• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕಾವಲುಗಾರನನ್ನೇ ಕೊಂದು ಶ್ರೀಗಂಧ ಲೂಟಿ ಹೊಡೆದರು, ಅಧಿಕಾರಿಗಳು ಸುಮ್ಮನೆ ಕುಳಿತರು

by
February 13, 2020
in ಕರ್ನಾಟಕ
0
ಕಾವಲುಗಾರನನ್ನೇ ಕೊಂದು ಶ್ರೀಗಂಧ ಲೂಟಿ ಹೊಡೆದರು
Share on WhatsAppShare on FacebookShare on Telegram

ಕಳೆದ ವಾರ ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಶ್ರೀಗಂಧದ ಗೋದಾಮಿಗೆ ನುಗ್ಗಿ, ಕಾವಲುಗಾರನ್ನ ಕೊಂದು, ದಾಸ್ತಾನಿಟ್ಟಿದ್ದ ನೂರಾರು ಕ್ವಿಂಟಾಲ್‌ ಶ್ರೀಗಂಧದ ತುಂಡುಗಳನ್ನು ಸಾಗಿಸಿದ್ದರು. ಮೃತ ಕಾವಲುಗಾರನ ದೇಹ ಇಪ್ಪತ್ತು ಕಿಲೋಮೀಟರ್‌ ಆಚೆಯ ಬಸ್‌ ನಿಲ್ದಾಣದೊಳಗೆ ಬಿಸಾಡಿದ್ದರು, ಈ ಕ್ರೌರ್ಯಕ್ಕೆ ಸೆಟೆದು ನಿಲ್ಲಬೇಕಿದ್ದ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಇನ್ನೂ ಆರೋಪಿಗಳ ಜಾಡು ಹಿಡಿಯುವುದರಲ್ಲೇ ನಿರತವಾಗಿದೆ.

ADVERTISEMENT

ಅರಣ್ಯ ಇಲಾಖೆಯ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿದೆ ಎಂದರೆ ಕಳ್ಳರು ಹಿರಿಯ ಅಧಿಕಾರಿಗಳ ಕಚೇರಿಗೆ ಲಗ್ಗೆ ಇಡುತ್ತಿದ್ದಾರೆ, ಕಳೆದ ಶುಕ್ರವಾರ ಸಾಗರದ ಅರಣ್ಯ ಉಪವಿಭಾಗಾಧಿಕಾರಿ ಕಚೇರಿ ಕಾವಲುಗಾರನನ್ನ ಕೊಂದು ಒಳಗಿದ್ದ ಗಂಧದ ದಾಸ್ತಾನನ್ನ ಲೂಟಿ ಹೊಡೆದ ಕಳ್ಳರು, ಕಾವಲುಗಾರ ಬಾಳೆಗುಂಡಿ ನಿವಾಸಿ ನಾಗರಾಜ್‌ ಎಂಬುವರ ಮೃತ ದೇಹವನ್ನ ಸುಮಾರು ಇಪ್ಪತ್ತು ಕಿಲೋಮೀಟರ್‌ ಆಚೆಗೆ ಉಳ್ಳೂರು ಗ್ರಾಮಪಂಚಾಯತಿ ವ್ಯಾಪ್ತಿಯ ನೇಂದ್ರವಳ್ಳಿ ಎಂಬ ಬಸ್‌ನಿಲ್ದಾಣದಲ್ಲಿ ಬಿಸಾಡಿ ಹೋಗಿದ್ದರು. ಈ ಕಾರ್ಯಾಚರಣೆಯ ಕುರುಹುಗಳನ್ನ ನೋಡುತ್ತಾ ಹೋದರೆ ಇಡೀ ತಂಡ ಕಮರ್ಷಿಯಲ್‌ ಸಿನಿಮಾ ಕಥೆಗಳಿಗಿಂತ ರೋಚಕವಾಗಿ ಯೋಜನೆ ರೂಪಿಸಿದೆ. ಕಚೇರಿಯಲ್ಲಿದ್ದ ಟ್ಯೂಬ್‌ಲೈಟ್‌ಗಳು ಹಾಗೂ ಸಿಸಿಟಿವಿಗಳನ್ನ ಒಡೆದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಗಂಧದ ತುಂಡುಗಳನ್ನ ದೋಚಿದ್ದರು.

ಬೆಳಕು ಹರಿಯುತ್ತಿದ್ದಂತೆ ಕಚೇರಿಯ ಬಾಗಿಲು ಒಡೆದ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಕಾವಲುಗಾರನ ನಾಪತ್ತೆ ನೋಡಿ ಇದು ಆತನದ್ದೆ ಕೃತ್ಯ ಎಂದುಕೊಳ್ಳುತ್ತಿರುವಂತೆ, ಕಾವಲುಗಾರನ ಹೆಣ ಬಸ್‌ನಿಲ್ದಾಣದಲ್ಲಿ ಸಿಕ್ಕಿತೆಂಬ ಮಾಹಿತಿ ಬಂತು. ಈಗ ಜನರು ಆಕ್ರೋಶಭರಿತರಾಗಿ ವ್ಯವಸ್ಥೆಯ ವಿರುದ್ಧ ಹರಿಹಾಯ್ದರು, ಪೊಲೀಸರನ್ನೂ ಶಪಿಸಿದರು.

ಅಷ್ಟಾದರೂ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್‌ ಸ್ಥಳಕ್ಕೆ ಬರಲೇ ಇಲ್ಲ, ಜನರ ಸಿಟ್ಟು ಮತ್ತಷ್ಟು ಏರುತ್ತಿದ್ದಂತೆ ಆಗಮಿಸಿ ಎಫ್‌ಐಆರ್‌ ದಾಖಲಿಸುವುದಾಗಿ ಹೇಳಿ ಹೊರಟರು. ಅಲ್ಲಿ ದೋಚಿದ್ದೆಷ್ಟು, ಏನೇನು ನಷ್ಟ ಸಂಭವಿಸಿದೆ ಎಂಬ ಮಾಹಿತಿಯನ್ನ ಮಾಧ್ಯಮಕ್ಕೂ ನೀಡದೇ ಗೌಪ್ಯವಾಗಿಟ್ಟ ಅರಣ್ಯ ಇಲಾಖೆ ಆರೋಪಿ ಸಿಕ್ಕಾಗ ಇಂತಿಷ್ಟೇ ಕಳುವಾಗಿತ್ತು ಎಂದು ಹೇಳುವುದು ಕಷ್ಟ.

ಶ್ರೀಗಂಧ ಕಾವಲುಗಾರ ನಾಗರಾಜ್‌ ಮನೆಯವರಿಗೆ ಸಾಂತ್ವಾನ ಹೇಳಿದ ಶಾಸಕ ಹರತಾಳು ಹಾಲಪ್ಪ ವಿಚಾರಣೆ ಮಾಡುವಂತೆ ಹೇಳಿ ಹೊರಟರು, ಇತ್ತ ಪೊಲೀಸರು ನಾಲ್ಕು ದಿನಗಳಿಂದ ಆರೋಪಿಗಳಿಗೆ ಬಲೆ ಬೀಸಿ ಯಾವುದೇ ಪ್ರಗತಿ ಕಾಣದೇ ಸಾಕ್ಷ್ಯಗಳಿಗೆ ತಡಕಾಡುತ್ತಿದ್ದಾರೆ, ಕಾವಲುಗಾರನನ್ನ ಕೊಂದು ಬಸ್‌ ನಿಲ್ದಾಣದಲ್ಲಿ ಬಿಡಾಡಿ ಗಂಧವನ್ನ ತುಂಬಿಕೊಂಡು ಹೋದ ಆರೋಪಿಗಳಿಗೆ ಒಳಗಿನ ಮಾಹಿತಿ ಕರಾರುವಕ್ಕಾಗಿ ಗೊತ್ತಿತ್ತು, ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಂಡು ಬಂದು ಸಿನಿಮಾ ಶೈಲಿಯಲ್ಲಿ ಲೂಟಿ ಮಾಡಿದ್ದಾರೆ, ಆದರೂ ಪೊಲೀಸರಿಗೆ ದುಷ್ಕರ್ಮಿಗಳ ಜಾಡು ಸಿಗುತ್ತಿಲ್ಲ! ಅತ್ತ ಮೃತನ ಕುಟುಂಬಕ್ಕೆ ಪರಿಹಾರವೂ ಇಲ್ಲ! ಇದು ಇಡೀ ಅರಣ್ಯ ಇಲಾಖೆ ಹೇಗೆ ಕರ್ತವ್ಯ ನಿರ್ವಹಿಸುತ್ತಿದೆ, ಒಬ್ಬ ಸಾಮಾನ್ಯ ಸಿಬ್ಬಂದಿಗೆ ಇಲಾಖೆಯಲ್ಲಿರುವ ಸ್ಥಾನಮಾನಗಳೇನು ಎಂಬುದಕ್ಕೊಂದು ನಿದರ್ಶನ.

Tags: ಅಧಿಕಾರಿಕಾವಲುಗಾರಶ್ರೀಗಂಧಶ್ರೀಗಂಧ ಲೂಟಿ
Previous Post

ಅಸ್ಕರ್‌ನಲ್ಲಿ ಕೊರಿಯನ್ ಚಿತ್ರ ಮತ್ತು ಕನ್ನಡ ಚಿತ್ರರಂಗ

Next Post

ದೆಹಲಿಯಲ್ಲಿ ಬಿಜೆಪಿ ಸೋಲಿಗೆ ಆಮ್ ಆದ್ಮಿಗಿಂತ ಕಾಂಗ್ರೆಸ್ ಕಾರಣ! 

Related Posts

Top Story

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

by ಪ್ರತಿಧ್ವನಿ
July 2, 2025
0

ಪದ್ಮಶ್ರೀ ಪ್ರಶಸ್ತಿ ವಿಜೇತ ಎಂ ಎಸ್ ಸತ್ಯು ರವರಿಗೆ ಜುಲೈ 6 ರಂದು 96ನೇ ಹುಟ್ಟುಹಬ್ಬದ ಸಂಭ್ರಮ. ಈ ಸಡಗರವನ್ನು "ಕೊರಗಜ್ಜ" ಸಿನಿಮಾದ ನಿರ್ದೇಶಕ ಸುಧೀರ್ ಅತ್ತಾವರ್...

Read moreDetails

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

July 2, 2025

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

July 2, 2025
Next Post
ದೆಹಲಿಯಲ್ಲಿ ಬಿಜೆಪಿ ಸೋಲಿಗೆ ಆಮ್ ಆದ್ಮಿಗಿಂತ ಕಾಂಗ್ರೆಸ್ ಕಾರಣ! 

ದೆಹಲಿಯಲ್ಲಿ ಬಿಜೆಪಿ ಸೋಲಿಗೆ ಆಮ್ ಆದ್ಮಿಗಿಂತ ಕಾಂಗ್ರೆಸ್ ಕಾರಣ! 

Please login to join discussion

Recent News

Top Story

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

by ಪ್ರತಿಧ್ವನಿ
July 2, 2025
Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada