Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ನಿರ್ಭಯಾ ಅತ್ಯಾಚಾರಿಗಳಿಗೆ 3ನೇ ಬಾರಿ ಗಲ್ಲು!  ಇಲ್ಲಿ ನಿಜವಾದ ಶಿಕ್ಷೆ ಯಾರಿಗೆ?

ನಿರ್ಭಯಾ ಅತ್ಯಾಚಾರಿಗಳಿಗೆ 3ನೇ ಬಾರಿ ಗಲ್ಲು!  ಇಲ್ಲಿ ನಿಜವಾದ ಶಿಕ್ಷೆ ಯಾರಿಗೆ?
ನಿರ್ಭಯಾ ಅತ್ಯಾಚಾರಿಗಳಿಗೆ 3ನೇ ಬಾರಿ ಗಲ್ಲು!  ಇಲ್ಲಿ ನಿಜವಾದ ಶಿಕ್ಷೆ ಯಾರಿಗೆ?

February 18, 2020
Share on FacebookShare on Twitter

2012ರ ಡಿಸೆಂಬರ್‌ 16ರಂದು ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಆರು ಮಂದಿ ಅತ್ಯಾಚಾರಿಗಳ ಪೈಕಿ ಓರ್ವ ಆರೋಪಿ ಆತ್ಮಹತ್ಯೆಗೆ ಶರಣಾದ. ಮತ್ತೋರ್ವನನ್ನು ಬಾಲಾಪರಾಧಿ ನ್ಯಾಯಮಂಡಳಿ ಬಿಡುಗಡೆ ಮಾಡಿದೆ. ಇನ್ನುಳಿದ ನಾಲ್ವರು ಆರೋಪಿಗಳಿಗೆ ತ್ವರಿತಗತಿ ನ್ಯಾಯಾಲಯ ಮರಣದಂಡನೆ ವಿಧಿಸಿದ್ದು, ಸುಪ್ರೀಂಕೋರ್ಟ್‌ ಕೂಡ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ರಾಷ್ಟ್ರಪತಿಗಳು ಕ್ಮಾಧಾನ ಅರ್ಜಿಯನ್ನು ವಜಾ ಮಾಡಿದೆ. ರಾಷ್ಟ್ರಪತಿ ನಿರ್ಧಾವನ್ನೇ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಇದೀಗ ಎಲ್ಲರಿಗೂ ಗಲ್ಲು ಶಿಕ್ಷೆ ನೀಡಲು ದೆಹಲಿಯ ಸೆಷನ್ಸ್‌ ಕೋರ್ಟ್‌ ಜಡ್ಜ್‌ ಆದೇಶ ಮಾಡಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಕೆಲವು ರಾಷ್ಟ್ರಗಳು ಅಜೆಂಡಾ ನಿರ್ಧರಿಸಿ, ಉಳಿದವರು ಅನುಸರಿಸುವ ಕಾಲ ಮುಗಿದಿದೆ: ಜೈಶಂಕರ್

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ನಾಲ್ವರು ಅಪರಾಧಿಗಳಿಗೆ ಮಾರ್ಚ್‌ 3ರಂದು ಬೆಳಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ಜಾರಿ ಮಾಡಲು ಹೊಸದಾಗಿ ಡೆತ್‌ ವಾರೆಂಟ್‌ ಹೊರಡಿಸಲಾಗಿದೆ. ಇದೇ ರೀತಿ ಈ ಹಿಂದೆ ಕೂಡ ಎರಡು ಬಾರಿ ಡೆತ್‌ ವಾರೆಂಟ್‌ ಹೊರಡಿಸಲಾಗಿತ್ತು. ಇದೀಗ ಮೂರನೇ ಬಾರಿಗೆ ದೆಹಲಿಯ ಅಡಿಷನಲ್‌ ಸೆಷನ್‌ ನ್ಯಾಯಾಧೀಶ ಧರ್ಮೇಂದರ್‌ ರಾಣಾ ಆದೇಶ ಹೊರಡಿಸಿದ್ದಾರೆ. 32 ವರ್ಷದ ಮುಖೇಶ್‌ ಸಿಂಗ್‌, 25 ವರ್ಷದ ಪವನ್‌ ಗುಪ್ತ, 26 ವರ್ಷದ ಪವನ್‌ ಕುಮಾರ್‌ ಶರ್ಮಾ ಹಾಗು 31 ವರ್ಷದ ಅಕ್ಷಯ್‌ ಕುಮಾರ್‌ ಜೀವನ ಮಾರ್ಚ್‌ 3ರಂದು ಬೆಳಗ್ಗೆ 6 ಗಂಟೆಗೆ ಅಂತ್ಯವಾಗಲಿದೆ. ಮೂರನೇ ಬಾರಿಯಾದರೂ ಶಿಕ್ಷೆಯಾಗುತ್ತೆ ಎನ್ನುವ ನೆಮ್ಮದಿಯ ನಿಟ್ಟುಸಿರುವ ನಿರ್ಭಯಾ ಪೋಷಕರದ್ದಾಗಿದೆ.

ಈ ಮೊದಲು ಜನವರಿ 22ರಂದು ಗಲ್ಲು ಶಿಕ್ಷೆ ಜಾರಿಗೆ ಆದೇಶ ಮಾಡಲಾಗಿತ್ತು. ಆ ಬಳಿಕ ಜನವರಿ 17ರಂದು ಫೆಬ್ರವರಿ 1ಕ್ಕೆ ಮುಂದೂಡಿಕೆ ಮಾಡಿ ಕೋರ್ಟ್‌ ಆದೇಶ ಮಾಡಿತ್ತು. ಮತ್ತೆ ಜನವರಿ 31ಕ್ಕೆ ಆದೇಶ ಮಾಡಿದ ಸೆಷನ್ಸ್‌ ಕೋರ್ಟ್‌, ಫೆಬ್ರವರಿ 1ರಂದು ಜಾರಿಯಾಗಬೇಕಿದ್ದ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡ ಮುಂದಿನ ಆದೇಶದ ತನಕ ಶಿಕ್ಷೆ ಜಾರಿ ಮಾಡದಂತೆ ಆದೇಶ ಹೊರಡಿಸಿತ್ತು. ಅದಾದ ಬಳಿಕ ಸೋಮವಾರ ಫಬ್ರವರಿ 17ರಂದು 3ನೇ ಬಾರಿಗೆ ದೆಹಲಿಯ ಅಡಿಷನಲ್‌ ಕೋರ್ಟ್‌ ಮಾರ್ಚ್‌ 3ರಂದು ಗಲ್ಲು ಶಿಕ್ಷೆ ಜಾರಿ ಮಾಡಲು ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಸಂತಸ ವ್ಯಕ್ತಪಡಿಸಿರುವ ನಿರ್ಭಯಾ ತಾಯಿ ಆಶಾದೇವಿ, ಇದು ಅಂತಿಮ ದಿನಾಂಕ ಎಂದು ನಂಬಿದ್ದೇನೆ. ಈ ಆದೇಶ ನನಗೆ ತೃಪ್ತಿ ಕೊಟ್ಟಿದೆ. ಈ ದಿನಾಂಕದಲ್ಲಿ ಆದರೂ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲಿ ಎಂದಿದ್ದಾರೆ.

ದೆಹಲಿಯ ತಿಹಾರ್‌ ಜೈಲಿನಲ್ಲಿ ನಾಲ್ವರು ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗ್ತಿದೆ. ಆದರೆ ಗಲ್ಲು ಶಿಕ್ಷೆಯನ್ನು ಕೊಡಬಾರದು ಎನ್ನುವ ಮಾನವೀಯತೆಯ ಕೂಗು ಸಹ ಕೇಳಿಸುತ್ತಿದೆ. ಆದರೆ‌ ವಿಶೇಷ ಎಂದರೆ, ಈ ಅಪರಾಧಿಗಳು ನಿಸ್ಸಾಹಕ ಹೆಣ್ಣು ಮಗಳ ಮೇಲೆ ಮೃಗೀಯವಾಗಿ ಅತ್ಯಾಚಾರ ನಡೆಸಿದ್ದು ಮಾತ್ರವಲ್ಲದೆ ಗುಪ್ತಾಂಗಕ್ಕೆ ಕಬ್ಬಿಣದ ಸಲಾಕೆ ಹಾಕಿ ತಮ್ಮ ವಿಕೃತಿ ಮೆರೆದಿದ್ದರು. ಈ ನಾಲ್ವರು ಆಪರಾಧಿಗಳಿಗೆ ಗಲ್ಲು ಶಿಕ್ಷೆಯೂ ಕಡಿಮೆಯೆ ಎನ್ನುವುದರಲ್ಲಿ ಅನ್ಯ ಮಾತಿಲ್ಲ. ಆದರೆ ಸಾಯುವ ಮೊದಲು ಉಳಿದವರನ್ನು ಸಾಯಿಸಿ, ಇಡಿ ಕುಟುಂಬದವರ ನೆಮ್ಮದಿ ಹಾಳು ಮಾಡುತ್ತಿದ್ದಾರೆ. ಇಡೀ ಕುಟುಂಬದ ಸದಸ್ಯರು ಮರಣದಂಡನೆ ದಿನವನ್ನು ಕಾಯುವಂತಾಗಿದೆ.

ಅಪರಾಧ ಮಾಡಿದ್ದಾರೆ ಎನ್ನುವುದು ಗೊತ್ತಿದ್ದರೂ ಅವರಿಗೆ ಹೆತ್ತ ಕರುಳು ಕರುಣೆಯನ್ನು ಹುಟ್ಟಿಸುತ್ತದೆ. ಒಮ್ಮೆ ಮರಣದಂಡನೆ ಆದರೆ ಸತ್ತನೆಂದು ಕಣ್ಣೀರನ್ನು ವರೆಸಿ ಬದುಕು ಮುಂದುವರಿಸಬಹುದು. ಆದರೆ ತಿಂಗಳಿಗೊಮ್ಮೆ ದಿನಾಂಕ ಬದಲಾಗುತ್ತಾ ಹೋದರೆ ಅತ್ಯಾಚಾರ ಮಾಡಿದ ಅಪರಾಧಿಗಳು ಸಾಯುವ ಬದಲು ಕುಟುಂಬದ ಸಾಕಷ್ಟು ಜನರನ್ನು ಸಾವಿನ ನೋವಿನಲ್ಲಿ ಸಿಲುಕಿ ಒದ್ದಾಡುವಂತೆ ಮಾಡಿದ್ದಾರೆ. ನಿಜವಾಗಲು ಇಡೀ ಅತ್ಯಾಚಾರ ಅಪರಾಧಿಗಳ ಕುಟುಂಬಸ್ಥರು ಜೀವನ ಪೂರ್ತಿ ಶಿಕ್ಷೆ ಅನುಭವಿಸುವಂತಾಗಿದೆ. ಒಟ್ಟಾರೆ, ಸತ್ತು ಇವರ ನೆನಪು ಮಾಸಿದರೆ ಸಾಕು ನಾವು ಹೊಸ ಬದುಕು ಕಟ್ಟಿಕೊಳ್ಳುವ ತವಕದಲ್ಲಿ ಈ ಕುಟುಂಬಗಳಿವೆ.

RS 500
RS 1500

SCAN HERE

Pratidhvani Youtube

«
Prev
1
/
5517
Next
»
loading
play
Yogaraj Bhat | ಉತ್ತರ ಕರ್ನಾಟಕ ಬ್ಯಾಕ್ ಗ್ರೌಂಡ್ ಇದೆ ಭಾಷೆ ಬಳಕೆ ಇಲ್ಲಾ ಇದರಲ್ಲಿ | @pratidhvanidigital3421
play
LIVE: HD DeveGowda Press Meet | JDS | HD Kumaraswamy | Politics | Cauvery #pratidhvani #hddevegowda
«
Prev
1
/
5517
Next
»
loading

don't miss it !

ಇನ್ಫೋಸಿಸ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಹೆಸರು ಬಳಸಿಕೊಂಡು ವಂಚನೆ!
Top Story

ಇನ್ಫೋಸಿಸ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಹೆಸರು ಬಳಸಿಕೊಂಡು ವಂಚನೆ!

by ಪ್ರತಿಧ್ವನಿ
September 24, 2023
ನೀರು ಬಿಡುವಾಗ ನಿಮಗೆ ರಾಜ್ಯದ ಸಂಸದರ ನೆನಪಾಗಲಿಲ್ಲವೇ..?: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Top Story

ನೀರು ಬಿಡುವಾಗ ನಿಮಗೆ ರಾಜ್ಯದ ಸಂಸದರ ನೆನಪಾಗಲಿಲ್ಲವೇ..?: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

by ಪ್ರತಿಧ್ವನಿ
September 20, 2023
ಮುದ್ರಾಂಕ ಇಲಾಖೆಯ ವೆಬ್‌ಸೈಟ್‌ಗೆ ಕನ್ನ – ಎಇಪಿಎಸ್ ಮೂಲಕ ಒಂದು ಲಕ್ಷ ರೂ. ವಂಚನೆ?
Top Story

ಮುದ್ರಾಂಕ ಇಲಾಖೆಯ ವೆಬ್‌ಸೈಟ್‌ಗೆ ಕನ್ನ – ಎಇಪಿಎಸ್ ಮೂಲಕ ಒಂದು ಲಕ್ಷ ರೂ. ವಂಚನೆ?

by ಪ್ರತಿಧ್ವನಿ
September 23, 2023
ಇದೀಗ

ಕಾಂಗ್ರೆಸ್‌ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿಷಪ್ರಾಶನ ಮಾಡಿದೆ: ಮಾಜಿ ಸಿಎಂ ಹೆಚ್‌.ಡಿ.ಕೆ

by Prathidhvani
September 20, 2023
ಕಾವೇರಿ ವಾಗ್ವಾದ   : ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಸಿಎಂಗೆ ಹಕ್ಕೊತ್ತಾಯ ಪತ್ರ ಸಲ್ಲಿಕೆ
ಇದೀಗ

ಕಾವೇರಿ ವಾಗ್ವಾದ : ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಸಿಎಂಗೆ ಹಕ್ಕೊತ್ತಾಯ ಪತ್ರ ಸಲ್ಲಿಕೆ

by ಪ್ರತಿಧ್ವನಿ
September 26, 2023
Next Post
ವಿಶ್ವದ ಗಮನ ಸೆಳೆದ ಕಂಬಳ ಕ್ರೀಡೆ ಮತ್ತು ಕ್ರೀಡಾ ಪ್ರತಿಭಾನ್ವೇಷಣೆ

ವಿಶ್ವದ ಗಮನ ಸೆಳೆದ ಕಂಬಳ ಕ್ರೀಡೆ ಮತ್ತು ಕ್ರೀಡಾ ಪ್ರತಿಭಾನ್ವೇಷಣೆ

ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿದರೆ FIR ದಾಖಲು

ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿದರೆ FIR ದಾಖಲು

ತುಳುನಾಡಿನ ಕಂಬಳಕ್ಕೆ ಕಂಬಳವೇ ಸಾಟಿ

ತುಳುನಾಡಿನ ಕಂಬಳಕ್ಕೆ ಕಂಬಳವೇ ಸಾಟಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist