• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಚೀನಾದ ವುಹಾನ್ ನಗರದಂತಾಗುತ್ತಿರುವ ಗುಜರಾತಿನ ಅಹಮದಾಬಾದ್

by
May 6, 2020
in ದೇಶ
0
ಚೀನಾದ ವುಹಾನ್ ನಗರದಂತಾಗುತ್ತಿರುವ ಗುಜರಾತಿನ ಅಹಮದಾಬಾದ್
Share on WhatsAppShare on FacebookShare on Telegram

ಕರೋನಾ ವೈರಸ್ ಇಡೀ ಜಗತ್ತಿನ ಜಂಘಾಬಲವನ್ನೇ ನಡುಗಿಸಿದೆ. ದೈತ್ಯ ದೇಶಗಳೇ ಈ‌ ದುರ್ವಿಧಿಗೆ ದಣಿದುಬಿಟ್ಟಿವೆ. ಮಹಾನಗರಗಳು ಕರೋನಾ ಮಹಾಮಾರಿಯಿಂದ ನರಕಸದೃಶ್ಯವಾಗಿವೆ. ಇಂಥ ಕಡುಕಠೋರಿ ಕರೋನಾ ಈಗ ಭಾರತದ ಮುಂಚೂಣಿ ನಗರಗಳಲ್ಲಿ ಒಂದಾಗಿದ್ದ ಅಹಮದಾಬಾದ್ ಎಂಬ ಪೊಗದಸ್ತಾಗಿದ್ದ ನಗರವನ್ನು‌ ಅಕ್ಷರಶಃ ಜರ್ಝರಿತಗೊಳಿಸಿದೆ. ಗುಜರಾತಿನ ಅಹಮದಾಬಾದ್ ನಗರ ಈಗ ಕರೋನಾ ಹುಟ್ಟುರಾದ ವುಹಾನ್ ಅನ್ನು ನೆನಪಿಸುತ್ತಿದೆ.

ADVERTISEMENT

ಕಾರಣ ಏಕೆ ಗೊತ್ತಾ? ಅಹಮದಾಬಾದ್ ನಗರದಲ್ಲಿ ಕೇವಲ 5 ದಿನಗಳ ಅಂತರಲ್ಲಿ 100 ಮಂದಿ ಕಡುಪಾಪಿ ಕರೋನಾಕ್ಕೆ ಬಲಿಯಾಗಿದ್ದಾರೆ. ಅಹಮದಾಬಾದ್ ನಗರ ಅಪಾಯದ ಎಲ್ಲಾ ಎಲ್ಲೆಗಳನ್ನು ಮೀರುತ್ತಿದೆ ಎಂಬುದಕ್ಕೆ ಕೇಂದ್ರ ಮತ್ತು ಗುಜರಾತ್ ಸರ್ಕಾರದ ಆರೋಗ್ಯ ಇಲಾಖೆಗಳು ಪ್ರತಿದಿನ ಬಿಡುಗಡೆ ಮಾಡುತ್ತಿರುವ ಸತ್ತವರ ಸಂಖ್ಯೆಗಳೇ ಸಾಕ್ಷಿ.

ಈವರೆಗೆ ಗುಜರಾತ್ ರಾಜ್ಯದಲ್ಲಿ ಕರೋನಾದಿಂದ 368 ಮಂದಿ ಸಾವನ್ನಪ್ಪಿದ್ದಾರೆ. ಅ ಪೈಕಿ ಅಹಮದಾಬಾದ್ ನಗರವೊಂದರಲ್ಲಿ ಸತ್ತವರ ಸಂಖ್ಯೆ ಬರೊಬ್ಬರಿ 273. ಅಂದರೆ ಗುಜರಾತಿನ ಶೇಕಡ 80ರಷ್ಟು ಹೆಚ್ಚು ಸಾವುಗಳು ಅಹಮದಾಬಾದ್​ ನಗರವೊಂದರಲ್ಲೇ ಆಗಿವೆ. ಅಹಮದಾಬಾದ್ ನಗರ ಈಗ ಕೆಂಪು ವಲಯ. ಕಟ್ಟುನಿಟ್ಟಿನ‌ ಕ್ರಮಗಳಿವೆ. ಆದರೂ ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ.‌ ಅದರ ಪರಿಣಾಮ ಕಳೆದ 10 ದಿನಗಳಲ್ಲಿ ಅಹಮದಾಬಾದ್​ ನಗರದಲ್ಲಿ 200 ಸಾವುಗಳು ಸಂಭವಿಸಿವೆ. ಶೇಕಡವಾರು ಹೇಳುವುದಾದರೆ 70ರಷ್ಟು ಹೆಚ್ಚು ಸಾವುಗಳು ಕಳೆದ 10 ದಿನಗಳಲ್ಲೇ ಘಟಿಸಿವೆ. ಸೋಮವಾರ ಒಂದೇ ದಿನ 39 ಸಾವು ಸಂಭವಿಸಿವೆ.

ಸಾವಿನ ಸರಣಿ ಇಂತಿದೆ.

  • ಏಪ್ರಿಲ್ 25 ರಂದು 4 ಸಾವು,

  • ಏಪ್ರಿಲ್ 26ರಂದು 18 ಸಾವು,

  • ಏಪ್ರಿಲ್ 27ರಂದು 5 ಸಾವು,

  • ಏಪ್ರಿಲ್ 28 ರಂದು 19 ಸಾವು,

  • ಎಪ್ರಿಲ್ 29ರಂದು 14 ಸಾವು,

  • ಏಪ್ರಿಲ್ 30ರಂದು 15 ಸಾವು,

  • ಮೇ 1ರಂದು 16 ಸಾವು,

  • ಮೇ 2 ರಂದು 20 ಸಾವು,

  • ಮೇ 3ರಂದು 23 ಸಾವು,

  • ಮೇ 4ರಂದು 26 ಸಾವು ಮತ್ತು

  • ಮೇ 5ರಂದು 39 ಸಾವು

ಕರೋನಾ ವೈರಸ್ ಹರಡಿ ಸಾವನ್ನಪ್ಪುತ್ತಿರವವರ ಸಂಖ್ಯೆ ದಿನದಿಂದ ದಿನಕ್ಕೆ ಏರುಮುಖವಾಗಿ ಸಾಗುತ್ತಿರುವುದು‌ ಅಹಮದಾಬಾದ್ ನಗರವನ್ನಷ್ಟೇಯಲ್ಲ, ಗುಜರಾತಿಗರೆಲ್ಲರನ್ನು, ಭಾರತೀಯರೆಲ್ಲರನ್ನು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಕಳೆದ ಭಾನುವಾರ ಕರೋನಾ ಅಟ್ಟಹಾಸ ಮಹಾನಗರಗಳಲ್ಲೇ ಹೆಚ್ಚು ಎಂಬ ಮಾಹಿತಿಯೊಂದು ಕೇಳಿಬಂದಿತ್ತು. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸಿದಾಗ ಈ ವಿಷಯ ಚರ್ಚೆ ಆಗಿತ್ತು. ದೇಶದ 20 ನಗರಗಳಲ್ಲಿ ಶೇಕಡಾ 78ರಷ್ಟು ಕರೋನಾ ಪೀಡಿತರು ಇದ್ದಾರೆ ಎಂಬ ಆತಂಕಕಾರಿ ವಿಷಯ ಹೊರಬಿದ್ದಿತ್ತು.‌ ಹೀಗೆ ಕರೋನಾ ದಾಳಿಗೆ ತೀವ್ರವಾಗಿ ತುತ್ತಾಗಿರುವ ಮುಂಬೈ, ದೆಹಲಿ ಚೆನ್ನೈ ಮಹಾನಗರಗಳ ಸಾಲಿನಲ್ಲಿ ಅಹಮದಾಬಾದ್ ಹೆಸರು ಇತ್ತು. ಈಗ ಅಹಮದಾಬಾದ್ ನಗರದಲ್ಲಿ ಕರೋನಾ ಕೇವಲ 5 ದಿನಕ್ಕೆ 100 ಮಂದಿಯನ್ನು ಬಲಿ ತೆಗೆದುಕೊಂಡು ಮತ್ತೊಂದು ದಾಖಲೆ ಬರೆದಿದೆ.

ಅಹಮದಾಬಾದಿನಲ್ಲಿ ಸಾವಿನ‌‌ ಸಂಖ್ಯೆ ಶರವೇಗದಲ್ಲಿ ಸಾಗುತ್ತಿರುವುದು ಇನ್ನೊಂದು ರೀತಿಯ ಅಪಾಯವನ್ನು ನೆನಪಿಸುವಂತಿದೆ. ಇಷ್ಟು ದಿನ ಲಾಕ್‌ಡೌನ್ ಇತ್ತು. ಕಟ್ಟುನಿಟ್ಟಿನ ಕ್ರಮಗಳಿದ್ದವು. ಸಾಮಾಜಿಕ ಅಂತರದ ಪಾಲನೆ ಆಗುತ್ತಿತ್ತು. ಆ ಸಂದರ್ಭದಲ್ಲೇ ಹೀಗೆ ವ್ಯಾಪಕವಾಗಿ ಹರಡಿದೆ ಎಂದರೆ ಮೇ 17ರ ಬಳಿಕ‌ ಲಾಕ್‌ಡೌನ್ ಮುಕ್ತಾಯಗೊಂಡರೆ ಇನ್ನೆಂಥ ಗಂಡಾಂತರ ಆಗಬಹುದೆಂಬ ಆತಂಕವನ್ನು ಸೃಷ್ಟಿಸಿದೆ.

ಗುಜರಾತ್ ಅಥವಾ ಕೇಂದ್ರ ಆರೋಗ್ಯ ಇಲಾಖೆಗಳ ಮಾಹಿತಿಯ ಪ್ರಕಾರ ಅಹಮದಾಬಾದಿನಲ್ಲಿ ಕರೋನಾ ಇನ್ನು ಕೂಡ ಸಮುದಾಯಕ್ಕೆ ಹರಡಿಲ್ಲ. ಆದರೆ ಲಾಕ್‌ಡೌನ್ ನಿಯಮಗಳು ಸಡಲಿಕೆಗೊಂಡ ಬಳಿಕ ಹರಡುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಎಂಬ ಚರ್ಚೆಗಳು ನಡೆಯುತ್ತಿವೆ.‌ ಗುಜರಾತಿನಲ್ಲಿ ಈವರೆಗೆ ಒಟ್ಟು 6245 ಜನರು ಕರೋನಾ ಪೀಡಿತರಾಗಿದ್ದಾರೆ. ಆ ಪೈಕಿ ಅಹಮದಾಬಾದ್​ ನಗರದಲ್ಲೇ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲ್ಲಿ ಹಲವು ಹಾಟ್​​ಸ್ಪಾಟ್​ಗಳನ್ನ ಗುರುತಿಸಿ ಕಂಟೈನ್ಮೆಂಟ್ ಜೋನ್ ಆಗಿ ಪರಿಗಣಿಸಲಾಗಿದೆ. ಇಲ್ಲಿನ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನೂ ಕೋವಿಡ್ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೂ ಸೋಂಕು ಪೀಡಿತರ ಮತ್ತು ಸತ್ತವರ ಸಂಖ್ಯೆ ಏರುತ್ತಲೇ ಇದೆ. ಆತಂಕವೂ ಕೂಡ…

Tags: AhmedabadChinaGujaratwuhanಅಹಮದಾಬಾದ್‌ಕರೋನಾ ವೈರಸ್‌ಚೀನಾವುಹಾನ್ ನಗರ
Previous Post

ಕರಾವಳಿಯಲ್ಲಿ ಮೂಕ ಕಾಡುಕೋಣದ ಸಾವಿಗೆ ಯಾರು ಹೊಣೆ?

Next Post

ಕರ್ನಾಟಕದಲ್ಲಿ ಮತ್ತೆ 20 ಕೋವಿಡ್-19 ಪ್ರಕರಣ ಪತ್ತೆ

Related Posts

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
0

ದೇಶದ ರಕ್ಷಣೆಗೆ ಶ್ರಮಿಸುತ್ತಿರುವ ರಾಹುಲ್ ಗಾಂಧಿ ಅವರಿಗೆ ಆರೋಗ್ಯ, ಸಂತೋಷ ಸಿಗಲಿ: ಜನ್ಮದಿನ ಹಿನ್ನೆಲೆಯಲ್ಲಿ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್ ಬಿ.ವಿ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕರ್ತರಿಂದ...

Read moreDetails
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

ವಿಮಾನ ದುರಂತ; ಅಹಮದಾಬಾದ್ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಕಾಂಗ್ರೆಸ್ ನಾಯಕರು

June 15, 2025
Next Post
ಕರ್ನಾಟಕದಲ್ಲಿ ಮತ್ತೆ 20 ಕೋವಿಡ್-19 ಪ್ರಕರಣ ಪತ್ತೆ

ಕರ್ನಾಟಕದಲ್ಲಿ ಮತ್ತೆ 20 ಕೋವಿಡ್-19 ಪ್ರಕರಣ ಪತ್ತೆ

Please login to join discussion

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

by ಪ್ರತಿಧ್ವನಿ
June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ
Top Story

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

by ಪ್ರತಿಧ್ವನಿ
June 19, 2025
ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ
Top Story

ರಾಜ್ಯದ ಹಸಿರು ಇಂಧನ ಭವಿಷ್ಯಕ್ಕಿದೆ ಸ್ಪಷ್ಟ ಗುರಿ: ಟಿ.ಡಿ.ರಾಜೇಗೌಡ

by ಪ್ರತಿಧ್ವನಿ
June 19, 2025
ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
June 19, 2025
ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

June 19, 2025
ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

ಬಮೂಲ್ ಅಧ್ಯಕ್ಷರಾಗಿ ಡಿ.ಕೆ. ಸುರೇಶ್ ಅವಿರೋಧ ಆಯ್ಕೆ

June 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada