Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಎರಡೆರಡು ಮನೆ ಖರೀದಿಸಬಾರದಂತೆ NRIಗಳು 

ಎರಡೆರಡು ಮನೆ ಖರೀದಿಸಬಾರದಂತೆ NRIಗಳು
ಎರಡೆರಡು ಮನೆ ಖರೀದಿಸಬಾರದಂತೆ NRIಗಳು 

February 7, 2020
Share on FacebookShare on Twitter

ಕೇಂದ್ರ ಸರ್ಕಾರದಿಂದ ಸರ್ವರಿಗೂ ಸೂರನ್ನೊದಗಿಸುವುದನ್ನು ಖಾತ್ರಿ ಮಾಡುಲು ಕೋರಿದ ಮದ್ರಾಸ್ ಹೈಕೋರ್ಟ್, ದೇಶದಲ್ಲಿ ಅನಿವಾಸಿ ಭಾರತೀಯರು ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಖರೀದಿ ಮಾಡದಂತೆ ನಿಷೇಧ ತರಲು ಸೂಚಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ಕಾವೇರಿ ನೀರಿ ನಿಯಂತ್ರಣ ಸಮಿತಿ ಸಭೆ: ಕರ್ನಾಟಕದ ಪರವಾಗಿ ಅಧಿಕಾರಿಗಳು ವಾದ ಮಂಡನೆ 

ಅನಿವಾಸಿಗಳಿಗೆ ಮನೆ ಮಾರಾಟವನ್ನು ನಿಷೇಧಿಸಿ, ಎರಡನೇ ಮನೆ ಖರೀದಿ ಮೇಲೆ 100% ತೆರಿಗೆ ವಿಧಿಸಲು ಹೈಕೋರ್ಟ್ ಸೂಚಿಸಿದೆ.

ಕೇಂದ್ರ ಗೃಹ ನಿರ್ಮಾಣ ಹಾಗೂ ವಿತ್ತ ಸಚಿವಾಲಯಗಳನ್ನು ಪಾರ್ಟಿಗಳನ್ನಾಗಿ ಮಾಡಿಕೊಂಡಿರುವ ಮದ್ರಾಸ್ ಹೈಕೋರ್ಟ್‌, ಭಾರತ ಹಾಗೂ ತಮಿಳು ನಾಡಿನಲ್ಲಿ ಅದೆಷ್ಟು ಕುಟುಂಬಗಳಿಗೆ ಮೂಲ ಸೌಕರ್ಯವಾಗಿ ಮನೆಯ ಲಭ್ಯತೆ ಇದೆ ಎಂದು ಉತ್ತರಿಸುವಂತೆ ಕೋರಿ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದೆ. ಕೇಂದ್ರ ಸರ್ಕಾರದ “ಸರ್ವರಿಗೂ ಸೂರು” ಅಭಿಯಾನ ಯಾವಾಗ ಪೂರ್ಣಗೊಳ್ಳಲಿದೆ ಎಂದು ಹೈಕೋರ್ಟ್ ಇದೇ ಸಂದರ್ಭದಲ್ಲಿ ಪ್ರಶ್ನಿಸಿದೆ.

“ದೇಶದಲ್ಲಿರುವ ಸರ್ವರಿಗೂ ಸೂರು ಒದಗಿಸುವ ಉದ್ದೇಶದಿಂದ ಸರ್ಕಾರವೇಕೆ ಒಬ್ಬರಿಗೆ ಒಂದೊಂದೇ ಮನೆ ಎಂಬ ರೀತಿಯ ನಿಯಂತ್ರಣಗಳನ್ನು ಅನುಷ್ಠಾನಕ್ಕೆ ತಂದು ಹಿಂದುಳಿದ ಹಾಗೂ ಆರ್ಥಿವಾಗಿ ದುರ್ಬಲ ವರ್ಗಗಳಾಗಿರುವ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಸಮುದಾಯಗಳಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಬಾರದು? ಇಂಥ ಕ್ರಮಗಳ ಮೂಲಕ ದೇಶದಲ್ಲಿ ಗೃಹ ಖರೀದಿಯ ಬೆಲೆಗಳನ್ನೇಕೆ ನಿಯಂತ್ರಣಕ್ಕೆ ತರಬಾರದು,” ಎಂದು ಹೈಕೋರ್ಟ್ ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ಎನ್‌ ಕಿರುಬಾಕರನ್‌ ಹಾಗೂ ಅಬ್ದುಲ್‌ ಖುದ್ದೋಸ್ ಇದ್ದ ಪೀಠವು, “ಎರಡನೇ ಮನೆ ಖರೀದಿ ಮಾಡಲು ಬಯಸುವ ಕುಟುಂಬಗಳಿಗೆ ಸರ್ಕಾರವೇಕೆ 100% ತೆರಿಗೆ ವಿಧಿಸಬಾರದು? ಈ ಮೂಲಕ ಒಬ್ಬಬ್ಬರೇ ಹಲವು ಮನೆಗಳನ್ನು ಖರೀದಿ ಮಾಡದಂತೆ ನೋಡಿಕೊಳ್ಳಬಾರದು,” ಎಂದು ಹೇಳಿದೆ.

“ಪ್ಲಾಟ್‌ಫಾರಂಗಳು, ರಸ್ತೆಗಳ ಮೇಲೆಲ್ಲಾ ಲಕ್ಷಾಂತರ ಜೀವಿಸುತ್ತಿದ್ದು, ಸಿಮೆಂಟ್ ಪೈಪ್‌ಲೈನ್‌ಗಳು, ಸ್ಲಂಗಳು ಹಾಗೂ ಮರಗಳ ಬುಡಗಳಲ್ಲೆಲ್ಲಾ ಯಾವುದೇ ಸೂರಿಲ್ಲದೇ, ಸುರಕ್ಷತಾ ಕ್ರಮಗಳಿಲ್ಲದೇ ವಾಸ ಮಾಡುತ್ತಿದ್ದಾರೆ,” ಎಂದು ಪೀಠ ಸರ್ಕಾರದ ಗಮನಕ್ಕೆ ತಂದಿದೆ.

“ಕೇಂದ್ರ ಸರ್ಕಾರ ಎಲ್ಲರಿಗೂ ಸೂರು ಒದಗಿಸುವ ಮಹತ್ವದ ನೀತಿಯನ್ನು ಕೈಗೆತ್ತಿಕೊಂಡಿದೆ ಎಂಬುದು ಸತ್ಯ, ಆದರೆ ಇದನ್ನು ಸಾಧ್ಯವಾದಷ್ಟು ಬೇಗ ಸಾಧಿಸಬೇಕು,” ಎಂದು ಕೋರ್ಟ್ ಆಗ್ರಹಿಸಿದೆ.

ಗೃಹ ನಿರ್ಮಾಣ ಯೋಜನೆಗೆಂದು ಕೊಯಮತ್ತೂರಿನ ತುಡಿಯಲೂರ್‌ ಹಾಗೂ ವೆಲ್ಲಕಿನಾರ್‌ ಪ್ರದೇಶಗಳಲ್ಲಿ 369 ಎಕರೆಗಳಷ್ಟು ಖಾಸಗಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ನಡೆಯೊಂದನ್ನು ವಿರೋಧಿ ಮೇಲ್ಮನವಿ ಸಲ್ಲಿಸಿರುವ ತಮಿಳುನಾಡು ಗೃಹ ಮಂಡಳಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್‌ ಕೈಗೆತ್ತಿಕೊಂಡಿದೆ.

ತಮ್ಮದೇ ಸ್ವಂತ ಪರಿಶ್ರಮದಿಂದ ಯಾವುದೋ ಪರದೇಶಕ್ಕೆ ಹೋಗಿ ಬೆವರು ಹರಿವಂತೆ ಸಂಪಾದನೆ ಮಾಡಿ, ಅಲ್ಲಿನ ದುಬಾರಿ ಜೀವನ ಶೈಲಿಯಲ್ಲೂ ಸಹ ತ್ರಾಸದಾಯಕವಾಗಿ ಹಣ ಕೂಡಿಟ್ಟುಕೊಂಡು ಬಂದು ಸ್ವದೇಶದಲ್ಲಿ ಹಾಯಾಗಿ ಜೀವನ ನಡೆಸುವ ಮಂದಿಯ ಮೇಲೆ ನಿಯಂತ್ರಣ ತರುವ ಮುನ್ನ ಸಾವಿರಾರು ಎಕರೆಗಳ ಮಟ್ಟಿಗೆ ಭೂಮಿ ಕಬಳಿಸಿಕೊಂಡು, ಬೆಂಗಳೂರಿನಂಥ ಮಹಾನಗರಗಳಲ್ಲಿ ಏರಿಯಾಗಳನ್ನೇ ಆವರಿಸಿಕೊಂಡು, ರಿಯಲ್ ಎಸ್ಟೇಟ್ ಕುಳಗಳೊಂದಿಗೆ ಶಾಮೀಲಾಗಿ ಭೂತಾಯಿಯ ಒಡಲನ್ನೇ ಕೊರೆಯುತ್ತಿರುವ ರಾಜಕಾರಣಿಗಳು ಹಾಗೂ ಅಧಿಕಾರಶಾಹಿಗಳ ಮೇಲೂ ಇಂಥದ್ದೇ ನಿಯಂತ್ರಣಗಳನ್ನು ತಂದಿದ್ದರೆ? ಎಂಬ ಪ್ರಶ್ನೆ ಹಾಗೇ ಮನದಲ್ಲಿ ಬಂದು ಹೋಗುತ್ತೆ ಅಲ್ಲವೇ?

RS 500
RS 1500

SCAN HERE

Pratidhvani Youtube

«
Prev
1
/
5515
Next
»
loading
play
Tamil Naduನಲ್ಲಿ Siddaramaiah ಫೋಟೋಗೆ ಹಾರ ಹಾಕಿ ಧರಣಿ | ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
play
Mandya : ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
«
Prev
1
/
5515
Next
»
loading

don't miss it !

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಭೇಟಿಯಾದ ಸಿಎಂ, ಡಿಸಿಎಂ
Top Story

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಭೇಟಿಯಾದ ಸಿಎಂ, ಡಿಸಿಎಂ

by ಪ್ರತಿಧ್ವನಿ
September 21, 2023
ಟೆಂಪೋ ಟ್ರಾವೆಲರ್ ವಾಹನ ಕಳ್ಳತನ- ಮೂವರ ಬಂಧನ
Top Story

ಟೆಂಪೋ ಟ್ರಾವೆಲರ್ ವಾಹನ ಕಳ್ಳತನ- ಮೂವರ ಬಂಧನ

by ಪ್ರತಿಧ್ವನಿ
September 23, 2023
ಟೀಸರ್ ನಲ್ಲೇ ಕುತೂಹಲ ಮೂಡಿಸಿದ “ಅಲೆಕ್ಸಾ” : ಪವನ್ ತೇಜ್ – ಅದಿತಿ ಪ್ರಭುದೇವ ಅಭಿನಯದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ
Top Story

ಟೀಸರ್ ನಲ್ಲೇ ಕುತೂಹಲ ಮೂಡಿಸಿದ “ಅಲೆಕ್ಸಾ” : ಪವನ್ ತೇಜ್ – ಅದಿತಿ ಪ್ರಭುದೇವ ಅಭಿನಯದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ

by ಪ್ರತಿಧ್ವನಿ
September 23, 2023
ಬಿಜೆಪಿ-ಜೆಡಿಎಸ್ ಮೈತ್ರಿ ಫೈನಲ್‌ :  ಹೆಚ್​ಡಿಕೆ ಏನು ಹೇಳಿದ್ರು ಗೊತ್ತಾ..?
ಇದೀಗ

ಬಿಜೆಪಿ-ಜೆಡಿಎಸ್ ಮೈತ್ರಿ ಫೈನಲ್‌ : ಹೆಚ್​ಡಿಕೆ ಏನು ಹೇಳಿದ್ರು ಗೊತ್ತಾ..?

by ಪ್ರತಿಧ್ವನಿ
September 22, 2023
ರಾಷ್ಟ್ರ ಪ್ರಶಸ್ತಿ ವಿಜೇತ ಅನಿರುದ್ಧ್ ಜತಕರ್ ಗೆ ಅಭಿಮಾನಿಗಳಿಂದ ಸನ್ಮಾನ
Top Story

ರಾಷ್ಟ್ರ ಪ್ರಶಸ್ತಿ ವಿಜೇತ ಅನಿರುದ್ಧ್ ಜತಕರ್ ಗೆ ಅಭಿಮಾನಿಗಳಿಂದ ಸನ್ಮಾನ

by ಪ್ರತಿಧ್ವನಿ
September 26, 2023
Next Post
ಬಿಜೆಪಿ ಅಧಿಕಾರ ಸವಿಯಲು ನೆರವಾದವರ ಮೇಲೆ ಕರಾಳ ಕಾನೂನು ಅಸ್ತ್ರ ಪ್ರಯೋಗವೇಕೆ?

ಬಿಜೆಪಿ ಅಧಿಕಾರ ಸವಿಯಲು ನೆರವಾದವರ ಮೇಲೆ ಕರಾಳ ಕಾನೂನು ಅಸ್ತ್ರ ಪ್ರಯೋಗವೇಕೆ?

ಮೋದಿಗೆ ಉಘೇ ಎಂದಿದ್ದಕ್ಕೆ ರಜಿನಿಕಾಂತ್‌ ಬಚಾವ್

ಮೋದಿಗೆ ಉಘೇ ಎಂದಿದ್ದಕ್ಕೆ ರಜಿನಿಕಾಂತ್‌ ಬಚಾವ್, ವಿರೋಧಿಸಿ ವಿಜಯ್‌ಗೆ ಸಂಕಷ್ಟ

ಅಭಿವೃದ್ದಿ ಮತ್ತು ವಿಭಜನೆ; ದೆಹಲಿ ಚುನಾವಣೆಯಲ್ಲಿ ಯಾರಿಗೆ ಮಣೆ? 

ಅಭಿವೃದ್ದಿ ಮತ್ತು ವಿಭಜನೆ; ದೆಹಲಿ ಚುನಾವಣೆಯಲ್ಲಿ ಯಾರಿಗೆ ಮಣೆ? 

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist