• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ದೇಶದ ಕಣ್ಗಾವಲು ಮಾರುಕಟ್ಟೆಯಲ್ಲಿ ಇನ್ನೂ ಮುಂಚೂಣಿಯಲ್ಲಿರುವ ಚೀನಾದ ಆ್ಯಪ್‌ಗಳು

by
July 1, 2020
in ದೇಶ
0
ದೇಶದ ಕಣ್ಗಾವಲು ಮಾರುಕಟ್ಟೆಯಲ್ಲಿ ಇನ್ನೂ ಮುಂಚೂಣಿಯಲ್ಲಿರುವ ಚೀನಾದ ಆ್ಯಪ್‌ಗಳು
Share on WhatsAppShare on FacebookShare on Telegram

ಭಾರತ ಮತ್ತು ನೆರೆಯ ಚೀನಾ ಒಟ್ಟು 3500 ಕಿಲೋಮೀಟರ್‌ ಗಳಷ್ಟು ಉದ್ದದ ಗಡಿಯನ್ನು ಹಂಚಿಕೊಂಡಿವೆ. ಎರಡೂ ದೇಶಗಳ ನಡುವೆ ಗಡಿ ಬಿಕ್ಕಟ್ಟು ಕೆಲವೊಮ್ಮೆ ಉದ್ವಿಗ್ನಗೊಂಡಿದೆ, ನಂತರ ಶಮನಗೊಂಡಿದೆ. ಈ ಹಿಂದೆಯೂ ಇದು ಅನೇಕ ಬಾರಿ ನಡೆದಿದೆ. ಆದರೆ ಈ ಬಾರಿ ಚೀನಾವು ಗಾಲ್ವಾನ್‌ ನದಿ ಕಣಿವೆಯಲ್ಲಿ ಕ್ಯಾತೆ ತೆಗೆದಿರುವುದು ಅತ್ಯಂತ ಸ್ಪಷ್ಟವಾಗಿಯೇ ಗೋಚರವಾಗುತ್ತಿದೆ ಅಷ್ಟೇ ಅಲ್ಲ ತಾನು ಹೊಸದಾಗಿ ನಿರ್ಮಿಸಿರುವ ಸೈನಿಕ ಕಾವಲು ಪೋಸ್ಟ್‌ ಗಳ ಪ್ರದೇಶವನ್ನು ತನಗೆ ಸೇರಿದ್ದು ಎಂದೇ ಚೀನಾ ಪ್ರತಿಪಾದಿಸಿಕೊಂಡು ಬರುತ್ತಿದೆ. ಇದರಿಂದ ಎರಡೂ ದೇಶಗಳ ನಡುವಿನ ಸೌಹಾರ್ದ ಸಂಭಂಧಕ್ಕೆ ಧಕ್ಕೆ ಆಗಿರುವುದಷ್ಟೇ ಅಲ್ಲ 20 ಭಾರತೀಯ ಸೈನಿಕರ ಜೀವಹಾನಿಯೂ ಅಗಿದೆ. ಚೀನಾ ಸೇನೆಗೂ ಸಾಕಷ್ಟು ಜೀವ ಹಾನಿ ಸಂಭವಿಸಿದೆ. ಇದನ್ನು ಸ್ವತಃ ಚೀನಾ ಒಪ್ಪಿಕೊಂಡಿದೆ.

ADVERTISEMENT

ಮೊದಲಿನಿಂದಲೂ ಚೀನಾದೊಂದಿಗೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗಡಿ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಿದ ಕೂಡಲೇ ಚೀನಾ ತನ್ನ ನರಿ ಬುದ್ದಿ ಪ್ರದರ್ಶಿಸಿದೆ. ತಾನು 1962 ರ ಯುದ್ದದಲ್ಲಿ ಕಬಳಿಸಿದ 624 ಚದರ ಕಿಲೋಮೀಟರ್‌ ವಿಸ್ತೀರ್ಣದ ಆಕ್ಸಾಯಿ ಚಿನ್‌ ಪ್ರದೇಶ ವನ್ನು ಪುನಃ ಕಳೆದುಕೊಳ್ಳಬೇಕಾಗುತ್ತದೋ ಎಂಬ ಆತಂಕ ಚೀನಾದ್ದು .

ಏಕೆಂದರೆ ಭಾರತ ನಿರ್ಮಿಸುತ್ತಿರುವ ರಸ್ತೆಯು ಆಕ್ಸಯಿ ಚಿನ್‌ ಪ್ರದೇಶದ ಸಮೀಪಕ್ಕೆ ಸಂಪರ್ಕ ಕಲ್ಪಿಸುತ್ತಿದೆ. ಇದು ಚೀನಾದ ಕಣ್ಣು ಕೆಂಪಗಾಗಿಸಿದ್ದು ವಾಸ್ತವ ಗಡಿ ನಿಯಂತ್ರಣ ರೇಖೆ ದಾಟಿ ಚೀನಾದ ಸೈನಿಕರು ಗಾಲ್ವನ್‌ ಕಣಿವೆ ಪ್ರದೇಶದಲ್ಲಿ ನೂತನ ಕಾವಲು ಗೋಪುರ ನಿರ್ಮಿಸಿಕೊಂಡಿದ್ದಾರೆ. ಈಗಾಗಲೇ ಅನೇಕ ಬಾರಿ ಎರಡೂ ದೇಶಗಳ ನಡುವೆ ಸೇನಾಧಿಕಾರಿಗಳ, ಲೆಫ್ಟಿನೆಂಟ್‌ ಜನರಲ್‌ ಮಟ್ಟದ ಅಧಿಕಾರಿಗಳ ಸಭೆಯೂ ನಡೆದಿದೆ. ಅದರೆ ಉದ್ವಿಗ್ಣತೆ ಮಾತ್ರ ಶಮನಗೊಂಡಿಲ್ಲ. ಇದು ಮುಂದುವರಿದಿರುವಂತೆಯೇ ನರೇಂದ್ರ ಮೋದಿ ಸರ್ಕಾರ ಚೀನಾದೊಂದಿಗೆ ಹೊಂದಿದ್ದ ಅನೇಕ ವ್ಯಾಪಾರಿ ಒಪ್ಪಂದಗಳನ್ನು ಮುರಿದುಕೊಳ್ಳಲು ಪ್ರಾರಂಭಿಸಿದೆ. ಈಗಾಗಲೇ ಚೀನಾ ಕಂಪೆನಿಗಳಿಗೆ ನೀಡಿದ್ದ ರೈಲ್ವೇ ಯೋಜನೆಯನ್ನು ಹಿಂಪಡೆಯಲಾಗಿದೆ. ಇಡೀ ದೇಶಾದ್ಯಂತ ಜನರು ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡುತಿದ್ದಾರೆ. ಈ ನಡುವೆ ಸರ್ಕಾರ ದೇಶದ ಭದ್ರತೆಗೆ ಅಪಾಯ ಒಡ್ಡುವ ಸಂಭಾವ್ಯತೆಯ ಮೇರೆಗೆ ಒಟ್ಟು 59 ಚೀನಾ ದೇಶದ ಆಪ್‌ ಗಳನ್ನು ನಿಷೇಧಿಸಿದೆ. ಅದರಲ್ಲಿ ಬಹು ಜನಪ್ರಿಯ ಟಿಕ್‌ ಟಾಕ್‌ ಕೂಡ ಸೇರಿದೆ.

ಅದರೆ ಇದಿಷ್ಟರಿಂದಲೇ ಚೀನಾ ನಿರ್ಮಿತ ಎಲ್ಲ ಅಪ್‌ ಗಳೂ ದೇಶದಿಂದ ಹೋದಂತಾಗಿಲ್ಲ , ನಮ್ಮ ದೇಶದಲ್ಲಿ ಈಗ ಅತ್ಯಂತ ಹೆಚ್ಚು ಅಭಿವೃದ್ದಿ ಹೊಂದುತ್ತಿರುವ ಕಣ್ಗಾವಲು ಉಪಕರಣಗಳ ಮಾರುಕಟ್ಟೆಯಲ್ಲಿ ಚೀನಾದ್ದೇ ಪಾರುಪತ್ಯ ಇನ್ನೂ ಮುಂದುವರಿದಿದೆ. ನಮ್ಮ ದೇಶದಲ್ಲಿ ಈಗ ಅತ್ಯಂತ ಹೆಚ್ಚು ಅಭಿವೃದ್ದಿ ಹೊಂದುತ್ತಿರುವ ಕಣ್ಗಾವಲು ಉಪಕರಣಗಳ ಮಾರುಕಟ್ಟೆಯಲ್ಲಿ ಚೀನಾದ್ದೇ ಪಾರುಪತ್ಯ ಇನ್ನೂ ಮುಂದುವರಿದಿದೆ. ಭಾರತದ ಸಿಸಿಟಿವಿ ಮಾರುಕಟ್ಟೆಯಲ್ಲಿ ಚೀನೀ ಕಂಪನಿ ಹಿಕ್ವಿಷನ್ ಪ್ರಾಬಲ್ಯ ಹೊಂದಿದ್ದು, ಇದು ಬಹಳ ಜಾಣತನದಿಂದ ಪ್ರಧಾನ ಮಂತ್ರಿಯ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಭಾಗ ಎಂದು ತನ್ನನ್ನು ತಾನು ಬಿಂಬಿಸಿಕೊಂಡಿದೆ.. ಆ ಮೂಲಕ ಬ್ಯಾನ್‌ ಆಗುವುದರಿಂದ ತಪ್ಪಿಸಿಕೊಂಡಿದೆ. ಕಳೆದ ವಾರವಷ್ಟೇ, ಅಮೇರಿಕ ರಕ್ಷಣಾ ಇಲಾಖೆಯು ಹಿಕ್ವಿಷನ್ ಮತ್ತು ಇತರ 19 ಸಂಸ್ಥೆಗಳು ಚೀನೀ ಮಿಲಿಟರಿಯ ಒಡೆತನದಲ್ಲಿದೆ ಅಥವಾ ನಿಯಂತ್ರಿಸಲ್ಪಟ್ಟಿದೆ ಎಂದು ಹೆಸರಿಸಿದೆ. ವಾಸ್ತವವಾಗಿ, ಅಮೇರಿಕವು ಈಗಾಗಲೇ ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯ್ದೆಯನ್ನು ಜಾರಿಗೊಳಿಸಿದೆ ಮತ್ತು ಸರ್ಕಾರಿ ಏಜೆನ್ಸಿಗಳು ಹಿಕ್ವಿಷನ್‌ನಿಂದ ವೀಡಿಯೊ ಕಣ್ಗಾವಲು ಉತ್ಪನ್ನಗಳನ್ನು ಖರೀದಿಸುವುದನ್ನು ನಿಷೇಧಿಸಿತ್ತು. ಆಸ್ಟ್ರೇಲಿಯಾ ಸರ್ಕಾರವು ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದೆ ಮತ್ತು ಇಂಗ್ಲೆಂಡ್‌ ನಲ್ಲಿಯೂ ಕೂಡ ಈ ಕುರಿತು ಗಂಭೀರ ಚರ್ಚೆಗಳೂ ನಡೆದಿವೆ.

ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಪರಿಕರಗಳನ್ನು ಉತ್ಪಾದಿಸುವ ವಿಶ್ವದ ಅತಿದೊಡ್ಡ ವೀಡಿಯೊ ಕಣ್ಗಾವಲು ಕಂಪನಿಗಳಲ್ಲಿ ಹೈಕ್ವಿಷನ್ ಒಂದು. ಕಣ್ಗಾವಲು ವ್ಯವಸ್ಥೆಗಳ ವಿಶ್ವದ ಪ್ರಮುಖ ಪೂರೈಕೆದಾರನಾಗುವುದು ಚೀನಾದ ಮಹತ್ವಾಕಾಂಕ್ಷೆ ಆಗಿದೆ. ರೈಲ್ವೆ ನಿಲ್ದಾಣಗಳು, ರಸ್ತೆಗಳು ಇತ್ಯಾದಿಗಳನ್ನು ಮೇಲ್ವಿಚಾರಣೆ ಮಾಡಲು ಭದ್ರತಾ ಸಂಸ್ಥೆಗಳಿಗೆ ಅನುವು ಮಾಡಿಕೊಡುವ ಕ್ಯಾಮೆರಾಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಹಿಕ್ವಿಷನ್ ಮಾರಾಟ ಮಾಡುತ್ತದೆ. 2019 ರ ವರದಿಯ ಪ್ರಕಾರ, ಕಂಪನಿಯ ಶೇಕಡಾ 42 ರಷ್ಟು ಪಾಲನ್ನು ಚೀನಾದ ಸರ್ಕಾರಿ ಉದ್ಯಮಗಳು ನಿಯಂತ್ರಿಸುತ್ತವೆ, ಚೀನಾ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಎಚ್ಐಕೆ ಗ್ರೂಪ್ ಸುಮಾರು 40 ಶೇಕಡಾವನ್ನು ಹೊಂದಿದೆ. 2017 ರಲ್ಲಿ ವಿಶ್ವದ ಸಿಸಿಟಿವಿ ಮಾರುಕಟ್ಟೆಯ ಶೇಕಡಾ 21 ರಷ್ಟು ಹಿಕ್ವಿಷನ್ ನಿಯಂತ್ರಿಸಿದೆ. ಭಾರತದಲ್ಲಿ ಪ್ರಮ ಹೈಕ್ವಿಷನ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಹೈಕ್ವಿಷನ್ ಅಸ್ತಿತ್ವದಲ್ಲಿದೆ. ವರದಿಗಳ ಪ್ರಕಾರ, ಹಿಕ್ವಿಷನ್ ಭಾರತದಲ್ಲಿ ಶೇಕಡಾ 35 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದೆ. ಅದರ 2019 ರ ವಾರ್ಷಿಕ ವರದಿಯು ಭಾರತದಲ್ಲಿ ಸ್ಥಳೀಯ ಕಾರ್ಖಾನೆಯನ್ನು ಸ್ಥಾಪಿಸಿದೆ ಎಂದು ಹೇಳಿದೆ. ಅದರ ಮೊದಲ ಸಾಗರೋತ್ತರ ಉತ್ಪಾದನಾ ನೆಲೆ. ಇದು ಶೇ 58 ರಷ್ಟು ಮೂಲ ಚೀನೀ ಕಂಪನಿಯ ಒಡೆತನದಲ್ಲಿದೆ.

ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ 1.5 ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ದೆಹಲಿ ಸರ್ಕಾರದಿಂದ ಟೆಂಡರ್ ಗೆದ್ದುಕೊಂಡಿತು. ಭಾರತ್ ಎಲೆಕ್ಟ್ರಾನಿಕ್ಸ್ (ಬಿಇಎಲ್) ಇದನ್ನು ಮಾರಾಟಗಾರರನ್ನಾಗಿ ಪಟ್ಟಿ ಮಾಡಿದೆ, ಇದು ಭಾರತ ಸರ್ಕಾರಕ್ಕೆ ಹೆಚ್ಚು ಸೂಕ್ಷ್ಮ ಮತ್ತು ವರ್ಗೀಕೃತ ರಕ್ಷಣಾ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಪ್ರಧಾನ ಮಂತ್ರಿಯ ಸುರಕ್ಷತೆಯ ಜವಾಬ್ದಾರಿಯನ್ನು ಹೊಂದಿರುವ ವಿಶೇಷ ಸಂರಕ್ಷಣಾ ಗುಂಪು (ಎಸ್‌ಪಿಜಿ) ಗೆ ಹಿಕ್ವಿಷನ್ ಪರಿಕರಗಳನ್ನು ಒದಗಿಸಿದೆ.

ಈಗ ಕೇಂದ್ರ ಸರ್ಕಾರ ತನ್ನ ನೀತಿಯನ್ನು ಪುನರ್ವಿಮರ್ಶೆ ಮಾಡಿಕೊಳ್ಳಲೇ ಬೇಕಿದೆ. ಬರೇ ಹಿಕ್ವಿಷನ್‌ ಅಲ್ಲದೆ ಇನ್ನೂ ನೂರಾರು ಚೀನಾ ಕಂಪೆನಿಗಳು ಹಿಂಬಾಗಿಲ ಮೂಲಕ ಭಾರತ ಪ್ರವೇಶ ಪಡೆದುಕೊಂಡಿವೆ. ಅಷ್ಟೆ ಅಲ್ಲ ವಾರ್ಷಿಕವಾಗಿ ಕೋಟ್ಯಾಂತರ ಡಾಲರ್ ಮೌಲ್ಯದ ಲಾಭವನ್ನೂ ಗಳಿಸುತ್ತಿವೆ. ಮೇಕ್‌ ಇನ್‌ ಇಂಡಿಯಾ ಎಂಬ ಕೊಡೆಯಡಿ ಈ ಚೀನಾ ಕಂಪೆನಿಗಳು ದೇಶದೊಳಗೆ ಆಶ್ರಯ ಪಡೆಯುವುದಾದರೆ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಂತೆಯೇ ಹೊರತು ಬೇರೇನೂ ಅಲ್ಲ. ಮೇಕ್‌ ಇನ್‌ ಇಂಡಿಯಾ ಯೋಜನೆಯಡಿಯಲ್ಲಿ ಭಾರತದಲ್ಲೇ ಉತ್ಪದಿಸುತ್ತಿರುವ ಚೀನಾ ಕಂಪೆನಿಗಳನ್ನು ಇಲ್ಲೆ ಉಳಿಸಿಕೊಳ್ಳಬೇಕೋ ಅಥವಾ ಹೊರಕಳಿಸಬೇಕೋ ಕೇಂದ್ರ ಸರ್ಕಾರ ಕೂಡಲೇ ನಿರ್ಧರಿಸಬೇಕಿದೆ. ಏಕೆಂದರೆ ಎಲೆಕ್ಟ್ರನಿಕ್‌ ಉಪಕರಣಗಳು ಯಾವತ್ತಿಗೂ ಭದ್ರತೆಗೆ ಸಂಭಾವ್ಯ ಅಪಾಯ ಇದ್ದೇ ಇರುತ್ತದೆ.

Tags: ಚೀನಾಭಾರತ
Previous Post

ರಷ್ಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರುವಂತೆ ಮನವಿ

Next Post

ಕರೋನಾ ಸೋಂಕಿಗೆ ದೇಶದಲ್ಲಿ 17,400 ಮಂದಿ ಬಲಿ

Related Posts

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
0

ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಬೀದರ್...

Read moreDetails

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
Next Post
ಕರೋನಾ ಸೋಂಕಿಗೆ ದೇಶದಲ್ಲಿ 17

ಕರೋನಾ ಸೋಂಕಿಗೆ ದೇಶದಲ್ಲಿ 17,400 ಮಂದಿ ಬಲಿ

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada