• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಗಂಡನಿಗೆ ಜಾಮೀನು ಕೊಡಿಸುವ ಆಮೀಷ ನೀಡಿ ಎರಡು ವರ್ಷ ಅತ್ಯಾಚಾರವೆಸಗಿದ ಕಾಂಗ್ರೆಸ್‌ ಕೌನ್ಸಿಲರ್‌

by
February 25, 2020
in ದೇಶ
0
ಗಂಡನಿಗೆ ಜಾಮೀನು ಕೊಡಿಸುವ ಆಮೀಷ ನೀಡಿ ಎರಡು ವರ್ಷ ಅತ್ಯಾಚಾರವೆಸಗಿದ ಕಾಂಗ್ರೆಸ್‌ ಕೌನ್ಸಿಲರ್‌
Share on WhatsAppShare on FacebookShare on Telegram

ಆರೋಪಿ ಗಂಡನಿಗೆ ಜಾಮೀನು ಕೊಡಿಸ್ತೀನಿ ಎಂದು ಅತ್ಯಾಚಾರ ಎಸಗಿದ ಪಂಜಾಬ್‌ನ ಮೊಹಾಲಿ ನಗರದ ಕೌನ್ಸಿಲರ್‌ ಕೃತ್ಯಕ್ಕೆ ಕಾಂಗ್ರೆಸ್‌ ತಲೆತಗ್ಗಿಸುವಂತಾಗಿದೆ. ಆಮಿಷಗಳನ್ನೊಡ್ದಿ ಅಶಕ್ತ ಮಹಿಳೆಯರನ್ನ ಚಪಲಕ್ಕೆ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ರಾಜಕಾರಣಿಗಳು ಹಾಗೂ ಅಧಿಕಾರಿಗಳಂತೂ ಈ ದೌರ್ಬಲ್ಯವನ್ನ ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಾರೆ. ಉದ್ಯೋಗ ಕೊಡುವುದಾಗಿ, ಹಣ ಸಹಾಯ ಮಾಡುವುದಾಗಿ ಸಾಕಷ್ಟು ಮಹಿಳೆಯರನ್ನ ಮಂಚಕ್ಕೆ ಕರೆದಿರುವ ಘಟನೆಗಳು ನಡೆದಿವೆ, ರೇಷನ್‌ ಕಾರ್ಡ್‌ ನೀಡಲು ಮಂಚಕ್ಕೆ ಕರೆದ ದೆಹಲಿ ಆಮ್‌ ಆದ್ಮಿ ಪಕ್ಷದ ನಾಯಕನ ರಾಸಲೀಲೆಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈಗ ಮಾದಕ ವಸ್ತು ಸಾಗಣೆಗಾಗಿ ಜೈಲು ಪಾಲಾಗಿದ್ದ ಸಂತ್ರಸ್ಥೆ ಗಂಡನಿಗೆ ಜಾಮೀನು ಕೊಡಿಸ್ತೀನಿ ಎಂದು ಆಕೆಯನ್ನ ಕಾಮತೃಷೆಗೆ ಬಳಸಿದ ಪಂಜಾಬ್‌ನ ಮೊಹಾಲಿಯ ಕೌನ್ಸಿಲರ್‌ ರಾಜಸ್ಥಾನ ಪೊಲೀಸರ ಅತಿಥಿಯಾಗಿದ್ದಾನೆ.

ADVERTISEMENT

ಪಂಜಾಬ್‌ನ ಮೊಹಾಲಿ ಸೆಕ್ಟರ್‌ 70 ವಾರ್ಡ್‌ನ ಕೌನ್ಸಿಲರ್‌ ಸುರೀಂದರ್‌ ಎಸ್‌ ರಜಪೂತ್‌ ಕಾಂಗ್ರೆಸ್‌ ಮುಖಂಡ, ಮಹಾ ಚಪಲಚನ್ನಿಗರಾಯ, ಈ ಹಿಂದೆ ಅಶ್ಲೀಲ ಹೇಳಿಕೆಗಳಿಗಾಗಿ ಸಾಕಷ್ಟು ಸುದ್ದಿಯಲ್ಲಿದ್ದಾತ. ಈತ ಪಕ್ಕದ ಮನೆಯ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದು, ವಿಡಿಯೋ ಮಾಡಿಕೊಂಡು ಎರಡು ವರ್ಷಗಳ ಕಾಲ ಕಿರುಕುಳ ನೀಡಿದ್ದಾನೆ, ರಾತ್ರೋರಾತ್ರಿ ರಾಜಸ್ಥಾನ ಪೊಲೀಸರು ಈತನ ಮನೆ ಮೇಲೆ ದಾಳಿ ನಡೆಸಿ, ಬಂಧಿಸಿ ಎಳೆದೊಯ್ದಿದ್ದಾರೆ.

ಸುರೀಂದರ್‌ ಪಕ್ಕದ ಮನೆಯಲ್ಲಿ ವಾಸಿಸುತ್ತಿರುವ ಮೂವತ್ತು ವರ್ಷ ವಯಸ್ಸಿನ ಮಹಿಳೆಯ ಗಂಡ ಟ್ರಾನ್ಸ್‌ಪೋರ್ಟ್‌ ನಡೆಸುತ್ತಿದ್ದ, ಆತನ ಲಾರಿ ರಾಜಸ್ಥಾನದಲ್ಲಿ ಪೊಲೀಸರಿಂದ ತಪಾಸಣೆಗೆ ಒಳಗಾದಾಗ ಲಾರಿಯಲ್ಲಿ ನಿಷೇಧಿತ ಮಾಧಕ ವಸ್ತು ಅಫೀಮ್‌ ಸಿಗುತ್ತೆ, ಆತನನ್ನ ಮಾದಕ ವಸ್ತು ಮಾರಾಟ ನಿಷೇಧ ಕಾನೂನಿನಡಿ ರಾಜಸ್ಥಾನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ಪಕ್ಕದ ರಾಜ್ಯದಲ್ಲಿ ಜಾಮೀನು ಪಡೆಯಲು ಮಹಿಳೆಯ ಸಹಾಯಕ್ಕೆ ಕೌನ್ಸಿಲರ್‌ ಸುರೀಂದರ್‌ ಬರುತ್ತಾನೆ, ತನ್ನ ವಾರ್ಡ್‌ ನಿವಾಸಿಯಾಗಿದ್ದರಿಂದ ಸಾಕಷ್ಟು ಪರಿಚಯವೂ ಇತ್ತು. ಜೈಪುರದ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸಾಕಷ್ಟು ನನಗೆ ಗೊತ್ತಿದೆ, ಅಲ್ಲಿಗೆ ಹೋಗಿ ಮಾತಾಡೋಣ ಎಂದು ಪುಸಲಾಯಿಸಿ ಜೈಪುರಕ್ಕೆ ಕರೆತಂದು ರೂಂ ಮಾಡಿ ಉಳಿಸಿಕೊಳ್ಳುತ್ತಾನೆ, ಅಂದು ರಾತ್ರಿ ಅಮಲು ಬರುವ ಔಷಧ ನೀಡಿ ಅತ್ಯಾಚಾರವೆಸಗಿದ್ದಾನೆಂದು ಸಂತ್ರಸ್ಥೆ ದೂರಿಕೊಂಡಿದ್ದಾಳ

ಈ ಘಟನೆ ನಡೆದು ಎರಡು ವರ್ಷಗಳಾದರೂ ಮಹಿಳೆಗೆ ಈತ ಸಹಾಯ ಮಾಡಿಲ್ಲ, ಆಕೆಯ ಗಂಡ ಹೊರಗೆ ಬಂದಿರಲಿಲ್ಲ, ಹಾಗೂ ಆಕೆ ಪ್ರಕರಣವನ್ನೂ ದಾಖಲಿಸಿರಲಿಲ್ಲ, ಆರೋಪಿ ಸುರೀಂದರ್‌ ಆಕೆಯ ವಿಡಿಯೋ ಮಾಡಿ ಸತತವಾಗಿ ಕಿರುಕುಳ ನೀಡುತ್ತಿದ್ದ. ಆತ ಪ್ರಭಾವಿ ಕಾಂಗ್ರೆಸ್‌ ನಾಯಕನೂ ಆಗಿದ್ದರಿಂದ ವಾರ್ಡ್‌ನಲ್ಲಿ ಪ್ರಾಪರ್ಟಿ ಡೀಲರ್‌ ವೃತ್ತಿ ಮಾಡುತ್ತಿದ್ದರಿಂದ ಪೊಲೀಸರೂ ಮಹಿಳೆಯ ಸಹಾಯಕ್ಕೆ ಬಂದಿರಲಿಲ್ಲ. ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದರಿಂದ ಮಹಿಳೆ ತನ್ನ ಗಂಡ ಜಾಮೀನಿನ ಮೇಲೆ ಹೊರಬಂದ ಬಳಿಕ ಫೆಬ್ರುವರಿ 20ರಂದು ಜೈಪುರದ ಸದರ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ, ಜೈಪುರ ಪೊಲೀಸರು ರಾತ್ರೋರಾತ್ರಿ ಸುರೀಂದರ್‌ ಮನೆ ಮೇಲೆ ದಾಳಿ ಮಾಡಿ ಬಂಧಿಸಿ ಕರೆದೊಯ್ದಿದ್ದು ಪಂಜಾಬ್‌ ಕಾಂಗ್ರೆಸ್‌ಗೂ ಮುಜುಗರ ತಂದಿದೆ. ಸದ್ಯ ಪೊಲೀಸರ ಅತಿಥಿಯಾಗಿರುವ ಕೌನ್ಸಿಲರ್‌ನ ಪ್ರಕರಣದ ದಿಕ್ಕು ಎತ್ತ ಸಾಗುತ್ತೋ, ಸಂತ್ರಸ್ಥೆಗೆ ನ್ಯಾಯ ಸಿಗುತ್ತಾ ನೋಡಬೇಕಿದೆ.

Tags: Congress CounsellorRape Caseಅತ್ಯಾಚಾರಆಮೀಷಕಾಂಗ್ರೆಸ್‌ ಕೌನ್ಸಿಲರ್‌
Previous Post

ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸಿದ BSY, ಟ್ರಂಪ್‌  ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿರುವುದೇಕೆ?

Next Post

ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ, ಇದು ಈಶ್ವರಪ್ಪ ಶಿಷ್ಟಾಚಾರ!

Related Posts

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
0

ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು(Mekedatu) ಸಮತೋಲಿತ ಜಲಾನಯನ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಕೆಇಆರ್‌ಎಸ್(KERS) ನಿರ್ದೇಶಕರ ನೇತೃತ್ವದಲ್ಲಿ ಹೊಸ ತಂಡ ರಚಿಸಿ, ಯೋಜನೆ ಕಾರ್ಯಾನುಷ್ಠಾನಕ್ಕೆ ರಾಜ್ಯ ಸರ್ಕಾರ...

Read moreDetails
ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025

ಆರ್.ಡಿ.ಪಿ.ಆರ್ ಅಧಿಕಾರಿಗಳಿಗೆ ಹೈಕೋರ್ಟಿನಲ್ಲಿ ಐತಿಹಾಸಿಕ ನ್ಯಾಯ: ಪ್ರಿಯಾಂಕ್ ಖರ್ಗೆ

December 12, 2025
ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

ಮತ್ತೆ ಹೋರಾಟ ಘೋಷಿಸಿದ ಅಣ್ಣಾ ಹಜಾರೆ

December 12, 2025

ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
Next Post
ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ

ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ, ಇದು ಈಶ್ವರಪ್ಪ ಶಿಷ್ಟಾಚಾರ!

Please login to join discussion

Recent News

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?
Top Story

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

by ಪ್ರತಿಧ್ವನಿ
December 14, 2025
ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್
Top Story

ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
December 14, 2025
ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ
Top Story

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

by ಪ್ರತಿಧ್ವನಿ
December 14, 2025
ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ
Top Story

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

by ಪ್ರತಿಧ್ವನಿ
December 14, 2025
Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!
Top Story

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

by ಪ್ರತಿಧ್ವನಿ
December 14, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

ಮೊಟ್ಟೆಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ ಆರೋಪ: ದಿನೇಶ್ ಗುಂಡೂರಾವ್ ಹೇಳಿದ್ದೇನು?

December 14, 2025
ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು: ಡಿ.ಕೆ ಶಿವಕುಮಾರ್

December 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada