ADVERTISEMENT
  • Home
  • About Us
  • ಕರ್ನಾಟಕ
Saturday, May 17, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಕಾಲಿಟ್ಟಲ್ಲೆಲ್ಲಾ ಕರಿಬೇವು: ಮಲೆನಾಡಿನಲ್ಲೊಂದು ಭೀಮನ ಕಾಲದ ಬೇವಿನ ಬೆಟ್ಟ

by
February 14, 2020
in ಕರ್ನಾಟಕ
0
ಕಾಲಿಟ್ಟಲ್ಲೆಲ್ಲಾ ಕರಿಬೇವು: ಮಲೆನಾಡಿನಲ್ಲೊಂದು ಭೀಮನ ಕಾಲದ ಬೇವಿನ ಬೆಟ್ಟ
Share on WhatsAppShare on FacebookShare on Telegram

ಪಶ್ಚಿಮಘಟ್ಟ ಕಾಡುಗಳಲ್ಲಿ ಸಾವಿರಾರು ಜಾತಿಯ ಸಸ್ಯ ಪ್ರಬೇಧಗಳಿವೆ. ಅರ್ಧ ಅಡಿಗೊಂದು ಭಿನ್ನ ಜಾತಿಯ ಮರಗಳು ಇರುತ್ತವೆ, ಸ್ವಾಭಾವಿಕವಾಗಿ ಬೆಳೆದುಕೊಂಡ ಕಾಡಿನ ಸುತ್ತ ಕಣ್ಣಾಡಿಸಿದರೆ ಒಂದೇ ಜಾತಿಯ ಮರಗಳು ಹತ್ತಾರು ಒಟ್ಟಿಗೆ ಸಿಗುವುದು ಬಹಳ ಅಪರೂಪ, ಅಂತಹದರಲ್ಲಿ ಕಿಲೋಮೀಟರ್‌ಗಳಷ್ಟು ದೂರ ಕಾಡಿನೊಳಗೆ ಕರಿಬೇವು ಹುಲುಸಾಗಿ ಬೆಳೆದುಕೊಂಡಿದ್ದರೆ ಹೇಗಿರುತ್ತೆ ಊಹಿಸಿ. ಈ ಸೊಬಗನ್ನ ನೋಡಬೇಕಾದರೆ ಮಲೆಘಟ್ಟದ ದಟ್ಟಕಾನನದೊಳಗೆ ನುಸುಳಲೇಬೇಕು.

ADVERTISEMENT

ಶಿವಮೊಗ್ಗ ಮೂಲದ ಪರಿಸರ ಹೋರಾಟಗಾರ ಅಜಯ್‌ಕುಮಾರ್‌ ಶರ್ಮಾ ಕರಿಬೇವಿನ ಕಾಡಿನ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು, ಅವರ ಲೇಖನ ಹೀಗಿತ್ತು., ದಕ್ಷಿಣ ಭಾರತದಲ್ಲಿ ಸಾವಿರಾರು ಹಳ್ಳಿಗಳಲ್ಲಿ ಪಂಚ ಪಾಂಡವರಿಗೆ ಸಂಬಂಧಿಸಿದ ಹಲವಾರು ರೋಚಕ ಕಥೆಗಳು ಸಿಗುತ್ತದೆ. ನಮ್ಮ ಪಶ್ಚಿಮ ಘಟ್ಟದ ಹೃದಯವಾಗಿರುವ ಶಿವಮೊಗ್ಗ ಸಹ ಅಂತಹ ಕಥೆಗಳಿಗೆ ಸಾಕ್ಷಿಯಾಗಿದೆ.

ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಸ್ವಲ್ಪ ಕಾಲ ಹೊಸನಗರದ ಶರಾವತಿಯ ದಂಡೆಯ ಮೇಲೆ ವಾಸವಿದ್ದರು, ಭಾರತದ ಸರ್ವಶ್ರೇಷ್ಠ ನಳಪಾಕನಾಗಿದ್ದ ಭೀಮಸೇನ ತನ್ನ ಪಕ್ವಾನಗಳು ರುಚಿಕರವಾಗಿರಲು ಅದಕ್ಕೆ ಸ್ವಾಭಾವಿಕವಾಗಿ ಕರಿಬೇವಿನ ಸೊಪ್ಪು ಹಾಕುತ್ತಿದ್ದ. ಭೀಮಸೇನ ತನ್ನ ಹಸ್ತದಿಂದ ನೀರು ಹಾಕಿ ಪೋಷಿಸಿದ ಕರಿಬೇವು, ಕಾಲಾಂತರದಲ್ಲಿ ನೂರಾರು ಹೆಕ್ಟೇರುಗಳಷ್ಟು ವಿಸ್ತರಿಸಿಕೊಂಡು ಕರಿಬೇವಿನ ಕಾಡಾಗಿ ಪರಿವರ್ತನೆಯಾಗಿದೆ, ಶರಾವತಿಗೆ ಅಡ್ಡಲಾಗಿ ಕಟ್ಟಲಾದ ಲಿಂಗನಮಕ್ಕಿ ಆಣೆಕಟ್ಟು, ಇತ್ತೀಚಿನ ದಿನಗಳಲ್ಲಿ ಆಗಿರುವ ಒತ್ತುವರಿಯಿಂದಾಗಿ ಭೀಮಸೇನನ ಈ “ಕರಿಬೇವಿನ ಕಾಡು” ಕೇವಲ ಕೆಲವೇ ಕೆಲವು ಎಕರೆಗಳಿಗೆ ಸೀಮಿತವಾಗಿದೆ. ಇಂದಿಗೂ ಸಹ ಈ ಕಾಡಿನೊಳಗೆ ಹೋದ ತಕ್ಷಣ ನಮ್ಮ ಮೂಗು ಘಮ್ ಎನ್ನುವ ಪರಿಮಳಕ್ಕೆ ಮಾರುಹೋಗುವುದು. ಎಲ್ಲಿ ನೋಡಿದರೂ ನಮಗೆ ಕಾಣಿಸುವುದು ಕೇವಲ ಕರಿಬೇವಿನ ಮರಗಳೇ.

ಅಜಯ್‌ ಕುಮಾರ್‌ ಶರ್ಮಾ ಅವರ ಲೇಖನದ ಜಾಡು ಹಿಡಿದು ಹೊರಟಾಗ ಸಿಕ್ಕಿದ್ದು ಸಂಕೂರು ಎಂಬ ಗ್ರಾಮ, ಹೊಸನಗರ ತಾಲೂಕು ಕೇಂದ್ರದಿಂದ ಎಂಟು ಕಿಲೋಮೀಟರ್‌ ಅಂತರದಲ್ಲಿರುವ ಪಟ್ಟಹಳ್ಳಿ, ಅಲ್ಲಿ ಮೂರು ಹಾದಿ ಕೂಡುವ ಪುಟ್ಟದೊಂದು ಸರ್ಕಲ್‌ ಇದೆ, ಬಲಕ್ಕೆ ತಿರುವಿಕೊಂಡರೆ ಸೀದಾ ಪಟ್ಟುಗುಪ್ಪ ಸೇತುವೆಗೆ ಹೋಗಬಹುದು, ಎಡಕ್ಕೆ ಧೂಮ ಎಂಬ ಪುಟ್ಟ ಗ್ರಾಮದ ಬಳಿಯಲ್ಲಿ ಶರಾವತಿ ಹಿನ್ನೀರಿನ ದಿಕ್ಕಿಗೆ ಕಾಲು ಹಾದಿಗಳಲ್ಲಿ ಸಾಗಿದರೆ ಈ ಬೇವಿನ ಬೆಟ್ಟ ಎದುರಾಗುತ್ತದೆ.

ಇದು ಹರಿದ್ರಾವತಿ ಮತ್ತು ಶರಾವತಿ ನದಿಗಳು ಸೇರುವ ಪುಣ್ಯ ಸಂಗಮ ಕ್ಷೇತ್ರವಾಗಿದ್ದು ಅಕ್ಕಪಕ್ಕದ ಅರಣ್ಯ ಪ್ರದೇಶಗಳಲ್ಲಿ ಪಾಂಡವರು ವಾಸಿಸಿದರು ಎಂದು ಸ್ಥಳ ಪುರಾಣಗಳಿಂದ ತಿಳಿದು ಬರುತ್ತದೆ ಎನ್ನುತ್ತಾರೆ ಅಜಯ್‌ ಶರ್ಮಾ. ಶರಾವತಿ ಕಣಿವೆಯಲ್ಲಿ ದಿನೇ ದಿನೇ ಒತ್ತುವರಿಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೇವಿನ ಕಾಡು ಕೂಡ ತನ್ನ ಕುರುಹುಗಳನ್ನ ಹಾಗೂ ಐತಿಹಾಸಿಕ ಹಿನ್ನೆಲೆಯನ್ನ ಕಳೆದುಕೊಳ್ಳಲಿದೆ ಎಂಬುದು ಪರಿಸರವಾದಿಗಳ ಆತಂಕ, ಸರ್ಕಾರ ಹಾಗೂ ಅರಣ್ಯ ಇಲಾಖೆ ಗಮನ ಹರಿಸುವ ಅನಿವಾರ್ಯ ಇದೆ.

Tags: ShivamoggaWestern Ghatsಕರಿಬೇವುಭೀಮ
Previous Post

ನಿರ್ಭಯಾ ಅತ್ಯಾಚಾರ ಪ್ರಕರಣ: ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಕರಣದ ಘಟನಾವಳಿಗಳ ಸಂಪೂರ್ಣ ವಿವರ

Next Post

ಬಿಜೆಪಿಯದ್ದು ಸೋಲಿನಲ್ಲೂ ಸಾರ್ಥಕ ಭಾವ… ಕಿಚ್ಚಿನಲ್ಲೂ ಲಾಭದ ಲೆಕ್ಕ?!   

Related Posts

ಕೊತ್ತೂರು ಮಂಜುನಾಥ್​ಗೆ ಕಾಂಗ್ರೆಸ್​ – ಬಿಜೆಪಿ ನಾಯಕರ ಚಾಟಿ..
Top Story

ಕೊತ್ತೂರು ಮಂಜುನಾಥ್​ಗೆ ಕಾಂಗ್ರೆಸ್​ – ಬಿಜೆಪಿ ನಾಯಕರ ಚಾಟಿ..

by ಕೃಷ್ಣ ಮಣಿ
May 17, 2025
0

ದೇಶ, ಭದ್ರತೆ ವಿಚಾರ ಬಂದಾಗ ಪ್ರತಿಯೊಬ್ಬರು ಬದ್ಧತೆ ತೋರಬೇಕು ಎಂದು ಮೈಸೂರಲ್ಲಿ ಶಾಸಕ ತನ್ವೀರ್‌ಸೇಠ್ ಹೇಳಿದ್ದಾರೆ. ಭಾರತೀಯ ಸೇನೆ, ದೇಶದ ಪರ ಸದಾ ನಾನು ನಿಲ್ಲುತ್ತೇನೆ. ನಾವು...

Read moreDetails

Santhosh Lad ಅಂಥವ್ರು ಹಿಂಗೆಲ್ಲ ಮಾತಾಡ್ತಾರೆ ಅಂದ್ರೆ..

May 17, 2025

ಡಿಕೆ ಶಿವಕುಮಾರ್ ಸಿಎಂ ರೇಸ್ ನಲ್ಲಿ ಸಿದ್ದ…?

May 17, 2025

ಕುಮಾರಸ್ವಾಮಿ ಫ್ಯಾಮಿಲಿ ಬಗ್ಗೆ ನಾನು ಮಾತಾಡಲ್ಲ ಎಂದ ಡಿಕೆ ಸುರೇಶ್

May 17, 2025

ಅಧ್ಯಕ್ಷ ಸ್ಥಾನಕ್ಕೆ DKಸುರೇಶ್ ನಾಮಪತ್ರ ಸಲ್ಲಿಕೆ

May 17, 2025
Next Post
ಬಿಜೆಪಿಯದ್ದು ಸೋಲಿನಲ್ಲೂ ಸಾರ್ಥಕ ಭಾವ... ಕಿಚ್ಚಿನಲ್ಲೂ ಲಾಭದ ಲೆಕ್ಕ?!    

ಬಿಜೆಪಿಯದ್ದು ಸೋಲಿನಲ್ಲೂ ಸಾರ್ಥಕ ಭಾವ... ಕಿಚ್ಚಿನಲ್ಲೂ ಲಾಭದ ಲೆಕ್ಕ?!   

Please login to join discussion

Recent News

ಕೊತ್ತೂರು ಮಂಜುನಾಥ್​ಗೆ ಕಾಂಗ್ರೆಸ್​ – ಬಿಜೆಪಿ ನಾಯಕರ ಚಾಟಿ..
Top Story

ಕೊತ್ತೂರು ಮಂಜುನಾಥ್​ಗೆ ಕಾಂಗ್ರೆಸ್​ – ಬಿಜೆಪಿ ನಾಯಕರ ಚಾಟಿ..

by ಕೃಷ್ಣ ಮಣಿ
May 17, 2025
Top Story

ಕರಡಿ ಹಾಗೂ ಕರಡಿ ಮರಿಯನ್ನು ಕಂಡು ಪ್ರವಾಸಿಗರು ಫುಲ್ ಖುಷ್.

by ಪ್ರತಿಧ್ವನಿ
May 17, 2025
ಭಾರತ..ಪಾಕಿಸ್ತಾನ ನಡುವಿನ ಕದನ ವಿರಾಮ ನಾಳೆ ಅಂತ್ಯ…! ಮುಂದೇನು ..?! 
Top Story

ಭಾರತ..ಪಾಕಿಸ್ತಾನ ನಡುವಿನ ಕದನ ವಿರಾಮ ನಾಳೆ ಅಂತ್ಯ…! ಮುಂದೇನು ..?! 

by Chetan
May 17, 2025
ಕೊತ್ತೂರು ಮಂಜುನಾಥ್​ ವಿರುದ್ಧ ದೂರು.. ನಾನು ಹೇಳಿದ್ದು ಹೀಗೆ ಎಂದ ಶಾಸಕ
Top Story

ಕೊತ್ತೂರು ಮಂಜುನಾಥ್​ ವಿರುದ್ಧ ದೂರು.. ನಾನು ಹೇಳಿದ್ದು ಹೀಗೆ ಎಂದ ಶಾಸಕ

by ಕೃಷ್ಣ ಮಣಿ
May 17, 2025
ರಾಜ್ಯದಲ್ಲಿ ನುಡಿದಂತೆ ನಡೆದಿರುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್​ ಸರ್ಕಾರ..
Top Story

ರಾಜ್ಯದಲ್ಲಿ ನುಡಿದಂತೆ ನಡೆದಿರುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್​ ಸರ್ಕಾರ..

by ಕೃಷ್ಣ ಮಣಿ
May 17, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೊತ್ತೂರು ಮಂಜುನಾಥ್​ಗೆ ಕಾಂಗ್ರೆಸ್​ – ಬಿಜೆಪಿ ನಾಯಕರ ಚಾಟಿ..

ಕೊತ್ತೂರು ಮಂಜುನಾಥ್​ಗೆ ಕಾಂಗ್ರೆಸ್​ – ಬಿಜೆಪಿ ನಾಯಕರ ಚಾಟಿ..

May 17, 2025

Santhosh Lad ಅಂಥವ್ರು ಹಿಂಗೆಲ್ಲ ಮಾತಾಡ್ತಾರೆ ಅಂದ್ರೆ..

May 17, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada