Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಪಕ್ಷಾಂತರ ನಿಷೇಧ ಕಾಯ್ದೆ ಕಠಿಣವಾಗಲಿ: ಸಂತೋಷ್ ಹೆಗ್ಡೆ

ಪಕ್ಷಾಂತರ ನಿಷೇಧ ಕಾಯ್ದೆ ಕಠಿಣವಾಗಲಿ: ಸಂತೋಷ್ ಹೆಗ್ಡೆ
ಪಕ್ಷಾಂತರ ನಿಷೇಧ ಕಾಯ್ದೆ ಕಠಿಣವಾಗಲಿ: ಸಂತೋಷ್ ಹೆಗ್ಡೆ

December 9, 2019
Share on FacebookShare on Twitter

ಕರ್ನಾಟಕದ ಉಪಚುನಾವಣೆ ಫಲಿತಾಂಶದ ಕುರಿತು ನಿಮ್ಮ ಅಭಿಪ್ರಾಯವೇನು?

ಹೆಚ್ಚು ಓದಿದ ಸ್ಟೋರಿಗಳು

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!

ಶ್ರೀಸಾಮಾನ್ಯನ ಸಮಸ್ಯೆಗಳೂ ಮಾರುಕಟ್ಟೆ ಆರ್ಥಿಕತೆಯೂ..ನಿತ್ಯ  ಬದುಕು ದುಸ್ತರವಾಗುತ್ತಿದ್ದರೂ ಸಾರ್ವಜನಿಕ ವಲಯದಲ್ಲಿ ಏಕೆ ಮೌನ ಆವರಿಸಿದೆ ?

ಫಲಿತಾಂಶದ ಬಗ್ಗೆ ಎರಡು ಮಾತಿಲ್ಲ. ಪ್ರಜಾಪ್ರಭುತ್ವದಲ್ಲಿ ನಾವೆಲ್ಲಾ ಒಪ್ಪಿಕೊಳ್ಳಬೇಕಾದ ವಿಚಾರ. ಆದರೆ ನನ್ನ ವಿಚಾರ ಏನೆಂದರೆ, ಈ ಚುನಾವಣೆ ಅಗತ್ಯವಿತ್ತೇ? ಎನ್ನುವುದು. ಯಾಕಂದರೆ ಒಂದು ಕ್ಷೇತ್ರದ ಚುನಾವಣೆಯಲ್ಲಿ ಅಲ್ಲಿನ ಮತದಾರರು ಐದು ವರ್ಷಕ್ಕೆಂದು ಪ್ರತಿನಿಧಿಗಳನ್ನು ಚುನಾಯಿಸುತ್ತಾರೆ. ಆ ಚುನಾವಣೆಗೆ ಸರ್ಕಾರ ಬಹಳಷ್ಟು ಹಣ ಖರ್ಚು ಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಇಷ್ಟೊಂದು ಸದಸ್ಯರು ತಮ್ಮ ವೈಯಕ್ತಿಕ ಕಾರಣಕ್ಕಾಗಿ ರಾಜಿನಾಮೆ ಕೊಟ್ಟಿದ್ದು ತಪ್ಪು ಎನ್ನುವುದು ನನ್ನ ವಿಚಾರ. ಆ ತಪ್ಪಿನ ಹಿನ್ನೆಲೆಯಲ್ಲಿ ಈ ಚುನಾವಣೆ ಅಗತ್ಯ ಇರಲಿಲ್ಲ ಎನ್ನುವುದು ಕೂಡ ನನ್ನ ಅನಿಸಿಕೆ. ಯಾಕೆಂದರೆ, ಇವರಿಗೆ ಮತದಾರರು ಮುಂದಕ್ಕೆ ಏನಾದರೂ ಉಪಚುನಾವಣೆಗೆ ನಿಂತಾಗ ಬುದ್ದಿ ಕಲಿಸಬಹುದು ಎನ್ನುವುದು ನನ್ನ ವಿಚಾರವಾಗಿತ್ತು. ಅದರಿಂದ ಇವತ್ತಿನ ಆರ್ಥಿಕ ಪರಿಸ್ಥಿತಿಯಲ್ಲಿ ಚುನಾವಣೆ ಅಗತ್ಯವಿಲ್ಲ ಎನ್ನುವುದು ನನ್ನ ತಿಳುವಳಿಕೆಯಾಗಿತ್ತು.

ಆದರೂ ಕೂಡ ಇವತ್ತಿನ ಫಲಿತಾಂಶದ ಹಿನ್ನಲೆಯಲ್ಲಿ ಮತದಾರರು ಬಹಳಷ್ಟು ಜನ ರಾಜಿನಾಮೆ ಕೊಟ್ಟವರನ್ನು ಮತ್ತೊಮ್ಮೆ ಚುನಾಯಿಸಿದ್ದಾರೆ ಇದು ಮತದಾರರ ಹಕ್ಕು. ಅದರ ಬಗ್ಗೆ ನಾನು ಏನೂ ಹೇಳಲಾಗುವುದಿಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಚುನಾಯಿಸಲ್ಪಟ್ಟ ಪ್ರತಿನಿಧಿಗೆ ಅವರದ್ದೆ ಆದ ಕೆಲವು ಹಕ್ಕು, ಗೌರವಗಳು ಇರುತ್ತದೆ. ಅದನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಆ ಹಿನ್ನಲೆಯಲ್ಲಿ ನಾನು ಅದನ್ನು ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇನೆ. ಆದರೂ ಕೂಡ ನನ್ನ ಮನಸ್ಸಲ್ಲಿ ಈ ಚುನಾವಣೆ ಅಗತ್ಯ ಇತ್ತೇ ಎನ್ನುವುದು ಇವತ್ತು ಕೂಡ ನನ್ನ ಮನಸ್ಸಲ್ಲಿ ಇದೆ. ಆದರೆ ಮುಂದಕ್ಕೆ ಅದರ ಬಗ್ಗೆ ವಾದ ಮಾಡುವ ಸಂದರ್ಭ ಇಲ್ಲ. ಏಕೆಂದರೆ ಚುನಾವಣೆ ಮುಗಿದಿದೆ, ಫಲಿತಾಂಶ ಬಂದಿದೆ, ಮರು ಚುನಾಯಿತರಾಗಿದ್ದಾರೆ, ನನ್ನ ಒಂದೇ ಒಂದು ಕೋರಿಕೆ, ಈ ಚುನಾಯಿತ ಪ್ರತಿನಿಧಿಗಳಲ್ಲಿ, ಇನ್ಮುಂದೆ ತಮ್ಮ ಕ್ಷೇತ್ರ ಮೇಲೆ ಕಳಕಳಿ ಇಟ್ಟುಕೊಳ್ಳಿ. ಯಾವ ಕಾರಣಕ್ಕೂ ಕೂಡ ರಾಜಿನಾಮೆ ಕೊಡಬೇಡಿ. ಒಂದು ವೇಳೆ ರಾಜಿನಾಮೆ ಕೊಡಬೇಕೆನ್ನುವ ಮನೋಭಾವನೆ ನಿಮ್ಮಲ್ಲಿ ಹುಟ್ಟಿದರೆ, ರಾಜಿನಾಮೆ ಬರೀ ಚುನಾಯಿತ ಹುದ್ದೆಗೆ ಮಾತ್ರವಲ್ಲ, ರಾಜಕೀಯಕ್ಕೇ ರಾಜಿನಾಮೆ ಕೊಡಿ, ಮತ್ತೊಮ್ಮೆ ಚುನಾವಣೆಗೆ ನಿಲ್ಲಬೇಡಿ ಎಂದು ನಾನು ಕೇಳಿಕೊಳ್ಳುತ್ತೇನೆ.

ಈ ಫಲಿತಾಂಶ ಪಕ್ಷಾಂತರಕ್ಕೆ ಪ್ರೇರಣೆ ಕೊಟ್ಟ ಹಾಗೆ ಆಗುತ್ತೆ ಅಲ್ವಾ?

ಹೌದು ಆಗಬಹುದು. ಅದು ತಪ್ಪು ಕೂಡ. ಇವತ್ತು 10 ಶೆಡ್ಯೂಲ್ ನಲ್ಲಿ ಇಂತಹ ಪಕ್ಷಾಂತರ ಚಟುವಟಿಕೆಯನ್ನು ನಿಲ್ಲಿಸುವುದಕ್ಕೆ ಕಾನೂನು ಮಾಡಿದ್ದಾರೆ. ಆದರೆ ಆ ಕಾನೂನು ಸರಿಯಾಗಿ ಜಾರಿಗೆ ಬಂದಿಲ್ಲವೆಂದು ಕಾಣಿಸುತ್ತಿದೆ. ಇದಕ್ಕಿಂತ ಕಠಿಣವಾದ ಮಾಡಬೇಕಾಗುತ್ತದೆ.

ಜನಮತವನ್ನು ಕಡೆಗಣಿಸಿ ಪಕ್ಷಾಂತರ ಮಾಡುವುದು ಎಷ್ಟು ಮಟ್ಟಿಗೆ ಸರಿ?

ರಾಜಕೀಯದಲ್ಲಿ, ಪ್ರಜಾಪ್ರಭುತ್ವದಲ್ಲಿ ಇದು ಸಂಪೂರ್ಣ ತಪ್ಪು ಎನ್ನುವುದು ನನ್ನ ಅನಿಸಿಕೆ. ಆದರೆ ಕೊನೆಗೆ ಚುನಾವಣೆಗೆ ನಿಂತ ನಂತರ ಗೆಲ್ಲಿಸುವುದು ಸೋಲಿಸುವುದು ಮತದಾರರಿಗೆ ಬಿಟ್ಟದ್ದು. ಅದರ ಬಗ್ಗೆ ನಾವು ಏನನ್ನೂ ಹೇಳಲಾಗದು. ಹೀಗಾಗಿ ಚುನಾವಣೆಯ ಫಲಿತಾಂಶದ ಬಗ್ಗೆ ನಾನು ಏನು ಹೇಳಲಾಗುವುದಿಲ್ಲ.

ಪಕ್ಷಾಂತರ ನಿಷೇಧ ಕುರಿತು ಯಾವ ರೀತಿ ಕಾನೂನು ಬರಬೇಕು?

ನಾನು ನೋಡಿರುವ ಹಾಗೆ 10ನೇ ಶೆಡ್ಯೂಲ್ ಕಾನೂನು ಬಂದಿದೆ. ಸುಮಾರು 10 ವರ್ಷ ಆಯಿತು ಈ ಕಾನೂನು ಬಂದು. ಆದರೆ ಇದರಿಂದ ಯಾವ ಪ್ರಯೋಜನವೂ ಆಗಿಲ್ಲ ಎನ್ನುವುದು ನನ್ನ ಅನಿಸಿಕೆ. ಇದರ ಬಗ್ಗೆ ಸಾಮಾಜಿಕ ಚರ್ಚೆಗಳು ನಡೆದರೆ, ಹೊಸ ಕಾನೂನಿಗೆ ಬೇರೆ ದಾರಿಯನ್ನು ಕಂಡುಕೊಳ್ಳಬಹುದು ಎನ್ನುವುದು ನನ್ನ ವಿಚಾರ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಮಾಡಾಳು ವಿರೂಪಾಕ್ಷಪ್ಪ ಬಂಧನ ಬೆನ್ನಲ್ಲೇ ಚೆನ್ನಗಿರಿ ಟಿಕೆಟ್​ ಆಕಾಂಕ್ಷಿಗಳಿಂದ ಟಿಕೆಟ್​ಗಾಗಿ ಲಾಬಿ
Top Story

ಮಾಡಾಳು ವಿರೂಪಾಕ್ಷಪ್ಪ ಬಂಧನ ಬೆನ್ನಲ್ಲೇ ಚೆನ್ನಗಿರಿ ಟಿಕೆಟ್​ ಆಕಾಂಕ್ಷಿಗಳಿಂದ ಟಿಕೆಟ್​ಗಾಗಿ ಲಾಬಿ

by ಮಂಜುನಾಥ ಬಿ
March 28, 2023
ಧಾರವಾಡದಿಂದ ವಿನಯ್​ ಕುಲಕರ್ಣಿ ಪತ್ನಿಗೆ ಕಾಂಗ್ರೆಸ್​ ಟಿಕೆಟ್​..? : ವಿನಯ್​ ಕುಲಕುರ್ಣಿ ಹೇಳಿದಿಷ್ಟು
Top Story

ಧಾರವಾಡದಿಂದ ವಿನಯ್​ ಕುಲಕರ್ಣಿ ಪತ್ನಿಗೆ ಕಾಂಗ್ರೆಸ್​ ಟಿಕೆಟ್​..? : ವಿನಯ್​ ಕುಲಕುರ್ಣಿ ಹೇಳಿದಿಷ್ಟು

by ಮಂಜುನಾಥ ಬಿ
March 26, 2023
IPL ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್‌ ನಟಿಯರ ಭರ್ಜರಿ ಡ್ಯಾನ್ಸ್..!‌
ಸಿನಿಮಾ

IPL ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್‌ ನಟಿಯರ ಭರ್ಜರಿ ಡ್ಯಾನ್ಸ್..!‌

by ಪ್ರತಿಧ್ವನಿ
April 1, 2023
ಸಿದ್ದರಾಮಯ್ಯ ಅವರಿಗೆ ಜನರ ಮೂಲಕವೇ ಉತ್ತರ ಕೊಡಿಸುತ್ತೇನೆ ; ಕಾಂಗ್ರೆಸ್‌ ವಿರುದ್ಧ ಗುಡುಗಿದ ಹೆಚ್.ಡಿ.ಕುಮಾರಸ್ವಾಮಿ
Top Story

ಸಿದ್ದರಾಮಯ್ಯ ಅವರಿಗೆ ಜನರ ಮೂಲಕವೇ ಉತ್ತರ ಕೊಡಿಸುತ್ತೇನೆ ; ಕಾಂಗ್ರೆಸ್‌ ವಿರುದ್ಧ ಗುಡುಗಿದ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
March 31, 2023
ಬೆಡ್‌ರೂಮ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆಗಿನ ಫೋಟೋ ಶೇರ್‌ ಮಾಡಿದ ನಟಿ..!
ಸಿನಿಮಾ

ಬೆಡ್‌ರೂಮ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆಗಿನ ಫೋಟೋ ಶೇರ್‌ ಮಾಡಿದ ನಟಿ..!

by ಪ್ರತಿಧ್ವನಿ
March 29, 2023
Next Post
ಕರ್ನಾಟಕ ರಾಷ್ಟ್ರೀಯ ಟ್ರೆಂಡ್ ಗೆ ವಿರುದ್ಧವೇಕೆ?

ಕರ್ನಾಟಕ ರಾಷ್ಟ್ರೀಯ ಟ್ರೆಂಡ್ ಗೆ ವಿರುದ್ಧವೇಕೆ?

ಕೆಲ ಧರ್ಮಗಳ ತುಷ್ಠೀಕರಣಕ್ಕೆ ಪೌರತ್ವ ಮಸೂದೆ ತಿದ್ದುಪಡಿ?

ಕೆಲ ಧರ್ಮಗಳ ತುಷ್ಠೀಕರಣಕ್ಕೆ ಪೌರತ್ವ ಮಸೂದೆ ತಿದ್ದುಪಡಿ?

ಶೀರ್ಘದಲ್ಲೇ ಜಿಎಸ್ಟಿ ತೆರಿಗೆ ಸ್ವರೂಪ ಮಾರ್ಪಾಡು; ಗ್ರಾಹಕರಿಗೆ  ಕರ‘ಭಾರ’

ಶೀರ್ಘದಲ್ಲೇ ಜಿಎಸ್ಟಿ ತೆರಿಗೆ ಸ್ವರೂಪ ಮಾರ್ಪಾಡು; ಗ್ರಾಹಕರಿಗೆ ಕರ‘ಭಾರ’

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist