Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕಾಲಿಟ್ಟಲ್ಲೆಲ್ಲಾ ಕರಿಬೇವು: ಮಲೆನಾಡಿನಲ್ಲೊಂದು ಭೀಮನ ಕಾಲದ ಬೇವಿನ ಬೆಟ್ಟ

ಕಾಲಿಟ್ಟಲ್ಲೆಲ್ಲಾ ಕರಿಬೇವು: ಮಲೆನಾಡಿನಲ್ಲೊಂದು ಭೀಮನ ಕಾಲದ ಬೇವಿನ ಬೆಟ್ಟ
ಕಾಲಿಟ್ಟಲ್ಲೆಲ್ಲಾ ಕರಿಬೇವು: ಮಲೆನಾಡಿನಲ್ಲೊಂದು ಭೀಮನ ಕಾಲದ ಬೇವಿನ ಬೆಟ್ಟ

February 14, 2020
Share on FacebookShare on Twitter

ಪಶ್ಚಿಮಘಟ್ಟ ಕಾಡುಗಳಲ್ಲಿ ಸಾವಿರಾರು ಜಾತಿಯ ಸಸ್ಯ ಪ್ರಬೇಧಗಳಿವೆ. ಅರ್ಧ ಅಡಿಗೊಂದು ಭಿನ್ನ ಜಾತಿಯ ಮರಗಳು ಇರುತ್ತವೆ, ಸ್ವಾಭಾವಿಕವಾಗಿ ಬೆಳೆದುಕೊಂಡ ಕಾಡಿನ ಸುತ್ತ ಕಣ್ಣಾಡಿಸಿದರೆ ಒಂದೇ ಜಾತಿಯ ಮರಗಳು ಹತ್ತಾರು ಒಟ್ಟಿಗೆ ಸಿಗುವುದು ಬಹಳ ಅಪರೂಪ, ಅಂತಹದರಲ್ಲಿ ಕಿಲೋಮೀಟರ್‌ಗಳಷ್ಟು ದೂರ ಕಾಡಿನೊಳಗೆ ಕರಿಬೇವು ಹುಲುಸಾಗಿ ಬೆಳೆದುಕೊಂಡಿದ್ದರೆ ಹೇಗಿರುತ್ತೆ ಊಹಿಸಿ. ಈ ಸೊಬಗನ್ನ ನೋಡಬೇಕಾದರೆ ಮಲೆಘಟ್ಟದ ದಟ್ಟಕಾನನದೊಳಗೆ ನುಸುಳಲೇಬೇಕು.

ಹೆಚ್ಚು ಓದಿದ ಸ್ಟೋರಿಗಳು

10 ತಿಂಗಳ ನಂತ್ರ ನವಜೋತ್‌ ಸಿಂಗ್‌ ಸಿಧು ಜೈಲಿನಿಂದ ಬಿಡುಗಡೆ..!

ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಎ.ಟಿ.ರಾಮಸ್ವಾಮಿ ..!

ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!

ಶಿವಮೊಗ್ಗ ಮೂಲದ ಪರಿಸರ ಹೋರಾಟಗಾರ ಅಜಯ್‌ಕುಮಾರ್‌ ಶರ್ಮಾ ಕರಿಬೇವಿನ ಕಾಡಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು, ಅವರ ಲೇಖನ ಹೀಗಿತ್ತು., ದಕ್ಷಿಣ ಭಾರತದಲ್ಲಿ ಸಾವಿರಾರು ಹಳ್ಳಿಗಳಲ್ಲಿ ಪಂಚ ಪಾಂಡವರಿಗೆ ಸಂಬಂಧಿಸಿದ ಹಲವಾರು ರೋಚಕ ಕಥೆಗಳು ಸಿಗುತ್ತದೆ. ನಮ್ಮ ಪಶ್ಚಿಮ ಘಟ್ಟದ ಹೃದಯವಾಗಿರುವ ಶಿವಮೊಗ್ಗ ಸಹ ಅಂತಹ ಕಥೆಗಳಿಗೆ ಸಾಕ್ಷಿಯಾಗಿದೆ.

ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಸ್ವಲ್ಪ ಕಾಲ ಹೊಸನಗರದ ಶರಾವತಿಯ ದಂಡೆಯ ಮೇಲೆ ವಾಸವಿದ್ದರು, ಭಾರತದ ಸರ್ವಶ್ರೇಷ್ಠ ನಳಪಾಕನಾಗಿದ್ದ ಭೀಮಸೇನ ತನ್ನ ಪಕ್ವಾನಗಳು ರುಚಿಕರವಾಗಿರಲು ಅದಕ್ಕೆ ಸ್ವಾಭಾವಿಕವಾಗಿ ಕರಿಬೇವಿನ ಸೊಪ್ಪು ಹಾಕುತ್ತಿದ್ದ. ಭೀಮಸೇನ ತನ್ನ ಹಸ್ತದಿಂದ ನೀರು ಹಾಕಿ ಪೋಷಿಸಿದ ಕರಿಬೇವು, ಕಾಲಾಂತರದಲ್ಲಿ ನೂರಾರು ಹೆಕ್ಟೇರುಗಳಷ್ಟು ವಿಸ್ತರಿಸಿಕೊಂಡು ಕರಿಬೇವಿನ ಕಾಡಾಗಿ ಪರಿವರ್ತನೆಯಾಗಿದೆ, ಶರಾವತಿಗೆ ಅಡ್ಡಲಾಗಿ ಕಟ್ಟಲಾದ ಲಿಂಗನಮಕ್ಕಿ ಆಣೆಕಟ್ಟು, ಇತ್ತೀಚಿನ ದಿನಗಳಲ್ಲಿ ಆಗಿರುವ ಒತ್ತುವರಿಯಿಂದಾಗಿ ಭೀಮಸೇನನ ಈ “ಕರಿಬೇವಿನ ಕಾಡು” ಕೇವಲ ಕೆಲವೇ ಕೆಲವು ಎಕರೆಗಳಿಗೆ ಸೀಮಿತವಾಗಿದೆ. ಇಂದಿಗೂ ಸಹ ಈ ಕಾಡಿನೊಳಗೆ ಹೋದ ತಕ್ಷಣ ನಮ್ಮ ಮೂಗು ಘಮ್ ಎನ್ನುವ ಪರಿಮಳಕ್ಕೆ ಮಾರುಹೋಗುವುದು. ಎಲ್ಲಿ ನೋಡಿದರೂ ನಮಗೆ ಕಾಣಿಸುವುದು ಕೇವಲ ಕರಿಬೇವಿನ ಮರಗಳೇ.

ಅಜಯ್‌ ಕುಮಾರ್‌ ಶರ್ಮಾ ಅವರ ಲೇಖನದ ಜಾಡು ಹಿಡಿದು ಹೊರಟಾಗ ಸಿಕ್ಕಿದ್ದು ಸಂಕೂರು ಎಂಬ ಗ್ರಾಮ, ಹೊಸನಗರ ತಾಲೂಕು ಕೇಂದ್ರದಿಂದ ಎಂಟು ಕಿಲೋಮೀಟರ್‌ ಅಂತರದಲ್ಲಿರುವ ಪಟ್ಟಹಳ್ಳಿ, ಅಲ್ಲಿ ಮೂರು ಹಾದಿ ಕೂಡುವ ಪುಟ್ಟದೊಂದು ಸರ್ಕಲ್‌ ಇದೆ, ಬಲಕ್ಕೆ ತಿರುವಿಕೊಂಡರೆ ಸೀದಾ ಪಟ್ಟುಗುಪ್ಪ ಸೇತುವೆಗೆ ಹೋಗಬಹುದು, ಎಡಕ್ಕೆ ಧೂಮ ಎಂಬ ಪುಟ್ಟ ಗ್ರಾಮದ ಬಳಿಯಲ್ಲಿ ಶರಾವತಿ ಹಿನ್ನೀರಿನ ದಿಕ್ಕಿಗೆ ಕಾಲು ಹಾದಿಗಳಲ್ಲಿ ಸಾಗಿದರೆ ಈ ಬೇವಿನ ಬೆಟ್ಟ ಎದುರಾಗುತ್ತದೆ.

ಇದು ಹರಿದ್ರಾವತಿ ಮತ್ತು ಶರಾವತಿ ನದಿಗಳು ಸೇರುವ ಪುಣ್ಯ ಸಂಗಮ ಕ್ಷೇತ್ರವಾಗಿದ್ದು ಅಕ್ಕಪಕ್ಕದ ಅರಣ್ಯ ಪ್ರದೇಶಗಳಲ್ಲಿ ಪಾಂಡವರು ವಾಸಿಸಿದರು ಎಂದು ಸ್ಥಳ ಪುರಾಣಗಳಿಂದ ತಿಳಿದು ಬರುತ್ತದೆ ಎನ್ನುತ್ತಾರೆ ಅಜಯ್‌ ಶರ್ಮಾ. ಶರಾವತಿ ಕಣಿವೆಯಲ್ಲಿ ದಿನೇ ದಿನೇ ಒತ್ತುವರಿಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೇವಿನ ಕಾಡು ಕೂಡ ತನ್ನ ಕುರುಹುಗಳನ್ನ ಹಾಗೂ ಐತಿಹಾಸಿಕ ಹಿನ್ನೆಲೆಯನ್ನ ಕಳೆದುಕೊಳ್ಳಲಿದೆ ಎಂಬುದು ಪರಿಸರವಾದಿಗಳ ಆತಂಕ, ಸರ್ಕಾರ ಹಾಗೂ ಅರಣ್ಯ ಇಲಾಖೆ ಗಮನ ಹರಿಸುವ ಅನಿವಾರ್ಯ ಇದೆ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

SR SHRINIVAS : ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮುಂದಿನ ನಡೆ ಏನು?? | JDS | HD DEVEGOWDA | CONGRESS |
ಇದೀಗ

SR SHRINIVAS : ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮುಂದಿನ ನಡೆ ಏನು?? | JDS | HD DEVEGOWDA | CONGRESS |

by ಪ್ರತಿಧ್ವನಿ
March 29, 2023
ಟ್ರೋಲಿಗರಿಗೆ ಪ್ರೀತಿಯಿಂದಲೇ ಉತ್ತರ ಕೊಟ್ಟ ರಮ್ಯಾ.. ಅಜ್ಜಿಯಂದಿರಿಗಾಗಿ ಕನ್ನಡದಲ್ಲೇ ಮಾತ್ನಾಡ್ತೀನಿ ಎಂದ ಪದ್ಮಾವತಿ..!   
ಸಿನಿಮಾ

ಟ್ರೋಲಿಗರಿಗೆ ಪ್ರೀತಿಯಿಂದಲೇ ಉತ್ತರ ಕೊಟ್ಟ ರಮ್ಯಾ.. ಅಜ್ಜಿಯಂದಿರಿಗಾಗಿ ಕನ್ನಡದಲ್ಲೇ ಮಾತ್ನಾಡ್ತೀನಿ ಎಂದ ಪದ್ಮಾವತಿ..!   

by ಪ್ರತಿಧ್ವನಿ
March 29, 2023
ಅಪ್ಪ ಧ್ರುವನಾರಾಯಣ್ ಫೋಟೋ ಮುಂದೆ ದರ್ಶನ್ ಕಣ್ಣೀರು | DHRUVA NARAYAN | SIDDARAMAIAH | DARSHAN |
ಇದೀಗ

ಅಪ್ಪ ಧ್ರುವನಾರಾಯಣ್ ಫೋಟೋ ಮುಂದೆ ದರ್ಶನ್ ಕಣ್ಣೀರು | DHRUVA NARAYAN | SIDDARAMAIAH | DARSHAN |

by ಪ್ರತಿಧ್ವನಿ
March 29, 2023
ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ : ಎ.ಬಿ ಮಾಲಕರೆಡ್ಡಿ ಇಂದು ಕಾಂಗ್ರೆಸ್​ ಸೇರ್ಪಡೆ
Top Story

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ : ಎ.ಬಿ ಮಾಲಕರೆಡ್ಡಿ ಇಂದು ಕಾಂಗ್ರೆಸ್​ ಸೇರ್ಪಡೆ

by ಮಂಜುನಾಥ ಬಿ
April 1, 2023
ಶಾಸಕ ಮಾಡಾಳು ವಿರೂಪಾಕ್ಷಪ್ಪ ಐದು ದಿನ ಲೋಕಾಯುಕ್ತ ಕಸ್ಟಡಿಗೆ
ಇದೀಗ

ಶಾಸಕ ಮಾಡಾಳು ವಿರೂಪಾಕ್ಷಪ್ಪ ಐದು ದಿನ ಲೋಕಾಯುಕ್ತ ಕಸ್ಟಡಿಗೆ

by ಮಂಜುನಾಥ ಬಿ
March 28, 2023
Next Post
ಬಿಜೆಪಿಯದ್ದು ಸೋಲಿನಲ್ಲೂ ಸಾರ್ಥಕ ಭಾವ... ಕಿಚ್ಚಿನಲ್ಲೂ ಲಾಭದ ಲೆಕ್ಕ?!    

ಬಿಜೆಪಿಯದ್ದು ಸೋಲಿನಲ್ಲೂ ಸಾರ್ಥಕ ಭಾವ... ಕಿಚ್ಚಿನಲ್ಲೂ ಲಾಭದ ಲೆಕ್ಕ?!   

ವಿವಿಧತೆಯಿಲ್ಲದ ಏಕತೆ ನಮಗೇತಕೆ?

ವಿವಿಧತೆಯಿಲ್ಲದ ಏಕತೆ ನಮಗೇತಕೆ?

ಗುಜರಾತ್ ಗಲಭೆಯಲ್ಲಿ ಮೋದಿ ಆರೋಪ ಮುಕ್ತಗೊಳಿಸಿದ್ದ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾಗೆ ಕ್ಲೀನ್ ಚಿಟ್!

ಗುಜರಾತ್ ಗಲಭೆಯಲ್ಲಿ ಮೋದಿ ಆರೋಪ ಮುಕ್ತಗೊಳಿಸಿದ್ದ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾಗೆ ಕ್ಲೀನ್ ಚಿಟ್!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist