Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಬಂಗಾಳ ಕೊಲ್ಲಿಗೆ ಅಪ್ಪಳಿಸಲಿದೆ ʼಅಂಫಾನ್‌ʼ; ಭಾರತ, ಬಾಂಗ್ಲಾಕ್ಕೆ ಆತಂಕ!

ಬಂಗಾಳ ಕೊಲ್ಲಿಗೆ ಅಪ್ಪಳಿಸಲಿದೆ ʼಅಂಫಾನ್‌ʼ; ಭಾರತ, ಬಾಂಗ್ಲಾಕ್ಕೆ ಆತಂಕ!
ಬಂಗಾಳ ಕೊಲ್ಲಿಗೆ ಅಪ್ಪಳಿಸಲಿದೆ ʼಅಂಫಾನ್‌ʼ; ಭಾರತ

May 19, 2020
Share on FacebookShare on Twitter

ಬಂಗಾಳಕೊಲ್ಲಿಯಲ್ಲಿ ಭಾರೀ ಚಂಡಮಾರುತವೊಂದು ಭಾರತ ಹಾಗೂ ಬಾಂಗ್ಲಾದೇಶದ ತೀರ ಪ್ರದೇಶಗಳಿಗೆ ಬುಧವಾರ ರಾತ್ರಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಪ್ರದೇಶದ 5 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

BREAKING ; We will throw our medals in the river Ganga | ನಮ್ಮ ಪದಕಗಳನ್ನ ನಾವು ಗಂಗಾ ನದಿಗೆ ಎಸೆಯುತ್ತೇವೆ, ಕುಸ್ತಿಪಟುಗಳ ಹೇಳಿಕೆ..!

Suresh Gowda v/s Chaluvrayaswamy : ನಾನು ಕಡ್ಡಿ ಅಲ್ಲಾಡಿಸ್ತೀನಿ, ತಾಕತ್ತಿದ್ದರೆ ತಡಿ : ಸುರೇಶ್‌ ಗೌಡ

9 Major Achievements of Modi Government : ಮೋದಿ‌ ಸರ್ಕಾರದ‌ 9 ಪ್ರಮುಖ ಸಾಧನೆಗಳನ್ನ ಬಿಂಬಿಸಿದ ಸಂಸದ ಪಿ.ಸಿ ಮೋಹನ್

ಬಂಗಾಳ ಕೊಲ್ಲಿಯಲ್ಲಿ 220 ರಿಂದ 230 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ʼಅಂಫಾನ್‌ʼ ಚಂಡಮಾರುತವು, 1999 ರಲ್ಲಿ ಒಡಿಸ್ಸಾ ತೀರ ಪ್ರದೇಶದಲ್ಲಿ ಅಪ್ಪಳಿಸಿದ ಚಂಡಮಾರುತದ ನಂತರ ಬಂಗಾಳ ಕೊಲ್ಲಿಯಲ್ಲಿ ಕಂಡು ಬರುವ ಭೀಕರವಾದ ಚಂಡಮಾರುತವಾಗಿರಲಿದೆ ಎಂದು ಭಾರತ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮೊಹಪಾತ್ರ ಹೇಳಿದ್ದಾರೆ. 1999 ರ ಚಂಡಮಾರುತವು ಒಡಿಸ್ಸಾದಲ್ಲಿ 10 ಸಾವಿರ ಮಂದಿಯನ್ನು ಬಲಿ ಪಡೆದಿತ್ತು.

ಗಾಳಿಯು ಗಂಟೆಗೆ 265 ಕಿ.ಮೀ ತನಕ ವೇಗ ಹೆಚ್ಚಳವಾಗುವ ಸಾಧ್ಯತೆ ಇದೆ. ಗಾಳಿಯ ಈ ವೇಗವು ಬೆಳೆಗಳು, ತೋಟಗಳು, ಮರಗಳು, ಮಣ್ಣಿನ ಮನೆಗಳು ಮತ್ತು ಸಂವಹನ ಮತ್ತು ವಿದ್ಯುತ್ ಕಂಬಗಳಿಗೆ ಹಾನಿಯಾಗುವಷ್ಟು ತೀವ್ರವಾಗಿರುತ್ತದೆ, ಜೊತೆಗೆ ರಸ್ತೆ ಸಂಚಾರ ಮತ್ತು ಅಗತ್ಯ ವಸ್ತುಗಳ ಸಾಗಣೆಗೆ ಅಡ್ಡಿಯಾಗುತ್ತದೆ. ದೊಡ್ಡ ದೊಡ್ಡ ಬೋಟುಗಳು ಹಾಗೂ ಹಡಗುಗಳು ತಮ್ಮ ಲಂಗರು ಪ್ರದೇಶದಲ್ಲಿ ಹಾಳಾಗುವ ಸಾಧ್ಯತೆಯಿದೆಯೆಂದು ಭಾರತದ ಹವಾಮಾನ ಕಛೇರಿ ಹೇಳಿಕೆ ನೀಡಿದೆ.

ಭಾರತ ಕಳೆದ ನಾಲ್ಕು ದಶಕಗಳಲ್ಲಿಯೇ ಮೊದಲ ಬಾರಿಗೆ ಪೂರ್ಣ ವರ್ಷದ ಆರ್ಥಿಕ ಕುಗ್ಗುವಿಕೆಯ ಕಡೆಗೆ ಸಾಗುತ್ತಿದೆ. ಎಪ್ರಿಲ್ ನಿಂದ ಬಾಂಗ್ಲಾದ ಜಿಡಿಪಿಯೂ ಕುಸಿಯುತ್ತಿದೆ. ಕರೋನಾ ಸಾಂಕ್ರಾಮಿಕ ಹಾಗೂ ಆರ್ಥಿಕ ಕುಸಿತಗಳ ದೊಡ್ಡ ಹೊಡೆತ ಬಿದ್ದಿರುವ ಬಾಂಗ್ಲಾ ಹಾಗೂ ಭಾರತಕ್ಕೆ ಚಂಡಮಾರುತವು ಭಾರೀ ದೊಡ್ಡ ನಷ್ಟ ತರಬಲ್ಲದೆಂದು ಊಹಿಸಲಾಗಿದೆ.

ಬಾಂಗ್ಲಾದೇಶವು ತನ್ನ ಕರಾವಳಿ ಪ್ರದೇಶದ 50 ಲಕ್ಷ ಜನರನ್ನು ಸ್ಥಳಾಂತರಿಸಲು 12,078 ತಾತ್ಕಾಲಿಕ ಶೆಲ್ಟರ್‌ ಗಳನ್ನು ನಿರ್ಮಿಸಿದೆ ಎಂದು ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವ ಎನಾಮುರ್ ರಹಮಾನ್ ಢಾಕಾದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಭಾರತದಲ್ಲಿ NDRF ನ 25 ತಂಡಗಳು ಈಗಾಗಲೇ ಸ್ಥಳದಲ್ಲಿ ಸನ್ನದ್ಧವಾಗಿದ್ದು, ಇತರೆ 12 ತಂಡಗಳನ್ನು ಪ್ರತ್ಯೇಕವಾಗಿ ಮೀಸಲಿರಿಸಲಾಗಿದೆ.

ಒಡಿಸ್ಸಾ, ಸೋಮವಾರ ಸಂಜೆಯಿಂದ ತನ್ನ ಕರಾವಳಿ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲು ಶುರು ಮಾಡಿದೆ. ಒಡಿಸ್ಸಾದಲ್ಲಿ 560 ಶಾಶ್ವತ ಚಂಡಮಾರುತ ಆಶ್ರಯಗಳಿವೆ, ಅಲ್ಲದೆ 7 ಸಾವಿರಕ್ಕಿಂತಲೂ ಹೆಚ್ಚಿನ ಸಾರ್ವಜನಿಕ ಕಟ್ಟಡಗಳನ್ನು ಜನರಿಗೆ ತಾತ್ಕಾಲಿಕವಾಗಿ ತಂಗಲು ಗುರುತಿಸಲಾಗಿದೆ ಎಂದು ಒಡಿಸ್ಸಾದ ವಿಶೇಷ ಪರಿಹಾರ ಕಮಿಷನರ್ ಪ್ರದೀಪ್ ಕುಮಾರ್ ಜೇನಾ ಹೇಳಿದ್ದಾರೆ.

ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮೀನುಗಾರಿಕೆ ಕಾರ್ಯಾಚರಣೆಯನ್ನು ಮೇ 20 ರವರೆಗೆ ಸ್ಥಗಿತಗೊಳಿಸಬೇಕು ಎಂದು ಭಾರತ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಮಹಾರಾಷ್ಟ್ರದಲ್ಲಿ ನೀರಿಗಾಗಿ ಬರ, ಬಾವಿಯೊಳಗೆ ಇಳಿಯುತ್ತಿರುವ ಜನ..!
ದೇಶ

ಮಹಾರಾಷ್ಟ್ರದಲ್ಲಿ ನೀರಿಗಾಗಿ ಬರ, ಬಾವಿಯೊಳಗೆ ಇಳಿಯುತ್ತಿರುವ ಜನ..!

by Prathidhvani
May 25, 2023
Congress Guarantees ; ನಾಳೆ ಸಂಪುಟ ಸಭೆಯಲ್ಲಿ ಜಾರಿ ಆಗುತ್ತಾ ಕಾಂಗ್ರೆಸ್‌ ನ ಐದು ಗ್ಯಾರಂಟಿಗಳು..?
Top Story

Congress Guarantees ; ನಾಳೆ ಸಂಪುಟ ಸಭೆಯಲ್ಲಿ ಜಾರಿ ಆಗುತ್ತಾ ಕಾಂಗ್ರೆಸ್‌ ನ ಐದು ಗ್ಯಾರಂಟಿಗಳು..?

by ಪ್ರತಿಧ್ವನಿ
May 30, 2023
ಬಿಜೆಪಿಗೆ ಮೊದಲ ಆಘಾತ ನೀಡಿದ ಸಿಎಂ ಸಿದ್ದರಾಮಯ್ಯ
Top Story

Congress government | BJP ಸರ್ಕಾರದ ಹಗರಣಕ್ಕೆ ಇತಿಶ್ರೀ ಹಾಡುತ್ತಾ ಕಾಂಗ್ರೆಸ್​ ಸರ್ಕಾರ..?

by ಮಂಜುನಾಥ ಬಿ
May 23, 2023
Pramod Muthalik Strikes Against Congress | ಕಾಂಗ್ರೆಸ್​​​ ವಿರುದ್ಧ ಹರಿಹಾಯ್ದ ಪ್ರಮೋದ್​ ಮುತಾಲಿಕ್..!
Top Story

Pramod Muthalik Strikes Against Congress | ಕಾಂಗ್ರೆಸ್​​​ ವಿರುದ್ಧ ಹರಿಹಾಯ್ದ ಪ್ರಮೋದ್​ ಮುತಾಲಿಕ್..!

by ಪ್ರತಿಧ್ವನಿ
May 28, 2023
ಖಾದರ್​ ಮುಂದಾಳತ್ವದಲ್ಲಿ ಸದನದ ಚರ್ಚೆ ಮೇಲ್ಮಟ್ಟಕ್ಕೇರಲಿ : ಸಿಎಂ ಸಿದ್ದರಾಮಯ್ಯ
ರಾಜಕೀಯ

ಖಾದರ್​ ಮುಂದಾಳತ್ವದಲ್ಲಿ ಸದನದ ಚರ್ಚೆ ಮೇಲ್ಮಟ್ಟಕ್ಕೇರಲಿ : ಸಿಎಂ ಸಿದ್ದರಾಮಯ್ಯ

by Prathidhvani
May 24, 2023
Next Post
ಲಕ್ಷ್ಯ ನೀಡದ ಕಾರಣಕ್ಕೆ ಲಕ್ಷ ದಾಟಿದ ದೇಶದ ಕರೋನಾ ಪೀಡಿತರ ಸಂಖ್ಯೆ

ಲಕ್ಷ್ಯ ನೀಡದ ಕಾರಣಕ್ಕೆ ಲಕ್ಷ ದಾಟಿದ ದೇಶದ ಕರೋನಾ ಪೀಡಿತರ ಸಂಖ್ಯೆ

ಕೃಷ್ಣನೂರಿನಲ್ಲಿ ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ ನೆರವಾದ MIT ವಿದ್ಯಾರ್ಥಿನಿ

ಕೃಷ್ಣನೂರಿನಲ್ಲಿ ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ ನೆರವಾದ MIT ವಿದ್ಯಾರ್ಥಿನಿ

ನನ್ನ ಅಪ್ಪ...

ನನ್ನ ಅಪ್ಪ...

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist