• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸಿಎಂ ಆಪ್ತ ಸಂತೋಷ್ ಗೆ ದಿಢೀರ್ ಬೆಳವಣಿಗೆಯ ಹಿಂದಿನ ರಹಸ್ಯವೇ ಕುತ್ತಾಯಿತೆ?

by
November 29, 2020
in ಕರ್ನಾಟಕ
0
ಸಿಎಂ ಆಪ್ತ ಸಂತೋಷ್ ಗೆ ದಿಢೀರ್ ಬೆಳವಣಿಗೆಯ ಹಿಂದಿನ ರಹಸ್ಯವೇ ಕುತ್ತಾಯಿತೆ?
Share on WhatsAppShare on FacebookShare on Telegram

ರಾಜ್ಯ ಬಿಜೆಪಿಯ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ನಡುವೆಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಸಾಕಷ್ಟು ಶ್ರಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್ ಆರ್ ಸಂತೋಷ್ ಆತ್ಮಹತ್ಯೆ ಯತ್ನ ನಡೆಸಿರುವುದು ಬಿಕ್ಕಟ್ಟುಗಳನ್ನು ಇನ್ನಷ್ಟು ಗೋಜಲುಗೊಳಿಸಿದೆ.

ADVERTISEMENT

ಒಂದು ಕಡೆ ಸಂಪುಟ ಪುನರ್ ರಚನೆ, ವಿಸ್ತರಣೆಗಳ ವಿಷಯದಲ್ಲಿ ಒಂದು ಕಡೆ ಬಿಜೆಪಿಯ ದೆಹಲಿ ಮತ್ತು ಬೆಂಗಳೂರು ಶಕ್ತಿಕೇಂದ್ರಗಳ ಸಂಘರ್ಷ ತಾರಕಕ್ಕೇರಿದ್ದರೆ, ಮತ್ತೊಂದು ಕಡೆ ಮುಖ್ಯಮಂತ್ರಿಗಳ ಆಪ್ತ ವಲಯದ ಒಳಸುಳಿಗಳೇ ಬಿರುಗಾಳಿಗಳಾಗಿ ಬದಲಾಗಿದ್ದವು. ಸದ್ಯ ಯಡಿಯೂರಪ್ಪ ಸರ್ಕಾರ ಮತ್ತು ಸಂಪುಟ ಪುನರ್ ರಚನೆಯ ಪ್ರಯತ್ನಗಳಿಗೆ ದೊಡ್ಡ ಸವಾಲಾಗಿರುವ ಕೆಲವು ಬೆಳವಣಿಗೆಗಳೇ, ಆ ಸರ್ಕಾರ ಬರಲು ಮತ್ತು ಅವರು ಮುಖ್ಯಮಂತ್ರಿಯಾಗಲು ಪ್ರಮುಖ ಪಾತ್ರ ವಹಿಸಿದ್ದ ವ್ಯಕ್ತಿಗಳ ಸುತ್ತ ಹಲವು ಸುಳಿಗಳು ಸುತ್ತಿಕೊಂಡಿದ್ದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಂದು ಕಡೆ ಮೂವರು ಪತ್ರಕರ್ತರು ಒಬ್ಬರ ಮೇಲೊಬ್ಬರಂತೆ ಸರದಿಯಲ್ಲಿ ಯಡಿಯೂರಪ್ಪ ಆಪ್ತವಲಯದ ವಿವಿಧ ಹುದ್ದೆಗಳಿಂದ ಹೊರಬಿದ್ದರೆ, ಮತ್ತೊಬ್ಬ ಪ್ರಮುಖ ಆಪ್ತ ಆರ್ ಎನ್ ಸಂತೋಷ್ ಕೂಡ ಹೊರಬೀಳಲಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು. ಜೊತೆಗೆ ಸರ್ಕಾರದ ಮೂಲ ಕಾರಣವಾದ ವಲಸಿಗ ಶಾಸಕರು ಮತ್ತು ಸಚಿವರ ಕೂಡ ಪ್ರತ್ಯೇಕ ರಹಸ್ಯ ಸಭೆಗಳನ್ನು ಮಾಡಿ ತಮ್ಮ ಒಗ್ಗಟ್ಟು ಕಾಯ್ದುಕೊಂಡು ಬಂದವರೆಲ್ಲರಿಗೂ ಸಚಿವ ಸ್ಥಾನ ಖಾತ್ರಿಪಡಿಸಿಕೊಳ್ಳುವ ತಂತ್ರ ಹೆಣೆಯತೊಡಗಿದ್ದರು. ವಲಸಿಗರ ನಾಯಕ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಕೂತು ವರಿಷ್ಠರು ಮತ್ತು ಯಡಿಯೂರಪ್ಪ ವಿರೋಧಿ ಬಣದ ಸೂತ್ರಧಾರರ ಜೊತೆ ಮಾತುಕತೆ ನಡೆಸುತ್ತಿರುವ ಹೊತ್ತಿಗೇ ಶುಕ್ರವಾರ ಬೆಂಗಳೂರಿನಲ್ಲಿ ಅವರ ಗುಂಪಿನ ನಾಯಕರು ಹೀಗೆ ಪ್ರತ್ಯೇಕ ಸಭೆಗಳಲ್ಲಿ ನಿರತರಾಗಿದ್ದರು.

ಒಂದು ಕಡೆ ಲಿಂಗಾಯತ ಮೀಸಲಾತಿ ಮತ್ತು ಒಬಿಸಿ ಸ್ಥಾನಮಾನದ ಅಸ್ತ್ರ ಪ್ರಯೋಗಿಸಿ ಪಕ್ಷದ ದೆಹಲಿಯ ವರಿಷ್ಠರ ದಿಢೀರ್ ಯೂ ಟರ್ನ್ ಹೊರಡಿಸಿದ ಬೆನ್ನಲ್ಲೇ, ಆ ವಿಷಯದ ಕುರಿತ ಸಂಪುಟ ಸಭೆಯ ತೀರ್ಮಾನಕ್ಕೆ ಬ್ರೇಕ್ ಬಿದ್ದಿತ್ತು. ಜೊತೆಗೆ ಸಂಪುಟ ಪುನರ್ ರಚನೆಗೆ ಹಸಿರು ನಿಶಾನೆ ತೋರಿದ್ಧಾರೆ ಎಂದೂ ಹೇಳಲಾಗಿತ್ತು. ಈ ನಡುವೆ, ವೀರಶೈವ-ಲಿಂಗಾಯತ ಮಠಾಧೀಶರುಗಳು ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಪಟ್ಟು ಹಿಡಿದಿದ್ದರು. ಪತ್ರಿಕಾಗೋಷ್ಠಿ ನಡೆಸಿ 24 ತಾಸುಗಳ ಗಡುವು ಕೊಟ್ಟು 2ಎ ಮೀಸಲಾತಿ ಘೋಷಿಸದೇ ಹೋದರೆ ಪಾದಯಾತ್ರೆ, ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು.

ಹೀಗೆ ಹಲವು ಕ್ಷಿಪ್ರ ಬೆಳವಣಿಗೆಗಳಿಗೆ ಶುಕ್ರವಾರ ಸಾಕ್ಷಿಯಾಗಿತ್ತು. ಅದರ ಬೆನ್ನಲ್ಲೇ ಸಂಜೆ ಹೊತ್ತಿಗೆ ಯಡಿಯೂರಪ್ಪ ಅವರ ಪರಮಾಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಆತಂಕದ ಸುದ್ದಿ ಹೊರಬಿತ್ತು. ಆ ಮೂಲಕ ಅವರ ಆ ಸ್ಥಿತಿಗೆ ನಿಜವಾಗಿಯೂ ಕಾರಣವೇನು? ವೈಯಕ್ತಿಕ ಸಮಸ್ಯೆಯೇ? ರಾಜ್ಯ ರಾಜಕಾರಣದ ಬೆಳವಣಿಗೆಗಳೇ? ಹುದ್ದೆ ಕಳೆದುಕೊಳ್ಳುವ ಆತಂಕವೇ? ಅಥವಾ ರಾಜಕೀಯ ಮತ್ತು ವೈಯಕ್ತಿಕವಾಗಿ ಅವರು ರಾಜ್ಯದ ಪ್ರಭಾವಿಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ಹೊಂದಿದ್ದ ವ್ಯತಿರಿಕ್ತ ಸಂಬಂಧಗಳೇ ? ಎಂಬ ಪ್ರಶ್ನೆಗಳು ಎದ್ದಿವೆ. ಜೊತೆಗೆ ಈ ಹಿಂದೆ ಸಚಿವ ಕೆ ಎಸ್ ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣದಲ್ಲಿ ಕೇಳಿಬಂದಿದ್ದಂತೆಯೇ ಈಗಲೂ ಮತ್ತೊಂದು ವಿಡಿಯೋ ಸಂಗತಿ ಕೂಡ ಆತ್ಮಹತ್ಯೆಯ ಹಿಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Also Read: ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ CM ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ

ಮುಖ್ಯವಾಗಿ ಮುಖ್ಯಮಂತ್ರಿಗಳ ಆಪ್ತ ಸಹಾಯಕನಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಂತೋಷ್, ವೈಯಕ್ತಿಕವಾಗಿಯೂ ಯಡಿಯೂರಪ್ಪ ಅವರಿಗೆ ಹತ್ತಿರದ ಸಂಬಂಧಿ. ತಿಪಟೂರು ತಾಲೂಕು ನೊಣವಿನಕೆರೆ ಮೂಲದ ಅವರು, ಬಿಎಸ್ ವೈ ಅವರ ಅಕ್ಕನ ಮೊಮ್ಮಗ. ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿ ಮತ್ತು ಆರ್ ಎಸ್ಎಸ್ ಚಟುವಟಿಕೆಗಳ ಮೂಲಕ ರಾಜಕೀಯ ಸಂಪರ್ಕ ಬೆಳೆಸಿಕೊಂಡಿದ್ದ ಸಂತೋಷ್, ಯಡಿಯೂರಪ್ಪ ಆಪ್ತ ಸಹಾಯಕ ಸ್ಥಾನದಿಂದ ಸಿದ್ದಲಿಂಗಸ್ವಾಮಿ ದೂರವಾದ ಬಳಿಕ ಆ ಸ್ಥಾನಕ್ಕೆ ಬಂದಿದ್ದರು.

ಆದರೆ, ಮೊದಲ ಬಾರಿ ರಾಜ್ಯಾದ್ಯಂತ ಅವರ ಹೆಸರು ಕೇಳಿಬಂದಿದ್ದು ಮಾತ್ರ ಇಂತಹದ್ದೇ ಒಂದು ಪ್ರಕರಣದಲ್ಲಿ. ಒಂದು ರಹಸ್ಯ ಸಿಡಿ ವಿಷಯದಲ್ಲಿ ಮತ್ತೊಬ್ಬ ಬಿಜೆಪಿ ನಾಯಕ ಮತ್ತು ಯಡಿಯೂರಪ್ಪ ಪ್ರತಿಸ್ಪರ್ಧಿ ಕೆ ಎಸ್ ಈಶ್ವರಪ್ಪ ಆಪ್ತಸಹಾಯಕ ವಿನಯ್ ಅಪಹರಣ ಪ್ರಕರಣದಲ್ಲಿ ಸಂತೋಷ್ ತನಿಖೆ ಎದುರಿಸಿದ್ದರು. ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದು, ಪರಸ್ಪರ ರಾಜೀ ಮೂಲಕ ಪ್ರಕರಣ ಇತ್ಯರ್ಥವಾಗಿದೆ ಎನ್ನಲಾಗಿತ್ತು. ಆ ಪ್ರಕರಣದಲ್ಲಿ ತಿಂಗಳುಗಟ್ಟಲೆ ಹೈಡ್ರಾಮ ನಡೆದು, ಇಬ್ಬರು ಪ್ರಮುಖರ ಆಪ್ತಸಹಾಯಕರ ನಡುವಿನ ಈ ಅಪಹರಣ, ಕೇಸು, ಕೋರ್ಟು ಪ್ರಹಸನದಲ್ಲಿ ಸ್ವತಃ ಯಡಿಯೂರಪ್ಪ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟೀಸ್ ನೀಡಿತ್ತು. ಜೊತೆಗೆ ಇದು ಆಪ್ತ ಸಹಾಯಕರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ; ಆಗ ಪರಸ್ಪರ ಕತ್ತಿ ಮಸೆಯುತ್ತಿದ್ದ ಇಬ್ಬರು ನಾಯಕರ ನಡುವಿನ ಹಗ್ಗಜಗ್ಗಾಟದ ಸಂಗತಿ ಕೂಡ ಎಂಬ ಮಾತೂ ಕೇಳಿಬಂದಿತ್ತು. ಅಲ್ಲದೆ, ಆ ಸಿಡಿ ಹಿಂದಿನ ರಹಸ್ಯ ಕೂಡ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.

Also Read: ಸಿಎಂ ಕಚೇರಿ ಬದಲಾವಣೆ ಪರ್ವ: ಎನ್ ಆರ್ ಸಂತೋಷ್ ರಾಜೀನಾಮೆ ಕ್ಷಣಗಣನೆ?

ರಾಯಣ್ಣ ಬ್ರಿಗೇಡ್ ಎಂಬ ರಾಜಕೀಯ ಶಕ್ತಿಪ್ರದರ್ಶನದ ಕೆ ಎಸ್ ಈಶ್ವರಪ್ಪ ಅವರ ರಾಜಕೀಯ ಅಸ್ತ್ರ ನಿಧಾನಕ್ಕೆ ಬದಿಗೆ ಸರಿದಂತೆ ಯಡಿಯೂರಪ್ಪ ಮತ್ತು ಅವರ ನಡುವಿನ ಶೀತಲ ಸಮರವೂ ಶಮನಗೊಂಡಿತ್ತು. ಕಾಕತಾಳೀಯ ಎಂಬಂತೆ ಅವರ ಆಪ್ತ ಸಹಾಯಕರ ನಡುವಿನ ಈ ಅಪಹರಣ ಪ್ರಕರಣ ಕೂಡ ಇದ್ದಕ್ಕಿದ್ದಂತೆ ಸದ್ದಡಗಿತ್ತು.

ಆ ಬಳಿಕ ಮತ್ತೆ ಸಂತೋಷ್ ಹೆಸರು ಮುಂಚೂಣಿಗೆ ಬಂದದ್ದು ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಉರುಳಿಸಲು ನಡೆದ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ. ಬಂಡಾಯ ಶಾಸಕರನ್ನು ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ಸಾಗಿಸಿ, ಅವರನ್ನು ತಿಂಗಳುಗಟ್ಟಲೆ ಅಲ್ಲಿ ಬಚ್ಚಿಟ್ಟು ಅವರ ಬೇಕುಬೇಡಗಳನ್ನು ನಿರ್ವಹಣೆ ಮಾಡಿದ ಕೀರ್ತಿ ಸಂತೋಷ್ ಗೇ ಸಂದಿತ್ತು. ಆನ್ ಕ್ಯಾಮರಾ ಕೂಡ ಅವರು ಬಂಡಾಯ ಶಾಸಕರನ್ನು ಹಿಡಿದು ವಿಮಾನಕ್ಕೆ ಹತ್ತಿಸಿದ ದೃಶ್ಯಾವಳಿಗಳು ಬಿತ್ತರವಾಗುತ್ತಲೇ ಸಂತೋಷ್ ಇಡೀ ಆಪರೇಷನ್ ಕಮಲದ ಕಟ್ಟಾಳುವಾಗಿ ಹೊರಹೊಮ್ಮಿದ್ದರು.

ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಗೆ ಏರುತ್ತಲೇ ತಮ್ಮ ಆ ‘ಶ್ರಮ’ಕ್ಕೆ ತಕ್ಕ ಪ್ರತಿಫಲ ನಿರೀಕ್ಷಿಸಿದ್ದರು. ಆದರೆ, ಬಹುತೇಕ ಕಳೆದ ಮಾರ್ಚ್ ವರೆಗೆ ತಿಂಗಳ ಕಾಲ ಅವರ ಆ ನಿರೀಕ್ಷೆ ನಿರೀಕ್ಷೆಯಾಗೇ ಉಳಿದುಬಿಟ್ಟಿತ್ತು. ಕಳೆದ ಮಾರ್ಚ್ ನಲ್ಲಿ ದಿಢೀರನೇ ಪಕ್ಷ ಮತ್ತು ಕುಟುಂಬದ ಹಲವರ ವಿರೋಧದ ನಡುವೆಯೂ ಯಡಿಯೂರಪ್ಪ, ಸಂತೋಷ್ ಅವರಿಗೆ ಆಪ್ತ ಸಹಾಯಕ ಸ್ಥಾನದಿಂದ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ಬಡ್ತಿ ನೀಡಿದ್ದರು. ಆ ನೇಮಕ ಕೂಡ ದೊಡ್ಡಮಟ್ಟದಲ್ಲಿ ಸಿಎಂ ಕುಟುಂಬ ಮತ್ತು ಆಪ್ತ ವಲಯದಲ್ಲಿ ಅಸಮಾಧಾನ ಮತ್ತು ವಾಗ್ವಾದಕ್ಕೆ ಕಾರಣವಾಗಿತ್ತು ಎಂಬುದು ಬಹಿರಂಗವಾಗಿಯೇ ಎಲ್ಲರಿಗೂ ತಿಳಿದ ಸಂಗತಿ.

ಈ ನಡುವೆ ಇದೀಗ ಕಳೆದ ಎರಡು ವಾರಗಳಿಂದ ಯಡಿಯೂರಪ್ಪ ಅವರ ಆಪರೇಷನ್ ಕಮಲಕ್ಕೆ ನೆರವಾಗಿ ವಿವಿಧ ಹುದ್ದೆ ಪಡೆದು, ಬಳಿಕ ಅವರ ಪುತ್ರ ವಿಜಯೇಂದ್ರನ ಕೆಂಗಣ್ಣಿಗೆ ಗುರಿಯಾಗಿ ಹೊರನಡೆದ ಪತ್ರಕರ್ತರಂತೆಯೇ ಸಂತೋಷ್ ಕೂಡ ಹೊರಬೀಳಲಿದ್ದಾರೆ. ನವೆಂಬರ್ 25ರ ಒಳಗೆ ರಾಜೀನಾಮೆ ನೀಡಿ, ಇಲ್ಲವೇ ನಾವೇ ಕಿತ್ತು ಹಾಕಬೇಕಾಗುತ್ತದೆ ಎಂದು ಸಂತೋಷ್ ಗೆ ತಾಕೀತು ಮಾಡಲಾಗಿದೆ ಎಂಬ ವರದಿಗಳು ಕೇಳಿಬಂದಿದ್ದವು.

ಜೊತೆಗೆ ಸಂತೋಷ್, ಸರ್ಕಾರ ಅಸ್ತಿತ್ವಕ್ಕೆ ಬಂದು ಸುಮಾರು ಹತ್ತು ತಿಂಗಳ ‘ನಿರಂತರ ಪ್ರಯತ್ನ’ದ ಬಳಿಕ ದಕ್ಕಿಸಿಕೊಂಡಿದ್ದ ಈ ಸ್ಥಾನದ ಜೊತೆಗೆ, ರಾಜಕೀಯವಾಗಿಯೂ ತಮ್ಮ ಭವಿಷ್ಯ ಕೈತಪ್ಪಬಹುದು. ಈಗಾಗಲೇ ಪಕ್ಷದಲ್ಲಿ ತಮ್ಮ ವಿರುದ್ಧ ದೊಡ್ಡ ಮಟ್ಟದ ಅಸಮಾಧಾನ ಎದ್ದಿದೆ ಎಂದು ಆತಂಕಕ್ಕೀಡಾಗಿದ್ದರು. ಜೊತೆಗೆ ವೈಯಕ್ತಿಕವಾಗಿ ಕೆಲವು ಸಮಸ್ಯೆಗಳಲ್ಲಿ ಸಿಲುಕಿದ್ದರು. ವೈಯಕ್ತಿಕವಾಗಿ ಮಹಿಳೆಯೊಬ್ಬರೊಂದಿಗೆ ಇರುವ ವೀಡಿಯೋ ಪಕ್ಷದ ವರಿಷ್ಠರ ಕೈಗೆ ತಲುಪಿಸಿ ಅವರ ನೇಮಕ ರದ್ದು ಮಾಡುವಂತೆ ಪಕ್ಷದ ಒಳಗಿನಿಂದಲೇ ಒತ್ತಡ ಹೇರಲಾಗಿತ್ತು. ಈ ಸಂಗತಿಗಳು ಕೂಡ ಅವರನ್ನು ಸದ್ಯದ ವಿಪರೀತದ ಹೆಜ್ಜೆ ಇಡಲು ಪ್ರೇರೇಪಿಸಿರಬಹುದು ಎಂಬ ಮಾತೂ ಕೇಳಿಬರುತ್ತಿದೆ.

ಆ ಹಿನ್ನೆಲೆಯಲ್ಲಿ; ಪ್ರಕರಣದ ಕುರಿತು ಸರಿಯಾದ ತನಿಖೆ ನಡೆದಲ್ಲಿ ಸಂತೋಷ್ ಎಂಬ ಮೂವತ್ತೊಂದರ ಹರೆಯದ ವ್ಯಕ್ತಿ ಏಕಾಏಕಿ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ಏರಿದ ದಿಢೀರ್ ರಾಜಕೀಯ ಬೆಳವಣಿಗೆ ಮತ್ತು ಅದರ ಹಿಂದಿನ ಹಕೀಕತ್ತುಗಳು ಕೂಡ ಬಯಲಾಗಬಹುದು. ಆದರೆ, ಅಂತಹದ್ದೊಂದು ನಿಷ್ಪಕ್ಷಪಾತ ತನಿಖೆಯನ್ನು ಅವರದೇ ಸರ್ಕಾರದಿಂದ ನಿರೀಕ್ಷಿಸಲು ಸಾಧ್ಯವೇ?

Tags: ಎನ್ ಆರ್ ಸಂತೋಷ್ಬಿಜೆಪಿ
Previous Post

ರೈತರ ಸಮಸ್ಯೆ ಆಲಿಸಲು ಸರ್ಕಾರ ಸಿದ್ಧವಾಗಿದೆ: ಅಮಿತ್ ಶಾ

Next Post

ರಮೇಶ್ ಜಾರಕಿಹೊಳಿ ದೆಹಲಿ ಭೇಟಿ ಕುರಿತು ಸ್ಪಷ್ಟನೆ ನೀಡಿದ ಲಕ್ಷ್ಮಣ್‌ ಸವದಿ

Related Posts

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
0

ಜ್ವರ ಹಾಗೂ ಯೂರಿನ್ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಕೆಲವು ದಿನಗಳ...

Read moreDetails

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
Next Post
ರಮೇಶ್ ಜಾರಕಿಹೊಳಿ ದೆಹಲಿ ಭೇಟಿ ಕುರಿತು ಸ್ಪಷ್ಟನೆ ನೀಡಿದ ಲಕ್ಷ್ಮಣ್‌ ಸವದಿ

ರಮೇಶ್ ಜಾರಕಿಹೊಳಿ ದೆಹಲಿ ಭೇಟಿ ಕುರಿತು ಸ್ಪಷ್ಟನೆ ನೀಡಿದ ಲಕ್ಷ್ಮಣ್‌ ಸವದಿ

Please login to join discussion

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada