Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ನಿರ್ಭಯಾ ಅಪರಾಧಿಯಿಂದ ಚುನಾವಣಾ ಆಯೋಗಕ್ಕೆ ಮನವಿ 

ನಿರ್ಭಯಾ ಅಪರಾಧಿಯಿಂದ ಚುನಾವಣಾ ಆಯೋಗಕ್ಕೆ ಮನವಿ
ನಿರ್ಭಯಾ ಅಪರಾಧಿಯಿಂದ ಚುನಾವಣಾ ಆಯೋಗಕ್ಕೆ ಮನವಿ 

February 21, 2020
Share on FacebookShare on Twitter

ಮೂರು ಬಾರಿ ನೇಣು ಕುಣಿಕೆಯಿಂದ ಪಾರಾಗಿದ್ದ ನಿರ್ಭಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗ ಅಪರಾಧಿಗಳು ಈಗ ಮತ್ತೊಂದು ಬಾರಿ ನೀಡಲಾಗಿರುವ ಡೆತ್‌ ವಾರೆಂಟ್‌ ಅನ್ನು ತಳ್ಳಿ ಹಾಕಲು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ಅಪರಾಧಿಗಳಲ್ಲಿ ಒಬ್ಬನಾದ ವಿನಯ್‌ ಶರ್ಮಾ, ಈಗ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ತನ್ನ ದಯಾ ಅರ್ಜಿಯನ್ನು ರದ್ದುಗೊಳಿಸಲು ದೆಹಲಿ ಉಪ ಮುಖ್ಯಮಂತ್ರಿಗಳಿಗೆ ಅರ್ಹತೆಯೇ ಇರಲಿಲ್ಲ ಎಂದು ಮನವಿಯಲ್ಲಿ ಹೇಳಿದ್ದಾನೆ.

ಹೆಚ್ಚು ಓದಿದ ಸ್ಟೋರಿಗಳು

ಬಿಜೆಪಿ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಕಡೆಗಣಿಸಿದೆ : ಸೋನಿಯಾ ಗಾಂಧಿ

ಭಾರತದ ಸ್ವಾತಂತ್ರ್ಯ ಕುರಿತು ದಿನಪತ್ರಿಕೆಗಳ ಹೆಡ್ಲೈನ್ ಹೇಗಿದ್ದವು ಗೊತ್ತೇ?

ಮುಂದಿನ 25ವರ್ಷಗಳಲ್ಲಿ ಭಾರತ ಅಭಿವೃದ್ದಿ ಹೊಂದಿದ ದೇಶವಾಗಬೇಕು : ಪ್ರಧಾನಿ ಮೋದಿ

ವಿನಯ್‌ ಶರ್ಮಾನ ದಯಾ ಅರ್ಜಿಯನ್ನು ವಜಾಗೊಳಿಸುವ ಸಂದರ್ಭ ದೆಹಲಿಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿತ್ತು. ಆ ಕಾರಣಕ್ಕಾಗಿ, ದೆಹಲಿಯ ಉಪ ಮುಖ್ಯಮಂತ್ರಿಗಳಾದ ಮನೀಷ್‌ ಸಿಸೋಡಿಯಾ ಅವರಿಗೆ ಅರ್ಜಿಯನ್ನು ವಜಾಗೊಳಿಸಲು ಅನರ್ಹರಾಗಿದ್ದರು. ಫೆಬ್ರುವರಿ 8ರಂದು ನಡೆದ ಚುನಾವಣೆಗಾಗಿ ಮನೀಷ್‌ ಸಿಸೋಡಿಯಾ ಪ್ರಚಾರ ಕಾರ್ಯ ಕೈಗೊಳ್ಳುವ ಸಂದರ್ಭದಲ್ಲಿ ದಯಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ, ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು, ಅರ್ಜಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಮನೀಷ್‌ ಸಿಸೋಡಿಯಾ ಅವರ ಡಿಜಿಟಲ್‌ ಸಹಿಯ ಅಗತ್ಯವಿತ್ತು. ಆದರೆ, ಅವರು ಕೇವಲ ವಾಟ್ಸಾಪ್‌ ಸ್ಕ್ರೀನ್‌ಶಾಟ್‌ ಕಳುಹಿಸಿದ್ದಾರೆ. ಹಾಗಾಗಿ ದಯಾ ಅರ್ಜಿಯನ್ನು ತಿರಸ್ಕರಿಸಿದ್ದ ಊರ್ಜಿತವಾಗುವುದಿಲ್ಲ ಎಂಬ ಅಂಶವನ್ನು ಇಲ್ಲಿ ಒತ್ತಿ ಹೇಳಲಾಗಿದೆ.

ಇತ್ತೀಚಿಗೆ ಜೈಲಿನ ಗೋಡೆಗೆ ತನ್ನ ಹಣೆಯನ್ನು ಜಜ್ಜಿ ಗಾಯಗೊಳಿಸಿ ಆ ನೆಪದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ವಿನಯ್‌ ಶರ್ಮಾ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತಲೆಗೆ ತೀವ್ರವಾದ ಗಾಯವಾಗಿದೆ, ಬಲ ಭುಜದ ಮೂಳೆ ಮುರಿದು ಹೋಗಿದೆ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೇನೆ ಹಾಗೂ ಸ್ಕಿಜೋಫ್ರೇನಿಯಾ (ಮಾನಸಿಕ ರೋಗ) ದಿಂದ ಬಳಲುತ್ತಾ ಇದ್ದೇನೆ ಎಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇನ್ನು, ತಲೆಗೆ ಏಟಾಗಿರುವುದರಿಂದ ತನಗೆ ತನ್ನ ಸ್ವಂತ ತಾಯಿಯನ್ನು ಕೂಡಾ ಗುರುತು ಹಿಡಿಯಲಾಗುತ್ತಿಲ್ಲ, ನನ್ನ ವಕೀಲರು ಯಾರೆಂಬುದು ಕೂಡ ಗುರುತು ಹಿಡಿಯಲಾಗುತ್ತಿಲ್ಲ, ಎಂದು ಹೇಳಿದ್ದಾನೆ.

ಜೈಲಿನ ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳುವ ಪ್ರಕಾರ ವಿನಯ್‌ ಶರ್ಮಾ ಖುದ್ದು ತನ್ನ ತಲೆ ಹಾಗೂ ಭುಜವನ್ನು ಗೋಡೆಗೆ ಹೊಡೆದುಕೊಂಡು ಗಾಯ ಮಾಡಿಕೊಂಡಿದ್ದಾನೆ.

ಇನ್ನುಳಿದ ಮೂವರು ಅಪರಾಧಿಗಳಾದ ಅಕ್ಷಯ್‌ ಠಾಕೂರ್‌, ಮುಖೇಶ್‌ ಸಿಂಗ್‌ ಹಾಗೂ ಪವನ್‌ ಗುಪ್ತಾ ಅವರಿಗೆ ಮಾರ್ಚ್‌ 3ರಂದು ಬೆಳಿಗ್ಗಿನ ಜಾವ 6 ಗಂಟೆಗೆ ಸರಿಯಾಗಿ ನೇಣಿಗೆ ಏರಿಸಬೇಕೆಂದು ಡೆತ್‌ ವಾರೆಂಟ್‌ ಹೊರಡಿಸಲಾಗಿದೆ. ಮೂರು ಬಾರಿ ಡೆತ್‌ ವಾರೆಂಟ್‌ ಹೊರಡಿಸಿದ್ದರೂ, ಕಾನೂನಿನಲ್ಲಿರುವ ದೋಷಗಳನ್ನು ಅರಿತು ನೇಣು ಕುಣಿಕೆಯಿಂದ ಪಾರಾಗುತ್ತಿದ್ದ ಅಪರಾಧಿಗಳದ್ದು ಹೊಸ ವರಸೆ ಆರಂಭವಾಗಿದೆ. ಈ ಬಾರಿಯಾದರೂ, ಅವರು ಮಾಡಿರುವ ಪಾಪಕ್ಕೆ ಶಿಕ್ಷೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಬಿಜೆಪಿಯವರು ಬ್ರಿಟಿಷರಿಗೆ ಅಡುಗೆ ಮಾಡಿ ಹಾಕುತ್ತಿದ್ದವರು, ಈಗ ದೊಡ್ಡ ಮನುಷ್ಯರಾಗಿದ್ದಾರೆ : ರಮೇಶ್‌ ಕುಮಾರ್‌
ಕರ್ನಾಟಕ

ಬಿಜೆಪಿಯವರು ಬ್ರಿಟಿಷರಿಗೆ ಅಡುಗೆ ಮಾಡಿ ಹಾಕುತ್ತಿದ್ದವರು, ಈಗ ದೊಡ್ಡ ಮನುಷ್ಯರಾಗಿದ್ದಾರೆ : ರಮೇಶ್‌ ಕುಮಾರ್‌

by ಪ್ರತಿಧ್ವನಿ
August 14, 2022
ಅಮೃತ ಮಹೋತ್ಸವ ಜಾಹೀರಾತಿನಿಂದ ನೆಹರೂಗೆ ಕೊಕ್, ಸಾವರ್ಕರ್‌ಗೆ ಸ್ಥಾನ : ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ
ಕರ್ನಾಟಕ

ಅಮೃತ ಮಹೋತ್ಸವ ಜಾಹೀರಾತಿನಿಂದ ನೆಹರೂಗೆ ಕೊಕ್, ಸಾವರ್ಕರ್‌ಗೆ ಸ್ಥಾನ : ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ

by ಪ್ರತಿಧ್ವನಿ
August 14, 2022
Uncategorized

Virtual Data Room Service Providers

by ಶ್ರುತಿ ನೀರಾಯ
August 11, 2022
ಲೇಖಕ ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆಸಿದ 24 ವರ್ಷದ ವ್ಯಕ್ತಿ ಯಾರು?
ವಿದೇಶ

ಲೇಖಕ ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆಸಿದ 24 ವರ್ಷದ ವ್ಯಕ್ತಿ ಯಾರು?

by ಪ್ರತಿಧ್ವನಿ
August 13, 2022
ಬಿಬಿಎಂಪಿ ಚುನಾವಣೆ; ಹೊಸ ಮೀಸಲಾತಿ ಪಟ್ಟಿ ವಾಪಾಸ್ ಪಡೆದ ಬೊಮ್ಮಾಯಿ ಸರ್ಕಾರ
ಕರ್ನಾಟಕ

ಬಿಬಿಎಂಪಿ ಚುನಾವಣೆ; ಹೊಸ ಮೀಸಲಾತಿ ಪಟ್ಟಿ ವಾಪಾಸ್ ಪಡೆದ ಬೊಮ್ಮಾಯಿ ಸರ್ಕಾರ

by ಕರ್ಣ
August 12, 2022
Next Post
ಅಮೂಲ್ಯ ಕಲಿಸಿದ ʼಅಮೂಲ್ಯʼವಾದ ಪಾಠ

ಅಮೂಲ್ಯ ಕಲಿಸಿದ ʼಅಮೂಲ್ಯʼವಾದ ಪಾಠ

ಕನ್ಹಯ್ಯ ಕುಮಾರ್ to ಅಮೂಲ್ಯ; ದೇಶದ್ರೋಹ ಪ್ರಕರಣ ಮತ್ತು ಭಾರತೀಯ ದಂಡ ಸಂಹಿತೆ!

ಕನ್ಹಯ್ಯ ಕುಮಾರ್ to ಅಮೂಲ್ಯ; ದೇಶದ್ರೋಹ ಪ್ರಕರಣ ಮತ್ತು ಭಾರತೀಯ ದಂಡ ಸಂಹಿತೆ!

1947ರ ಆ ಬ್ರೆಕ್ಸಿಟ್‌ಗೂ

1947ರ ಆ ಬ್ರೆಕ್ಸಿಟ್‌ಗೂ, 2020ರ ಈ ಬ್ರೆಕ್ಸಿಟ್‌ಗೂ, ಗೋಚರಿಸುತ್ತಿದೆಯೇ ಕಾಲ ಚಕ್ರದ ಮಹಿಮೆ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist