• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಿಯೋನಿಕ್ಸ್ ಕರ್ಮಕಾಂಡ: ಎಂಡಿ ಪರಮಾಧಿಕಾರ ಪ್ರಶ್ನಿಸುವಂತಿಲ್ಲ!

by
March 20, 2020
in ಕರ್ನಾಟಕ
0
ಕಿಯೋನಿಕ್ಸ್ ಕರ್ಮಕಾಂಡ: ಎಂಡಿ ಪರಮಾಧಿಕಾರ ಪ್ರಶ್ನಿಸುವಂತಿಲ್ಲ!
Share on WhatsAppShare on FacebookShare on Telegram

ಮಾಹಿತಿ ತಂತ್ರಜ್ಞಾನ ವಲಯದ ನವೋದ್ಯಮಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ನಿರ್ಮಾಣ ಮಾಡಿದ್ದ ಇನ್ ಕ್ಯುಬೇಷನ್ ಸೆಂಟರನ್ನು ಇಡಿಯಾಗಿ ಸಚಿವರ ಪುತ್ರನ ಕಂಪನಿಗೆ ನೀಡಿರುವ ಕಿಯೋನಿಕ್ಸ್ ಕರ್ಮಕಾಂಡ ಅಷ್ಟಕ್ಕೇ ಮುಗಿಯಲಿಲ್ಲ!

ADVERTISEMENT

ಸಾರ್ವಜನಿಕ ಉದ್ದೇಶದ ಒಂದು ಸೌಲಭ್ಯವನ್ನು ಸರ್ಕಾರದ ಭಾಗವೇ ಆದ ಸಚಿವರ ಸ್ವಂತ ಅನುಕೂಲಕ್ಕೆ ಬಳಸಿಕೊಳ್ಳಲು ನೀಡಿದ ಕಿಯೋನಿಕ್ಸ್ ಹಿಂದಿನ ಎಂಡಿ ಒ ಪಾಲಯ್ಯ, ಶಿವಮೊಗ್ಗದ ಮಾಚೇನಹಳ್ಳಿಯ ಐಟಿ ಪಾರ್ಕಿನ ಮೂರನೇ ಮಹಡಿಯ ಸುಸಜ್ಜಿತ ಇನ್ ಕ್ಯೂಬೇಷನ್ ಸೆಂಟರನ್ನು ಸಚಿವ ಕೆ ಎಸ್ ಈಶ್ವರಪ್ಪ ಅವರ ಪುತ್ರ ಕೆ ಇ ಕಾಂತೇಶ್ ಮತ್ತು ಮೊಮ್ಮಗ ಎನ್ ಪೃಥ್ವಿರಾಜ್ ಮಾಲೀಕತ್ವದ ಇಷ್ಟಾರ್ಥ ಸಾಫ್ಟ್ ವೇರ್ ಕಂಪನಿಗೆ ಅನಾಮತ್ತಾಗಿ ವಹಿಸಿಕೊಟ್ಟಿದ್ದಾರೆ. ಇಡೀ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಮತ್ತು ಸರ್ಕಾರದ ಉದ್ದೇಶಕ್ಕೆ ವಿರುದ್ಧವಾಗಿದೆ ಎಂಬುದನ್ನು ಹಲವು ದಾಖಲೆಗಳು ಹೇಳುತ್ತಿವೆ.

ಜೊತೆಗೆ, ಖಾಸಗೀ ಕಂಪನಿಗೆ ಸಾರ್ವಜನಿಕ ಉದ್ದೇಶದ ಸೌಲಭ್ಯವನ್ನು ಬಾಡಿಗೆಗೆ ನೀಡುವ ಹಂತದಲ್ಲಿ ಪಾಲಯ್ಯ, ಕಾನೂನುಬಾಹಿರ ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಆ ಇಡೀ ಪ್ರಕ್ರಿಯೆಯ ಬಗ್ಗೆ ಪ್ರಶ್ನಿಸಿದ ಮಾಹಿತಿ ಹಕ್ಕು ಅರ್ಜಿದಾರರಿಗೂ ಒಂದೊಂದು ವಿಷಯದಲ್ಲಿ ಒಂದೊಂದು ಬಗೆಯ ಮಾಹಿತಿ ನೀಡಿ ದಿಕ್ಕುತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂಬುದನ್ನೂ ಕಿಯೋನಿಕ್ಸ್ ನೀಡಿದ ಅಧಿಕೃತ ದಾಖಲೆಗಳೇ ಹೇಳುತ್ತಿವೆ.

ಮಾಹಿತಿ ಹಕ್ಕು ಅರ್ಜಿಯೊಂದಕ್ಕೆ ನೀಡಿದ ಮಾಹಿತಿಯಲ್ಲಿ, ಕಳೆದ ವರ್ಷದ ಜನವರಿ 25ರಂದು ಶಿವಮೊಗ್ಗ ಐಟಿ ಪಾರ್ಕಿನಲ್ಲಿ ಯಾವುದೇ ಇನ್ ಕ್ಯೂಬೇಷನ್ ಸೆಂಟರ್ ಇಲ್ಲ ಎಂದು ಹೇಳಲಾಗಿತ್ತು. ಆದರೆ ಕೇವಲ ಮೂವತ್ತೈದು ದಿನದಲ್ಲೇ ಐಟಿ ಪಾರ್ಕಿನ ಮೊದಲ ಮಹಡಿಯಲ್ಲಿ ಇನ್ ಕ್ಯೂಬೇಷನ್ ಸೆಂಟರ್ ಇದೆ ಎಂದು ಮತ್ತೆ ಮಾಹಿತಿ ನೀಡಲಾಗಿತ್ತು. ಕೇವಲ ಒಂದು ತಿಂಗಳ ಹಿಂದೆ ಯಾವುದೇ ಇನ್ ಕ್ಯೂಬೇಷನ್ ಸೆಂಟರ್ ಇಲ್ಲ. ಮೂರನೇ ಮಹಡಿಯಲ್ಲಿದ್ದ ಇನ್ ಕ್ಯೂಬೇಷನ್ ಸೆಂಟರನ್ನು ಇಷ್ಟಾರ್ಥ ಕಂಪನಿಗೆ ಬಾಡಿಗೆಗೆ ನೀಡಲಾಗಿದೆ ಎಂದಿದ್ದ ಕಿಯೋನಿಕ್ಸ್, ಕೇವಲ 35 ದಿನದಲ್ಲಿ ಮತ್ತೆ ಹೊಸದಾಗಿ ಹೇಗೆ ಸುಸಜ್ಜಿತವಾದ ಸೆಂಟರ್ ನಿರ್ಮಿಸಲು ಸಾಧ್ಯ? ಯಾವ ಪವಾಡ ನಡೆದಿರಬಹುದು ಎಂಬ ಕುತೂಹಲಕ್ಕೆ ಆ ಮಾಹಿತಿ ಕಾರಣವಾಗಿತ್ತು.

ಆ ಹಿನ್ನೆಲೆಯಲ್ಲಿ; ಮೊದಲ ಮಹಡಿಯಲ್ಲಿ ಇನ್ ಕ್ಯೂಬೇಷನ್ ಸೆಂಟರ್ ಹೊಸದಾಗಿ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದ ಬರೋಬ್ಬರಿ ಒಂದು ವರ್ಷದ ಬಳಿಕ ಇನ್ ಕ್ಯೂಬೇಷನ್ ಸೆಂಟರ್ ಬಗ್ಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಬಯಲಾಗಿದ್ದು ಕಿಯೋನಿಕ್ಸ್ ಎಂಬ ಬಿಳಿಯಾನೆಯ ಹಸಿಸುಳ್ಳಿನ ಭಯಾನಕ ರೂಪ!

ವಾಸ್ತವವಾಗಿ ಮೊದಲ ಮಹಡಿಯಲ್ಲಿ ಈಗಲೂ ಯಾವುದೇ ರೀತಿಯಲ್ಲೂ ಸುಸಜ್ಜಿತ ವರ್ಕ್ ಸ್ಟೇಷನ್ ಎನ್ನಬಹುದಾದ ಯಾವ ವ್ಯವಸ್ಥೆಯೂ ಇಲ್ಲ. ಅಲ್ಲಿ ಸದ್ಯ ಇರುವುದು ಮೂರನೇ ಮಹಡಿಯಿಂದ ತೆಗೆದುಹಾಕಿರುವ ಕ್ಯೂಬಿಕಲ್ಸ್ ಗಳು ಮಾತ್ರ. ಅದನ್ನು ಹೊರತುಪಡಿಸಿ ಇನ್ನಾವುದೇ ಸೌಲಭ್ಯಗಳಾಗಲೀ, ಬೋರ್ಡ್ ರೋಂ ಆಗಲೀ, ಬ್ಯಾಟರಿ ವ್ಯವಸ್ಥೆಯಾಗಲೀ, ಹೈಸ್ಪೀಡ್ ಇಂಟರ್ನೆಟ್ ಆಗಲೀ ಅಲ್ಲಿ ಇಲ್ಲ.

ಆ ಬಗ್ಗೆ ಮಾಹಿತಿ ನೀಡಿದ ಶಿವಮೊಗ್ಗ ಐಟಿ ಪಾರ್ಕ್ ನಿರ್ವಹಣೆ ಹೊಣೆ ಹೊತ್ತಿರುವ ಕಿಯೋನಿಕ್ಸ್ ಉದ್ಯೋಗಿ, ಚಂದ್ರಪ್ಪ, “ಮೂರನೇ ಮಹಡಿಯ ಇನ್ ಕ್ಯೂಬೇಷನ್ ಸೆಂಟರನ್ನು ಇಷ್ಟಾರ್ಥ ಕಂಪನಿಗೆ ನೀಡಿದ ಬಳಿಕ ಮೊದಲ ಮಹಡಿಗೆ ಕೆಲವು ಸಾಮಗ್ರಿಗಳನ್ನು ಸ್ಥಳಾಂತರ ಮಾಡಲಾಗಿದೆ, ವಿನಃ ಯಾವುದೇ ವರ್ಕ ಸ್ಟೇಷನ್ ನಿರ್ಮಾಣ ಮಾಡಿಲ್ಲ. ಕಂಪ್ಯೂಟರಾಗಲೀ, ಬ್ಯಾಟರೀಗಳಾಗಲೀ ಇಲ್ಲ. ಹಾಗಾಗಿ ಅದು ಈಗ ಖಾಲಿ ಜಾಗವಾಗಿದೆ. ಯಾರಿಗೂ ನೀಡಲಾಗಿಲ್ಲ” ಎಂದು ಕೇವಲ ಕಾಗದದ ಮೇಲೆ ಮಾತ್ರ ಸದ್ಯಕ್ಕೆ ಇನ್ ಕ್ಯೂಬೇಷನ್ ಸೆಂಟರ್ ಇದೆ ಎಂಬುದನ್ನು ಪರೋಕ್ಷವಾಗಿ ಖಚಿತಪಡಿಸಿದರು.

ಈ ಬಗ್ಗೆ ಕಿಯೋನಿಕ್ಸ್ ಬೆಂಗಳೂರು ಕೇಂದ್ರ ಕಚೇರಿಯನ್ನು ಸಂಪರ್ಕಿಸಿದಾಗ, “ ಶಿವಮೊಗ್ಗ ಐಟಿ ಪಾರ್ಕಿನಲ್ಲಿ ಇನ್ ಕ್ಯೂಬೇಷನ್ ಸೆಂಟರ್ ನಡೆಯುತ್ತಿದೆ” ಎಂಬ ಆಘಾತಕಾರಿ ಮಾಹಿತಿ ನೀಡಿದವರು, ಹಿರಿಯ ಅಧಿಕಾರಿ ಚಂದ್ರಿಕಾ ದೇವಿ! ಆ ಬಗ್ಗೆ ಇನ್ನಷ್ಟು ಖಚಿತತೆಗಾಗಿ ಹಾಗಾದರೆ ಆ ಸೆಂಟರಿನಲ್ಲಿ ಎಷ್ಟು ಸ್ಟಾರ್ಟಪ್ ಗಳಿವೆ. ಎಷ್ಟು ಮಂದಿಗೆ ಅಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ವಿವರ ಸಿಗಬಹುದೆ ಎಂದಾಗ, “ಅದನ್ನು ಇಷ್ಟಾರ್ಥ ಎಂಬ ಕಂಪನಿಗೆ ಇಡಿಯಾಗಿ ಬಾಡಿಗೆಗೆ ನೀಡಲಾಗಿದೆ. ಅವರು ಅದನ್ನು ನಡೆಸುತ್ತಿದ್ಧಾರೆ” ಎಂದು ವಿವರಿಸಿದರು. ಹಾಗೆ ಇನ್ ಕ್ಯೂಬೇಷನ್ ಸೆಂಟರನ್ನು ಇಡಿಯಾಗಿ ಒಂದು ಕಂಪನಿಗೆ ನೀಡಲು ಅವಕಾಶವಿದೆಯೇ? ಕ್ಯೂಬಿಕಲ್ಸ್ ಲೆಕ್ಕದಲ್ಲಿ ಬಾಡಿಗೆ ನೀಡಬೇಕು ಎಂಬುದು ಇನ್ ಕ್ಯೂಬೇಷನ್ ಸೆಂಟರಿನ ಉದ್ದೇಶವಲ್ಲವೆ? ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಲ್ಲ. ಬದಲಾಗಿ, “ಇನ್ ಕ್ಯೂಬೇಷನ್ ಸೆಂಟರ್ ಕಿಯೋನಿಕ್ಸ್ ಆಸ್ತಿ. ಅದನ್ನು ಯಾರಿಗೆ ಹೇಗೆ ನೀಡಬೇಕು ಎಂಬುದು ಕಿಯೋನಿಕ್ಸ್ ಗೆ ಬಿಟ್ಟದ್ದು. ಕಿಯೋನಿಕ್ಸ್ ಒಂದು ನಿಗಮವಾದ್ದರಿಂದ ಅದರ ಎಲ್ಲಾ ತೀರ್ಮಾನಗಳನ್ನು ಕೈಗೊಳ್ಳುವ ಅಧಿಕಾರಿ ವ್ಯವಸ್ಥಾಪಕ ನಿರ್ದೇಶಕರದ್ದಾಗಿರುತ್ತದೆ. ಅವರ ತೀರ್ಮಾನವೇ ಅಂತಿಮ. ಅದಕ್ಕೆ ಯಾರ ಅನುಮತಿ ಪಡೆಯುವ ಅಗತ್ಯವೇ ಇಲ್ಲ” ಎಂಬ ವಾದ ಕೂಡ ಅವರಿಂದ ಮಂಡನೆಯಾಯಿತು!

ಅಂದರೆ; ಸ್ವಂತ ಕಚೇರಿ, ಸೌಲಭ್ಯಗಳಿಗೆ ಹೂಡಿಕೆ ಮಾಡುವಷ್ಟು ಹಣಕಾಸು ಬಲವಿಲ್ಲದ ಆದರೆ ಐಟಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಕನಸಿನ ಯುವ ಉತ್ಸಾಹಿ ನವೋದ್ಯಮಿಗಳಿಗೆ ಆಸರೆಯಾಗಿ ಸಾರ್ವಜನಿಕ ತೆರಿಗೆ ಹಣದಲ್ಲಿ ರೂಪಿಸಿದ ಇನ್ ಕ್ಯೂಬೇಷನ್ ಸೆಂಟರನ್ನು ಕಿಯೋನಿಕ್ಸ್ ಎಂಡಿಯೊಬ್ಬರು ತಮಗೆ ಬೇಕಾದವರಿಗೆ ಸಾರಾಸಗಟಾಗಿ ನೀಡುವ ಹಕ್ಕು ಹೊಂದಿದ್ದಾರೆ. ಸರ್ಕಾರ ಹಣ ಬಳಕೆಯಾಗಿದ್ದರೂ, ಇಡೀ ಆ ಕೇಂದ್ರವನ್ನು ಖಾಸಗಿಯವರಿಗೆ ಬಾಡಿಗೆಗೆ (ಖಾಲಿ ಜಾಗದ ದರದಲ್ಲಿ ಸುಸಜ್ಜಿತ ಇನ್ ಕ್ಯೂಬೇಷನ್ ಸೆಂಟರ್ ನೀಡಿರುವುದು!) ನೀಡಲು ಅವರು ಐಟಿ-ಬಿಟಿ ಇಲಾಖೆಯ ಅಧಿಕಾರಿಗಳಾಗಲೀ, ಪರೋಕ್ಷವಾಗಿ ಸರ್ಕಾರದ ಅನುಮತಿಯನ್ನಾಗಲೀ ಪಡೆಯುವ ಅಗತ್ಯವೇ ಇಲ್ಲ ಎಂಬುದು ಅವರ ವಾದದ ಸಾರ!

ಅಂದರೆ, ಕಿಯೋನಿಕ್ಸ್ ಎಂಡಿ ಎಂದರೆ ಸ್ವತಃ ಸರ್ಕಾರಕ್ಕಾಗಲೀ, ಸಾರ್ವಜನಿಕರಿಗಾಗಲೀ ಉತ್ತರದಾಯಿಯಾಗಬೇಕಾದವರಲ್ಲ. ಅವರಿಗೆ ಅವರ ಸ್ಥಾನಕ್ಕೆ ದತ್ತವಾದ ಪರಮಾಧಿಕಾರ ಲಭಿಸಿರುತ್ತದೆ. ಆ ಪರಮಾಧಿಕಾರವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದಾಯಿತು! ಹಾಗಾಗಿಯೇ, 2012-13ರಲ್ಲಿ ಸಜ್ಜಗಾಗಿದ್ದ ಇನ್ ಕ್ಯೂಬೇಷನ್ ಸೆಂಟರನ್ನು ಸುಮಾರು ಆರು ವರ್ಷಗಳ ಕಾಲ ಯಾವೊಬ್ಬ ನವೋದ್ಯಮಿಗಳಿಗೂ ನೀಡದೇ, ಸಚಿವರ ಪುತ್ರನಿಗೆ ಕೇವಲ ಒಂದು ಶಿಫಾರಸು ಪತ್ರದ ಆಧಾರದ ಮೇಲೆ ಇಡಿ ಕೇಂದ್ರವನ್ನೇ ಬಾಡಿಗೆ ನೀಡಿದರು. ಅದೂ ಕೂಡ ಸಚಿವರು ಶಿಫಾರಸು ಪತ್ರ ಕೊಟ್ಟ ಕೇವಲ 24 ತಾಸಿನಲ್ಲೇ ಬರೋಬ್ಬರಿ ಒಂದು ಕೋಟಿ ರೂಪಾಯಿ ವೆಚ್ಚದ ಇನ್ ಕ್ಯೂಬೇಷನ್ ಸೆಂಟರನ್ನು ಅವರ ಮಗ-ಮೊಮ್ಮಗನ ಕಂಪನಿಗೆ ಬಾಡಿಗೆ ನೀಡಲು ಏಕಪಕ್ಷೀಯ ನಿರ್ಣಯ ಕೈಗೊಂಡರು!

Tags: K S EshwarappaKionics scamShivamogga IT Parkಕಿಯೋನಿಕ್ಸ್ ಕರ್ಮಕಾಂಡಸಚಿವ ಕೆ ಎಸ್ ಈಶ್ವರಪ್ಪ
Previous Post

ಕರ್ನಾಟಕದ ಬಳಿಕ ಮಧ್ಯಪ್ರದೇಶದಲ್ಲೂ ‘ಆಪರೇಷನ್ ಕಮಲ’ ಯಶಸ್ವಿ; ಕಾಂಗ್ರೆಸ್ ಸರ್ಕಾರ ಪತನ

Next Post

ಪೇಟೆಯಲ್ಲಿ ತಾತ್ಕಾಲಿಕ ಚೇತರಿಕೆ; ಡಾಲರ್ ವಿರುದ್ಧ ನಿಲ್ಲದ ರುಪಾಯಿ ಮೌಲ್ಯ ಇಳಿಕೆ

Related Posts

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..
Top Story

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..

by ಪ್ರತಿಧ್ವನಿ
May 17, 2026
0

ಬೆಂಗಳೂರು : ಪಂಜಾಬ್​ ಕಿಂಗ್ಸ್​ ವಿರುದ್ಧ ನಡೆದ ಐಪಿಎಲ್​ 2026ರ 61ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿದ್ದು ಗೆಲುವಿನ ರಣಕೇಕೆ ಹಾಕಿದೆ...

Read moreDetails
ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

May 17, 2026
KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

May 17, 2026
ನೀರಿಲ್ಲದ ಕೃಷ್ಣೆಯ ಒಡಲು : ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ; ರೈತರ ತೀವ್ರ ಆಕ್ರೋಶ..!

ನೀರಿಲ್ಲದ ಕೃಷ್ಣೆಯ ಒಡಲು : ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ; ರೈತರ ತೀವ್ರ ಆಕ್ರೋಶ..!

May 17, 2026
ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

May 17, 2026
Next Post
ಪೇಟೆಯಲ್ಲಿ ತಾತ್ಕಾಲಿಕ ಚೇತರಿಕೆ; ಡಾಲರ್ ವಿರುದ್ಧ ನಿಲ್ಲದ ರುಪಾಯಿ ಮೌಲ್ಯ ಇಳಿಕೆ

ಪೇಟೆಯಲ್ಲಿ ತಾತ್ಕಾಲಿಕ ಚೇತರಿಕೆ; ಡಾಲರ್ ವಿರುದ್ಧ ನಿಲ್ಲದ ರುಪಾಯಿ ಮೌಲ್ಯ ಇಳಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada