Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ದೆಹಲಿ ಗಲಭೆ ಏಕಪಕ್ಷೀಯ ವರದಿಯ ಆರೋಪ: BBCಯ ಆಹ್ವಾನ ತಿರಸ್ಕರಿಸಿದ ಪ್ರಸಾರ ಭಾರತಿ ಮುಖ್ಯಸ್ಥ 

ದೆಹಲಿ ಗಲಭೆ ಏಕಪಕ್ಷೀಯ ವರದಿ: BBCಯ ಆಹ್ವಾನ ತಿರಸ್ಕರಿಸಿದ ಪ್ರಸಾರ ಭಾರತಿ ಮುಖ್ಯಸ್ಥ
ದೆಹಲಿ ಗಲಭೆ ಏಕಪಕ್ಷೀಯ ವರದಿಯ ಆರೋಪ: BBCಯ ಆಹ್ವಾನ ತಿರಸ್ಕರಿಸಿದ ಪ್ರಸಾರ ಭಾರತಿ ಮುಖ್ಯಸ್ಥ 

March 6, 2020
Share on FacebookShare on Twitter

ಪ್ರಸಾರ ಭಾರತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ಶಶಿ ಶೇಖರ್‌ ವೆಂಪಾಟಿ ಅವರು BBC (British Broadcasting Corporation)ನ ಮಹತ್ವದ ಕಾರ್ಯಕ್ರಮಕ್ಕೆ ನೀಡಿರುವ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ದೆಹಲಿ ಗಲಭೆಯ ಸಮಯದಲ್ಲಿ BBC ಸಂಸ್ಥೆಯಿಂದ ಏಕಪಕ್ಷೀಯವಾದ ವರದಿ ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತಾಳಿರುವುದಾಗಿ ತಮ್ಮ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. ನವ ದೆಹಲಿಯಲ್ಲಿ ಮಾರ್ಚ್‌ 8ರಂದು BBC ಸಂಸ್ಥೆಯಿಂದ ಆಯೋಜಿಸಲಾಗಿದ್ದ ಮಹಿಳಾ ಆಟಗಾರ್ತಿಯರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ವೆಂಪಾಟಿ ಅವರಿಗೆ ಆಹ್ವಾನ ನೀಡಲಾಗಿತ್ತು.

ಹೆಚ್ಚು ಓದಿದ ಸ್ಟೋರಿಗಳು

ಪ.ಬಂಗಾಳಕ್ಕೆ ಸಿಗುತ್ತಿಲ್ಲ ಕೇಂದ್ರದ ಅನುದಾನ- ಶೀಘ್ರವೇ ಪ್ರಧಾನಿ ಮೋದಿ ಭೇಟಿಯಾಗಲಿರುವ ದೀದಿ..!

ಪೊಲೀಸ್ ಠಾಣೆಯಲ್ಲಿ SI ಅಚಾತುರ್ಯ- ಮಹಿಳೆ ತಲೆಗೆ ಹೊಕ್ಕಿದ ಗುಂಡು..!

ಸೋನಿಯಾ ಗಾಂಧಿ 77ನೇ ಹುಟ್ಟುಹಬ್ಬ- ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಶುಭಾಶಯ

BBCಯ ಮುಖ್ಯ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಪತ್ರಕರ್ತೆ ಯೋಗಿತಾ ಲಿಮಾಯೆ ಅವರ ವರದಿಯನ್ನು ಉಲ್ಲೇಖ ಮಾಡಲಾಗಿದೆ. ಈ ವರದಿಯು ದೆಹಲಿ ಗಲಭೆಯ ಸಂದರ್ಭದಲ್ಲಿ ಪೊಲೀಸರ ಪಾತ್ರವನ್ನು ವಿಶ್ಲೇಷಿಸಿದ ವರದಿ ಇದಾಗಿತ್ತು. ವರದಿಯಲ್ಲಿ ದೆಹಲಿ ಪೊಲೀಸರು ಗಲಭೆಯನ್ನು ಹುಟ್ಟುಹಾಕುತ್ತಿರುವ ಕೆಲವರಿಗೆ ಸಹಾಯಾಸ್ತ ಚಾಚುತ್ತಿರುವುದು ಹಾಗೂ ಗಲಭೆಯನ್ನು ನಿಯಂತ್ರಿಸಲು ವಿಫಲರಾಗಿರುವುದಕ್ಕೆ ಕಾರಣವನ್ನು ಕೂಡಾ ತೋರಿಸಲಾಗಿತ್ತು. ಹಲವು ಸಾಕ್ಷಿಗಳ ಹೇಳಿಕೆಯ ಮೇರೆಗೆ ಈ ವರದಿಯನ್ನು ನೀಡಲಾಗಿತ್ತು.

BBC ಪ್ರಸಾರ ಮಾಡಿದ್ದ ವಿಡಿಯೋದಲ್ಲಿ ಪೊಲೀಸರು ಗಲಭೆಕಾರರ ಜೊತೆಗೂಡಿ ಕಲ್ಲುತೂರಾಟ ನಡೆಸುವುದು ಕೂಡಾ ಸ್ಪಷ್ಟವಾಗಿ ತೋರಿಸಲಾಗಿತ್ತು. ಇನ್ನು ಗಲಭೆಯಲ್ಲಿ ಪೊಲೀಸರ ದೌರ್ಜನ್ಯದಿಂದ ಮೃತಪಟ್ಟಿದ್ದ 23 ವರ್ಷ ವಯಸ್ಸಿನ ಯುವಕ ಫೈಜಾ಼ನ್‌ ಸಾವಿನ ಕುರಿತಾದ ತನಿಖಾ ವರದಿಯನ್ನು ಕೂಡಾ BBC ಪ್ರಸಾರ ಮಾಡಿತ್ತು. ಈ ತನಿಖಾ ವರದಿಗಳು ದೆಹಲಿ ಪೊಲೀಸರ ಮೇಲೆ ಗಂಭೀರವಾದ ಆರೋಪಗಳನ್ನು ಮಾಡಿತ್ತು.

ಈ ವರದಿಯನ್ನು ಏಕಪಕ್ಷೀಯ ವರದಿ ಎಂದು ಹಾಗೂ ಗಲಭೆಯಿಂದ ಉರಿಯುತ್ತಿದ್ದ ದೆಹಲಿಯಲ್ಲಿ ಮತ್ತಷ್ಟು ಅಶಾಂತಿಯನ್ನು ಉಂಟು ಮಾಡಲು ಕಾರಣವಾಯಿತು ಎಂದು ಪ್ರಸಾರ ಭಾರತಿ ಆರೋಪಿಸಿದೆ. ಗಲಭೆಯನ್ನು ಸಮರ್ಥವಾಗಿ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದ ದೆಹಲಿ ಪೊಲೀಸರ ಕುರಿತು ನಕಾರಾತ್ಮಕವಾಗಿ ವರದಿ ಮಾಡಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಗಲಭೆಕೋರರ ಮಾರಣಾಂತಿಕ ದಾಳಿಯಿಂದ ಗಲಭೆಯನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದ ಪೊಲೀಸ್‌ ಹೆಡ್‌ ಕಾನ್ಸ್ಟೇಬಲ್‌ ಅವರ ಸಾವಿನ ಕುರಿತು ಹಾಗೂ ಇಂಟೆಲಿಜೆನ್ಸ್‌ ಅಧಿಕಾರಿಯ ಮೇಲೆ ನಡೆದ ಇರಿತದಿಂದ ಅವರು ಮೃತಪಟ್ಟಿರುವ ಕುರಿತು ಯಾವುದೇ ವರದಿಯನ್ನು ಮಾಡಲಾಗಿಲ್ಲ ಎಂದು ವೆಂಪಾಟಿಯವರು ಪತ್ರದಲ್ಲಿ ಹೇಳಿದ್ದಾರೆ.

“ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಭಾರತಿ ಮತ್ತು BBC ಒಳ್ಳೆಯ ಸಂಬಂಧವನ್ನು ಹೊಂದಿದ್ದರೂ, ತಾವೂ ಕಾರ್ಯ ನಿರ್ವಹಿಸುವ ಮೂಲ ದೇಶದ ಸಾರ್ವಭೌಮತೆಯನ್ನು ಕಾಪಾಡಿಕೊಂಡು ಬರುವುದು ಮುಖ್ಯವಾಗಿರುತ್ತದೆ. BBC ಸಂಸ್ಥೆಯು ತನ್ನ ಸಂಪಾದಕೀಯ ನಿಲುವುಗಳನ್ನು ಬದಲಾಯಿಸುವ ಭರವಸೆಯನ್ನು ನಾವು ಹೊಂದಿದ್ದೇವೆ,” ಎಂದು ವೆಂಪಾಟಿ ಹೇಳಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
6246
Next
»
loading
play
DK Shivakumar : ಮೊನ್ನೆ ಕೊನೆ ಭೇಟಿ, ಲೀಲಾವತಿ ನನ್ನ ಮನೆಗೆ ಬಂದಿದ್ರು
play
Sudharani : ಲೀಲಾವತಿ ಅಂದ್ರೆ ನಗುಮುಖ ನೆನಪಾಗುತ್ತೆ
«
Prev
1
/
6246
Next
»
loading

don't miss it !

ಕಾಂಗ್ರೆಸ್  ಗೆ ಸೆಡ್ಡು ಹೊಡೆದ I.N.D.I.A ಮೈತ್ರಿಕೂಟದ ನಾಯಕರು..!
ದೇಶ

ಕಾಂಗ್ರೆಸ್  ಗೆ ಸೆಡ್ಡು ಹೊಡೆದ I.N.D.I.A ಮೈತ್ರಿಕೂಟದ ನಾಯಕರು..!

by Prathidhvani
December 5, 2023
ಬಿಜೆಪಿ ಎಂಎಲ್‌ಸಿ ಯೋಗೇಶ್ವರ್‌ ಭಾವ ಮೃತದೇಹ ಪತ್ತೆ
Top Story

ಬಿಜೆಪಿ ಎಂಎಲ್‌ಸಿ ಯೋಗೇಶ್ವರ್‌ ಭಾವ ಮೃತದೇಹ ಪತ್ತೆ

by Prathidhvani
December 4, 2023
ಓಡಿಹೋಗಿರುವ ಉದ್ಯಮಿ ಚೋಸ್ಕಿಗೆ ಸುಪ್ರೀಂಕೋರ್ಟ್‌ ಅಘಾತ
Top Story

ಓಡಿಹೋಗಿರುವ ಉದ್ಯಮಿ ಚೋಸ್ಕಿಗೆ ಸುಪ್ರೀಂಕೋರ್ಟ್‌ ಅಘಾತ

by Prathidhvani
December 7, 2023
ಉತ್ತರಕನ್ನಡದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಟ: ಆರೋಪಿ ಅರೆಸ್ಟ್‌
ಇದೀಗ

ಉತ್ತರಕನ್ನಡದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಟ: ಆರೋಪಿ ಅರೆಸ್ಟ್‌

by Prathidhvani
December 3, 2023
ಬಿಜೆಪಿಗಿಂತ ಕಾಂಗ್ರೆಸ್ ಗೆ ಜಾಸ್ತಿ ವೋಟ್..!
ರಾಜಕೀಯ

ಬಿಜೆಪಿಗಿಂತ ಕಾಂಗ್ರೆಸ್ ಗೆ ಜಾಸ್ತಿ ವೋಟ್..!

by Prathidhvani
December 5, 2023
Next Post
Yes Bankನ ಶೋಚನೀಯ ಪರಿಸ್ಥಿತಿಗೆ ಕಾರಣವೇನು?

Yes Bankನ ಶೋಚನೀಯ ಪರಿಸ್ಥಿತಿಗೆ ಕಾರಣವೇನು?

ರಾಜಕೀಯ ಟೀಕೆಗೆ ಹೆದರಿ UKPಗೆ ಹಣ ಕೊಟ್ಟರೆ ಸಿಎಂ ಯಡಿಯೂರಪ್ಪ?

ರಾಜಕೀಯ ಟೀಕೆಗೆ ಹೆದರಿ UKPಗೆ ಹಣ ಕೊಟ್ಟರೆ ಸಿಎಂ ಯಡಿಯೂರಪ್ಪ?

ಸಿಎಂ ಜಿಲ್ಲೆಯಲ್ಲಿನ ಪ್ರವಾಹ ಸಂತ್ರಸ್ತರು ಟೆಂಟ್‌ಲ್ಲಿ ವಾಸ

ಸಿಎಂ ಜಿಲ್ಲೆಯಲ್ಲಿನ ಪ್ರವಾಹ ಸಂತ್ರಸ್ತರು ಟೆಂಟ್‌ಲ್ಲಿ ವಾಸ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist