• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

‘ಲಾಕ್ ಡೌನ್’ ಕರೋನಾ ಸೋಂಕಿಗೆ ಕಡಿವಾಣ ಹಾಕುವುದು ಹೇಗೆ ?

by
March 27, 2020
in ದೇಶ
0
‘ಲಾಕ್ ಡೌನ್’ ಕರೋನಾ ಸೋಂಕಿಗೆ ಕಡಿವಾಣ ಹಾಕುವುದು ಹೇಗೆ ?
Share on WhatsAppShare on FacebookShare on Telegram

ಕರೋನಾ ವೈರಾಣು ರೋಗ(ಕೋವಿಡ್-19) ತಡೆಯ ನಿಟ್ಟಿನಲ್ಲಿ ನಮ್ಮ ಸರ್ಕಾರಗಳು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ನಡೆಸುತ್ತಿವೆ. ಇದೀಗ ಏಪ್ರಿಲ್ 14ರವರೆಗೆ 21 ದಿನಗಳ ಕಾಲ ಇಡೀ ದೇಶವನ್ನೇ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.

ADVERTISEMENT

ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಮತ್ತು ಸೋಂಕಿತರ ಪ್ರಮಾಣ ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ, ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸಬೇಕಿದೆ. ಹಾಗೆ ಮಾಡದೇ ಹೋದರೆ, ರೋಗ ತಡೆ ಅಸಾಧ್ಯ. ಹಾಗೆ ಒಬ್ಬರಿಂದ ಒಬ್ಬರಿಗೆ ರೋಗ ಸಾಮುದಾಯಿಕ ಸೋಂಕಾಗಿ ಹರಡಿದಲ್ಲಿ ನಮ್ಮ ದೇಶದ ಅಪಾರ ಜನದಟ್ಟಣೆ ಮತ್ತು ಸೀಮಿತ ವೈದ್ಯಕೀಯ ಸೌಲಭ್ಯಗಳ ಹಿನ್ನೆಲೆಯಲ್ಲಿ ಜನರ ಮಾರಣಹೋಮವೇ ನಡೆದುಹೋಗುವ ಭೀತಿ ಎದುರಾಗಿದೆ. ಆ ಹಿನ್ನೆಲೆಯಲ್ಲಿಯೇ ಆರ್ಥಿಕ ನಷ್ಟ, ಜನಜೀವನಕ್ಕೆ ಎದುರಾಗುವ ಕಷ್ಟಗಳನ್ನೆಲ್ಲಾ ಮೀರಿ ಹಿಂದೆಂದೂ ಕಂಡುಕೇಳರಿಯದ ಈ ಲಾಕ್ ಡೌನ್ ಘೋಷಿಸಲಾಗಿದೆ.

ಇಂತಹ ಬಿಗಿ ಕ್ರಮದ ಹಿಂದೆ ಜನರ ಜೀವ ರಕ್ಷಣೆಯ ಆ ಮೂಲಕ ದೇಶ ರಕ್ಷಣೆಯ ಸದುದ್ದೇಶವಿದೆ, ಕಾಳಜಿ ಇದೆ. ಆದರೆ, ನಮ್ಮ ಜನಗಳಿಗೆ ಈ ಲಾಕ್ ಡೌನ್ ಗಂಭೀರತೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲ. ಲಾಕ್ ಡೌನ್ ಮಾಡದೇ ಹೋದರೆ, ಅಥವಾ ಲಾಕ್ ಡೌನ್ ಮಾಡಿಯೂ ನೀವು ಅದನ್ನು ಪಾಲಿಸದೇ, , ಮನೆಯಲ್ಲಿ ಉಳಿಯದೆ ಮನಸೋ ಇಚ್ಛೆ ಸುತ್ತಾಡಿದರೆ ಕೇವಲ ನಿಮಗೆ ಅಷ್ಟೇ ಅಲ್ಲ, ಇಡೀ ಸಮಾಜಕ್ಕೇ ಅಪಾಯ ತಂದೊಡ್ಡುವಿರಿ ಮತ್ತು ಅಪಾರ ಜೀವ ಹಾನಿಗೆ ನೀವೇ ನೇರ ಹೊಣೆಯಾಗಲಿದ್ದೀರಿ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ.

ಆ ಹಿನ್ನೆಲೆಯಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಪ್ರತಿಯೊಬ್ಬರೂ ತಮ್ಮ- ತಮ್ಮ ಮನೆಯಲ್ಲಿ ಉಳಿಯುವುದು, ಬೇರೆಯವರೊಡನೆ ಅಂತರ ಕಾಯ್ದುಕೊಳ್ಳುವುದು, ಸಾಮಾಜಿಕ ಅಂತರ ಪಾಲನೆ ಮಾಡುವುದು ಎಷ್ಟು ಮುಖ್ಯ ಮತ್ತು ಏಕೆ ಎಂಬುದನ್ನು ಚಿತ್ರ ಸಹಿತ ವಿವರಿಸುವ ಪ್ರಯತ್ನ ಇದು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಅಂತರ(ಸೋಷಿಯಲ್ ಡಿಸ್ಟೆನ್ಸಿಂಗ್) ಬಗ್ಗೆ ಜಾಗೃತಿ ಮೂಡಿಸಲು ವ್ಯಾಪಕವಾಗಿ ಬಳಕೆಯಾಗುತ್ತಿರುವ ಸಚಿತ್ರ ಮಾಲಿಕೆಗಳಲ್ಲಿ ಒಂದನ್ನು ನಾವಿಲ್ಲಿ ಬಳಸಿಕೊಂಡಿದ್ದೇವೆ. ಆ ಮೂಲಕ ಹೆಚ್ಚು ಜನರಿಗೆ ಸಾಮಾಜಿಕ ಅಂತರ, ಲಾಕ್ ಡೌನ್ ಮತ್ತು ಆ ಮೂಲಕ ಒಟ್ಟಾರೆ ಸೋಂಕು ನಿಯಂತ್ರಣದ ಅರಿವು ಮೂಡಿಸುವುದು ನಮ್ಮ ಉದ್ದೇಶ.

1. ನಮ್ಮ ನಡುವೆ ಈಗಾಗಲೇ ಕರೋನಾ ವೈರಾಣು ಸೋಂಕಿತರು ಅಲ್ಲಲ್ಲಿ ಇರುವುದರಿಂದ, ಅವರನ್ನೂ ಒಳಗೊಂಡಂತೆ ಈಗ ನಮ್ಮಲ್ಲಿ ನಾಲ್ಕು ಗುಂಪಿನ ಜನರಿದ್ದಾರೆ ಎಂದುಕೊಳ್ಳಿ.

2. ಅವರಲ್ಲಿ ‘A’ ಗುಂಪಿನವರು; ವೈರಾಣು ಸೋಂಕಿಗೆ ಒಳಗಾದ ಮೊದಲ ವ್ಯಕ್ತಿಗಳು. ವಿದೇಶದಿಂದ ವಾಪಸ್ಸಾದವರು ಅಥವಾ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದವರು ಈ A ಗುಂಪಿನವರು.

3. ಈ ‘A’ ತನ್ನ ಆಪ್ತರು ಅಥವಾ ವ್ಯವಹಾರ ನಂಟಿನ ‘C’ ಗುಂಪಿನವರನ್ನು ಭೇಟಿ ಮಾಡಲು ಹೋಗುವಾಗ ಆತನಿಗೆ ನೇರ ಪರಿಚಯವಿಲ್ಲದ ‘B’ ಗುಂಪಿನವರನ್ನು ಹಾದುಹೋಗುತ್ತಾನೆ.

ವಿಮಾನನಿಲ್ದಾಣ

ಬಸ್ ನಿಲ್ದಾಣ

ಸಾರ್ವಜನಿಕ ಶೌಚಾಲಯ

ಟ್ಯಾಕ್ಸಿ/ ಕ್ಯಾಬ್

ಸಲೂನ್

ಲಿಫ್ಟ್

ರೈಲು ನಿಲ್ದಾಣ

ಹೋಟೆಲ್

ಸೂಪರ್ ಮಾರ್ಕೆಟ್

ದಿನಸಿ ಅಂಗಡಿ

ಹಾಲಿನ ಬೂತ್

ಮತ್ತಿತರ ಕಡೆ..

4. ‘A’ ವ್ಯಕ್ತಿ ‘C’ಯನ್ನು ಭೇಟಿ ಮಾಡುತ್ತಾನೆ. ಈ C ಗುಂಪಿನವರು ಎಷ್ಟೇ ಮಂದಿ ಇದ್ದೂ ಅವರನ್ನು ಗುರುತಿಸಬಹುದು.

ಕುಟುಂಬ,

ಆಪ್ತರು,

ಸಹೋದ್ಯೋಗಿ,

ನೆರೆಮನೆಯವರು,

ಬ್ಯಾಂಕ್ ಕ್ಯಾಷಿಯರ್,

ಸಿನಿಮಾ ಕೌಂಟರ್ ಸಿಬ್ಬಂದಿ

ಹೋಟೆಲ್ ಸಪ್ಲೈಯರ್

ಮತ್ತಿತರರು.

5. ‘C’ಯನ್ನು ಗುರುತಿಸಿ ಪ್ರತ್ಯೇಕಿಸಬಹುದು, ನಿಗಾ ಇಡಬಹುದು.

6. ‘D’ ಮನೆಯಲ್ಲಿಯೇ ಉಳಿದಿರುತ್ತಾರೆ ಮತ್ತು ಹೊರಗೆ ಹೋಗುವುದೇ ಇಲ್ಲ.

7. ಸಮಸ್ಯೆ ಇರುವುದು ‘B’ ವಿಷಯದಲ್ಲಿ. ‘B’ಯನ್ನು ಗುರುತಿಸಲಾಗದು ಮತ್ತು ಸ್ವತಃ ‘B’ಗೂ ತಾನು ‘B’ ಎಂಬುದು ಗೊತ್ತೇ ಇರುವುದಿಲ್ಲ. ಬೇರೆಯವರಿಗೂ ಗೊತ್ತಿರುವುದಿಲ್ಲ.

8. ಒಂದು ವೇಳೆ ‘D’ ಮನೆಯಿಂದ ಹೊರಹೋದರೆ; ಅವರು ‘B’ಯನ್ನು ಭೇಟಿ ಅಥವಾ ಸಂಪರ್ಕ ಮಾಡಬಹುದು. ಹಾಗೆ ಯಾವುದೇ ಬಗೆಯಲ್ಲಿ ನೇರ ಸಂಪರ್ಕಿಸಿದರೂ ‘D’ ಮತ್ತೊಬ್ಬ ಹೊಸ ‘B’ಯಂತಾಗುತ್ತಾರೆ. ಅಂದರೆ, ಈ ಗುಂಪುಗಳಲ್ಲಿ ಹೊಸದಾಗಿ ‘B2’ ಸೇರ್ಪಡೆಯಾಗುತ್ತದೆ.

9. ಲಾಕ್ ಡೌನ್ ಅಥವಾ ಪ್ರತ್ಯೇಕಿಸುವುದರ ಹಿಂದಿನ ಉದ್ದೇಶವೇ ಈ ‘B’ ಗುಂಪಿನವರನ್ನು ಗುರುತಿಸಿ, ನಿಗಾ ಇಡುವುದು ಮತ್ತು ಅಗತ್ಯವಿದ್ದಲ್ಲಿ ಚಿಕಿತ್ಸೆ ಕೊಡಿಸುವುದು.

10. ಸೋಂಕಿತರಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳಲು ಎರಡು ವಾರ(14 ದಿನ) ಹಿಡಿಯುತ್ತದೆ. ಹಾಗಾಗಿ ಎರಡು ವಾರದಲ್ಲಿ ‘B’ನಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳುತ್ತವೆ.

14 ದಿನ

ಜ್ವರ

ಒಣಕೆಮ್ಮು

ಉಸಿರಾಟದ ತೊಂದರೆ

11. ಈ ಮಾದರಿಯ ಮೂಲಕ ‘B’ಯನ್ನು ಗುರುತಿಸಿ, ಅಗತ್ಯ ಚಿಕಿತ್ಸೆ ನೀಡಬಹುದು. B ಸಂಖ್ಯೆಯನ್ನು ಕಡಿಮೆಗೊಳಿಸಬಹುದು ಮತ್ತು B2 ಗುಂಪು ಸೃಷ್ಟಿಯಾಗದಂತೆ ತಡೆಯಬಹುದು. ಆ ಮೂಲಕ ಅಂತಿಮವಾಗಿ ಸೋಂಕನ್ನು ಸಂಪೂರ್ಣ ತಡೆಯಬಹುದು.

ವ್ಯಕ್ತಿಯೊಬ್ಬ ಮನಸ್ಸು ಮಾಡಿದರೆ ದೊಡ್ಡ ಬದಲಾವಣೆ ತರಬಹುದು. ಹಿಂದಡಿ ಇಡಿ, ಮನೆಯಲ್ಲೇ ಉಳಿಯಿರಿ, ಸೋಂಕು ತಡೆಯಿರಿ

Tags: Corona OutbreakCovid 19fight against coronalockdown importanceಕರೋನಾ ಭೀತಿಕೋವಿಡ್-19ಲಾಕ್‌ಡೌನ್‌ ಮಹತ್ವ
Previous Post

ಇದು ಪ್ರಧಾನಿ ಸೋಲಬೇಕಾದ ಸಂದರ್ಭವಲ್ಲ, ಅವರೂ ಗೆದ್ದು ದೇಶವೂ ಗೆಲ್ಲಬೇಕು!

Next Post

ಆರ್ಥಿಕ ತುರ್ತು ಪರಿಸ್ಥಿತಿ ಎಂದರೆ ಏನು? ಅಷ್ಟಕ್ಕೂ ಆರ್ಥಿಕ ತುರ್ತು ಪರಿಸ್ಥಿತಿಯ ಅವಶ್ಯಕತೆ ಇದೆಯೇ?

Related Posts

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು
ಕರ್ನಾಟಕ

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

by ಪ್ರತಿಧ್ವನಿ
July 2, 2025
0

ಕೇಂದ್ರ ಸರ್ಕಾರದ ಬೆಲೆಯೇರಿಕೆಗೆ ರಾಜ್ಯದ ಬಿಜೆಪಿ ನಾಯಕರ ಮೌನ ಖಂಡನೀಯ ರೈತರಿಗೆ ನೆರವಾಗಲು ನಾವು ಹಾಲಿನ ದರ ಹೆಚ್ಚಳ ಮಾಡಿದಾಗ ಜನವಿರೋಧಿ ಎಂದು ಬೊಬ್ಬಿಟ್ಟಿದ್ದ ಬಿಜೆಪಿಯವರು ಈಗ...

Read moreDetails
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025
ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

July 1, 2025
Next Post
ಆರ್ಥಿಕ ತುರ್ತು ಪರಿಸ್ಥಿತಿ ಎಂದರೆ ಏನು? ಅಷ್ಟಕ್ಕೂ ಆರ್ಥಿಕ ತುರ್ತು ಪರಿಸ್ಥಿತಿಯ ಅವಶ್ಯಕತೆ ಇದೆಯೇ?

ಆರ್ಥಿಕ ತುರ್ತು ಪರಿಸ್ಥಿತಿ ಎಂದರೆ ಏನು? ಅಷ್ಟಕ್ಕೂ ಆರ್ಥಿಕ ತುರ್ತು ಪರಿಸ್ಥಿತಿಯ ಅವಶ್ಯಕತೆ ಇದೆಯೇ?

Please login to join discussion

Recent News

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 
Top Story

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

by Chetan
July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

July 2, 2025
ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada