• Home
  • About Us
  • ಕರ್ನಾಟಕ
Wednesday, June 25, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬಜೆಟ್‌ ಅಧಿವೇಶನಕ್ಕೆ ಬಂದ ಶಾಸಕಿ ಎಂಟು ತಿಂಗಳ ಗರ್ಭಿಣಿ! 

by
March 1, 2020
in ದೇಶ
0
ಬಜೆಟ್‌ ಅಧಿವೇಶನಕ್ಕೆ ಬಂದ ಶಾಸಕಿ ಎಂಟು ತಿಂಗಳ ಗರ್ಭಿಣಿ! 
Share on WhatsAppShare on FacebookShare on Telegram

ಎರಡು ವರ್ಷಗಳ ಹಿಂದೆ, ಆಸ್ಟ್ರೇಲಿಯಾದ ಸಂಸದೆ ಎರಡು ತಿಂಗಳ ಮಗುವಿಗೆ ಸಂಸತ್‌ನಲ್ಲಿ ಎದೆಹಾಲು ಕುಡಿಸಿದ ಫೋಟೋ ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿತ್ತು, ಕೆಲಸದ ಬಗ್ಗೆ ಆಕೆಗೆ ಇರುವ ಬದ್ಧತೆಯನ್ನ ಎಲ್ಲರೂ ಕೊಂಡಾಡಿದ್ದರು, ಆಸ್ಟ್ರೇಲಿಯಾದ ಗ್ರೀನ್‌ ಪಾರ್ಟಿಯಿಂದ ಆಯ್ಕೆಯಾಗಿದ್ದ ಲಾರಿಸ್ಸಾ ವಾಟರ್ಸ್‌ ಗೆ ಅಂದು ಮಹತ್ವದ ದಿನವಾಗಿತ್ತು, ಹಸಿರು ನೀತಿ ಕುರಿತಾದ ಮಸೂದೆಯನ್ನ ತನ್ನ ಪಕ್ಷ ಮಂಡಿಸಿತ್ತು, ಮಸೂದೆಗೆ ಈಕೆಯ ಮತ ಬಹಳ ಮುಖ್ಯವಾಗಿತ್ತು, ಹಾಗಾಗಿ ತನ್ನ ಎರಡು ತಿಂಗಳ ಮಗಳು ಆಲಿಯಾ ಜಾಯ್‌ನೊಂದಿಗೆ ಸಂಸತ್‌ ಕಲಾಪದಲ್ಲಿ ಪಾಲ್ಗೊಂಡಿದ್ದಳು.

ADVERTISEMENT

ಇದಾಗಿ ವರ್ಷ ಕಳೆದಿತ್ತು, ನಾವೆಲ್ಲಾ ನೋಡುತ್ತಾ ಕುಳಿತ್ತಿದ್ವಿ, ನಮ್ಮ ರಾಜ್ಯದಲ್ಲಿ ಸರ್ಕಾರ ಏರುಪೇರಾಗಿ ಕಲಾಪಕ್ಕೆ ಹದಿನೇಳು ಶಾಸಕರು ಗೈರಾದರು, ಕೊನೆಗೆ ಸರ್ಕಾರವನ್ನೇ ಕೆಡುವಿಕೊಂಡು ಹೊಸ ಸರ್ಕಾರ ರಚಿಸಿದರು, ಈಗ ಹೊಸ ಹುರುಪಿನೊಂದಿಗೆ ಬಜೆಟ್‌ ಅಧಿವೇಶನಕ್ಕೆ ಕಾತರರಾಗಿದ್ದಾರೆ, ಇದರಲ್ಲಿ ಎಷ್ಟು ಶಾಸಕರು ಪಾಲ್ಗೊಳ್ಳುತ್ತಾರೆ, ಬಜೆಟ್‌ ಮೇಲೆ ಸುದೀರ್ಘ ಚರ್ಚೆಯಲ್ಲಿ ಎಷ್ಟು ಮಂದಿ ಇರುತ್ತಾರೋ ಗೊತ್ತಿಲ್ಲ, ಆದರೆ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಮಹಿಳಾ ಶಾಸಕಿಯೊಬ್ಬರು ಎಂಟು ತಿಂಗಳ ಗರ್ಭೀಣಿಯಾಗಿದ್ದರೂ ಬಜೆಟ್‌ ಅಧಿವೇಶನಕ್ಕೆ ಆಗಮಿಸಿ ಹೊಸ ಭಾಷ್ಯ ಬರೆದಿದ್ದಾರೆ.

ನಮಿತಾ ಮುಂಡದ ಮಹಾರಾಷ್ಟ್ರದ ಭೀಡ್‌ ಜಿಲ್ಲೆಯ ಕೈಜ್‌ ತಾಲೂಕಿನ ಶಾಸಕಿ, ಎಂಟು ತಿಂಗಳ ಗರ್ಭಿಣಿ. ಬಜೆಟ್‌ ಅಧಿವೇಶನದಲ್ಲಿ ತನ್ನ ಕ್ಷೇತ್ರದ ಸಾಕಷ್ಟು ಸಮಸ್ಯೆಗಳನ್ನ ಸದನದ ಗಮನಕ್ಕೆ ತರಬೇಕಿದೆ, ಈ ಅಧಿವೇಶನ ಬಿಟ್ಟರೆ ಮುಂಗಾರು ಅಧಿವೇಶನಕ್ಕೆ ಬರಲು ಸಾಧ್ಯವಾಗದೇ ಇರಬಹುದು ಎಂಬ ಕಾರಣಕ್ಕೆ ಅಧಿವೇಶನಕ್ಕೆ ಹಾಜರಾಗುತ್ತಿದ್ದಾರೆ. ಸಂಸತ್‌ ಅಧಿವೇಶನ ಇರಬಹುದು, ವಿಧಾನಸಭಾ ಅಧಿವೇಶನಗಳಿರಬಹುದು, ಮೊದಲ ದಿನದಿಂದಲೇ ಚಕ್ಕರ್‌ ಹಾಕುವ ಜನಪ್ರತಿನಿಧಿಗಳ ಮಧ್ಯೆ ಮಹಿಳಾ ಶಾಸಕಿಯೊಬ್ಬರ ಮಾದರಿ ಕೆಲಸ ಎಲ್ಲರಿಗೂ ಅನುಕರಣೀಯವಾಗಬೇಕು.

ಮಾಧ್ಯಮಗಳೂ ನಮಿತಾರನ್ನ ಪ್ರಶ್ನೆ ಮಾಡಿವೆ. ಇದಕ್ಕೆ ಆಕೆ ಪ್ರತಿಕ್ರಿಯಿಸಿ, ಈ ಅಧಿವೇಶನ ನನಗೆ ಬಹಳ ಮುಖ್ಯವಾದದ್ದು, ನನ್ನ ಕ್ಷೇತ್ರದ ಸಮಸ್ಯೆಗಳನ್ನ ನಾನು ಹೇಳಿ ಕೊಳ್ಳಲೇಬೇಕು. ಹೌದು ನಾನು ಗರ್ಭಿಣಿಯಾಗಿದ್ದೇನೆ ಆದರೆ ಅದು ಮಹಾವ್ಯಾದಿ ಎಂದೇಕೆ ಪರಿಗಣಿಸಬೇಕು, ಸಮಯ ಸಿಕ್ಕಾಗ ಸಭಾಂಗಣದ ಹೊರಗೆ ವಾಕ್‌ ಮಾಡುತ್ತೇನೆ, ಸರಿಯಾದ ಸಮಯಕ್ಕೆ ಊಟ ಮಾಡುತ್ತೇನೆ, ಚಕ್ಕರ್‌ ಹಾಕುವಷ್ಟು ಸಮಸ್ಯೆ ಏನಿಲ್ಲ, ಏಪ್ರಿಲ್‌ ನಲ್ಲಿ ನಾನು ತಾಯಿಯಾಗುತ್ತೇನೆ, ಮುಂದಿನ ಮಾನ್‌ಸೂನ್‌ ಅಧಿವೇಶನಕ್ಕೆ ನನಗೆ ಭಾಗವಹಿಸಲು ಆಗದೇ ಇರಬಹುದು ಹಾಗಾಗಿ ನಾನು ಬರಲೇಬೇಕಿತ್ತು ಎನ್ನುತ್ತಾರೆ. ನಮಿತಾ ಶಿಶುಹತ್ಯೆಗೆ ಕುಖ್ಯಾತಿ ಪಡೆದ ಭೀಡ್ ಜಿಲ್ಲೆಯವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿಯಿಂದ ಬಿಜೆಪಿಗೆ ಪಲ್ಲಟಗೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು, ಈಕೆಯ ತಾಯಿ ಎನ್‌ಸಿಪಿಯಿಂದ ಮಂತ್ರಿಯಾಗಿದ್ದವರು.

ನಮಿತಾ ಕಥೆ ಇಷ್ಟಾದರೆ, ನಮ್ಮ ಪುರುಷ ಶಾಸಕರು ತದ್ವಿರುದ್ಧ, ಇನ್ನೇನು ಮಾರ್ಚ್‌ ೫ ಬಂದೇ ಬಿಡ್ತು, ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್‌ ಯಡಿಯೂರಪ್ಪನವರ ಬಹು ನಿರೀಕ್ಷಿತ ಬಜೆಟ್‌ ಮಂಡನೆಗೆ ಚಾತಕ ಪಕ್ಷಿಗಳಂತೆ ಜನರೂ ಕಾದು ಕುಳಿತಿದ್ದಾರೆ, ಎಷ್ಟು ಜನ ಅಧಿವೇಶನದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ, ಎಷ್ಟು ಗೈರಾಗುತ್ತಾರೆ, ಎಷ್ಟು ಜನರು ನಿದ್ದೆ ಮಾಡುತ್ತಾರೋ ಗೊತ್ತಿಲ್ಲ, ಈಗಾಗಲೇ ದೊರೆಸ್ವಾಮಿ ಮೇಲೆ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಯನ್ನ ಬಲವಾಗಿ ಹಿಡಿದುಕೊಂಡಿರುವ ಕಾಂಗ್ರೆಸ್‌ ಈಗಾಗಲೇ ಸದನ ಭಹಿಷ್ಕರಿಸುವ ಮಾತನ್ನಾಡಿದೆ. ಸದನದ ಪ್ರಾಮುಖ್ಯತೆಯನ್ನ ಕಳೆದುಕೊಂಡು ಸಿಎಎ, ಮೋದಿ, ದೊರೆಸ್ವಾಮಿ ಎಂದು ಕೆಸರೆರಚಾಡಲು ಸಿದ್ಧರಿರುವ ನಮ್ಮ ಶಾಸಕರನ್ನ ನೋಡಿದಾಗ ತುಂಬು ಗರ್ಭಿಣಿ ನಮಿತಾ ನೆನಪಾಗದೇ ಇರಲಾರಳು.

Tags: budgetNamitha MundadaSessionನಮಿತಾ ಮುಂಡದಬಜೆಟ್‌ ಅಧಿವೇಶನ
Previous Post

ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನಿಸಿದ ಬಿಜೆಪಿಯಿಂದ ಈಗ ತೇಪೆ ಹಚ್ಚುವ ಪ್ರಯತ್ನ 

Next Post

ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳದ್ದೇ ಕಾರು ಬಾರು

Related Posts

Top Story

B.R Patil: ನನ್ನ ಮತ್ತು ಸರ್ಕಾರದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ: ಬಿ.ಆರ್ ಪಾಟೀಲ್..!!

by ಪ್ರತಿಧ್ವನಿ
June 25, 2025
0

ಸರ್ಕಾರ, ನನ್ನ ನಡುವಿನದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ, ನಾಳೆ ಸಿಎಂ ಅವರನ್ನು ಭೇಟಿ ಮಾಡುತ್ತೇನೆ. ನಾಳೆ ಸಿಎಂ, ಡಿಸಿಎಂ(DCM DK Shivakumar) ನನ್ನನ್ನು ಕರೆಸಿದ್ದಾರೆ. ಭೇಟಿಗೆ ಹೋಗುತ್ತೇನೆ,...

Read moreDetails

Yathnal: ಸಿದ್ದರಾಮಯ್ಯ ಕರ್ನಾಟಕವನ್ನು ಡಿಕೆಶಿ ಕೈಗೆ ಕೊಡಬೇಡಿ ಮಾರಿಬಿಡ್ತಾರೆ.. ಯತ್ನಾಳ್ ಸ್ಪೋಟಕ ಹೇಳಿಕೆ

June 24, 2025

CM Siddaramaiah: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಭೇಟಿ ಮಾಡಿದ ಸಿ.ಎಂ. ಸಿದ್ದರಾಮಯ್ಯ..

June 24, 2025

HD Kumarswamy: ಮಾವು ಬೆಳೆಗಾರರ ನೆರವಿಗೆ ಬರುವಂತೆ ಮನವಿ ಪತ್ರ ಬರೆದ ಹೆಚ್.ಡಿ ಕುಮಾರಸ್ವಾಮಿ.

June 24, 2025

M.B Patil: ದೇವನಹಳ್ಳಿ ತಾಲ್ಲೂಕಿನ 3 ಗ್ರಾಮಗಳ 495 ಎಕರೆಗೆ ವಿನಾಯಿತಿ: ಎಂ ಬಿ ಪಾಟೀಲ

June 24, 2025
Next Post
ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳದ್ದೇ ಕಾರು ಬಾರು

ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳದ್ದೇ ಕಾರು ಬಾರು

Please login to join discussion

Recent News

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 
Top Story

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 

by Chetan
June 25, 2025
Top Story

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ್ಯಾಕೆ ಸರ್‌?

by ಪ್ರತಿಧ್ವನಿ
June 25, 2025
Top Story

ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲು CM ಮನವಿ..!

by ಪ್ರತಿಧ್ವನಿ
June 25, 2025
ವಾಟ್ಸಪ್ಪ್ status ಕಣ್ರೀ..ಯಾಕೆ ಕೇಳ್ತಿರಾ ಆ …ಸ್ಟೇಟಸ್….ಸ್ಟೇಟಸ್….. ಸ್ಟೇಟಸ್…
Top Story

ವಾಟ್ಸಪ್ಪ್ status ಕಣ್ರೀ..ಯಾಕೆ ಕೇಳ್ತಿರಾ ಆ …ಸ್ಟೇಟಸ್….ಸ್ಟೇಟಸ್….. ಸ್ಟೇಟಸ್…

by ಪ್ರತಿಧ್ವನಿ
June 25, 2025
Top Story

B.R Patil: ನನ್ನ ಮತ್ತು ಸರ್ಕಾರದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ: ಬಿ.ಆರ್ ಪಾಟೀಲ್..!!

by ಪ್ರತಿಧ್ವನಿ
June 25, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 

ಕಾಂಗ್ರೆಸ್ ಶಾಸಕರ ಅಸಮಾಧಾನ..ಗದ್ದಲ – ಹೈ ನಾಯಕರ ಮೊರೆಹೋದ ಸಿಎಂ ಸಿದ್ದು ! 

June 25, 2025

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ್ಯಾಕೆ ಸರ್‌?

June 25, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada