• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ಕಾಂಗ್ರೆಸ್ ಒಳಜಗಳ: ಯುದ್ಧಕ್ಕೂ ಮೊದಲಿನ ಶಸ್ತ್ರತ್ಯಾಗ

by
September 27, 2019
in ರಾಜಕೀಯ
0
ಕಾಂಗ್ರೆಸ್ ಒಳಜಗಳ: ಯುದ್ಧಕ್ಕೂ ಮೊದಲಿನ ಶಸ್ತ್ರತ್ಯಾಗ
Share on WhatsAppShare on FacebookShare on Telegram

ಮೈತ್ರಿ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿಗೆ ತಕ್ಕ ಪಾಠ ಕಲಿಸಲು ಒಟ್ಟಾಗಿ ಹೋರಾಡಬೇಕಿದ್ದ ಕಾಂಗ್ರೆಸ್, ಜೆಡಿಎಸ್ ಸಂಬಂಧ ಹಳಸಿದೆ. ಬಿಜೆಪಿಗೆ ತಿರುಗೇಟು ನೀಡುವ ಶಕ್ತಿ ಹೊಂದಿರುವ ಕಾರಣದಿಂದಾದರೂ ಕಾಂಗ್ರೆಸ್ ಗಟ್ಟಿಯಾಗಿ ನಿಂತು ಹೋರಾಟ ನಡೆಸಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದ್ದು, ರಾಜಕೀಯ ಸಮರದ ಸೇನಾಪತಿ ಸ್ಥಾನಗಳನ್ನು ಅಲಂಕರಿಸುವವರೇ ಪರಸ್ಪರ ಕಿತ್ತಾಡಿಕೊಂಡು ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಕಳೆದೆರಡು ದಿನಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳು ಈ ರೀತಿಯ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ಸೇನಾಪತಿ ಸ್ಥಾನಕ್ಕಾಗಿ ಪಕ್ಷದಲ್ಲಿ ನಡೆಯುತ್ತಿರುವ ಪೈಪೋಟಿ ಪಕ್ಷ ಗಟ್ಟಿಗೊಳಿಸುವ ಬದಲು ಬುಡಕ್ಕೇ ಕೊಡಲಿಪೆಟ್ಟು ಹಾಕುವಂತಿದೆ. ಅದರ ಬದಲು ಮೂಲ ಕಾಂಗ್ರೆಸ್ ಮತ್ತು ಬೆರಕೆ ಕಾಂಗ್ರೆಸ್ ಎಂಬ ಎರಡು ಬಣಗಳು ಗಟ್ಟಿಯಾಗುತ್ತಿವೆ. ಈಗಾಗಲೇ ರಾಷ್ಟ್ರೀಯ ಕಾಂಗ್ರೆಸ್ ಮಾಸ್ ಲೀಡರ್ ಇಲ್ಲದೆ ಸೋತು ಸುಣ್ಣಾಗುತ್ತಿದ್ದರೆ, ರಾಜ್ಯದಲ್ಲೂ ಅಂತಹದ್ದೇ ಸ್ಥಿತಿ ತಲುಪುವ ಹಂತಕ್ಕೆ ಹೋಗುವ ಲಕ್ಷಣ ಕಾಣಿಸುತ್ತಿದೆ.

ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ. ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದ (ಇಡಿ) ಕುಣಿಕೆಯಲ್ಲಿ ಸಿಲುಕಿ ಒದ್ದಾಡುತ್ತಿರುವುದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದಲ್ಲಿ ಮತ್ತಷ್ಟು ಗಟ್ಟಿಯಾಗುವ ರೀತಿ ಮುಂದುವರಿಯುತ್ತಿರುವುದು. ಇದರ ಮಧ್ಯೆ ಮುಂಚೂಣಿ ನಾಯಕರಾಗಲು ಪೈಪೋಟಿ ನಡೆಸುತ್ತಿರುವವರು ಶಕ್ತಿಯಿಲ್ಲದಿದ್ದರೂ ಇನ್ನೊಬ್ಬರ ಶಕ್ತಿ ಕುಂದಿಸಿ ಮುನ್ನಲೆಗೆ ಬರಲು ಒದ್ದಾಡುತ್ತಿರುವುದು.

ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎರಡು ಶಕ್ತಿ ಕೇಂದ್ರಗಳಿವೆ. ಅದರಲ್ಲಿ ಒಂದು ಸಿದ್ದರಾಮಯ್ಯ ಆದರೆ, ಮತ್ತೊಂದು ಡಿ. ಕೆ. ಶಿವಕುಮಾರ್. ಪಕ್ಷದಲ್ಲಿ ಜನ ಸೇರಿಸುವ, ತಾವಾಗಿಯೇ ಜನರು ಬರುವಂತೆ ಮಾಡುವ ನಾಯಕರು ಇವರಿಬ್ಬರು ಮಾತ್ರ. ಉಳಿದ ನಾಯಕರು ಇದ್ದಾರಾದರೂ ಅವರಿಗೆ ಮಾಸ್ ಲೀಡರ್ ಎಂಬ ಹಣೆಪಟ್ಟಿ ಧರಿಸಲು ಇದುವರೆಗೆ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ಕಳೆದ ನಾಲ್ಕೈದು ವರ್ಷದಿಂದ ಕಾಂಗ್ರೆಸ್ ನಲ್ಲಿ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದ್ದುದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಮಧ್ಯೆ ಮಾತ್ರ. ಕೆಪಿಸಿಸಿ ಅಧ್ಯಕ್ಷರು, ಪ್ರಮುಖ ಪದಾಧಿಕಾರಿಗಳು ಯಾರೇ ಇರಲಿ, ಇವರಿಬ್ಬರ ಮಾತುಗಳಿಗೆ ಮಾತ್ರ ಮನ್ನಣೆ ಸಿಗುತ್ತಿತ್ತು. ಆಗಲೂ ಮೂಲ ಕಾಂಗ್ರೆಸ್ ಮತ್ತು ಬೆರಕೆ ಕಾಂಗ್ರೆಸ್ ಇದ್ದರೂ ಅವರಿಬ್ಬರ ಪೈಪೋಟಿಯಲ್ಲಿ ಅದು ಎದ್ದು ಕಾಣುತ್ತಿರಲಿಲ್ಲ.

ಸಿದ್ದರಾಮಯ್ಯ ಸ್ವಯಂಕೃತಾಪರಾಧವೇ ಕಾರಣವೇ?

ಇದಕ್ಕೆ ಸಿದ್ದರಾಮಯ್ಯ ಅವರ ಸ್ವಯಂಕೃತಾಪರಾಧವೂ ಕಾರಣ ಎನ್ನಬಹುದು. ಡಿ. ಕೆ. ಶಿವಕುಮಾರ್ ಅವರು ಇಡಿ ಕುಣಿಕೆಯಲ್ಲಿ ಸಿಕ್ಕಿಕೊಂಡ ಮೇಲೆ ಅವರು ಏಕಮೇವ ನಾಯಕರಾಗಲು ಹೊರಟಿರುವುದು ಮೂಲ ಕಾಂಗ್ರೆಸ್ಸಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮೈತ್ರಿ ಸರ್ಕಾರ ಉರುಳಲು ಕಾರಣರಾದವರು ಸಿದ್ದರಾಮಯ್ಯ ಅವರ ಸುತ್ತ ಮುತ್ತ ಓಡಾಡುತ್ತಿದ್ದವರು. ಇದು ಒಂದೆಡೆಯಾದರೆ, ಕೋಲಾರದಲ್ಲಿ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕೇಂದ್ರದ ಮಾಜಿ ಸಚಿವ ಕೆ. ಎಚ್. ಮುನಿಯಪ್ಪ ಕಳೆದ ಲೋಕಸಬೆ ಚುನಾವಣೆಯಲ್ಲಿ ಸೋಲಲು ಕಾರಣವಾಗಿದ್ದು ಕೂಡ ಇದೇ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದವರು. ಮೈಸೂರು, ಮಂಡ್ಯ ಭಾಗದಲ್ಲಿ ಸಿದ್ದರಾಮಯ್ಯ ಪ್ರಭಾವಿ ನಾಯಕರಾದರೂ ಆ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಕ್ಷಕ್ಕೆ ದಕ್ಕಲಿಲ್ಲ. ಅಷ್ಟೆಲ್ಲಾ ಆದರೂ ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಯಾರ ಮೇಲೂ ಶಿಸ್ತು ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಅವಕಾಶ ನೀಡಿರಲಿಲ್ಲ.

ಈಗಲೂ ಮೌನವಾಗಿದ್ದರೆ ಸಿದ್ದರಾಮಯ್ಯ ಇನ್ನಷ್ಟು ಗಟ್ಟಿಯಾಗಬಹುದು ಎಂಬ ಕಾರಣಕ್ಕೆ ಇವೆಲ್ಲವೂ ಈಗ ಹೊರಬರುತ್ತಿದೆ. ಹೊರಗಿನಿಂದ ಬಂದವರು ನಮ್ಮಲ್ಲಿ ಮೆರೆಯುತ್ತಿದ್ದಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಬಗ್ಗೆ ಅಸಮಾಧಾನ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್ ನೇರವಾಗಿ ಅಲ್ಲದೇ ಇದ್ದರೂ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಸಮರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರ ಪರಿಣಾಮವೇ ಗುರುವಾರ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಕೆ. ಎಚ್. ಮುನಿಯಪ್ಪ ಮತ್ತು ಬಿ. ಕೆ. ಹರಿಪ್ರಸಾದ್ ಅವರು ನೇರವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದು. ಏಕವಚನದಲ್ಲಿ ಪರಸ್ಪರ ವಾಗ್ದಾಳಿ ನಡೆಸಿಕೊಂಡಿದ್ದು.

ಲೋಕಸಭೆ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಹಿರಂಗವಾಗಿಯೇ ಕೆ. ಎಚ್. ಮುನಿಯಪ್ಪ ಅವರಿಗೆ ತಿರುಗಿ ಬಿದ್ದಿದ್ದರು. ಇತರ ಕೆಲವರು ಕೂಡ ತಿರುಗಿ ಬಿದ್ದಿದ್ದರಾದರೂ ಅವರೆಲ್ಲರ ನಾಯಕತ್ವ ವಹಿಸಿಕೊಂಡಿದ್ದು ರಮೇಶ್ ಕುಮಾರ್. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೆ. ಎಚ್. ಮುನಿಯಪ್ಪ ಅವರು ಕೆಪಿಸಿಸಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದರು. ಆದರೆ, ರಮೇಶ್ ಕುಮಾರ್ ವಿರುದ್ಧ ಕ್ರಮ ಜರುಗಿಸುವ ಬದಲು ಸಿದ್ದರಾಮಯ್ಯ ಅವರು ರಮೇಶ್ ಕುಮಾರ್ ಅವರನ್ನು ಜತೆಗೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ಇಂದ್ರ, ಚಂದ್ರ ಎಂದೆಲ್ಲಾ ಹೊಗಳುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಕೆ. ಎಚ್. ಮುನಿಯಪ್ಪ ವಾಗ್ದಾಳಿ ನಡೆಸಲು ಇದುವೇ ಮುಖ್ಯ ಕಾರಣವಾಗಿತ್ತು. ಇದಕ್ಕೆ ಬಿ. ಕೆ. ಹರಿಪ್ರಸಾದ್ ಅವರಿಂದ ಸಾಥ್ ಸಿಕ್ಕಿತ್ತು.

ಇನ್ನು ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಕೂಡ ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ತೋರುತ್ತಾ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಗೆ ಹತ್ತಿರವಾಗಿದ್ದ ಮತ್ತು ಸಿದ್ದರಾಮಯ್ಯ ಬಗ್ಗೆ ಅಸಮಾಧಾನ ಹೊಂದಿದ್ದ ಡಾ. ಪರಮೇಶ್ವರ್ ಅವರಿಗೆ ಇದರಿಂದ ಇನ್ನಷ್ಟು ಶಕ್ತಿ ಬಂದಂತಾಗಿದೆ. ಆದರೆ, ನೇರವಾಗಿ ಸಿದ್ದರಾಮಯ್ಯ ಅವರನ್ನು ಎದುರಿಸಿ ಗೆಲ್ಲುವ ಶಕ್ತಿ ಮತ್ತು ಧೈರ್ಯ ಅವರಲ್ಲಿ ಇಲ್ಲ. ಹೀಗಾಗಿ ಸಿದ್ದರಾಮಯ್ಯ ವಿರುದ್ಧ ಯಾರೆಲ್ಲಾ ಸೆಟೆದು ನಿಲ್ಲುತ್ತಾರೋ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇವೆಲ್ಲಕ್ಕೂ ಕಾರಣ ಸಿದ್ದರಾಮಯ್ಯ ಅವರ ಸ್ವಯಂಕೃತಾಪರಾಧವೇ ಹೊರತು ಬೇರೇನೂ ಅಲ್ಲ. ಏಕೆಂದರೆ, ತಮ್ಮನ್ನು ಮುಖ್ಯಮಂತ್ರಿ ಮಾಡಿದ ಪಕ್ಷದ ಹಿರಿಯ ನಾಯಕರನ್ನೆಲ್ಲಾ ಬದಿಗಿಟ್ಟು ಕೆಲವು ಶಾಸಕರ ಗುಂಪು ಕಟ್ಟಿಕೊಂಡರೆ ನಾಯಕು ಎಷ್ಟು ದಿನ ಎಂದು ಸುಮ್ಮನಿರಲು ಸಾಧ್ಯ? ಇದರ ಪರಿಣಾಮವೇ ಈಗಿನ ಅಸಮಾಧಾನ ಸ್ಫೋಟ.

ಪಕ್ಷ ಎಂದ ಮೇಲೆ ಇಂತಹ ಗಲಾಟೆ, ಗದ್ದಲ ಇದ್ದದ್ದೇ ಹೌದಾದರೂ ರಾಜ್ಯದಲ್ಲಿ ಬಿಜೆಪಿ ವಿರುದ್ಧ ತೊಡೆತಟ್ಟಿ ನಿಲ್ಲಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತಮ್ಮಲ್ಲೇ ಪರಸ್ಪರ ಹೊಡೆದಾಡಿಕೊಂಡರೆ ಪಕ್ಷದ ಸ್ಥಿತಿ ಏನಾದೀತು? ಇಬ್ಬರು ‘ಮಾಸ್ ಲೀಡರ್’ಗಳ ಪೈಕಿ ಡಿ. ಕೆ. ಶಿವಕುಮಾರ್ ಇಡಿ ಬಲೆಯಲ್ಲಿ ಒದ್ದಾಡುತ್ತಿರುವಾಗ ಉಳಿದಿರುವ ಸಿದ್ದರಾಮಯ್ಯ ವಿರುದ್ಧ ಏಕಾಏಕಿ ಸಮರ ಸಾರಿ ಅವರನ್ನು ಏಕಾಂಗಿಯಾಗಿ ದೂರವಿಟ್ಟರೆ ನಾಳೆ ಬಿಜೆಪಿ ವಿರುದ್ಧ ಜನ ಸೇರಿಸುವವರು ಯಾರು?

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ವಲ್ಪ ಮಟ್ಟಿಗೆ ಈ ಸಾಮರ್ಥ್ಯ ಇದೆಯಾದರೂ ಜಾತಿ, ವಯಸ್ಸು ಮತ್ತಿತರೆ ಕಾರಣಗಳು ಮುಂಚೂಣಿ ನಾಯಕರಾಗಿ ನಿಲ್ಲಲು ಸಹಕರಿಸುವುದಿಲ್ಲ. ಇನ್ನು ಡಾ. ಪರಮೇಶ್ವರ್, ಕೆ. ಎಚ್. ಮುನಿಯಪ್ಪ, ಬಿ. ಕೆ. ಹರಿಪ್ರಸಾದ್ ಅವರಾರಿಗೂ ಪಕ್ಷ ಸಂಘಟಿಸುವ ಶಕ್ತಿ ಇಲ್ಲ. ಹೀಗಿರುವಾಗ ಹೈಕಮಾಂಡ್ ಮೂಲಕ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ಬದಲು ನೇರವಾಗಿ ಅವರೊಂದಿಗೆ ಜಗಳಕ್ಕಿಳಿದರೆ ಅದರ ಪರಿಣಾಮವನ್ನು ಮೂಲ ಕಾಂಗ್ರೆಸ್ಸಿಗರು ಸೇರಿದಂತೆ ಪಕ್ಷ ಎದುರಿಸಬೇಕಾಗುತ್ತದೆ. ಬಿಜೆಪಿಗೆ ಬೇಕಾಗಿರುವುದು ಕೂಡ ಅದೇ ಆಗಿದೆ. ಕಾಂಗ್ರೆಸ್ ನಲ್ಲಿ ಒಡಕು ಸೃಷ್ಟಿಯಾಗಬೇಕು ಎಂಬ ಬಿಜೆಪಿ ಬಯಕೆಯನ್ನು ಕಾಂಗ್ರೆಸ್ ತಾನಾಗಿಯೇ ಫಲ, ತಾಂಬೂಲದೊಂದಿಗೆ ನೀಡುತ್ತಿದೆ.

Tags: B K HariprasadCongress InfightingCongress PartyD K ShivakumarJD SK H MuniyappaRamesh Kumarsiddaramaiahಕಾಂಗ್ರೆಸ್ ಒಳಜಗಳಕಾಂಗ್ರೆಸ್ ಪಕ್ಷಕೆ ಎಚ್ ಮುನಿಯಪ್ಪಜೆಡಿಎಸ್ಡಿ ಕೆ ಶಿವಕುಮಾರ್ಬಿ ಕೆ ಹರಿಪ್ರಸಾದ್ರಮೇಶ್ ಕುಮಾರ್ಸಿದ್ದರಾಮಯ್ಯ
Previous Post

ಸುಲ್ತಾನ್ ಚಿತ್ರಕ್ಕೆ ಟಿಪ್ಪು ವಿರೋಧಿಗಳ ಅಡ್ಡಿಯ ಹಿಂದಿನ ಅಜ್ಞಾನ

Next Post

ಪ್ರಧಾನಿ ಆರ್ಥಿಕ ಸಲಹೆಗಾರರಿಗೆ ಅರ್ಧಚಂದ್ರ- ಹಳೆಯ ವ್ಯಾಧಿ

Related Posts

Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
0

https://youtube.com/live/Sh2S-y9CYsE

Read moreDetails

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025
ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

July 2, 2025
Next Post
ಪ್ರಧಾನಿ ಆರ್ಥಿಕ ಸಲಹೆಗಾರರಿಗೆ ಅರ್ಧಚಂದ್ರ- ಹಳೆಯ ವ್ಯಾಧಿ

ಪ್ರಧಾನಿ ಆರ್ಥಿಕ ಸಲಹೆಗಾರರಿಗೆ ಅರ್ಧಚಂದ್ರ- ಹಳೆಯ ವ್ಯಾಧಿ

Please login to join discussion

Recent News

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
Top Story

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

by ಪ್ರತಿಧ್ವನಿ
July 2, 2025
Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada