• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಮೋದಿಗೆ ಉಘೇ ಎಂದಿದ್ದಕ್ಕೆ ರಜಿನಿಕಾಂತ್‌ ಬಚಾವ್, ವಿರೋಧಿಸಿ ವಿಜಯ್‌ಗೆ ಸಂಕಷ್ಟ

by
February 7, 2020
in ದೇಶ
0
ಮೋದಿಗೆ ಉಘೇ ಎಂದಿದ್ದಕ್ಕೆ ರಜಿನಿಕಾಂತ್‌ ಬಚಾವ್
Share on WhatsAppShare on FacebookShare on Telegram

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಶುರು ಮಾಡಿದ್ಯಾ..? ಹೀಗೊಂದು ಅನುಮಾನ ದಟ್ಟವಾಗಿ ಕಾಡಲು ಶುರುಮಾಡಲು ಕಾರಣ ನಮ್ಮ ಪಕ್ಕದ ರಾಜ್ಯದ ಕಾಲಿವುಡ್. ನಮ್ಮ ಕರ್ನಾಟಕದ ಸ್ಯಾಂಡಲ್‌ವುಡ್ ರೀತಿಯಲ್ಲಿ ತಮಿಳುನಾಡಿನ ಚಿತ್ರೋದ್ಯಮವನ್ನು ಕಾಲಿವುಡ್‌ ಎನ್ನುವುದು ರೂಢಿ. ತಮಿಳು ಚಿತ್ರರಂಗದಲ್ಲಿ ಕನ್ನಡಿಗ ರಜಿನಿಕಾಂತ್‌ ಹಾಗು ವಿಜಯ್‌ ಇಬ್ಬರು ದೊಡ್ಡ ಸ್ಟಾರ್‌ಕಾಸ್ಟ್‌ ಹೊಂದಿರುವ ನಟರು. ಈ ಇಬ್ಬರು ನಟರ ನಡುವೆ ಅಭಿಪ್ರಾಯ ಬೇಧವಿದೆ. ಈ ಅಭಿಪ್ರಾಯ ಬೇಧ ಅವರ ಜೀವನದ ಮೇಲೆ ಪರಿಣಾಮ ಬೀರಿದೆ. ಆದರೆ ಆ ಅಭಿಪ್ರಾಯ ಬೇದ ರಾಜಕಾರಣಕ್ಕೆ ಸಂಬಂಧಿಸಿದಂತೆ ಪರಿಣಾಮ ಬೀರಿರುವುದು ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ನರೇಂದ್ರ ಮೋದಿ ಸರ್ಕಾರ ಇಬ್ಬರು ನಟರ ವಿಚಾರದಲ್ಲಿ ತಾರತಮ್ಯ ಮಾಡಿದೆಯಾ ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.

ADVERTISEMENT

ರಜಿನಿಕಾಂತ್‌ ಕರ್ನಾಟಕದಿಂದ ತಮಿಳುನಾಡಿಗೆ ವಲಸೆ ಹೋಗಿದ್ದರೂ ತಲೈವಾ, ಸೂಪರ್‌ ಸ್ಟಾರ್‌ ಎನ್ನುವ ಬಿರುದು ಕೊಟ್ಟು ಜನ ಆರಾಧಿಸುತ್ತಿದ್ದಾರೆ. ಈ ರೀತಿ ಜನರ ಮನಸ್ಸು ಗೆದ್ದಿರುವ ಕನ್ನಡಿಗ ರಜಿನಿಕಾಂತ್‌ ಮೇಲೂ ಸದ್ಯಕ್ಕೆ ಅನುಮಾನ ಮೂಡುತ್ತಿದೆ. ಕೇಂದ್ರ ಸರ್ಕಾರ ತನ್ನ ಮೇಲಿನ ಆದಾಯ ವಂಚನೆಯ 3 ಕೇಸ್‌ಗಳನ್ನು ಪಾಪಸ್‌ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದಕ್ಕೆ ಪೌರತ್ವ ಕಾಯ್ದೆಯನ್ನು ಬೆಂಬಲಿಸುವ ಮೂಲಕ ಪ್ರತ್ಯುಪಕಾರ ಮಾಡಿದ್ರಾ ಎನ್ನುವ ಆಲೋಚನೆ ಮೂಡುವಂತೆ ಮಾಡಿದೆ.

ಜನವರಿ 28ರಂದು ಆದಾಯ ತೆರಿಗೆ ಇಲಾಖೆ ಒಂದು ನಿರ್ಧಾರ ಮಾಡಿದ್ದು, 2002-2003, 2003-2004, 2004-2005ರ ನಡುವೆ ರಜನಿಕಾಂತ್‌ ತೆರಿಗೆ ಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಪ್ರಕರಣ ದಾಖಲಿಸಿತ್ತು. ಆ ಬಳಿಕ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವ ಆದಾಯ ತೆರಿಗೆ ಇಲಾಖೆ ಪ್ರಕರಣ ವಾಪಸ್‌ ಪಡೆದುಕೊಳ್ಳುವ ನಿರ್ಧಾರ ತೀಲಿಸಿದೆ. ಇದಾದ ಬಳಿಕ ಇಷ್ಟು ದಿನಗಳ ಕಾಲ ಮೌನ ವಹಿಸಿದ್ದ ನಟ ರಜಿನಿಕಾಂತ್‌, ಇದೀಗ ಮೌನ ಮುರಿದಿದ್ದಾರೆ.

ಪೌರತ್ವ ಕಾಯ್ದೆ ಜಾರಿಯಿಂದ ಮುಸ್ಲಿಂ ಸಮುದಾಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ಪೌರತ್ವ ಕಾಯ್ದೆಯಿಂದ ತೊಂದರೆ ಆದರೆ ನಾನೇ ಮೊದಲಿಗನಾಗಿ ದನಿ ಎತ್ತುತ್ತೇನೆ ಎಂದಿದ್ದಾರೆ. ರಜಿನಿಕಾಂತ್‌ ಹೇಳಿಕೆಯನ್ನು ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್‌ ಖಂಡಿಸಿದ್ದು, ಶೀಘ್ರದಲ್ಲೇ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಿದ್ದಾರೆ. 66.22 ಲಕ್ಷ ರೂಪಾಯಿ ದಂಡ ಹಾಕಿದ್ದ ಕೇಸ್‌ ವಾಪಸ್‌ ಪಡೆದಿದ್ದಕ್ಕೆ ನರೇಂದ್ರ ಮೋದಿ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ರಾ ಅನ್ನೋ ಮಾತುಗಳು ಕೇಳಿ ಬಂದಿದೆ. ಈ ಮಾತಿಗೆ ಪೂರಕ ಎನ್ನುವಂತೆ ನರೇಂದ್ರ ಮೋದಿಯ ಆಡಳಿತ ವೈಖರಿ ಟೀಕಿಸಿದ್ದ ಮತ್ತೋರ್ವ ನಾಯಕನಿಗೆ ಸಂಕಷ್ಟ ಎದುರಾಗಿರುವುದು.

ನಟ ವಿಜಯ್‌ ನಿವಾಸ ಸೇರಿದಂತೆ 38 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಇಲ್ಲದ ಬರೋಬ್ಬರಿ 77 ಕೋಟಿ ರೂಪಾಯಿ ಸೀಜ್‌ ಮಾಡಲಾಗಿದೆ ಎನ್ನುವ ವರದಿಗಳು ಬಂದಿವೆ. ಜೊತೆಗೆ 300 ಕೋಟಿಗೂ ಹೆಚ್ಚು ಆಸ್ತಿ ಪತ್ತೆಯಾಗಿದೆ ಎಂದು ಐಟಿ ಅಧಿಕಾರಿಗಳ ಮೂಲಗಳು ಮಾಹಿತಿ ಕೊಟ್ಟಿವೆ. ಇನ್ನೊಂದು ಮೂಲಗಳ ಪ್ರಕಾರ ನಟ ವಿಜಯ್‌, ಸಿನಿಮಾದಲ್ಲಿ ಜಿಎಸ್‌ಟಿ ಬಗ್ಗೆ ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ ಕಾರಣಕ್ಕೆ ಮೋದಿ ಸರ್ಕಾರ ಟಾರ್ಗೆಟ್‌ ಮಾಡಿದೆ ಎನ್ನಲಾಗುತ್ತಿದೆ.

2017ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಮೆರ್ಸೆಲ್‌ ಚಿತ್ರವನ್ನು ತಡೆಯಲು ಎಐಎಡಿಎಂಕೆ ಸಾಕಷ್ಟು ಪ್ರಯತ್ನ ಮಾಡಿತ್ತು. ಆ ಬಳಿಕ ಕೇಂದ್ರ ಸರ್ಕಾರದ ನಿಲುವುಗಳನ್ನು ವಿಜಯ್‌ ಖಂಡಿಸಿದ್ದರಿಂದ ಆದಾಯ ತೆರಿಗೆ ಪ್ರಕರಣದಲ್ಲಿ ಸಿಲುಕಿಸಲಾಗ್ತಿದೆ ಎನ್ನುವ ಆರೋಪಗಳು ಎದುರಾಗಿವೆ. ಅಭಿಮಾನಿಗಳು ಇದೊಂದು ಅಭಿಯಾನ ಮಾಡುತ್ತಿದ್ದು, ವಿ ಸ್ಟ್ಯಾಂಡ್‌ ವಿತ್‌ ವಿಜಯ್‌ ಅನ್ನೋ ಅಭಿಯಾನ ಟ್ರೆಂಡ್‌ ಆಗಿದೆ. ಒಟ್ಟಾರೆ ಮೋದಿ ಸರ್ಕಾರ ನಟ ವಿಜಯ್‌ ಅವರನ್ನು ಟಾರ್ಗೆಟ್‌ ಮಾಡಿದೆ ಎನ್ನುವುದು ಅಭಿಮಾನಿಗಳ ಆರೋಪ. ಇದಕ್ಕೆ ಕಾರಣ ಬಿಜೆಪಿ ಪರವಾಗಿ ಇರುವ ನಟ ರಜಿನಿಕಾಂತ್‌ ಅವರ ಪ್ರಕರಣ ಕೈಬಿಟ್ಟಿರೋದು. ತಪ್ಪು ಯಾರು ಮಾಡಿದರೂ ತಪ್ಪು. ಆದರೆ ಬೆಂಬಲಿಗರಿಗೆ ಒಂದು ನ್ಯಾಯ, ವಿರೋಧಿಗಳಿಗೆ ಒಂದು ನ್ಯಾಯವೇ? ಎನ್ನುವುದು ಜನರ ಪ್ರಶ್ನೆಯಾಗಿದೆ.

Tags: Income Tax DepartmentNarendra ModiRajinikanthVijayಆದಾಯ ತೆರಿಗೆ ಇಲಾಖೆಮೋದಿರಜಿನಿಕಾಂತ್‌ವಿಜಯ್‌
Previous Post

ಬಿಜೆಪಿ ಅಧಿಕಾರ ಸವಿಯಲು ನೆರವಾದವರ ಮೇಲೆ ಕರಾಳ ಕಾನೂನು ಅಸ್ತ್ರ ಪ್ರಯೋಗವೇಕೆ?

Next Post

ಅಭಿವೃದ್ದಿ ಮತ್ತು ವಿಭಜನೆ; ದೆಹಲಿ ಚುನಾವಣೆಯಲ್ಲಿ ಯಾರಿಗೆ ಮಣೆ? 

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
Next Post
ಅಭಿವೃದ್ದಿ ಮತ್ತು ವಿಭಜನೆ; ದೆಹಲಿ ಚುನಾವಣೆಯಲ್ಲಿ ಯಾರಿಗೆ ಮಣೆ? 

ಅಭಿವೃದ್ದಿ ಮತ್ತು ವಿಭಜನೆ; ದೆಹಲಿ ಚುನಾವಣೆಯಲ್ಲಿ ಯಾರಿಗೆ ಮಣೆ? 

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada