Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ರೈತರನ್ನು ಜೀವಂತ ಸಮಾಧಿ ಸ್ಥಿತಿಗೆ ತಂದಿರುವ ರಾಜಸ್ಥಾನ ಸರ್ಕಾರದ ದಿವಾಳಿ ಅಭಿವೃದ್ಧಿ ಪ್ರಾಧಿಕಾರ

ರೈತರನ್ನು ಜೀವಂತ ಸಮಾಧಿ ಸ್ಥಿತಿಗೆ ತಂದಿರುವ ರಾಜಸ್ಥಾನ ಸರ್ಕಾರದ ದಿವಾಳಿ ಅಭಿವೃದ್ಧಿ ಪ್ರಾಧಿಕಾರ
ರೈತರನ್ನು ಜೀವಂತ ಸಮಾಧಿ ಸ್ಥಿತಿಗೆ ತಂದಿರುವ ರಾಜಸ್ಥಾನ ಸರ್ಕಾರದ ದಿವಾಳಿ ಅಭಿವೃದ್ಧಿ ಪ್ರಾಧಿಕಾರ

March 3, 2020
Share on FacebookShare on Twitter

ರಾಜಸ್ಥಾನದಲ್ಲಿ ಆಡಳಿತರೂಢ ಕಾಂಗ್ರೆಸ್‌ ಸರ್ಕಾರ ಜೆಡಿಎ ( ಜೈಪುರ ಡೆವಲಪ್‌ಮೆಂಟ್‌ ಅಥಾರಿಟಿ) ಅಡಿಯಲ್ಲಿ ರೈತರ ಜಮೀನನ್ನ ಗೂಂಡಾಗಿರಿಯ ತರಹ ಸ್ವಾಧೀನ ಪಡೆದುಕೊಂಡಿರುವುದು ರಾಜಸ್ಥಾನದ ಜನರಿಗಷ್ಟೇ ಅಲ್ಲ ಇಡೀ ದೇಶಕ್ಕೇ ದಿಗಿಲು ಬಡಿಸುವ ವಿಷಯ. ಅದರಲ್ಲೂ ಅಲ್ಲಿನ ನಿಂದಾರ್‌ ಹಳ್ಳಿಯ ರೈತರು ಈ ಧೋರಣೆಯ ವಿರುದ್ಧ ಜಮೀನ್‌ ಸಮಾಧಿ ಪ್ರತಿಭಟನೆಗೆ ಮುಂದಾಗಿದ್ದಾರೆ. 2013ರ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಮೇಲಂತೂ ಸರ್ಕಾರಗಳದ್ದೇ ದರ್ಪ. ಜಿಲ್ಲಾಧಿಕಾರಿಗೆ ನೇರವಾಗಿ ಅಧಿಕಾರ ನೀಡಿರುವುದರಿಂದ ರೈತರು ಒಪ್ಪಲಿ ಒಪ್ಪದಿರಲಿ ನಿಗದಿತ ಸಮಯದೊಳಗೆ ಒಕ್ಕಲೆಬ್ಬಿಸಿ ಕಳಿಸೋದೇ ಎಂಬಂತಾಗಿದೆ ರಾಜಸ್ಥಾನದ ರೈತರ ಪರಿಸ್ಥಿತಿ. ಈ ತಿದ್ದುಪಡಿ ಕಾಯ್ದೆ ವಿರುದ್ಧ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಆದರೆ, ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡಿರುವ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ರೈತರನ್ನ ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಈ ಜಮೀನ್‌ ಸಮಾಧಿ ಪ್ರತಿಭಟನೆಯೇ ನಿದರ್ಶನ.

ಹೆಚ್ಚು ಓದಿದ ಸ್ಟೋರಿಗಳು

ಮೋದಿ ಹಿರಿಯಣ್ಣ, ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ: ಕೇಜ್ರಿವಾಲ್‌

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

ಅಭಿವೃದ್ಧಿಯ ಮಾರ್ಗವೂ ಕಾರ್ಪೋರೇಟ್ ಬಂಡವಾಳವೂ ಸಮಾಜದ ಮೇಲ್ವರ್ಗಕ್ಕೆ ಮಾತ್ರವೇ ನಿಲುಕುವ ಅಭಿವೃದ್ಧಿ ಮಾದರಿಗಳೇ ನವಉದಾರವಾದದ ಜೀವಾಳ

ಸುಮಾರು ವರ್ಷಗಳ ಹಿಂದೆ ಜೈಪುರ ಜಿಲ್ಲಾ ವ್ಯಾಪ್ತಿಯ ನಿಂದಾರ್‌ ಹಳ್ಳಿಯಲ್ಲಿ ಸುಮಾರು ಐದು ನೂರು ರೈತರಿಗೆ ನೋಟಿಸ್‌ ನೀಡಿದ್ದ ಸರ್ಕಾರ ಸುಮಾರು 286.87 ಹೆಕ್ಟೇರ್‌ ಜಮೀನನ್ನ ಸ್ವಾಧಿನ ಪಡಿಸಿಕೊಳ್ಳುವುದಾಗಿ ಹೇಳಿತ್ತು, ಜೈಪುರ ಅಭಿವೃದ್ಧಿ ಪ್ರಾಧಿಕಾರ ಅಂದರೆ ಕರ್ನಾಟಕದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇರುವಂತೆ, ರೈತರಿಗೆ ಕಿರುಕುಳ ನೀಡಿ ಜಮೀನನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಮೊದಲನೆಯದಾಗಿ ಈ ಜಮೀನುಗಳ ದಾಖಲೆ ಪರಿಶೀಲಿಸದೇ ಮನಬಂದಂತೆ ಪರಿಹಾರ ನಿಗದಿ ಮಾಡಲಾಗಿದೆ. ಅದನ್ನೂ ಇದುವರೆಗೆ ನೀಡದೇ ಏಕಾಏಕಿ ಭೂ ಸ್ವಾಧೀನ ಪಡಿಸಿಕೊಂಡಿದೆ.

ನಿಂದಾರ್‌ ಹಳ್ಳಿಯ ಜನರನ್ನ ಒಕ್ಕಲೆಬ್ಬಿಸಿ ಅಲ್ಲಿ ಹೌಸಿಂಗ್‌ ಪ್ರಾಜೆಕ್ಟ್‌ ಮಾಡಲು ಸನ್ನದ್ಧರಾಗಿರುವ ಅಧಿಕಾರಿಗಳು ಭೂಸ್ವಾಧೀನ ತಿಡ್ಡುಪಡಿ ಕಾಯ್ದೆಯಡಿ ಜಾಗವನ್ನ ಅತಿಕ್ರಮಿಸಿದ್ದಾರೆ, ಸಂತ್ರಸ್ತರು ಬಿಟ್ಟುಕೊಟ್ಟ ಜಾಗಕ್ಕನುಗುಣವಾಗಿ ಪ್ರಾಜೆಕ್ಟ್‌ ಪೂರ್ಣವಾದಾಗ ಶೇ.25ರಷ್ಟು ಹೆಚ್ಚಿಗೆ ಮೌಲ್ಯದಲ್ಲೊಂದು ಮನೆ, ಅದಕ್ಕೂ ಮುಂಗಡ ಹಣ ಕಟ್ಟಬೇಕೆಂದು ತಾಕೀತು ಮಾಡಲಾಗಿದೆ. ಭೂಮಿ ಕಳೆದುಕೊಂಡ ರೈತರು ತಮ್ಮ ಭೂಮಿಯನ್ನ ಪುನಃ ಕೊಂಡು ಕೊಳ್ಳುವಂತಹ ಪರಿಸ್ಥಿತಿಯನ್ನು ತಂದಿದ್ದಾರೆ.

ಭರವಸೆ ಕಳೆದುಕೊಂಡ ನಿಂದಾರ್‌ ಗ್ರಾಮಸ್ಥರು ಜಮೀನಿನಲ್ಲಿ ಹೊಂಡಗಳನ್ನ ತೋಡಿಕೊಂಡು, ದೇಹವನ್ನು ಹುದುಗಿಸಿಕೊಂಡು ಸಮಾಧಿ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು 21 ರೈತರಲ್ಲಿ ಮಹಿಳೆಯರು ಹಾಗೂ ಮಕ್ಕಳೂ ಸಹ ಸೇರಿಕೊಂಡಿದ್ದಾರೆ. ಸಂಘರ್ಷದ ನೇತೃತ್ವ ವಹಿಸಿಕೊಂಡಿರುವ ನಾಗೇಂದ್ರ ಸಿಂಗ್‌ ಎಂಬ ರೈತ ಎಷ್ಟೇ ಕಷ್ಟ ಬಂದರೂ ಜಾಗ ಬಿಟ್ಟು ಕದಲುವುದಿಲ್ಲ ಎನ್ನುತ್ತಾರೆ. ಸರ್ಕಾರ ವಸಾಹತುಶಾಹಿ ನೀತಿ ತೊಡೆದುಹಾಕಿ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯಲ್ಲಿನ ನೈಜ ನಿಯಮಗಳನ್ನು ಪಾಲಿಸಬೇಕು ಎಂದು ಆಗ್ರಹಿಸುತ್ತಾರೆ. ಅಲ್ಲಿರುವ ರೈತರಲ್ಲಿ ಒಬ್ಬರದ್ದು ಒಂದೊಂದು ಕಥೆ. ಅರವತ್ತು ವರ್ಷದ ಚಾಂದ್‌ ಇದೇ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು.

ನಗರ ಬೆಳೆದಂತೆ ತಮ್ಮ ಜಮೀನು ಅರಿವಿಗೆ ಬಾರದಂತೆ ಸರ್ಕಾರದ ವಶಕ್ಕೆ ಹೋಗಿರೋದನ್ನ ನೋಡಿ ಕಂಗಾಲಾಗಿದ್ದಾರೆ. ಇಪ್ಪತ್ತೊಂದು ವರ್ಷದ ಮಮತಾ ಶರ್ಮಾ ಆಸ್ತಿ ಉಳಿಸಿಕೊಳ್ಳಲು ಹೋರಾಟ ರೂಪಿಸುತ್ತಾ ಸ್ನಾತಕೊತ್ತರ ಪದವಿ ಪರೀಕ್ಷೆಯನ್ನೂ ಬರೆದಿಲ್ಲ. ಮಮತಾದೇವಿ ಹಾಗೂ ಆಚೀ ದೇವಿ ಇಬ್ಬರು ಸಹೋದರಿಯರು ಅಣ್ಣತಮ್ಮಂದಿರನ್ನ ಮದುವೆಯಾಗಿದ್ದರು, ಆದರೆ ಕಳೆದ ವರ್ಷ ಅಪಘಾತದಲ್ಲಿ ಮೃತರಾಗಿಬಿಟ್ಟರು. ಈಗ ಭೂಮಿಯೂ ಇಲ್ಲ ಕುಟುಂಬವೂ ಇಲ್ಲ, ಚಿಕ್ಕಮಕ್ಕಳೊಂದಿಗೆ ಪ್ರತಿಭಟನೆಯ ಟೆಂಟ್‌ನಲ್ಲಿ ಕೂತಿದ್ದಾರೆ.

ಸರ್ಕಾರಕ್ಕೆ ಕಣ್ಣು, ಕಿವಿ ಇರುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ, ರಾಜ್ಯವನ್ನ ಅಧಃಪತನಕ್ಕೆ ತಳ್ಳಿಕೊಂಡು, ಅಭಿವೃದ್ಧಿ ಹೆಸರಲ್ಲಿ ಪರಿಹಾರ ನೀಡದೇ ಭೂಮಿ ಸ್ವಾಧೀನಕ್ಕೆ ಮುಂದಾಗಿರುವ ರಾಜಸ್ಥಾನ ಸರ್ಕಾರ ಕೇವಲ ನಿದರ್ಶನವಷ್ಟೇ. ಇನ್ನುಮುಂದೆ ನಮ್ಮ ರಾಜ್ಯವನ್ನೂ ಸೇರಿಕೊಂಡು ಎಲ್ಲರೂ ಹೀಗೆ ಒಕ್ಕಲೆಬ್ಬಿಸಲು ಮುಂದಾಗುವ ದಿನಗಳು ದೂರ ಇಲ್ಲ. ರಸ್ತೆ, ರೈಲು ಮಾರ್ಗ, ಕೈಗಾರಿಕೆಗಳು, ಟೋಲ್‌ ಗೇಟ್‌, ವಾಣಿಜ್ಯ ಸಂಕೀರ್ಣಗಳನ್ನ ನಿರ್ಮಾಣ ಮಾಡಲು ಪ್ರತಿದಿನ ಹತ್ತಾರು ಎಕರೆ ಜಮೀನನ್ನ ಸ್ವಾಧೀನ ಪಡಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಮುಂದೆ ಹೀಗೆ ದಿವಾಳಿ ಸ್ವಾಧೀನಕ್ಕೆ ಸಂಕಲ್ಪ ಮಾಡಿದರೂ ಆಶ್ವರ್ಯವಿಲ್ಲ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಆರ್​ಸಿಬಿ ಪಂದ್ಯದ ಟಿಕೆಟ್​ ಖರೀದಿಗೆ ಮುಗಿಬಿದ್ದ ಫ್ಯಾನ್ಸ್​ : ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್​​ ಬಹುತೇಕ ಸೋಲ್ಡ್​ ಔಟ್​
Top Story

ಆರ್​ಸಿಬಿ ಪಂದ್ಯದ ಟಿಕೆಟ್​ ಖರೀದಿಗೆ ಮುಗಿಬಿದ್ದ ಫ್ಯಾನ್ಸ್​ : ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್​​ ಬಹುತೇಕ ಸೋಲ್ಡ್​ ಔಟ್​

by ಮಂಜುನಾಥ ಬಿ
March 21, 2023
KSEshwarappa | ಪ್ರತಿಭಟನೆಗೆಲ್ಲಾ ಹೆದರುವನಲ್ಲ: ಆಜಾನ್ ವಿರುದ್ಧ ಹೇಳಿಕೆಗೆ ಈಶ್ವರಪ್ಪ ಸಮರ್ಥನೆ
ಇದೀಗ

KSEshwarappa | ಪ್ರತಿಭಟನೆಗೆಲ್ಲಾ ಹೆದರುವನಲ್ಲ: ಆಜಾನ್ ವಿರುದ್ಧ ಹೇಳಿಕೆಗೆ ಈಶ್ವರಪ್ಪ ಸಮರ್ಥನೆ

by ಪ್ರತಿಧ್ವನಿ
March 18, 2023
Night Party in Shivamogga : ಶಿವಮೊಗ್ಗದಲ್ಲಿ ಮಹಿಳೆಯರ ನೈಟ್ ಪಾರ್ಟಿ ಮೇಲೆ‌ ಬಜರಂಗ ದಳ ಕಾರ್ಯಕರ್ತರ ದಾಳಿ
Top Story

Night Party in Shivamogga : ಶಿವಮೊಗ್ಗದಲ್ಲಿ ಮಹಿಳೆಯರ ನೈಟ್ ಪಾರ್ಟಿ ಮೇಲೆ‌ ಬಜರಂಗ ದಳ ಕಾರ್ಯಕರ್ತರ ದಾಳಿ

by ಪ್ರತಿಧ್ವನಿ
March 18, 2023
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯೋದು ಫಿಕ್ಸ್‌..! ಕಾರಣ ಗೊತ್ತಾ..? Siddaramaiah Withdrawing From Kolar Constituency..?
Top Story

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯೋದು ಫಿಕ್ಸ್‌..! ಕಾರಣ ಗೊತ್ತಾ..? Siddaramaiah Withdrawing From Kolar Constituency..?

by ಕೃಷ್ಣ ಮಣಿ
March 18, 2023
ಗೋವಿಂದರಾಜ ನಗರ ಗಲಾಟೆ ಪ್ರಕರಣಕ್ಕೆ  ಟ್ವಿಸ್ಟ್ : ಬಿಜೆಪಿ ಕಾರ್ಯಕರ್ತರು ಪೆಟ್ರೋಲ್ ತಂದಿದ್ದರು ಎಂದು ಕಾಂಗ್ರೆಸ್ ಆರೋಪ
Top Story

ಗೋವಿಂದರಾಜ ನಗರ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್ : ಬಿಜೆಪಿ ಕಾರ್ಯಕರ್ತರು ಪೆಟ್ರೋಲ್ ತಂದಿದ್ದರು ಎಂದು ಕಾಂಗ್ರೆಸ್ ಆರೋಪ

by ಪ್ರತಿಧ್ವನಿ
March 18, 2023
Next Post
ನಿಮ್ಮ ದ್ವಿತೀಯ ಪಿಯುಸಿ ಮಕ್ಕಳ ಭವಿಷ್ಯ ಚೆನ್ನಾಗಿ ಇರಬೇಕಾ..?

ನಿಮ್ಮ ದ್ವಿತೀಯ ಪಿಯುಸಿ ಮಕ್ಕಳ ಭವಿಷ್ಯ ಚೆನ್ನಾಗಿ ಇರಬೇಕಾ..?

ಅರ್ಥವ್ಯವಸ್ಥೆಯ ಎದೆಗೆ ಗುರಿ ಇಟ್ಟಿದೆ ಕಾರ್ಪೊರೇಟ್ ಎನ್ ಪಿಎ!

ಅರ್ಥವ್ಯವಸ್ಥೆಯ ಎದೆಗೆ ಗುರಿ ಇಟ್ಟಿದೆ ಕಾರ್ಪೊರೇಟ್ ಎನ್ ಪಿಎ!

ವಿಮಾನ ನಿಲ್ದಾಣಗಳಲ್ಲಿನ ತಪಾಸಣೆಯ ವೈಫಲ್ಯದಿಂದ ಭಾರತಕ್ಕೆ ಕಾಲಿಟ್ಟಿತೇ ಕರೋನಾ?

ವಿಮಾನ ನಿಲ್ದಾಣಗಳಲ್ಲಿನ ತಪಾಸಣೆಯ ವೈಫಲ್ಯದಿಂದ ಭಾರತಕ್ಕೆ ಕಾಲಿಟ್ಟಿತೇ ಕರೋನಾ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist