Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಫೋನ್, ಲೈಟ್, ಆಟದ ಸಾಮಾನುಗಳಾಯ್ತು, ಈಗ ಚೀನಾದಿಂದ ಈರುಳ್ಳಿ ಬಂದಿದೆ!

ಫೋನ್, ಲೈಟ್, ಆಟದ ಸಾಮಾನುಗಳಾಯ್ತು, ಈಗ ಚೀನಾದಿಂದ ಈರುಳ್ಳಿ ಬಂದಿದೆ!
ಫೋನ್

December 23, 2019
Share on FacebookShare on Twitter

ತಿಂಗಳುಗಳ ಕಾಲ ಗಗನಕ್ಕೇರಿದ ಈರುಳಿ ಬೆಲೆಯನ್ನು ನಿಯಂತ್ರಿಸಲಾಗದ ಭಾರತ ಸರ್ಕಾರ ನೆರೆಯ ಚೀನಾ ಹಾಗೂ ಟರ್ಕಿ ದೇಶಗಳಿಂದ 11,000 ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಿಕೊಂಡಿದೆ!

ಹೆಚ್ಚು ಓದಿದ ಸ್ಟೋರಿಗಳು

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ಕಾವೇರಿ ನೀರಿ ನಿಯಂತ್ರಣ ಸಮಿತಿ ಸಭೆ: ಕರ್ನಾಟಕದ ಪರವಾಗಿ ಅಧಿಕಾರಿಗಳು ವಾದ ಮಂಡನೆ 

`ದಿ ಪ್ರಿಂಟ್’ ಪ್ರಕಟಿಸಿದ ವರದಿ ಈ ಮಾಹಿತಿಯನ್ನು ಹೊರಹಾಕಿದೆ. ಭಾನುವಾರ ಮತ್ತು ಸೋಮವಾರ ಹಲವು ಮಂದಿ ಟ್ವಿಟರ್‍ನಲ್ಲಿ ಹಳದಿ ಬಣ್ಣ, ನುಣುಪಾದ ಈರುಳ್ಳಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಇವು ಎಲ್ಲಿ ಬೆಳೆದ ಈರುಳ್ಳಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು.

ಸುಳಿವು ಬೆನ್ನುಹತ್ತಿದ ದಿ ಪ್ರಿಂಟ್, ಭಾರತ ಸರ್ಕಾರ ಚೀನಾದಿಂದ 4000 ಮತ್ತು ಟರ್ಕಿಯಿಂದ 7000 ಮೆಟ್ರಿಕ್ ಟನ್ ಈರುಳ್ಳಿ ತರಿಸಿಕೊಂಡಿರುವುದಾಗಿ ಲಭ್ಯವಾಗಿರುವ ದಾಖಲೆಗಳು ತಿಳಿಸಿವೆ ಎಂದು ವರದಿ ಹೇಳಿದೆ.

ಅಗ್ಗದ ಆಟಿಕೆಗಳು, ಎಲೆಕ್ಟ್ರಾನಿಕ್ ಸರಕನ್ನು ಭಾರತದ ಮಾರುಕಟ್ಟೆಗೆ ಪೂರೈಸುತ್ತಿದ್ದ ಚೀನಾ ಈಗ ಆಹಾರ-ಕೃಷಿ ಉತ್ಪನ್ನಗಳಿಗೆ ಪೂರೈಸಲಾರಂಭಿಸಿದಂತಾಗಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ದೇಶಗಳಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಭಾರತ 2ನೇ ಅತಿ ದೊಡ್ಡ ಈರುಳ್ಳಿ ಉತ್ಪಾದಕ ದೇಶ. ಆದರೆ ದಿಢೀರನೆ ಈರುಳ್ಳಿ 80 ರಿಂದ 200 ರೂ.ಗಳವರೆಗೆ ತಲುಪಿದೆ.

ಆದರೆ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ಹಿನ್ನೆಲೆಯಲ್ಲಿ ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೋರೇಷನ್ ಎಂಬ ಸಾರ್ವಜನಿಕ ಟ್ರೇಡಿಂಗ್ ಏಜೆನ್ಸಿ ಜಾಗತಿಕ ಟೆಂಡರ್ ಕರೆದು ಚೀನಾದಿಂದ 4000 ಮತ್ತು ಟರ್ಕಿಯಿಂದ 7000 ಮೆಟ್ರಿಕ್ ಈರುಳ್ಳಿ ಖರೀದಿಸಿದೆ. ಈ ಕುರಿತು ದಿ ಪ್ರಿಂಟ್‍ಗೆ ದಾಖಲೆಗಳು ಲಭ್ಯವಾಗಿರುವುದಾಗಿ ವರದಿಯಲ್ಲಿ ತಿಳಿಸಿದೆ.

ಆದರೆ ಆಶ್ಚರ್ಯದ ಸಂಗತಿಯೆಂದರೆ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರ ವರದಿಗಾರರ ನೀಡಿರುವ ಮಾಹಿತಿಯ ಪ್ರಕಾರ 2020ರ ಜನವರಿ 31ರಂದು ಈರುಳ್ಳಿ ಭಾರತಕ್ಕೆ ಬರಬೇಕಿದೆ. ಬಂದ ನಂತರ ಈರುಳ್ಳಿ ಬೆಲೆ 70 ರಿಂದ 80 ರೂ.ಗಳಿಗೆ ಇಳಿಯಲಿದೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ, ನೆದರ್‍ಲ್ಯಾಂಡ್, ಈಜಿಪ್ತ್, ಇರಾನ್ ಮತ್ತು ರಷ್ಯಾಗಳಿಂದ ಈರುಳ್ಳಿ ತರಿಸಿಕೊಳ್ಳುತ್ತಿರುವುದಾಗಿ ವರದಿ ಉಲ್ಲೇಖಿಸಿದೆ.

ನವೆಂಬರ್‍ನಲ್ಲಿಯೇ ಸರ್ಕಾರ 1.2 ಲಕ್ಷ ಮೆಟ್ರಿಕ್ ಟನ್‍ನಷ್ಟು ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿತ್ತು. ಆದರೆ ಎಂಎಂಟಿಸಿ ಕೇವಲ 40,000 ಮೆಟ್ರಿಕ್ ಟನ್‍ನಷ್ಟು ಈರುಳ್ಳಿಯಲ್ಲಿ ತರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಪೈಕಿ 11,000 ಮೆಟ್ರಿಕ್ ಟನ್ ಈರುಳ್ಳಿಯನ್ನು ಕಳೆದ ವಾರ ಆರ್ಡರ್ ಮಾಡಲಾಗಿತ್ತು. ಈ ಪೈಕಿ 290 ಮೆಟ್ರಿಕ್ ಟನ್ ಈರುಳ್ಳಿ ಭಾರತದ ಬಂದರನ್ನು ಈಗಾಗಲೇ ತಲುಪಿದೆ.

ಚೀನಾದಿಂದ ಬಂದರೂ ದರದಲ್ಲಿ ಹೆಚ್ಚೇನು ವ್ಯತ್ಯಾಸವಾಗುತ್ತಿಲ್ಲ. 600 ಡಾಲರ್ (42,702ರೂ.)ಗೆ ಮೆಟ್ರಿಕ್ ಟನ್‍ನಂತೆ ಈರುಳ್ಳಿ ಆಮದು ಮಾಡಿಕೊಳ್ಳಲು ಟೆಂಡರ್ ಕರೆಯಲಾಗಿತ್ತು. ಆದರೆ ಚೀನಾದಿಂದ ಆಮದಾಗುತ್ತಿರುವ ಈರುಳ್ಳಿ ಟನ್‍ಗೆ 714 ಡಾಲರ್ (50,886 ರೂ)ಗಳ ದರಕ್ಕೆ ಭಾರತಕ್ಕೆ ಬರುತ್ತಿದೆ. ಭಾರತ ಸರ್ಕಾರದ ಆಮದು ನೀತಿ ಹಲವು ದೇಶಗಳು ಬಿಡ್ ಮಾಡಲು ಮುಂದಾಗದಂತೆ ಮಾಡಿದೆ. ಹಾಗಾಗಿ ಚೀನಾ ಮತ್ತು ಟರ್ಕಿಗಳಿಂದ ಮಾತ್ರಕ್ಕೆ ಸದ್ಯಕ್ಕೆ ಈರುಳ್ಳಿ ಆಮದು ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
5515
Next
»
loading
play
Tamil Naduನಲ್ಲಿ Siddaramaiah ಫೋಟೋಗೆ ಹಾರ ಹಾಕಿ ಧರಣಿ | ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
play
Mandya : ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
«
Prev
1
/
5515
Next
»
loading

don't miss it !

ಡಿಜಿ, ಐಜಿಪಿ ನಡೆಸುತ್ತಿದ್ದ ಸಭೆಗಳ ಹೊಣೆ ಇನ್ನು ಎಡಿಜಿಪಿ, ಐಜಿಪಿ ರ‍್ಯಾಂಕ್ ಅಧಿಕಾರಿಗಳ ಹೆಗಲಿಗೆ..!
ಇದೀಗ

ಡಿಜಿ, ಐಜಿಪಿ ನಡೆಸುತ್ತಿದ್ದ ಸಭೆಗಳ ಹೊಣೆ ಇನ್ನು ಎಡಿಜಿಪಿ, ಐಜಿಪಿ ರ‍್ಯಾಂಕ್ ಅಧಿಕಾರಿಗಳ ಹೆಗಲಿಗೆ..!

by Prathidhvani
September 23, 2023
ಮಂಡ್ಯದ ಒಬ್ಬ ನಾಗಕರೀಕನಾಗಿ ತಮಿಳುನಾಡಿಗೆ ನೀರು ಹರಿಸುವುದನ್ನು ಸರ್ಕಾರ ನಿಲ್ಲಿಸಬೇಕು: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Top Story

ಮಂಡ್ಯದ ಒಬ್ಬ ನಾಗಕರೀಕನಾಗಿ ತಮಿಳುನಾಡಿಗೆ ನೀರು ಹರಿಸುವುದನ್ನು ಸರ್ಕಾರ ನಿಲ್ಲಿಸಬೇಕು: ಶಾಸಕ ಪಿ.ಎಂ.ನರೇಂದ್ರಸ್ವಾಮಿ

by ಪ್ರತಿಧ್ವನಿ
September 25, 2023
ವಿನೋದ್ ಪ್ರಭಾಕರ್ ಅಭಿನಯದ “ಫೈಟರ್ ” ಚಿತ್ರದ ಬಿಡುಗಡೆ ದಿನಾಂಕ  ಘೋಷಣೆ
Top Story

ವಿನೋದ್ ಪ್ರಭಾಕರ್ ಅಭಿನಯದ “ಫೈಟರ್ ” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

by ಪ್ರತಿಧ್ವನಿ
September 23, 2023
ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಸಾಧಾರಣ ಮಳೆ  ಸಾಧ್ಯತೆ
Top Story

ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಸಾಧಾರಣ ಮಳೆ ಸಾಧ್ಯತೆ

by ಪ್ರತಿಧ್ವನಿ
September 21, 2023
ಮುಖ್ಯಮಂತ್ರಿ ಆಕಾಂಕ್ಷಿ ನಾಯಕರಿಗೆ ಇಷ್ಟೊಂದು ಕಠಿಣ ಭಾಷೆ ಅವಶ್ಯವೇ..?
Top Story

ಮುಖ್ಯಮಂತ್ರಿ ಆಕಾಂಕ್ಷಿ ನಾಯಕರಿಗೆ ಇಷ್ಟೊಂದು ಕಠಿಣ ಭಾಷೆ ಅವಶ್ಯವೇ..?

by ಲಿಖಿತ್‌ ರೈ
September 21, 2023
Next Post
ಯಡಿಯೂರಪ್ಪಗೆ ಕಂಟಕವಾಗಲಿದ್ದ ಮಂಗಳೂರು ನಗರ ಪೊಲೀಸರ ಯಡವಟ್ಟು

ಯಡಿಯೂರಪ್ಪಗೆ ಕಂಟಕವಾಗಲಿದ್ದ ಮಂಗಳೂರು ನಗರ ಪೊಲೀಸರ ಯಡವಟ್ಟು

ವರ್ಷವೊಂದರಲ್ಲಿ 5 ರಾಜ್ಯ ಕಳೆದುಕೊಂಡ ಬಿಜೆಪಿ

ವರ್ಷವೊಂದರಲ್ಲಿ 5 ರಾಜ್ಯ ಕಳೆದುಕೊಂಡ ಬಿಜೆಪಿ

ವಿಶ್ವದೆಲ್ಲೆಡೆ ಹೆಚ್ಚುತ್ತಿದೆ CAA & NRC ವಿರುದ್ಧದ ಕೂಗು

ವಿಶ್ವದೆಲ್ಲೆಡೆ ಹೆಚ್ಚುತ್ತಿದೆ CAA & NRC ವಿರುದ್ಧದ ಕೂಗು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist