Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಉಡುಪಿ ರಥಬೀದಿಯಲ್ಲೊಂದು ಬಂಡಾಯ!

ಉಡುಪಿ ರಥಬೀದಿಯಲ್ಲೊಂದು ಬಂಡಾಯ!
ಉಡುಪಿ ರಥಬೀದಿಯಲ್ಲೊಂದು ಬಂಡಾಯ!

January 22, 2020
Share on FacebookShare on Twitter

ಉಡುಪಿಯ ರಥಬೀದಿಯಲ್ಲೊಂದು ಮೌನ ಕ್ರಾಂತಿಯೊಂದು ಶುಕ್ರವಾರ ಸಂಜೆ-ರಾತ್ರಿ ನಡೆದುಹೋಗಿದೆ. ಈ ಕ್ರಾಂತಿ ನಡೆದದ್ದು ಉಡುಪಿಯ ಶ್ರೀ ಕೃಷ್ಣ ಮಠದ ಪರ್ಯಾಯದ ಸಂಭ್ರಮಾಚರಣೆಯೊಂದಿಗೆ ಇಲ್ಲಿ ಗಮನಾರ್ಹ.

ಹೆಚ್ಚು ಓದಿದ ಸ್ಟೋರಿಗಳು

ಕೆಎಎಸ್ ಅಧಿಕಾರಿಗಳಿಗೆ ಪ್ರಾಧಾನ್ಯತೆ ನೀಡಿದರೆ, ರಾಜ್ಯದ ಅಭಿವೃದ್ಧಿಗೆ ಪೂರಕ: ಬಸವರಾಜ ಬೊಮ್ಮಾಯಿ

ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್‌ಡಿಕೆ ಏನೆಲ್ಲಾ ಮಾತಾಡಿದ್ರೂ ಗೊತ್ತಾ..?

ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಬೃಹತ್ ಪ್ರತಿಭಟನೆ; ನಾಯಕರ ಬಂಧನ ಬಿಡುಗಡೆ

ಕಳೆದ ಕೆಲ ದಿನಗಳಿಂದ ಕರಾವಳಿಯಾದ್ಯಂತ, ರಾಜ್ಯಾದ್ಯಂತ ಕಲಾಸಕ್ತರ ಗುಂಪುಗಳಲ್ಲಿ ಉಡುಪಿಯಲ್ಲಿ ಶುಕ್ರವಾರ ಸಂಜೆ ಆಯೋಜಿತವಾಗಿದ್ದ ಖ್ಯಾತ ಸಂಗೀತಗಾರ ಟಿಎಂ ಕೃಷ್ಣ ಸಂಗೀತ ಕಛೇರಿಯ ಬಗೆಗಿನೆ ಚರ್ಚೆ. ಹಿಂದುತ್ವವಾದಿಗಳು, ಈ ಸಂಗೀತ ಕಛೇರಿಯನ್ನು ಬಹಿಷ್ಕರಿಸುವುದರ ಜತೆಗೆ ಅದರ ಪ್ರಾಯೋಜಕರಾದ “ಹರ್ಷ” ಸಂಸ್ಥೆಯನ್ನೂ ಬಹಿಷ್ಕರಿಸಲೂ ಕರೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಕೊನೆಗೆ ಇತ್ತೀಚೆಗೆ ಕೃಷ್ಣೈಕ್ಯರಾದ ಶ್ರೀ ಪೇಜಾವರ ಮಠದ ವಿಶ್ವೇಶ ತೀರ್ಥರ ಹೆಸರನ್ನೂ ಎಳೆದು ತರಲಾಯಿತು. ಶ್ರೀಗಳು ಜೀವಂತವಾಗಿದ್ದರೆ, ಟಿಎಂ ಕೃಷ್ಣ ಸಂಗೀತ ಕಛೇರಿ ಉಡುಪಿಯಲ್ಲಿ ನಡೆಯಲು ಬಿಡುತ್ತಿರಲಿಲ್ಲ ಎಂಬ ಭಾವನಾತ್ಮಕ ಅಂಶವನ್ನೂ ಎತ್ತಿ ಕಟ್ಟಲಾಯಿತು.

ಸಾಮಾಜಿಕ ಮಾಧ್ಯಮಗಳಲ್ಲಿ ಈ ಸಂದೇಶವನ್ನು ಪರಿಣಾಮಕಾರಿಯಾಗಿ ಹರಡುವ ವ್ಯವಸ್ಥೆ ಮಾಡಲಾಗಿತ್ತು. ನಾನಾ ಜಾತಿಗಳ, ಉದ್ಯೋಗಿಗಳ ಗುಂಪಿನಲ್ಲಿ ಈ ಸಂದೇಶ ಹರಿಬಿಡಲಾಯಿತು. ಟಿಎಂ ಕೃಷ್ಣ ಅವರು ಬ್ರಾಹ್ಮಣ ವಿರೋಧಿ, ಮೋದಿ ವಿರೋಧಿ, ಅಮಿತ್ ಶಾ ವಿರೋಧಿ, ಹಿಂದುತ್ವ ವಿರೋಧಿ, ಕೊನೆಗೆ ಗುರು-ಶಿಷ್ಯ ಪರಂಪರೆ ವಿರೋಧಿ, ಗುರುಕುಲ ವ್ಯವಸ್ಥೆ ವಿರೋಧಿ ಹೀಗೆ ನಾನಾ ಭಾವನಾತ್ಮಕ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿತ್ತು.
ಆದರೆ ಶುಕ್ರವಾರ ಸಂಜೆ ಆದದ್ದೇ ಬೇರೆ. ರಥಬೀದಿಯಲ್ಲೇ ನಡೆದ ಟಿಎಂ ಕೃಷ್ಣ ಕಚೇರಿ ಹೌಸ್‍ಫುಲ್. ಕೃಷ್ಣ ಕಚೇರಿ ಆರಂಭಕ್ಕೆ ಮುನ್ನವೇ ಅಲ್ಲಿ ಕಾಲಿಡಲು ಜಾಗವಿರಲಿಲ್ಲ. ಬಹುತೇಕ ಶೋತೃವರ್ಗ ಸ್ಥಳೀಯ ಬ್ರಾಹ್ಮಣರೇ ಆಗಿದ್ದರು. ಅಲ್ಲಿನ ಸಂಗೀತ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲೇ ನೆರೆದಿದ್ದರು. ಯಾವುದೇ ದುರ್ಘಟನೆಗಳಿಲ್ಲದೆ ಕೃಷ್ಣ ಸಂಗೀತ ಗೋಷ್ಠಿ ಸಂಪನ್ನಗೊಂಡಿತು.

ಟಿಎಂ ಕೃಷ್ಣ ಸಂಗೀತ ಕಚೇರಿಯ ಯಶಸ್ಸು ಕಳುಹಿಸಿದ ಸಂದೇಶವೇನು? ಒಂದೆಡೆ ಕಲಾವಿದರನ್ನು ಅವರ ಎಡ ಪಂಥೀಯ ವಿಚಾರಧಾರೆ ಹಿನ್ನೆಲೆಯಲ್ಲಿ ಹಂಗಿಸುವ, ಬಹಿಷ್ಕರಿಸುವ ಕೆಲಸ ನಡೆಯುತ್ತಿರುವಾಗ, ಹಿಂದೂ ಧಾರ್ಮಿಕತೆಯ ಹೃದಯ ದಂತಿರುವ ಉಡುಪಿಯ ಜನ ಕೃಷ್ಣ ಸಂಗೀತ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ನೀಡುವ ಮೂಲಕ ಹೊಸ ಚರಿತ್ರೆ ಬರೆದಿದ್ದಾರೆ ಎಂದರೆ ತಪ್ಪಾಗಲಾರದು. ಏಕೆಂದರೆ, ಈ ಸಂಗೀತ ಕಚೇರಿ ಬಹಿಷ್ಕಾರದ ಕರೆ ನೀಡಿದ್ದು, ಸ್ಥಳೀಯ ವಟುಗಳೇ ಆಗಿದ್ದರು. ಒಂದೊಮ್ಮೆ ಅವರ ಕರೆಗೆ ಬೆಂಬಲಿಸಿ, ಸಂಗೀತ ಪ್ರಿಯರು, ಕೃಷ್ಣ ಕಚೇರಿ ಬಹಿಷ್ಕರಿಸಿದ್ದರೆ, ಅವರ ಅಬ್ಬರ ಇನ್ನಷ್ಟು ಜಾಸ್ತಿಯಾಗುತ್ತಿತ್ತು. ಜೊತೆಗೆ, ಇಂತಹ ಮಡಿವಂತಿಕೆಯ ಆಲೋಚನಾ ಕ್ರಮದ ಜತೆಗೆ ತಾವಿಲ್ಲ ಎಂದು ಸ್ಥಳೀಯರು ಸಾರಿ ಹೇಳಿದ್ದಾರೆ. ಈಗ ಬೇಕಿರುವುದು ಈ ಪ್ರಜ್ಞೆಯನ್ನು ಬಳಸಿಕೊಂಡು, ಕೋಮುವಾದಿಗಳ ವಿರುದ್ಧದ ಯದ್ದವನ್ನು ಜಾರಿಯಲ್ಲಿಡುವುದು.

ದಕ್ಷಿಣ ಕನ್ನಡ-ಉಡುಪಿಯಲ್ಲಿ ಹಿಂದುತ್ವವಾದಿಗಳು ಪ್ರಬಲವಾಗಿದ್ದೇ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ಕಾಂಗ್ರೆಸ್ ತೊಡಗಿದೆ ಎಂಬ ಆರೋಪದೊಂದಿಗೆ. ಕಾಂಗ್ರೆಸ್ ಹೊರತಾರ ಜಾತ್ಯಾತೀತ ಧ್ವನಿಗಳಿಗೆ ಇಲ್ಲಿ ದೊಡ್ಡ ಮಟ್ಟದಲ್ಲಿ ಮನ್ನಣೆ ಇದೆ ಎಂಬುದು ಆಗ್ಗಾಗ್ಗೆ ಪ್ರಕಟವಾಗುತ್ತಲೇ ಇದೆ. ಕೃಷ್ಣ ವಿರುದ್ಧ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಿದರೂ ಅಂತಹ ಅಪಪ್ರಚಾರಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಅಂದರೆ ಕೋಮುವಾದಿಗಳ ವಾದ ಸರಣಿ ದೊಡ್ಡ ಪ್ರಮಾಣದ ಜನರಿಗೆ ಇಷ್ಟವಾಗಿಲ್ಲ ಎಂಬುದು ಖಚಿತವಾಗಿದೆ. ಇದನ್ನು ಬಳಸಿಕೊಂಡು, ಸಾಮರಸ್ಯದ ಸಮಾಜ ಸೃಷ್ಟಿಸುವ ಕೆಲಸ ನಡೆಯಬೇಕಿದೆ.

RS 500
RS 1500

SCAN HERE

Pratidhvani Youtube

«
Prev
1
/
5477
Next
»
loading
play
Kaveri | ಕಾವೇರಿ ಯಾರಿಗೆ ಸೇರಿದ್ದು..? ಯಾರ್ಯಾರ ರಾಜಕೀಯ ಏನು..? | HD Kumaraswamy | @PratidhvaniNews
play
Lakshmi Hebbalkar | ಆತ್ಮ ವಿಶ್ವಾಸದಿಂದ ಪಕ್ಷ ಸಂಘಟಿಸೋಣ | Congress Leader | @PratidhvaniNews
«
Prev
1
/
5477
Next
»
loading

don't miss it !

‘ನಿನ್ನ ಮಗಳಿಗೂ ಸೌಜನ್ಯಳಿಗಾದ ಗತಿಯೇ’ ಎಂದು ಬೆದರಿಕೆ ; ಮಹೇಶ್ ವಿಕ್ರಮ್ ಹೆಗಡೆ ವಿರುದ್ಧ ಎಫ್‌ಐಆರ್
Top Story

‘ನಿನ್ನ ಮಗಳಿಗೂ ಸೌಜನ್ಯಳಿಗಾದ ಗತಿಯೇ’ ಎಂದು ಬೆದರಿಕೆ ; ಮಹೇಶ್ ವಿಕ್ರಮ್ ಹೆಗಡೆ ವಿರುದ್ಧ ಎಫ್‌ಐಆರ್

by ಪ್ರತಿಧ್ವನಿ
September 18, 2023
ಮುದ್ರಾಂಕ ಇಲಾಖೆಯ ವೆಬ್‌ಸೈಟ್‌ಗೆ ಕನ್ನ – ಎಇಪಿಎಸ್ ಮೂಲಕ ಒಂದು ಲಕ್ಷ ರೂ. ವಂಚನೆ?
Top Story

ಮುದ್ರಾಂಕ ಇಲಾಖೆಯ ವೆಬ್‌ಸೈಟ್‌ಗೆ ಕನ್ನ – ಎಇಪಿಎಸ್ ಮೂಲಕ ಒಂದು ಲಕ್ಷ ರೂ. ವಂಚನೆ?

by ಪ್ರತಿಧ್ವನಿ
September 23, 2023
ವರುಣದಲ್ಲಿ ಸಿದ್ದರಾಮಯ್ಯ ಸೋಲೋದು ಕಟ್ಟಿಟ್ಟಬುತ್ತಿ ; ಈಶ್ವರಪ್ಪ
Top Story

ವರ್ಗಾವಣೆಗೆ ಸಿಎಂ ಹಾಗೂ ಅವರ ಮಗನಿಗೆ ದುಡ್ಡು ಕೊಡಬೇಕು : ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ

by ಲಿಖಿತ್‌ ರೈ
September 17, 2023
ಭಾರತಕ್ಕಾಗಿ ಕಪ್‌ ಗೆದ್ದ ಫುಟ್ಬಾಲ್‌ ಚಾಂಪಿಯನ್‌ ಗ್ರಾಮಕ್ಕೆ ಮರಳಿದಾಗ ತನ್ನ ಮನೆಯೇ ಇರಲಿಲ್ಲ..!!
Top Story

ಭಾರತಕ್ಕಾಗಿ ಕಪ್‌ ಗೆದ್ದ ಫುಟ್ಬಾಲ್‌ ಚಾಂಪಿಯನ್‌ ಗ್ರಾಮಕ್ಕೆ ಮರಳಿದಾಗ ತನ್ನ ಮನೆಯೇ ಇರಲಿಲ್ಲ..!!

by ಪ್ರತಿಧ್ವನಿ
September 17, 2023
ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳಿಂದ ರಾಜಕೀಯ ಆಯಾಮ: ಡಿ.ಕೆ. ಶಿವಕುಮಾರ್ ಆರೋಪ
Top Story

ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳಿಂದ ರಾಜಕೀಯ ಆಯಾಮ: ಡಿ.ಕೆ. ಶಿವಕುಮಾರ್ ಆರೋಪ

by ಪ್ರತಿಧ್ವನಿ
September 23, 2023
Next Post
ಸರ್ಕಾರಿ ಭೂಮಿಗೆ ಕನ್ನ ಹಾಕಿದ ಭ್ರಷ್ಟರ ವಿರುದ್ಧ ತನಿಖೆ ಆಗುವುದೇ?

ಸರ್ಕಾರಿ ಭೂಮಿಗೆ ಕನ್ನ ಹಾಕಿದ ಭ್ರಷ್ಟರ ವಿರುದ್ಧ ತನಿಖೆ ಆಗುವುದೇ?

ಸಾಂವಿಧಾನಿಕವಲ್ಲದ ಡಿಸಿಎಂ ಹುದ್ದೆಗೇಕಿಷ್ಟು ಹಪಾಹಪಿ?

ಸಾಂವಿಧಾನಿಕವಲ್ಲದ ಡಿಸಿಎಂ ಹುದ್ದೆಗೇಕಿಷ್ಟು ಹಪಾಹಪಿ?

ಶಾಂತಿ

ಶಾಂತಿ, ಸಾಮರಸ್ಯ ಹಾಳು; ಕುಸಿತದ ಹಾದಿ ಹಿಡಿದ ಆರ್ಥಿಕತೆಗೆ ಹೊಣೆ ಯಾರು?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist