Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ವಿದ್ಯಾರ್ಥಿ ಹೋರಾಟ ಮೋದಿಗೆ ಮುಳುವಾಗಬಹುದೇ?

ವಿದ್ಯಾರ್ಥಿ ಹೋರಾಟ ಮೋದಿಗೆ ಮುಳುವಾಗಬಹುದೇ?
ವಿದ್ಯಾರ್ಥಿ ಹೋರಾಟ ಮೋದಿಗೆ ಮುಳುವಾಗಬಹುದೇ?
Pratidhvani Dhvani

Pratidhvani Dhvani

December 17, 2019
Share on FacebookShare on Twitter

ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಯುವ ಸಮುದಾಯದಲ್ಲಿ ಎಬ್ಬಿಸಿರುವ ಕಿಚ್ಚು ಪ್ರಧಾನಿ‌ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. 2014 ಮತ್ತು 2019ರ ಲೋಕಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಯುವ ಸಮುದಾಯವು ನರೇಂದ್ರ ಮೋದಿಯವರ ಪ್ರಭಾವಳಿಗೆ ಒಳಗಾಗಿ ಬಿಜೆಪಿಯನ್ನು ಬೆಂಬಲಿಸಿತ್ತು. ಇದರಿಂದ ಭಾರಿ ಬಹುಮತ ಗಳಿಸಿದ್ದ ಬಿಜೆಪಿಯು ತನ್ನ ವಿವಾದಾತ್ಮಕ ವಿಚಾರಧಾರೆಗಳ ಅನುಷ್ಠಾನಕ್ಕೆ ಮುಂದಾಗುವ ಮೂಲಕ ಅದೇ ವರ್ಗದ ಕೆಂಗಣ್ಣಿಗೆ ಗುರಿಯಾಗಲಾರಂಭಿಸಿರುವುದು ಇತಿಹಾಸದ ಚೋದ್ಯ. “ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವ ಮೂಲಕ ಬಿಜೆಪಿಯ ಅವನತಿ ಆರಂಭವಾಗಿದೆ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾರ್ಮಿಕವಾಗಿ ನುಡಿದಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಬಹುರಾಷ್ಟ್ರೀಯ ಕಂಪನಿಗಳು ಭಾರತವನ್ನು ಏಕೆ ತೊರೆಯುತ್ತಿವೆ?

ಅಗ್ನಿಪಥ್ ಯೋಜನೆ ವಿರುದ್ಧ ಪಂಜಾಬ್ ಸರ್ಕಾರ ನಿರ್ಣಯ!

ದೇಶದ ಅತ್ಯಂತ ದುಬಾರಿ ನಗರಿ ಮುಂಬೈ!

ಪೌರತ್ವ ತಿದ್ದುಪಡಿ ಕಾಯ್ದೆ ಕಿಚ್ಚು ಕಾಲೇಜು ಕ್ಯಾಂಪಸ್ ಗಳಿಗೆ ಹಬ್ಬಿದ್ದು, ದೇಶದ ಪ್ರತಿಷ್ಠಿತ 18 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ನವದೆಹಲಿಯ ಜಾಮಿಯಾ ಮಿಲಿಯಾ ಹಾಗೂ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರೌರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ಪ್ರತಿಭಟನಾಕಾರರು ಧರಿಸಿರುವ ಬಟ್ಟೆಯಿಂದಲೇ ಅವರು ಯಾರು ಎಂಬುದನ್ನು ಪತ್ತೆ ಹಚ್ಚಬಹುದು” ಎಂಬ ಮೋದಿಯವರ ಹೇಳಿಕೆಯೂ ಬಿಜೆಪಿಗೆ ದುಬಾರಿಯಾಗಿ‌ ಪರಿಣಮಿಸಬಹುದು. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಜಾಮಿಯಾ ವಿಶ್ವವಿದ್ಯಾಲಯದ ಹೊರಗೆ ಪ್ರತಿಭಟಿಸಿದ ವಿದ್ಯಾರ್ಥಿಗಳು ಶರ್ಟ್ ತೆಗೆದು ಪ್ರತಿಭಟಿಸಿದ್ದೂ ಮೋದಿ ಹೇಳಿಕೆಗೆ ಸಾಂಕೇತಿಕ ಪ್ರತಿರೋಧವಾಗಿದೆ.

ದೆಹಲಿ ಪೊಲೀಸ್ ಕೇಂದ್ರ‌ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಗೆ ಅದರ ಮೇಲೆ ಹಿಡಿತವಿಲ್ಲ. ಪೊಲೀಸ್ ವ್ಯವಸ್ಥೆಯು ಕೇಂದ್ರದ ಗೃಹ ಸಚಿವಾಲಯಕ್ಕೆ ಒಳಪಡುವುದರಿಂದ ವಿದ್ಯಾರ್ಥಿಗಳ ಮೇಲಿನ ಪೊಲೀಸರ ಕ್ರೌರ್ಯದ ಪರಮಾವಧಿಯನ್ನು ಇಂದಿನ ಹೋರಾಟಗಳಿಗೆ ಕಾರಣರಾದ ಅಮಿತ್ ಶಾ ನೆಪಮಾತ್ರಕ್ಕೂ ಖಂಡಿಸಿಲ್ಲ. ಚುನಾವಣಾ ರ‌್ಯಾಲಿಗಳಲ್ಲಿ ದೇಶದ ಯುವ ಜನತೆ ಮೋದಿ‌ ಬೆನ್ನಿಗಿದೆ ಎಂದು ಅರಚುವ ಅಮಿತ್ ಶಾ, ತನ್ನ ಉಸ್ತುವಾರಿಯಲ್ಲಿ ಬರುವ ಪಡೆಯೊಂದು ತನ್ನದೇ ನಾಗರಿಕರ ಮೇಲಿನ ದೌರ್ಜನ್ಯವನ್ನು ಸಮರ್ಥಿಸುವರೇ? ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಟಿ‌ ಹಿಡಿದು ಎರಗಿರುವ ವಿಡಿಯೊಗಳು ಇಂದಿನ ಭಾರತದ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಸಹವರ್ತಿಯ ಮೇಲಿನ ದಾಳಿಯನ್ನು ತಡೆಯಲು ವಿದ್ಯಾರ್ಥಿನಿಯರು ಆತನನ್ನು ಸುತ್ತುವರಿದಿರುವಾಗಲು ಪೊಲೀಸರು ಅಟ್ಟಹಾಸ ಮೆರೆಯುತ್ತಿರುವ ಪೊಲೀಸರ ಫೋಟೊಗಳು ಎಂಥ ಸಂದೇಶ ರವಾನಿಸುತ್ತವೆ? ಪೊಲೀಸ್ ವ್ಯವಸ್ಥೆ ನಾಗರಿಕ ಸಮಾಜದಲ್ಲಿ ಎಂದೋ ವಿಶ್ವಾಸ ಕಳೆದುಕೊಂಡಾಗಿದೆ.‌ ಈಗ ತುಕ್ಕು ಹಿಡಿದ ಲಾಟಿಗಳ ಮೂಲಕ ಜನಪರ ಹೋರಾಟ ಹತ್ತಿಕ್ಕುವ ಮೂಲಕ ಪೊಲೀಸ್ ರಾಜ್ ನಿರ್ಮಿಸಲು ಕೇಂದ್ರ ಸರ್ಕಾರ ಸಿದ್ಧವಾದಂತಿದೆ.

2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದರು. ನಿಪುಣ ಮಾನವ ಸಂಪನ್ಮೂಲ ಸೃಷ್ಟಿಯ ಭರವಸೆ ನೀಡಿದ್ದರು. ಹೊಸತನಕ್ಕೆ ಹಾತೊರೆಯುತ್ತಿದ್ದ ಯುವ ಸಮುದಾಯವು ವಯಸ್ಸಿನಲ್ಲಿ ಮೋದಿಗಿಂತಲೂ ಕಿರಿಯರಾದ ರಾಹುಲ್ ಗಾಂಧಿಗೆ ಬದಲಾಗಿ ಮೋದಿಯವರನ್ನು ಯುವ ಸಮುದಾಯ ಆಯ್ಕೆ ಮಾಡಿಕೊಂಡಿತ್ತು. ಆದರೆ, ಇತ್ತೀಚೆಗೆ ಬಹಿರಂಗಗೊಂಡ NSSO ವರದಿ ಪ್ರಕಾರ ಭಾರತದಲ್ಲಿ ನಿರುದ್ಯೋಗ ಪ್ರಮಾಣವು 45 ವರ್ಷಗಳ ಹಿಂದೆ ಇದ್ದ ಮಟ್ಟಕ್ಕೆ ಇಳಿದಿದೆ ಎನ್ನುವ ಆಘಾತಕಾರಿ ಅಂಶ ಹೊರಬಿದ್ದಿದೆ. ಕನಸು ಕಂಗಳಿಂದ ಮೋದಿ ಆಡಳಿತದಲ್ಲಿ ಅಚ್ಚೇ ದಿನ ಎದುರು ನೋಡುತ್ತಿದ್ದ ಯುವಕ-ಯುವತಿಯರಿಗೆ ಲಾಟಿ‌ ಏಟು ಎದುರಾಗುತ್ತದೆ ಎನ್ನುವ ನಿರೀಕ್ಷೆ ಇದ್ದಿರಲಿಕ್ಕಿಲ್ಲ. ಈಗ ಯುವ ಸಮುದಾಯವು ನರೇಂದ್ರ ಮೋದಿಯೊಬ್ಬ ಮತ್ತೊಬ್ಬ “ಕಪಟ ರಾಜಕಾರಣಿ” ಎನ್ನಲಾರಂಭಿಸಿದೆ.

ನರೇಂದ್ರ ಮೋದಿ ಸರ್ಕಾರವು ವಿಶ್ವವಿದ್ಯಾಲಯಗಳ ಮೇಲಿನ ಅಟ್ಟಹಾಸ ಮೆರೆಯುತ್ತಿರುವುದು ಮೊದಲೇನಲ್ಲ. ಹಿಂದೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿತ್ತು. ದೇಶ ವಿರೋಧಿ ಕೃತ್ಯ ಎಸಲಾಗುತ್ತಿದೆ ಎಂದು ಆರೋಪಿಸಿದ್ದ ಪೊಲೀಸರು ಆನಂತರ ತಮ್ಮ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು. ಈಗ ಜಾಮಿಯಾ ವಿಶ್ವವಿದ್ಯಾಲಯದ ಮೇಲಿನ ದಾಳಿಯಲ್ಲಿಯೂ ಸರ್ಕಾರದ ಪಿತೂರಿ ಇರಬಹುದು ಎಂಬುದಕ್ಕೆ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ‌ ನಡೆದಿರುವ ದಾಂಧಲೆ ಸ್ಪಷ್ಟ ಉದಾಹರಣೆಯಾಗಿದೆ.

ಚೀನಾ ಹಸ್ತಕ್ಷೇಪ ವಿರೋಧಿಸಿ ನೆರೆಯ ಹಾಂಕಾಂಗ್ ನಲ್ಲಿ ಆರು ತಿಂಗಳ ಹಿಂದೆ ಆರಂಭವಾದ ವಿದ್ಯಾರ್ಥಿ ಚಳವಳಿ ಇನ್ನೂ ನಿಂತಿಲ್ಲ. ಚಿಲಿ ದೇಶದಲ್ಲಿ ಭ್ರಷ್ಟಾಚಾರ ಹಾಗೂ ಅಧಿಕಾರ ದುರ್ಬಳಕೆಯ ವಿರುದ್ಧ ಆರಂಭವಾಗಿರುವ ಹೋರಾಟ ಸಾಕಷ್ಟು ಸವಾಲು ತಂದೊಡ್ಡಿದೆ. ಇವೆಲ್ಲಾ ಹೋರಾಟಗಳಲ್ಲೂ ವಿದ್ಯಾರ್ಥಿ ಸಮುದಾಯದ ಪ್ರಭಾವ ಗಾಢವಾಗಿದೆ. ಈ ನೆಲೆಯಲ್ಲಿ ಭಾರತದಲ್ಲಿ ಆರಂಭವಾಗಿರುವ ವಿದ್ಯಾರ್ಥಿ ಹೋರಾಟವು ಮತ್ತಷ್ಟು ವ್ಯಾಪಕವಾದರೆ ಮೋದ ಸರ್ಕಾರಕ್ಕೆ ಉಳಿಗಾಲ ಇಲ್ಲ ಎಂಬುದು ಮಾತ್ರ ಸ್ಪಷ್ಟ.

RS 500
RS 1500

SCAN HERE

don't miss it !

ಶಿವಸೇನೆ ಮುಖಂಡ ಸಂಜಯ್‌ ರಾವತ್‌ ಗೆ ಇಡಿ ನೋಟಿಸ್!‌
ದೇಶ

ಶಿವಸೇನೆ ಮುಖಂಡ ಸಂಜಯ್‌ ರಾವತ್‌ ಗೆ ಇಡಿ ನೋಟಿಸ್!‌

by ಪ್ರತಿಧ್ವನಿ
June 27, 2022
ಸರ್ಕಾರ ಕನ್ನಡ ಕಡ್ಡಾಯ ಆದೇಶ ಮರು ಪರಿಶೀಲಿಸುವಂತೆ ಹೈ ಕೋರ್ಟ್‌ ಸೂಚನೆ!
ಕರ್ನಾಟಕ

ಸಾರ್ವಜನಿಕ ಸ್ಥಳಗಳಲ್ಲಿ ನಿಂದಿಸಿದರಷ್ಟೇ SC-ST ದೌರ್ಜನ್ಯ ತಡೆ ಕಾಯ್ದೆ ಅನ್ವಯ : ಹೈಕೋರ್ಟ್

by ಪ್ರತಿಧ್ವನಿ
June 24, 2022
ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ `ಸೊನ್ನೆ’ ದಾಖಲೆ ಬರೆದ ರೋಹಿತ್ ಶರ್ಮ!
ಕ್ರೀಡೆ

ಭಾರತ ತಂಡದ ನಾಯಕ ರೋಹಿತ್‌ ಶರ್ಮಗೆ ಕೊರೊನಾ ಪಾಸಿಟಿವ್!

by ಪ್ರತಿಧ್ವನಿ
June 26, 2022
ಚಪ್ಪಲಿ, ಬಟ್ಟೆ ವ್ಯಾಪಾರ ಮಾಡುತ್ತಿರುವ ಪಾಕಿಸ್ತಾನದ ಕ್ರಿಕೆಟ್‌ ಅಂಪೈರ್‌ ಅಸಾದ್‌ ರೌಫ್!
ಕ್ರೀಡೆ

ಚಪ್ಪಲಿ, ಬಟ್ಟೆ ವ್ಯಾಪಾರ ಮಾಡುತ್ತಿರುವ ಪಾಕಿಸ್ತಾನದ ಕ್ರಿಕೆಟ್‌ ಅಂಪೈರ್‌ ಅಸಾದ್‌ ರೌಫ್!

by ಪ್ರತಿಧ್ವನಿ
June 24, 2022
ಪಠ್ಯಪುಸ್ತಕದಲ್ಲಿ ಕನಕದಾಸರಿಗೆ ಅಪಮಾನ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಕಾಗಿನೆಲೆ ಗುರುಪೀಠ ಸ್ವಾಮೀಜಿ
ಕರ್ನಾಟಕ

ಪಠ್ಯಪುಸ್ತಕದಲ್ಲಿ ಕನಕದಾಸರಿಗೆ ಅಪಮಾನ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಕಾಗಿನೆಲೆ ಗುರುಪೀಠ ಸ್ವಾಮೀಜಿ

by ಪ್ರತಿಧ್ವನಿ
June 24, 2022
Next Post
ಆರ್‌ಎಸ್‌ಎಸ್ ಮುಖಂಡರ ಶಾಲೆಯಲ್ಲಿ ಬಾಬ್ರಿ ಮಸೀದಿ ಧ್ವಂಸ !

ಆರ್‌ಎಸ್‌ಎಸ್ ಮುಖಂಡರ ಶಾಲೆಯಲ್ಲಿ ಬಾಬ್ರಿ ಮಸೀದಿ ಧ್ವಂಸ !

ಆರ್‌ಟಿಐಗೆ ಮಾರ್ಗಸೂಚಿ ಇರಲಿ: ಸುಪ್ರೀಂ ಕೋರ್ಟ್

ಆರ್‌ಟಿಐಗೆ ಮಾರ್ಗಸೂಚಿ ಇರಲಿ: ಸುಪ್ರೀಂ ಕೋರ್ಟ್

ಸಂಪುಟ ವಿಸ್ತರಣೆಯೋ

ಸಂಪುಟ ವಿಸ್ತರಣೆಯೋ, ಪುನಾರಚನೆಯೋ? ಡಿ. 22ರೊಳಗೆನಿರ್ಧಾರ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist