂಗ ಇಲಾಖೆಗೆ ಆಸ್ತಿ ವರ್ಗಾವಣೆ ಅಧಿಕಾರ ನೀಡಬೇಕೆಂದು ಒತ್ತಾಯಿಸುತ್ತಿದೆ. ಅಲ್ಲದೆ ಭದ್ರತಾ ಕಾಯ್ದೆಯಡಿಯಲ್ಲಿ ಇಬ್ಬರು ಹಿರಿಯ ವಕೀಲರನ್ನು ಬಂಧಿಸಿ ಜಮ್ಮು ಕಾಶ್ಮೀರದ ಹೊರೆ ಜೈಲಿನಲ್ಲಿ ಇಟ್ಟಿರುವುದನ್ನೂ ವಿರೋಧಿಸಿ ಅವರ ಬಿಡುಗಡೆಗಾಗಿ ಒತ್ತಾಯಿಸುತ್ತಿದೆ.

ಕಾಶ್ಮೀರ ಕಣಿವೆಯಾದ್ಯಂತ ಬಹು ಸಂಖ್ಯಾತ ಮುಸ್ಲಿಂರ ಭೌಗೋಳಿಕೆ ಹಿನ್ನೆಲೆಯನ್ನೇ ಬದಲಾಯಿಸಲು ಈ ಅಧಿಕಾರವನ್ನು ಕಸಿಯಲಾಗಿದೆ ಎಂಬುದು ನಾಗರಿಕರ ಆರೋಪವಾಗಿದೆ.. ಸರ್ಕಾರವು ಹೊರಗಿನಿಂದ ಬಂಡವಾಳ ಹೂಡಿಕೆದಾರರನ್ನು ಮತ್ತು ಹೊರಗಿನ ನಾಗರಿಕರನ್ನು ಕರೆ ತಂದು ಅವರನ್ನು ಸುಲಭವಾಗಿ ಕಾಶ್ಮೀರದ ನಾಗರಿಕರನ್ನಾಗಿ ಮಾಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸುತಿದ್ದಾರೆ. ಏಕೆಂದರೆ ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿ ಕೆಲಸ ಮಾಡಿಸಿಕೊಳ್ಳುವುದು ಅತ್ಯಂತ ಕಷ್ಟಕರ ಮತ್ತು ಅಸಾದ್ಯ ಆದರೆ ಕಂದಾಯ ಇಲಾಖೆಯ ನೌಕರರ ಮೂಲಕ ಇದು ಸುಲಭ ಸಾದ್ಯ ಎಂದೂ ಅವರು ಹೇಳುತ್ತಾರೆ.

ಆಸ್ತಿಯ ಮಾರಾಟ , ಭೋಗ್ಯ ಇನ್ನಿತರ ದಾಖಲೆ ಪತ್ರಗಳು ಸಂಪೂರ್ಣ ಕಾನೂನಿನ ದಾಖಲೆಗಳಾಗಿವೆ ಇವುಗಳನ್ನು ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸುವುದು ಸಾದ್ಯವೇ ಇಲ್ಲ ಏಕೆಂದರೆ ಹೊಸದಾಗಿ ಸೃಷ್ಟಿಸಲಾದ ಇಲಾಖೆಯ ಅಧಿಕಾರಿಗಳಿಗೆ ಇನ್ನೂ ಅನುಭವವೂ ಇರುವುದಿಲ್ಲ ಎಂದು ನಅಗರಿಕರು ಆರೋಪಿಸುತ್ತಾರೆ.

ವಕೀಲ ವೃಂದದ ಪ್ರಕಾರ ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಕೀಲರಿಗೆ ಸಿಗುತ್ತಿರುವ ಸಂಭಾವನೆಯ ಶೇಕಡಾ 60 ರಷ್ಟು ಸ್ಥಿರಾಸ್ಥಿ ನೋಂದಾವಣೆ ಹಾಗೂ ಈ ದಾಖಲಾತಿಯನ್ನು ಸಿದ್ದಪಡಿಸುವುದರಿಂದಲೇ ಬರುತ್ತಿದೆ. ಈ ಅಧಿಕಾರವನ್ನು ಕಸಿದುಕೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ಹೆಚ್ಚಲಿದೆ ಅಲ್ಲದೆ ದಾಖಲಾತಿಯ ಲ್ಲಿ ಅಕ್ರಮಗಳು ಆಗುವ ಸಾಧ್ಯತೆಯೂ ಇದೆ ಎಂದು ಅವರು ಹೇಳುತ್ತಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ಅಧಿಕಾರಶಾಹಿ ವರ್ತನೆಯಿಂದಾಗಿ ಕಕ್ಷಿದಾರರು ಪದೇ ಪದೇ ಕಚೇರಿಗಳಿಗೆ ಎಡತಾಕಬೇಕಾಗುತ್ತದೆ . ಇದನ್ನು ತಪ್ಪಿಸಲು ಕಚೇರಿಯಲ್ಲಿ ಮದ್ಯವರ್ತಿಗಳು ಬ್ರೋಕರ್‌ ಗಳೂ ಹುಟ್ಟಿಕೊಳ್ಳುತ್ತಾರೆ ಇದರಿಂದ ಕಕಿದಾರರು ಮತ್ತಷ್ಟು ತೊಂದರೆಗೀಡಾಗುತ್ತಾರೆ ಎಂದೂ ಅವರು ಆರೋಪಿಸುತ್ತಾರೆ.

Tags: decisionGovernmentJammu and KashmirjudiciaryLawyersprotestingRevenue Departmenttransferಕಂದಾಯ ಇಲಾಖೆಜಮ್ಮು ಮತ್ತು ಕಾಶ್ಚೀರನಿರ್ಧಾರನ್ಯಾಯಾಂಗಪ್ರತಿಭಟನೆವಕೀಲರುವರ್ಗಾವಣೆಸರ್ಕಾರ
Previous Post

ಅನರ್ಹರ ಮೇಲಿನ ಜನಾಕ್ರೋಶದಿಂದ ಫಲಿತಾಂಶದ ಮೇಲಿನ ಪರಿಣಾಮವೇನು?

Next Post

ಮೋದಿ ಸರ್ಕಾರದ ಬಗ್ಗೆ ಉದ್ಯಮಿ ರಾಹುಲ್ ಬಜಾಜ್  ಬಿಚ್ಚಿಟ್ಟ ಸತ್ಯವೇನು?

Related Posts

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?
Top Story

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

by ಪ್ರತಿಧ್ವನಿ
November 12, 2025
0

ನವದೆಹಲಿ: ದೇಶದಲ್ಲಿ ಏನೇ ನಡೆದರೂ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಚರ್ಚೆಗಳು ಇದ್ದೇ ಇರುತ್ತದೆ. ಘಟನೆ ಸಂಭವಿಸಿದ ರೀತಿ, ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಹೀಗೆ ಒಂದಿಲ್ಲ ಒಂದು...

Read moreDetails
ಮಾಧ್ಯಮ ಸ್ವಾತಂತ್ರ್ಯವೂ-ನೈತಿಕ ಜವಾಬ್ದಾರಿಯೂ

ಮಾಧ್ಯಮ ಸ್ವಾತಂತ್ರ್ಯವೂ-ನೈತಿಕ ಜವಾಬ್ದಾರಿಯೂ

November 12, 2025
ಬಿಹಾರ Exit Poll: ಅಧಿಕಾರದತ್ತ ಎನ್‌ಡಿಎ..ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆ

ಬಿಹಾರ Exit Poll: ಅಧಿಕಾರದತ್ತ ಎನ್‌ಡಿಎ..ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆ

November 11, 2025

ಮಂಡ್ಯ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್..!!

November 11, 2025
ದೆಹಲಿಯಲ್ಲಿ ನಿಗೂಢ ಕಾರು ಸ್ಫೋಟ: ಶಂಕಿತ ವ್ಯಕ್ತಿಯ ಕುಟುಂಬಸ್ಥರು ವಶಕ್ಕೆ

ದೆಹಲಿಯಲ್ಲಿ ನಿಗೂಢ ಕಾರು ಸ್ಫೋಟ: ಶಂಕಿತ ವ್ಯಕ್ತಿಯ ಕುಟುಂಬಸ್ಥರು ವಶಕ್ಕೆ

November 11, 2025
Next Post
ಮೋದಿ ಸರ್ಕಾರದ ಬಗ್ಗೆ ಉದ್ಯಮಿ ರಾಹುಲ್ ಬಜಾಜ್  ಬಿಚ್ಚಿಟ್ಟ ಸತ್ಯವೇನು?

ಮೋದಿ ಸರ್ಕಾರದ ಬಗ್ಗೆ ಉದ್ಯಮಿ ರಾಹುಲ್ ಬಜಾಜ್  ಬಿಚ್ಚಿಟ್ಟ ಸತ್ಯವೇನು?

Please login to join discussion

Recent News

ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 12, 2025
ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?
Top Story

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

by ಪ್ರತಿಧ್ವನಿ
November 12, 2025
ಕರ್ನಾಟಕ ಕ್ವಾಂಟಮ್‌ ಎಕೋಸಿಸ್ಟಮ್‌ ಮ್ಯಾಪ್‌ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಎನ್‌.ಎಸ್‌ ಭೋಸರಾಜು ಸೂಚನೆ
Top Story

ಕರ್ನಾಟಕ ಕ್ವಾಂಟಮ್‌ ಎಕೋಸಿಸ್ಟಮ್‌ ಮ್ಯಾಪ್‌ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಎನ್‌.ಎಸ್‌ ಭೋಸರಾಜು ಸೂಚನೆ

by ಪ್ರತಿಧ್ವನಿ
November 12, 2025
ಧರ್ಮಸ್ಥಳ ಕೇಸ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು
Top Story

ಧರ್ಮಸ್ಥಳ ಕೇಸ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

by ಪ್ರತಿಧ್ವನಿ
November 12, 2025
ಸಂತೋಷ್‌ ಲಾಡ್‌ V/S ವಿಜಯೇಂದ್ರ ವಾಕ್ಸಮರ: ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಕಾಂಗ್ರೆಸ್‌ ಸಚಿವ
Top Story

ಸಂತೋಷ್‌ ಲಾಡ್‌ V/S ವಿಜಯೇಂದ್ರ ವಾಕ್ಸಮರ: ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಕಾಂಗ್ರೆಸ್‌ ಸಚಿವ

by ಪ್ರತಿಧ್ವನಿ
November 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

November 12, 2025
ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

November 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada