• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸಾಮುದಾಯಿಕ ಹಂತಕ್ಕೆ ತಲುಪಿದೆಯೇ ಕರೋನಾ? ಉತ್ತರ ಕಂಡುಕೊಳ್ಳಲು ಫೀಲ್ಡ್‌ಗಿಳಿಯುತ್ತಿದೆ ICMR !

by
May 13, 2020
in ದೇಶ
0
ಸಾಮುದಾಯಿಕ ಹಂತಕ್ಕೆ ತಲುಪಿದೆಯೇ ಕರೋನಾ? ಉತ್ತರ ಕಂಡುಕೊಳ್ಳಲು ಫೀಲ್ಡ್‌ಗಿಳಿಯುತ್ತಿದೆ ICMR !
Share on WhatsAppShare on FacebookShare on Telegram

ಕರೋನಾ ವೈರಸ್‌ ಭಾರತದಲ್ಲಿ ಸಮುದಾಯಕ್ಕೆ ಹರಡಿದೆಯೇ? ಹೀಗಂತ ಹತ್ತು ಹಲವು ಅನುಮಾನಗಳು ಕಾಡುತ್ತಲೇ ಇವೆ. ಅದಕ್ಕೊಂದು ಕಾರಣನೂ ಇದೆ. ದೇಶದಲ್ಲಿ ಒಂದೂವರೆ ತಿಂಗಳಿಗೂ ಅಧಿಕ ಲಾಕ್‌ಡೌನ್‌ ಘೋಷಿಸಿದರೂ ಇದುವರೆಗೂ ಕರೋನಾ ನಿರೀಕ್ಷಿತ ಮಟ್ಟದ ಕುಸಿತ ಕಂಡಿಲ್ಲ. ಬದಲಾಗಿ ದಿನವೊಂದಕ್ಕೆ ಸಾವಿರಾರು ಮಂದಿಯಲ್ಲಿ ಕರೋನಾ ಸೋಂಕು ದೃಢಪಡುತ್ತಿದ್ದರೆ, ನೂರಾರು ಮಂದಿ ಬಲಿಯಾಗುತ್ತಿದ್ದಾರೆ. ಈ ಕುರಿತು ʼಪ್ರತಿಧ್ವನಿʼ ವಿಸ್ತೃತ ವರದಿ ತಯಾರಿಸಿತ್ತು. ನಿಜಕ್ಕೂ ಎರಡು ಹಂತದ ಲಾಕ್‌ಡೌನ್‌ ನಿಂದ ಕರೋನಾ ನಿಯಂತ್ರಣಕ್ಕೆ ಬಂದಿದೆಯಾ ಅನ್ನೋದರ ಅಂಕಿ-ಅಂಶ ಸಹಿತ ʼಪ್ರತಿಧ್ವನಿʼ ಸತ್ಯಾಂಶ ಮುಂದಿಟ್ಟಿತ್ತು. ಇದರಿಂದಾಗಿ ದೇಶದಲ್ಲಿ ಕರೋನಾ ಹರಡುತ್ತಿರುವ ರೀತಿಯ ಬಗ್ಗೆ ಜಿಜ್ಞಾಸೆಗಳು ಹುಟ್ಟಿಕೊಂಡಿದ್ದಾವೆ. ಕೆಲವು ತಜ್ಞರು ʼಈಗಾಗಲೇ ಭಾರತದಲ್ಲಿ ಸಮುದಾಯಕ್ಕೆ ಕರೋನಾ ಸೋಂಕು ತಲುಪಿದೆʼ ಅಂತಾ ಈ ಹಿಂದೆಯೇ ತಿಳಿಸಿದ್ದರು.

ADVERTISEMENT

ಅದಕ್ಕೆ ಪೂರಕವೆನ್ನುವಂತೆ ಕರೋನಾ ಸೋಂಕು ಬಾಧಿತನ ಜೊತೆ ನೇರ ಅಥವಾ ಪರೋಕ್ಷ ಸಂಬಂಧವಿಲ್ಲದ ಧಾರಾವಿ ಸ್ಲಂ ನಲ್ಲಿ ಕಾರ್ಮಿಕನೊಬ್ಬನಿಗೆ ಕರೋನಾ ಕಂಡುಬಂದಿದ್ದು ಆ ನಂತರ ಆ ವ್ಯಕ್ತಿ ಸಾವನ್ನಪ್ಪಿದ್ದರು. ಅವರಿಂದಾಗಿ ಇನ್ನಿತರರಿಗೂ ಅಲ್ಲಿ ಕರೋನಾ ಸೋಂಕು ಹಬ್ಬಿತ್ತು. ಯಾವುದೇ ಪ್ರವಾಸ ಇತಿಹಾಸ ಹೊಂದಿಲ್ಲದ ಆ ವ್ಯಕ್ತಿಗೆ ಕರೋನಾ ದೃಢಪಟ್ಟಿದಾದರೂ ಹೇಗೆ ಅನ್ನೋದು ತಿಳಿಯದಾದಾಗ ಅದಾಗಲೇ ಕೆಲವು ಮಾಧ್ಯಮಗಳು ದೇಶದಲ್ಲಿ ಕರೋನಾ ಮೂರನೇ ಹಂತ ತಲುಪಿದೆ ಎಂದು ಸುದ್ದಿ ಮಾಡಿದ್ದವು. ಮೂರನೇ ಹಂತ ತಲುಪಿದರೆ ಸೋಂಕು ಬಾಧಿತನ ಹಿನ್ನೆಲೆ, ರೂಟ್‌ ಮ್ಯಾಪ್‌ ಅಥವಾ ಚಾರ್ಟ್‌ ರಚನೆ ಇದ್ಯಾವುದೂ ಸಾಧ್ಯವಾಗದು. ಆದರೆ ಸದ್ಯ ಭಾರತದಲ್ಲಿ ಆ ಹಂತದಲ್ಲಿ ಕರೋನಾ ಇದೆಯಾ ಅನ್ನೋದರ ಕುರಿತು ಹೆಚ್ಚು ಹೆಚ್ಚು ಅನುಮಾನಗಳು ಕಾಡತೊಡಗಿದ್ದಾವೆ.

ಕಳೆದ ಒಂದೂವರೆ ತಿಂಗಳಿನಿಂದ ಕರೋನಾ ನಿಯಂತ್ರಣಕ್ಕೆ ಬಾರದೇ ಇದ್ದರೂ, ಇದೀಗ ಮತ್ತೆ ನಾಲ್ಕನೇ ಹಂತದ ಲಾಕ್‌ಡೌನ್‌ ಮುಂದುವರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತನ್ನ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಜನರಿಗೆ ಇನ್ನಷ್ಟು ಆತಂಕ ಎದುರಾಗಿದೆ. ಒಂದು ವೇಳೆ ಮೂರನೇ ಹಂತ ಅಥವಾ ಸಮುದಾಯಕ್ಕೆ ಕರೋನಾ ಸೋಂಕು ಹರಡಿದಲ್ಲಿ ಅದರ ನಿಯಂತ್ರಣ ಸಾಧ್ಯವೇ ಅನ್ನೋ ಭಯವೂ ಕಾಡುತ್ತಿದೆ. ಈಗಾಗಲೇ ಲಾಕ್‌ಡೌನ್‌ ಸಡಿಲಿಕೆಯಿಂದ ಬೆಂಗಳೂರಿನಂತಹ ಮಹಾನಗರಗಳಲ್ಲಿ ಟ್ರಾಫಿಕ್‌ ಸಮಸ್ಯೆ ಶುರುವಾಗಿದೆ. ಅಂದರೆ ಅಷ್ಟರ ಮಟ್ಟಿಗೆ ಸಡಿಲಿಕೆ ನೀಡಲಾಗಿದೆ ಅನ್ನೋದನ್ನ ಅರ್ಥೈಸಬಹುದು.

ಇದೀಗ ಇದೆಲ್ಲಕ್ಕೂ ಉತ್ತರ ನೀಡಲು ಹೆಚ್ಚು ಜವಾಬ್ದಾರಿ ಸ್ಥಾನದಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಮುಂದಾಗಿದೆ. ಇದೇ ವಾರದಲ್ಲಿ ಸರ್ವೇ ನಡೆಸಲು ಮುಂದಾಗಿರುವ ICMR ತನ್ನ ಅಧ್ಯಯನವನ್ನ ಹತ್ತು ದಿನಗಳ ಒಳಗಾಗಿ ವರದಿ ತಯಾರಿಸಲು ಯೋಜಿಸಿದೆ. ಈ ಮೂಲಕ ದೇಶದ ಜನರ ಗೊಂದಲಕ್ಕೆ ಉತ್ತರ ನೀಡುವ ಪ್ರಯತ್ನದಲ್ಲಿ ICMR ಇದೆ.

ಆದರೆ ಈವರೆಗೂ ಭಾರತದಲ್ಲಿ ಕರೋನಾ ಸಾಮುದಾಯಿಕ ಸೋಂಕು ಆಗಿ ಬದಲಾಗಿಲ್ಲ ಅಂತಾ ICMR ಹೇಳುತ್ತಾ ಬಂದಿದೆ. ಆದರೆ ಅದೆಲ್ಲವೂ ಕೋವಿಡ್-19‌ ಚಿಕಿತ್ಸೆ ನೀಡುವ ಆಸ್ಪತ್ರೆಗಳ ವರದಿ ಅನ್ವಯಿಸಿಯೇ ಆಗಿತ್ತು. ಆದ್ದರಿಂದ ಇದೀಗ ICMR ಖುದ್ದು ಅಧ್ಯಯನಕ್ಕೆ ವೈದ್ಯಕೀಯ ತಂಡವನ್ನ ಇಳಿಸಲಿದೆ. ಮಾತ್ರವಲ್ಲದೇ ಎಪ್ರಿಲ್‌ ತಿಂಗಳಿನಲ್ಲಿ ಕೆಲವೊಂದು ವ್ಯಕ್ತಿಗಳಲ್ಲಿ ನಿಗೂಢವಾಗಿ ಕರೋನಾ ಕಾಣಿಸಿಕೊಂಡಿದ್ದು, ಇದು ಹೇಗೆ ಸಾಧ್ಯವಾಯಿತು ಅನ್ನೋದರ ಬಗ್ಗೆ ICMR ಉತ್ತರ ಕಂಡುಕೊಳ್ಳಬೇಕಿದೆ. ಕಾರಣ, ಅದರಲ್ಲಿ ಎಷ್ಟೋ ಮಂದಿಗೆ ಪ್ರವಾಸ ಇತಿಹಾಸ ಇರಬಹುದು ಅಥವಾ ಸೋಂಕಿತ ಸಂಪರ್ಕ ಮುಂತಾದ ಯಾವುದೇ ಸಾಧ್ಯತೆಗಳು ಇರಲಿಲ್ಲ. ಆದರೂ ಸೋಂಕಿಗೆ ತುತ್ತಾಗಿದ್ದು ಅಚ್ಚರಿಯಾಗಿತ್ತು.

ಸದ್ಯ ನಡೆಯಲಿರುವ ಸರ್ವೇ 21 ರಾಜ್ಯಗಳ 69 ಜಿಲ್ಲೆಗಳಲ್ಲಿ ನಡೆಯಲಿದೆ. ಇದರಲ್ಲಿ ಕರ್ನಾಟಕದ ಬೆಂಗಳೂರು ನಗರ ಸೇರಿದಂತೆ ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ, ಕೋಲ್ಕತ್ತಾ, ದೆಹಲಿ ಮುಂತಾದೆಡೆ ಪ್ರಮುಖವಾಗಿ ಸರ್ವೇ ಕಾರ್ಯ ನಡೆಯಲಿರುವುದಾಗಿ ICMR ತಿಳಿಸಿದೆ.

ನಿಜಕ್ಕಾದರೆ ಈಗಾಗಲೇ ICMR ತನ್ನ ಸರ್ವೇ ಕಾರ್ಯ ಮುಗಿಸಬೇಕಿತ್ತು. ಆದರೆ ಸರ್ವೇ ನಡೆಸಲು ಬೇಕಾದ ಕಿಟ್‌ಗಳು ಚೀನಾದಿಂದ ಆಮದು ಮಾಡಿಕೊಳ್ಳಲಾಗಿತ್ತಾದರೂ, ಅದು ದೋಷ ಪೂರಿತ ಎಂದು ಗೊತ್ತಾಗುತ್ತಲೇ ಅದು ತನ್ನ ಕಾರ್ಯಯೋಜನೆಯನ್ನ ಕೈ ಬಿಟ್ಟಿತ್ತು. ಆದರೆ ಇದೀಗ ಈ ವಾರದಲ್ಲಿಯೇ ಸರ್ವೇ ಕಾರಾಯ ನಡೆಸಲಿದ್ದು, ಆ ಮೂಲಕ ಕರೋನಾ ಸೋಂಕು ಸಾಮುದಾಯಿಕವಾಗಿ ಹರಡಿದೆಯೇ ಅನ್ನೋದರ ಕುರಿತು ವರದಿ ತಯಾರಿಸಲಿದೆ. ಅಲ್ಲದೇ ಇದು ದೇಶಾದ್ಯಂತ ಕರೋನಾ ಹರಡುತ್ತಿರುವ ಬಗೆಗೆ ಒಂದು ಸ್ಪಷ್ಟ ಚಿತ್ರಣ ನಮ್ಮ ಮುಂದಿಡಲಿದೆ ಎಂದು ICMR ತಿಳಿಸಿದೆ.

ಒಟ್ಟಿನಲ್ಲಿ ಸಮುದಾಯಕ್ಕೆ ಸೋಂಕು ಹರಡಿದ ಹೊರತಾಗಿಯೂ, ಸಾವಿರ ಸಾವಿರ ಸಂಖ್ಯೆಯಲ್ಲಿ ಸಾವಿನ ಪ್ರಮಾಣ ಕಂಡಿದ್ದ ಸ್ಪೇಯ್ನ್‌ ನಲ್ಲಿ ಆರು ವಾರಗಳ ಲಾಕ್‌ಡೌನ್‌ ನಿಂದ ಬಹಳ ಪರಿಣಾಮಕಾರಿ ನಿಯಂತ್ರಣಕ್ಕೆ ಬಂದಿದೆ ಅನ್ನೋದನ್ನ ಕಳೆದ ಒಂದು ತಿಂಗಳ ವರದಿಯೇ ನಮ್ಮ ಮುಂದಿಡುತ್ತವೆ. ಆದರೆ ಭಾರತದಲ್ಲಿ ಮಾತ್ರ ಲಾಕ್‌ಡೌನ್‌ ನಾಲ್ಕನೇ ಹಂತ ತಲುಪಿದರೂ ಯಾಕಾಗಿ ನಿಯಂತ್ರಣಕ್ಕೆ ಬರುತ್ತಿಲ್ಲ ಅನ್ನೋ ಪ್ರಶ್ನೆಗೂ ICMR ಉತ್ತರ ಕಂಡುಕೊಳ್ಳಬೇಕಿದೆ.

Tags: ‌ ಲಾಕ್‌ಡೌನ್‌ ಸಾಮುದಾಯಿಕ ಹರಡುವಿಕೆcommunity transmissionCovid 19ICMRLockdownಐಸಿಎಂಆರ್ಕೋವಿಡ್-19
Previous Post

20 ಲಕ್ಷ ಕೋಟಿ ಸ್ವಾವಲಂಬಿ ಭಾರತ ಪ್ಯಾಕೇಜ್ ನಿಜವಾಗುವುದೆ?

Next Post

ಮೇ 16ರಿಂದ ಆರಂಭವಾಗಲಿದೆ ಎರಡನೇ ಹಂತದ ʼವಂದೇ ಭಾರತ್‌‌ʼ ಮಿಷನ್

Related Posts

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
0

ದೇಶದ ರಕ್ಷಣೆಗೆ ಶ್ರಮಿಸುತ್ತಿರುವ ರಾಹುಲ್ ಗಾಂಧಿ ಅವರಿಗೆ ಆರೋಗ್ಯ, ಸಂತೋಷ ಸಿಗಲಿ: ಜನ್ಮದಿನ ಹಿನ್ನೆಲೆಯಲ್ಲಿ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್ ಬಿ.ವಿ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕರ್ತರಿಂದ...

Read moreDetails
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

June 15, 2025
Next Post
ಮೇ 16ರಿಂದ ಆರಂಭವಾಗಲಿದೆ ಎರಡನೇ ಹಂತದ ʼವಂದೇ ಭಾರತ್‌‌ʼ ಮಿಷನ್

ಮೇ 16ರಿಂದ ಆರಂಭವಾಗಲಿದೆ ಎರಡನೇ ಹಂತದ ʼವಂದೇ ಭಾರತ್‌‌ʼ ಮಿಷನ್

Please login to join discussion

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ
Top Story

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

by ಪ್ರತಿಧ್ವನಿ
June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ
Top Story

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

by ಪ್ರತಿಧ್ವನಿ
June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada