• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬಜೆಟ್‌ ಅಧಿವೇಶನಕ್ಕೆ ಬಂದ ಶಾಸಕಿ ಎಂಟು ತಿಂಗಳ ಗರ್ಭಿಣಿ! 

by
March 1, 2020
in ದೇಶ
0
ಬಜೆಟ್‌ ಅಧಿವೇಶನಕ್ಕೆ ಬಂದ ಶಾಸಕಿ ಎಂಟು ತಿಂಗಳ ಗರ್ಭಿಣಿ! 
Share on WhatsAppShare on FacebookShare on Telegram

ಎರಡು ವರ್ಷಗಳ ಹಿಂದೆ, ಆಸ್ಟ್ರೇಲಿಯಾದ ಸಂಸದೆ ಎರಡು ತಿಂಗಳ ಮಗುವಿಗೆ ಸಂಸತ್‌ನಲ್ಲಿ ಎದೆಹಾಲು ಕುಡಿಸಿದ ಫೋಟೋ ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿತ್ತು, ಕೆಲಸದ ಬಗ್ಗೆ ಆಕೆಗೆ ಇರುವ ಬದ್ಧತೆಯನ್ನ ಎಲ್ಲರೂ ಕೊಂಡಾಡಿದ್ದರು, ಆಸ್ಟ್ರೇಲಿಯಾದ ಗ್ರೀನ್‌ ಪಾರ್ಟಿಯಿಂದ ಆಯ್ಕೆಯಾಗಿದ್ದ ಲಾರಿಸ್ಸಾ ವಾಟರ್ಸ್‌ ಗೆ ಅಂದು ಮಹತ್ವದ ದಿನವಾಗಿತ್ತು, ಹಸಿರು ನೀತಿ ಕುರಿತಾದ ಮಸೂದೆಯನ್ನ ತನ್ನ ಪಕ್ಷ ಮಂಡಿಸಿತ್ತು, ಮಸೂದೆಗೆ ಈಕೆಯ ಮತ ಬಹಳ ಮುಖ್ಯವಾಗಿತ್ತು, ಹಾಗಾಗಿ ತನ್ನ ಎರಡು ತಿಂಗಳ ಮಗಳು ಆಲಿಯಾ ಜಾಯ್‌ನೊಂದಿಗೆ ಸಂಸತ್‌ ಕಲಾಪದಲ್ಲಿ ಪಾಲ್ಗೊಂಡಿದ್ದಳು.

ADVERTISEMENT

ಇದಾಗಿ ವರ್ಷ ಕಳೆದಿತ್ತು, ನಾವೆಲ್ಲಾ ನೋಡುತ್ತಾ ಕುಳಿತ್ತಿದ್ವಿ, ನಮ್ಮ ರಾಜ್ಯದಲ್ಲಿ ಸರ್ಕಾರ ಏರುಪೇರಾಗಿ ಕಲಾಪಕ್ಕೆ ಹದಿನೇಳು ಶಾಸಕರು ಗೈರಾದರು, ಕೊನೆಗೆ ಸರ್ಕಾರವನ್ನೇ ಕೆಡುವಿಕೊಂಡು ಹೊಸ ಸರ್ಕಾರ ರಚಿಸಿದರು, ಈಗ ಹೊಸ ಹುರುಪಿನೊಂದಿಗೆ ಬಜೆಟ್‌ ಅಧಿವೇಶನಕ್ಕೆ ಕಾತರರಾಗಿದ್ದಾರೆ, ಇದರಲ್ಲಿ ಎಷ್ಟು ಶಾಸಕರು ಪಾಲ್ಗೊಳ್ಳುತ್ತಾರೆ, ಬಜೆಟ್‌ ಮೇಲೆ ಸುದೀರ್ಘ ಚರ್ಚೆಯಲ್ಲಿ ಎಷ್ಟು ಮಂದಿ ಇರುತ್ತಾರೋ ಗೊತ್ತಿಲ್ಲ, ಆದರೆ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಮಹಿಳಾ ಶಾಸಕಿಯೊಬ್ಬರು ಎಂಟು ತಿಂಗಳ ಗರ್ಭೀಣಿಯಾಗಿದ್ದರೂ ಬಜೆಟ್‌ ಅಧಿವೇಶನಕ್ಕೆ ಆಗಮಿಸಿ ಹೊಸ ಭಾಷ್ಯ ಬರೆದಿದ್ದಾರೆ.

ನಮಿತಾ ಮುಂಡದ ಮಹಾರಾಷ್ಟ್ರದ ಭೀಡ್‌ ಜಿಲ್ಲೆಯ ಕೈಜ್‌ ತಾಲೂಕಿನ ಶಾಸಕಿ, ಎಂಟು ತಿಂಗಳ ಗರ್ಭಿಣಿ. ಬಜೆಟ್‌ ಅಧಿವೇಶನದಲ್ಲಿ ತನ್ನ ಕ್ಷೇತ್ರದ ಸಾಕಷ್ಟು ಸಮಸ್ಯೆಗಳನ್ನ ಸದನದ ಗಮನಕ್ಕೆ ತರಬೇಕಿದೆ, ಈ ಅಧಿವೇಶನ ಬಿಟ್ಟರೆ ಮುಂಗಾರು ಅಧಿವೇಶನಕ್ಕೆ ಬರಲು ಸಾಧ್ಯವಾಗದೇ ಇರಬಹುದು ಎಂಬ ಕಾರಣಕ್ಕೆ ಅಧಿವೇಶನಕ್ಕೆ ಹಾಜರಾಗುತ್ತಿದ್ದಾರೆ. ಸಂಸತ್‌ ಅಧಿವೇಶನ ಇರಬಹುದು, ವಿಧಾನಸಭಾ ಅಧಿವೇಶನಗಳಿರಬಹುದು, ಮೊದಲ ದಿನದಿಂದಲೇ ಚಕ್ಕರ್‌ ಹಾಕುವ ಜನಪ್ರತಿನಿಧಿಗಳ ಮಧ್ಯೆ ಮಹಿಳಾ ಶಾಸಕಿಯೊಬ್ಬರ ಮಾದರಿ ಕೆಲಸ ಎಲ್ಲರಿಗೂ ಅನುಕರಣೀಯವಾಗಬೇಕು.

ಮಾಧ್ಯಮಗಳೂ ನಮಿತಾರನ್ನ ಪ್ರಶ್ನೆ ಮಾಡಿವೆ. ಇದಕ್ಕೆ ಆಕೆ ಪ್ರತಿಕ್ರಿಯಿಸಿ, ಈ ಅಧಿವೇಶನ ನನಗೆ ಬಹಳ ಮುಖ್ಯವಾದದ್ದು, ನನ್ನ ಕ್ಷೇತ್ರದ ಸಮಸ್ಯೆಗಳನ್ನ ನಾನು ಹೇಳಿ ಕೊಳ್ಳಲೇಬೇಕು. ಹೌದು ನಾನು ಗರ್ಭಿಣಿಯಾಗಿದ್ದೇನೆ ಆದರೆ ಅದು ಮಹಾವ್ಯಾದಿ ಎಂದೇಕೆ ಪರಿಗಣಿಸಬೇಕು, ಸಮಯ ಸಿಕ್ಕಾಗ ಸಭಾಂಗಣದ ಹೊರಗೆ ವಾಕ್‌ ಮಾಡುತ್ತೇನೆ, ಸರಿಯಾದ ಸಮಯಕ್ಕೆ ಊಟ ಮಾಡುತ್ತೇನೆ, ಚಕ್ಕರ್‌ ಹಾಕುವಷ್ಟು ಸಮಸ್ಯೆ ಏನಿಲ್ಲ, ಏಪ್ರಿಲ್‌ ನಲ್ಲಿ ನಾನು ತಾಯಿಯಾಗುತ್ತೇನೆ, ಮುಂದಿನ ಮಾನ್‌ಸೂನ್‌ ಅಧಿವೇಶನಕ್ಕೆ ನನಗೆ ಭಾಗವಹಿಸಲು ಆಗದೇ ಇರಬಹುದು ಹಾಗಾಗಿ ನಾನು ಬರಲೇಬೇಕಿತ್ತು ಎನ್ನುತ್ತಾರೆ. ನಮಿತಾ ಶಿಶುಹತ್ಯೆಗೆ ಕುಖ್ಯಾತಿ ಪಡೆದ ಭೀಡ್ ಜಿಲ್ಲೆಯವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿಯಿಂದ ಬಿಜೆಪಿಗೆ ಪಲ್ಲಟಗೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು, ಈಕೆಯ ತಾಯಿ ಎನ್‌ಸಿಪಿಯಿಂದ ಮಂತ್ರಿಯಾಗಿದ್ದವರು.

ನಮಿತಾ ಕಥೆ ಇಷ್ಟಾದರೆ, ನಮ್ಮ ಪುರುಷ ಶಾಸಕರು ತದ್ವಿರುದ್ಧ, ಇನ್ನೇನು ಮಾರ್ಚ್‌ ೫ ಬಂದೇ ಬಿಡ್ತು, ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್‌ ಯಡಿಯೂರಪ್ಪನವರ ಬಹು ನಿರೀಕ್ಷಿತ ಬಜೆಟ್‌ ಮಂಡನೆಗೆ ಚಾತಕ ಪಕ್ಷಿಗಳಂತೆ ಜನರೂ ಕಾದು ಕುಳಿತಿದ್ದಾರೆ, ಎಷ್ಟು ಜನ ಅಧಿವೇಶನದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ, ಎಷ್ಟು ಗೈರಾಗುತ್ತಾರೆ, ಎಷ್ಟು ಜನರು ನಿದ್ದೆ ಮಾಡುತ್ತಾರೋ ಗೊತ್ತಿಲ್ಲ, ಈಗಾಗಲೇ ದೊರೆಸ್ವಾಮಿ ಮೇಲೆ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಯನ್ನ ಬಲವಾಗಿ ಹಿಡಿದುಕೊಂಡಿರುವ ಕಾಂಗ್ರೆಸ್‌ ಈಗಾಗಲೇ ಸದನ ಭಹಿಷ್ಕರಿಸುವ ಮಾತನ್ನಾಡಿದೆ. ಸದನದ ಪ್ರಾಮುಖ್ಯತೆಯನ್ನ ಕಳೆದುಕೊಂಡು ಸಿಎಎ, ಮೋದಿ, ದೊರೆಸ್ವಾಮಿ ಎಂದು ಕೆಸರೆರಚಾಡಲು ಸಿದ್ಧರಿರುವ ನಮ್ಮ ಶಾಸಕರನ್ನ ನೋಡಿದಾಗ ತುಂಬು ಗರ್ಭಿಣಿ ನಮಿತಾ ನೆನಪಾಗದೇ ಇರಲಾರಳು.

Tags: budgetNamitha MundadaSessionನಮಿತಾ ಮುಂಡದಬಜೆಟ್‌ ಅಧಿವೇಶನ
Previous Post

ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನಿಸಿದ ಬಿಜೆಪಿಯಿಂದ ಈಗ ತೇಪೆ ಹಚ್ಚುವ ಪ್ರಯತ್ನ 

Next Post

ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳದ್ದೇ ಕಾರು ಬಾರು

Related Posts

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
0

ಇನ್ಮುಂದೆ ಮತದಾರರ ಪಟ್ಟಿ (Voters list) ಪರಿಷ್ಕರಣೆಗಾಗಿ ಮತದಾರರ ಆಧಾರ್ ಕಾರ್ಡ್ (Adhar card), ಮತದಾರರ ಗುರುತಿನ (Voter I’d ) ಚೀಟಿ ಮತ್ತು ಪಡಿತರ ಚೀಟಿಗಳನ್ನು...

Read moreDetails
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025
Next Post
ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳದ್ದೇ ಕಾರು ಬಾರು

ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳದ್ದೇ ಕಾರು ಬಾರು

Please login to join discussion

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada