ರಾಜಸ್ಥಾನ ರಾಜ್ಯ ರಾಜಕೀಯ ಕಸರತ್ತುಗಳು ಸದ್ಯದಲ್ಲಿ ಮುಗಿಯುವಂತೆ ಕಾಣುತ್ತಿಲ್ಲ. ಯುವ ನೇತಾರ ಹಾಗೂ ರಾಜಸ್ಥಾನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ನೇತೃತ್ವದ ಶಾಸಕರ ತಂಡ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದರು. ಅದಾಗ್ಯೂ ಸರ್ಕಾರ ತನ್ನ ಬಹುಮತವನ್ನು ಉಳಿಸಿಕೊಂಡಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಳಿಕ ನಡೆದ ಕಾಂಗ್ರೆಸ್ ಸಭೆಯಲ್ಲಿ ಸಚಿನ್ರ ಉಪಮುಖ್ಯಮಂತ್ರಿ ಸ್ಥಾನ ಸೇರಿದಂತೆ ಪಕ್ಷದ ಅಧ್ಯಕ್ಷಗಿರಿಯನ್ನೂ, ಬೆಂಬಲಿಗ ಶಾಸಕರ ಸಚಿವ ಪಟ್ಟವನ್ನೂ ರದ್ದುಗೊಳಿಸಲಾಗಿತ್ತು. ಅಷ್ಟೇ ಅಲ್ಲದೆ ಪಕ್ಷ ವಿರೋದಿ ಚಟುವಟಿಕೆಗಳಿಗಾಗಿ ಸರಿಯಾದ ಸ್ಪಷ್ಟನೆ ನೀಡದಿದ್ದರೆ ಶಾಸಕತ್ವವನ್ನು ರದ್ದುಗೊಳಿಸುವುದಾಗಿಯೂ ಹೇಳಿತ್ತು. ಇದನ್ನು ಪ್ರಶ್ನಿಸಿ ಸಚಿನ್ ಪೈಲಟ್ ತಂಡ ಕೋರ್ಟ್ ಮೆಟ್ಟಿಲೇರಿದ್ದರು.
ರಾಜಸ್ಥಾನ ಹೈ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಇರಿಸಿದೆ. ಅಲ್ಲದೆ ಮಂಗಳವಾರ ಸಂಜೆ 5:30 ರವರೆಗೆ ಬಂಡಾಯ ಶಾಸಕರ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳದೆಂದು ರಾಜಸ್ಥಾನ ಸಭಾಪತಿಗೆ ತಾಕೀತು ಮಾಡಿದ್ದಾರೆ.
ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ಹೂಡಿತ್ತು ಎಂಬ ಕಾಂಗ್ರೆಸ್, ತನ್ನ ಆರೋಪಕ್ಕೆ ಪೂರಕವಾಗಿ ಬಿಜೆಪಿ ನಾಯಕರು ಕಾಂಗ್ರೆಸ್ಸಿನ ಶಾಸಕರೊಂದಿಗೆ ಕರೆ ಮಾಡಿರುವ ಆಡಿಯೋ ರೆಕಾರ್ಡನ್ನು ಬಿಡುಗಡೆಗೊಳಿಸಿತ್ತು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನ ಎರಡು ಶಾಸಕರೂ ಸೇರಿದಂತೆ ಕೇಂದ್ರ ಸಚಿವರ ಮೇಲೂ FIR ದಾಖಲಾಗಿದೆ.
Also Read: ಸರ್ಕಾರ ಉರುಳಿಸಲು ಬಿಜೆಪಿ ಡೀಲ್, ಸಂಭಾಷಣೆ ವೈರಲ್; ಕೇಂದ್ರ ಸಚಿವನ ಮೇಲೆ FIR