• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸರ್ಕಾರಿ ಕಂಪನಿಗಳ ‘ಅಪಮೌಲ್ಯ’ಗೊಳಿಸುವ ಮೋದಿ ಸರ್ಕಾರದ ಅಜೆಂಡಾ ಯಶಸ್ವಿ

by
October 24, 2020
in ದೇಶ
0
ಸರ್ಕಾರಿ ಕಂಪನಿಗಳ ‘ಅಪಮೌಲ್ಯ’ಗೊಳಿಸುವ ಮೋದಿ ಸರ್ಕಾರದ ಅಜೆಂಡಾ ಯಶಸ್ವಿ
Share on WhatsAppShare on FacebookShare on Telegram

ದೇಶದ ಷೇರು ಬಂಡವಾಳ ಮಾರುಕಟ್ಟೆಯಲ್ಲಾದ ಇತ್ತೀಚಿನ ಒಂದು ಬೆಳವಣಿಗೆ ಎಂದರೆ ಖಾಸಗಿ ವಲಯದ ಬ್ಯಾಂಕೇತರ ಹಣಕಾಸು ಸಂಸ್ಥೆಯಾದ ಬಜಾಜ್ ಫೈನಾನ್ಸ್ ಭಾರತದ ಅಗ್ರ ಹತ್ತು ಕಂಪನಿಗಳ ಪಟ್ಟಿಗೆ ಸೇರ್ಪಡೆಯಾಗಿರುವುದು. ಅದು ಸಾರ್ವಜನಿಕ ವಲಯದ ಮತ್ತು ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಹನ್ನೊಂದನೇ ಸ್ಥಾನಕ್ಕೆ ತಳ್ಳಿ ಈ ಸ್ಥಾನಕ್ಕೇರಿದೆ. ದೇಶದ ಅಗ್ರ ವಿತ್ತ ಪತ್ರಿಕೆಗಳಲ್ಲಿ ಇದೂ ಒಂದು ಪ್ರಮುಖ ಸುದ್ದಿಯಾಗಿದೆ. ಆದರೆ, ಪ್ರಮುಖ ವಿತ್ತ ಪತ್ರಿಕೆಗಳು ಗಮನಿಸದೇ ಹೋದ ಅತಿ ದೊಡ್ಡ ಅಂಶ ಎಂದರೆ, ದೇಶದ ಅಗ್ರ ಹತ್ತು ಕಂಪನಿಗಳ ಪೈಕಿ ಕೇಂದ್ರ ಸರ್ಕಾರದ ಯಾವುದೇ ಒಂದು ಉದ್ಯಮವೂ ಇಲ್ಲ ಎಂಬುದು. ಅಲ್ಲಿಗೆ ಪ್ರಧಾನಿ ಮೋದಿ ಅವರ ಅಜೆಂಡಾ ಯಶಸ್ವಿಯಾದಂತಾಗಿದೆ.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಹೊಸದರಲ್ಲಿ ದೇಶದ ಅಗ್ರ ಹತ್ತು ಕಂಪನಿಗಳ ಪೈಕಿ ಮೂರು ಕಂಪನಿಗಳು ಕೇಂದ್ರ ಸರ್ಕಾರದ ಕಂಪನಿಗಳಾಗಿದ್ದವು. ಕಂಪನಿಗಳನ್ನು ಅವುಗಳ ಮಾರುಕಟ್ಟೆ ಬಂಡವಾಳದ ಮೌಲ್ಯದ ಆಧಾರದ ಶ್ರೇಣೀಕರಿಸಲಾಗುತ್ತದೆ. 2014ರಲ್ಲಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿದ್ದ ಹತ್ತು ಕಂಪನಿಗಳ ಪೈಕಿ, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಎರಡನೇ ಸ್ಥಾನದಲ್ಲಿತ್ತು. ಏಷ್ಯಾದಲ್ಲೇ ಅತಿಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಸಾರ್ವಜನಿಕ ವಲಯದ ಕಂಪನಿ ಎಂದೇ ಹೆಗ್ಗಳಿಕೆ ಪಡೆದಿರುವ ಕೋಲ್ ಇಂಡಿಯಾ (CIL) ಐದನೇ ಸ್ಥಾನದಲ್ಲಿತ್ತು ಮತ್ತು ಈಗ ಅಗ್ರ ಹತ್ತು ಕಂಪನಿಗಳ ಪಟ್ಟಿಯಿಂದ ಹೊರದೂಡಲ್ಪಟ್ಟಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆರನೇ ಸ್ಥಾನದಲ್ಲಿತ್ತು.

ಕಾರ್ಪೊರೆಟ್ ಕುಳಗಳ ಅತ್ಯಂತ ಆಪ್ತರಾಗಿರುವ ಪ್ರಧಾನಿ ನರೇಂದ್ರ ಮೋದಿ ಕಳೆದ ಆರು ವರ್ಷಗಳಲ್ಲಿ ಕಾರ್ಪೊರೆಟ್ ವಲಯದ ಹಿತಾಸಕ್ತಿಯನ್ನು ಅತ್ಯಂತ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ದೇಶದ ಆರ್ಥಿಕತೆ ದಿಕ್ಕೆಟ್ಟ ಸಮಯದಲ್ಲೂ ಕಾರ್ಪೊರೆಟ್ ವಲಯಕ್ಕೆ ವಾರ್ಷಿಕ 1.40 ಲಕ್ಷ ಕೋಟಿ ರುಪಾಯಿ ತೆರಿಗೆ ವಿನಾಯಿತಿ ಘೋಷಿಸಿರುವ ಮೋದಿ ಸರ್ಕಾರ ನಿಜವಾದ ಆರ್ಥದಲ್ಲಿ ಈಗ ದಿವಾಳಿಯಾಗುವ ಹಂತಕ್ಕೆ ಬಂದಿದೆ. ಆ ಕಾರಣಕ್ಕಾಗಿಯೇ ಯಾವುದೇ ಹೊಸ ಹುದ್ದೆ ಸೃಷ್ಟಿಗೆ ತಡೆಯೊಡ್ಡಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರಿ ನೌಕರರಿಗೆ ಘೋಷಿಸಿರುವ ಬೊನಸ್ ಎಂಬುದು ಬಿಹಾರ ವಿಧಾನಸಭಾ ಚುನಾವಣೆಗಾಗಿ ಮಾಡಿರುವ ಗಿಮಿಕ್!

Also Read: ಸರ್ಕಾರ ಕೃಷಿ ವಲಯ ಬಲಪಡಿಸಿದರೆ ಮಾತ್ರ ದೇಶ ಸದೃಢಗೊಳ್ಳಬಹುದು

ಪ್ರಧಾನಿ ಮೋದಿಗೆ ಕಾರ್ಪೊರೆಟ್ ವಲಯದ ಮೇಲೆ ಇರುವ ವಿಶೇಷ ಆಸಕ್ತಿಯಿಂದಾಗಿಯೇ ಕೇಂದ್ರ ಸರ್ಕಾರದ ಉದ್ಯಮಗಳ ಮಾರುಕಟ್ಟೆ ಬಂಡವಾಳ ಕ್ಷೀಣಿಸುತ್ತಾ ಬರುತ್ತಿದೆ. ಮೋದಿ ಆಪ್ತ ಕಾರ್ಪೊರೆಟ್ ಕುಳಗಳು ಬೇಕೆಂದೇ ಸಾರ್ವಜನಿಕ ವಲಯದ ಉದ್ಯಮಗಳ ಮಾರುಕಟ್ಟೆ ಮೌಲ್ಯವನ್ನು ವ್ಯವಸ್ಥಿತವಾಗಿ ತಗ್ಗಿಸುತ್ತಿದ್ದಾರೆ. ಮೋದಿ ಸರ್ಕಾರವೂ ಪರೋಕ್ಷವಾಗಿ ಇದಕ್ಕೆ ಉತ್ತೇಜನ ನೀಡುತ್ತಿದೆ. ಈ ನಡೆಯ ಹಿಂದಿನ ಕುತಂತ್ರ ಏನೆಂದರೆ- ಮೋದಿ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದೆಯಲ್ಲಾ, ಮಾರುಕಟ್ಟೆ ಮೌಲ್ಯ ಕುಗ್ಗಿಸಿದರೆ, ಖಾಸಗಿಯವರಿಗೆ ಅತಿ ಕಡಿಮೆ ಬೆಲೆ ಕಂಪನಿಗಳು ದೊರೆಯುತ್ತವೆ. ಉದಾಹರಣೆಗೆ ONGC ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು 2014ರಲ್ಲಿ 2,94,693 ಕೋಟಿ ರುಪಾಯಿಗಳಷ್ಟಿತ್ತು. ಮೋದಿ ಸರ್ಕಾರದ ಸರ್ಕಾರಿ ಕಂಪನಿಗಳನ್ನು ಅಪಮೌಲ್ಯಗೊಳಿಸುವ ಅಜೆಂಡಾದಿಂದಾಗಿ ಪ್ರಸ್ತುತ ONGC ಮಾರುಕಟ್ಟೆ ಬಂಡವಾಳ ಮೌಲ್ಯವು 87,119 ಕೋಟಿ ರುಪಾಯಿಗೆ ಇಳಿದಿದೆ. ಅಂದರೆ, ಶೇ.75ರಷ್ಟು ONGC ಮೌಲ್ಯವು ಮೋದಿ ಸರ್ಕಾರದ ಅವಧಿಯಲ್ಲಿ ಕುಸಿದಿದೆ. ಇಲ್ಲೊಂದು ವಿಶೇಷ ಗಮನಿಸಿ, ಇದೇ ಅವಧಿಯಲ್ಲಿ ಮೋದಿ ಆಪ್ತ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮಾರುಕಟ್ಟೆ ಮೌಲ್ಯವು ಸುಮಾರು ನಾಲ್ಕೂವರೆ ಪಟ್ಟು ಅಂದರೆ, ಶೇ.450ರಷ್ಟು ಹೆಚ್ಚಳವಾಗಿದೆ. 2014ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯವು 2,86,061 ಕೋಟಿ ರುಪಾಯಿಗಳಷ್ಟಿತ್ತು. ಮೋದಿ ಅಧಿಕಾರಕ್ಕೆ ಬಂದ ಆರೇ ವರ್ಷಗಳಲ್ಲಿ ಇದರ ಮಾರುಕಟ್ಟೆ ಬಂಡವಾಳ ಮೌಲ್ಯವು 14,02,31.77 ಕೋಟಿ ರುಪಾಯಿಗೆ ಜಿಗಿದಿದೆ.

ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಆರ್ಥಿಕ ನೀತಿಯ ಪರಿಣಾಮಗಳು. ಕಾರ್ಪೊರೆಟ್ ವಲಯಕ್ಕೆ ಪೂರಕವಾದ ನಿಯಮಗಳನ್ನು ರೂಪಿಸುವುದು, ಕಾರ್ಪೊರೆಟ್ ವಲಯಗಳಿಗೆ ನಿಯಮಗಳನ್ನು ಸಡಿಲಿಸುವುದು, ಇಲ್ಲವೇ ನಿಯಮಗಳನ್ನೇ ರದ್ದು ಮಾಡುವು, ತೆರಿಗೆ ರಿಯಾಯ್ತಿ ನೀಡುವುದು ಮೋದಿ ಸರ್ಕಾರದ ಆರ್ಥಿಕ ನೀತಿಗಳ ಉದ್ದೇಶವಾಗಿದೆ. ಇದೇ ವೇಳೆ ಮೋದಿ ಸರ್ಕಾರ ಮಾಡಿದ ಅತಿದೊಡ್ಡ ವಂಚನೆ ಎಂದರೆ, ಸಾರ್ವಜನಿಕ ವಲಯದ ಉದ್ಯಮಗಳನ್ನು ನಿಧಾನವಾಗಿ ಸಾವನ್ನಪ್ಪುವಂತೆ ಅಥವಾ ಕೋಮಾ ಸ್ಥಿತಿಗೆ ತಲುಪುವಂತೆ ಮಾಡುತ್ತಿರುವುದು. ಅದಕ್ಕೆ ಜ್ವಲಂತ ನಿದರ್ಶನವಾಗಿ ದೇಶದ ಸಂಪರ್ಕಸೇತುವಾಗಿರುವ ಭಾರತ ಸಂಚಾರ ನಿಗಮ(ಬಿಎಸ್ಎನ್ಎಲ್) ಮತ್ತು ಮಹಾನಗರ ಸಂಚಾರ ನಿಗಮ (ಎಂಟಿಎನ್ಎಲ್) ನಮ್ಮ ಮುಂದಿವೆ. ಈ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 1.20 ಲಕ್ಷ ಜನರನ್ನು ಮನೆಗೆ ಕಳುಹಿಸಲಾಗಿದೆ.

Also Read: ಬಿಎಸ್‌ಎನ್‌ಎಲ್, ಒಎನ್‌ಜಿಸಿ, ಏರ್‌ ಇಂಡಿಯಾವನ್ನು ಪಾತಾಳಕ್ಕೆ ದೂಡಿದ ಸರ್ಕಾರ

ಇದಿನ್ನೂ ಆರಂಭ. ಮುಂದೆ ಮತ್ತೆಷ್ಟು ಸಾರ್ವಜನಿಕ ವಲಯದ ಕಂಪನಿಗಳು ಬಿಎಸ್ಎನ್ಎಲ್, ಎಂಟಿಎನ್ಎಲ್ ಹಾದಿ ಹಿಡಿಯುತ್ತವೋ? ಸಾಲ ಪಾವತಿಸಲಾಗದೇ, ತಾನು ಬಳಸುವ ಕಾರುಗಳನ್ನೇ ಮಾರಾಟ ಮಾಡಿದ್ದೇನೆಂದು ನ್ಯಾಯಾಲಯದಲ್ಲಿ ಘೋಷಿಸಿಕೊಂಡಿರುವ ಅನಿಲ್ ಅಂಬಾನಿಯ ಕಂಪನಿಗೆ ವಿಮಾನ ನಿರ್ಮಾಣದ ಗುತ್ತಿಗೆ ನೀಡಿರುವ ನರೇಂದ್ರ ಮೋದಿ ಸರ್ಕಾರವು, ದೇಶದ ಹೆಮ್ಮೆ ಮತ್ತು ಜಾಗತಿಕ ಮಟ್ಟದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅನ್ನು ಮುಗಿಸುವ ಪ್ರಯತ್ನ ಮಾಡಿದೆ. ಮೋದಿ ಸರ್ಕಾರದ ತಂತ್ರ ಏನೆಂದರೆ ಕಂಪನಿಗಳನ್ನು ನಿರ್ಲಕ್ಷಿಸುವುದು, ಸರ್ಕಾರದ ಕಾಮಗಾರಿಗಳನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿ, ಸಾರ್ವಜನಿಕ ವಲಯದ ಕಂಪನಿಗಳು ನಷ್ಟಕ್ಕೀಡಾಗುವಂತೆ ಮಾಡುವುದು, ನಂತರ ನಷ್ಟಕ್ಕೀಡಾಗಿವೆ ಎಂಬ ನೆಪ ಒಡ್ಡಿ ತಮ್ಮದೇ ಆಪ್ತ ಕಾರ್ಪೊರೆಟ್ ಕುಳಗಳಿಗೆ ಅತ್ಯಂತ ಕಡಮೆ ಬೆಲೆಗೆ ಮಾರಾಟ ಮಾಡಿ ಬಿಡುವುದು, ಕೊನೆಗೆ, ಎಲೆಕ್ಟೊರಲ್ ಬಾಂಡ್ ಮೂಲಕ ಸಾವಿರಾರು ಕೋಟಿ ರುಪಾಯಿಗಳನ್ನು ಪಡೆಯುವುದು ಮತ್ತು ಚುನಾವಣೆಯಲ್ಲಿ ಯಥೇಚ್ಛ ದುಡ್ಡು ವೆಚ್ಚ ಮಾಡುವುದು ಮತ್ತೆ ಅಧಿಕಾರ ಗದ್ದುಗೆ ಹಿಡಿಯುವುದಾಗಿದೆ.

Also Read: ಮೋದಿ ಮಹಿಮೆ; ದೇಶದ ಕರೋನಾ ಸೋಂಕಿತರು 15 ಲಕ್ಷ, ಅಂಬಾನಿ ಕಂಪನಿ ಮಾರುಕಟ್ಟೆ ಮೌಲ್ಯ 15 ಲಕ್ಷ ಕೋಟಿ

2014ರಲ್ಲಿ ಐದನೇ ಸ್ಥಾನದಲ್ಲಿದ್ದ ಕೊಲ್ ಇಂಡಿಯಾ ಮಾರುಕಟ್ಟೆ ಬಂಡವಾಳವು ಆಗ 2,31,221 ಕೋಟಿ ರುಪಾಯಿಗಳಾಗಿತ್ತು. ಮೋದಿ ಆಡಳಿತ ಆರು ವರ್ಷಗಳ ಅವಧಿಯಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿ ಮಾರುಕಟ್ಟೆ ಬಂಡವಾಳ ಮೌಲ್ಯವು ಕೇವಲ 70,717 ಕೋಟಿಗೆ ಕುಸಿದಿದೆ. ಅಂದರೆ, ಸುಮಾರು ಶೇ.70ರಷ್ಟು ಕುಸಿತ ದಾಖಲಿಸಿದೆ. ಈಗಲೂ ದೇಶದ ಹೆಮ್ಮೆಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆ ಬಂಡವಾಳ ಮೌಲ್ಯವು 2014ರಲ್ಲಿ 2,28,338 ಕೋಟಿ ರುಪಾಯಿ ಇದ್ದದ್ದು, 1,82,106 ಕೋಟಿ ರುಪಾಯಿಗೆ ಕುಸಿದಿದೆ. ವಾಸ್ತವವಾಗಿ ಕಳೆದ ಆರು ವರ್ಷಗಳ ಪೈಕಿ ಮೊದಲ ನಾಲ್ಕು ವರ್ಷಗಳ ಅವಧಿ ಅಂದರೆ, ಜಾಗತಿಕವಾಗಿ ಹಣಕಾಸು ಮತ್ತು ಬ್ಯಾಂಕಿಂಗ್ ಕಂಪನಿಗಳ ಅತಿ ಹೆಚ್ಚು ಬೆಳವಣಿಗೆ ದಾಖಲಿಸಿವೆ. ಈಗ SBI ಅನ್ನು ಹಿಂದಿಕ್ಕಿರುವ ಬಜಾಜ್ ಫೈನಾನ್ಸ್ ಮಾರುಕಟ್ಟೆ ಬಂಡವಾಳವು ಆರು ವರ್ಷಗಳ ಹಿಂದೆ ಕೇವಲ 10,000 ಕೋಟಿ ರುಪಾಯಿ ಇತ್ತು. ಈ ಆರು ವರ್ಷಗಳಲ್ಲಿ ಅದು ಇಪ್ಪತ್ತು ಪಟ್ಟು ಹೆಚ್ಚಳ ಸಾಧಿಸಿದೆ. ಅದರ ಷೇರು ದರವು 150 ರುಪಾಯಿ ಇದ್ದದ್ದು ಈಗ 3300 ರುಪಾಯಿ ಆಜುಬಾಜಿನಲ್ಲಿದೆ. ಆ ಲೆಕ್ಕದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆ ಮೌಲ್ಯವು ಕನಿಷ್ಠ 10 ಲಕ್ಷ ಕೋಟಿ ರುಪಾಯಿ ದಾಟಬೇಕಿತ್ತು. ಆದರೆ, ಮೋದಿ ಸರ್ಕಾರವು ಕಾರ್ಪೊರೆಟ್ ಕುಳಗಳ ಸಾಲಗಳನ್ನು ಮನ್ನಾ ಮಾಡುತ್ತಾ, ಅದರ ನಷ್ಟದ ಹೊರೆಯನ್ನು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಮೇಲೆ ಹೇರುತ್ತಾ, ಅದನ್ನು ಅಪಮೌಲ್ಯಗೊಳಿಸುತ್ತಿದೆ.

Tags: ಕಾರ್ಪೊರೆಟ್ ತೆರಿಗೆ ಕಡಿತದೇಶದ ಆರ್ಥಿಕತೆನರೇಂದ್ರ ಮೋದಿ ಸರ್ಕಾರಸರ್ಕಾರಿ ಕಂಪನಿ
Previous Post

ಸಿಗಂದೂರು ಉಸ್ತುವಾರಿಗೆ ಡಿಸಿ ಸಮಿತಿ: ಪರಿಸರ ಧ್ವಂಸಕ್ಕೂ ಬೀಳಬೇಕಿದೆ ಬ್ರೇಕ್!

Next Post

ಮತ್ತೆ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರುವ ಸೂಚನೆ ನೀಡಿದ ನಳಿನ್‌ ಕುಮಾರ್‌, ಲಕ್ಷ್ಮಣ ಸವದಿ

Related Posts

Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
0

ತುಮಕೂರಿನ ಎಲ್ಲಾ ತಾಲೂಕಿಗೂ ನೀರು ಒದಗಿಸಲು ಅಗತ್ಯ ಕ್ರಮ "ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ. ಎಲ್ಲಾ ತಾಲೂಕಿಗೂ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ"...

Read moreDetails

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
Next Post
ಮತ್ತೆ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರುವ ಸೂಚನೆ ನೀಡಿದ ನಳಿನ್‌ ಕುಮಾರ್‌

ಮತ್ತೆ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರುವ ಸೂಚನೆ ನೀಡಿದ ನಳಿನ್‌ ಕುಮಾರ್‌, ಲಕ್ಷ್ಮಣ ಸವದಿ

Please login to join discussion

Recent News

Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada