• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಈಕೆ ಕಲಿಯುಗದ ಶ್ರವಣ ʻಕುಮಾರಿʼ : ಸೈಕಲ್‌ ತುಳಿದು ತಂದೆಯನ್ನು ಊರು ಸೇರಿಸಿದ 15 ವರ್ಷದ ಬಾಲಕಿ.!

by
May 21, 2020
in ದೇಶ
0
ಈಕೆ ಕಲಿಯುಗದ ಶ್ರವಣ ʻಕುಮಾರಿʼ : ಸೈಕಲ್‌ ತುಳಿದು ತಂದೆಯನ್ನು ಊರು ಸೇರಿಸಿದ 15 ವರ್ಷದ ಬಾಲಕಿ.!
Share on WhatsAppShare on FacebookShare on Telegram

ರಾಮಾಯಣ ಐತಿಹ್ಯದಲ್ಲಿ ಬರುವ ಶ್ರವಣ ಕುಮಾರನ ಸಾಹಸ ಕಥನ ನಿಮಗೂ ನೆನಪಿರಬಹುದು. ಶ್ರವಣ ಕುಮಾರ ತನ್ನ ಹೆಗಲು ಹೊರುವಂತ ಬುಟ್ಟಿಯೊಂದರಲ್ಲಿ ತನ್ನ ಪೋಷಕರನ್ನು ಹೊತ್ತು ತೀರ್ಥಯಾತ್ರೆಗೆ ಹೊರಡುವ ಕಥೆಯದು. ಅದು ಶ್ರವಣಕುಮಾರನ ಹೆತ್ತವರ ಕೊನೆಯ ಆಸೆಯೂ ಆಗಿತ್ತು. ಅಂಧ ಪೋಷಕರ ನೆನೆದು ಶ್ರವಣ ಕುಮಾರ ಅಂದು ಹೆಗಲ ಮೇಲೆಯೇ ಹೊತ್ತುಕಕೊಂಡು ತೀರ್ಥಯಾತ್ರೆ ನಡೆಸಿದನು. ಈಗ ಈ ಪುರಾಣವನ್ನು ನೆನಪಿಸುವಂತೆ ಮಾಡಿದ್ದು 15 ವರ್ಷದ ಈ ಬಾಲಕಿ. ಅಕೆಯ ಹೆಸರು ಜ್ಯೋತಿ ಕುಮಾರಿ.

ADVERTISEMENT

ಆಕೆಯ ಊರು ಬಿಹಾರದ ದರ್ಭಂಗ. ಆದರೆ ಹರಿಯಾಣದ ಗುರ್‌ಗಾಂವ್‌ನಲ್ಲಿ ತಂದೆಯ ಜೊತೆ ವಾಸವಿದ್ದಳು. ಇದ್ದಕ್ಕಿದ್ದ ಹಾಗೆ ಹೇರಲಾದ ಲಾಕ್‌ ಡೌನ್‌ ನಿಂದಾಗಿ ಕುಮಾರಿ ಮತ್ತು ಆಕೆಯ ತಂದೆ ಮೋಹನ್ ಪಾಸ್ವಾನ್‌ ಊರು ಸೇರಲಾಗದೆ ಕಂಗೆಟ್ಟಿದ್ದರು. ಅದು ಬೇರೆ ಕುಮಾರಿಯ ತಂದೆ ಇತ್ತೀಚೆಗಷ್ಟೇ ಅಪಘಾತವೊಂದಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಗುರ್‌ಗಾಂವ್‌ನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ತಾಯಿ ಕುಟುಂಬದ ಜೊತೆ ಇತ್ತ ಬಿಹಾರದಲ್ಲೇ ಇರುತ್ತಿದ್ದರು. ಜ್ಯೋತಿ ಕುಮಾರಿ ತಂದೆಯ ಜೊತೆ ನಿಂತೇ ಓದು ಮತ್ತು ತಂದೆಯನ್ನು ನೋಡಿಕೊಳ್ಳುತ್ತಿದ್ದಳು.

ಅಲ್ಲೇ ಪಕ್ಕದಲ್ಲಿದ್ದವರೊಬ್ಬರ ಬಳಿಯಿಂದ ಆಟೋವನ್ನು ಗುತ್ತಿಗೆ ಪಡೆದು ಜೀವನದ ಗಾಲಿ ಉರುಳಿಸುತ್ತಿದ್ದರು. ಅಪಘಾತ ಬದುಕಿಗೆ ಬಿದ್ದ ಬಹುದೊಡ್ಡ ಬರೆಯಾಗಿತ್ತು. ನಡೆಯುವ ತಾಕತ್ತು ಕುಮಾರಿಯ ತಂದೆ ಕಳೆದುಕೊಂಡರು. ಅದಾಗಲೇ ಕರೋನಾ ವೈರಸ್‌ ಕೂಡ ವಕ್ಕರಿಸಿತು. ಪರಿಣಾಮ ಇಡೀ ದೇಶ ಲಾಕ್‌ಡೌನ್‌ ಆಯತು.

Also Read: ಮರದ ಕೆಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ.!

ಹೀಗಾಗಿ ಊರಿಗೆ ತೆರಳಲಾಗದೆ ಮನೆಯಲ್ಲೇ ಕುಮಾರಿ ಮತ್ತು ತಂದೆ ಪಾಸ್ವಾನ್‌ ಉಳಿಯುವಂತಾಯ್ತು. ಆದ್ರೆ ಬಡತನ ಕಾರಣದಿಂದ ಆಟೋ ಮಾಲೀಕನಿಗೆ ಕೆಲ ದಿನದ ಬಾಡಿಗೆಯ ಒಂದು ಪಾಲನ್ನು ಬಾಕಿ ಉಳಿಸಿಕೊಂಡಿದ್ದರು ಪಸ್ವಾನ್.‌ ಲಾಕ್‌ಡೌನ್‌ ಆಗಿದ್ದರೂ ಕೂಡ ಹಣಕ್ಕಾಗಿ ಆಟೋ ಮಾಲೀಕ ಪ್ರತಿದಿನ ಪೀಡಿಸುತ್ತಿದ್ದ. ಒಂದು ಕಡೆ ಬಡತನ, ಮತ್ತೊಂದು ಕಡೆ ಅನಾರೋಗ್ಯ. ಮತ್ತು ಲಾಕ್‌ಡೌನ್. ಇಷ್ಟೂ ಸಾಲಲ್ಲಾಂತ ಹಣಕ್ಕಾಗಿ ಪೀಡುಸುತ್ತಿದ್ದ ಆಟೋ ಮಾಲೀಕ. ವಾಸ್ತವದಲ್ಲಿ ಕುಮಾರಿ ಹಾಗೂ ತಂದೆ ಮೋಹನ್‌ ಪಸ್ವಾನ್‌ ಹೈರಾಣಾಗಿ ಹೋಗಿದ್ದರು.

ಹೀಗಿರುವಾಗ ಜ್ಯೋತಿ ಕುಮಾರಿ ಊರಿಗೆ ಹೊರಡುವ ವಿಷಯ ತಂದೆಯ ಮುಂದೆ ಪ್ರಸ್ತಾಪ ಮಾಡಿದಳು. ತಂದೆಗೂ ಅದೇ ಆಸೆ. ಆದರೆ ಅತ್ತ ಸಾರಿಗೆ ವ್ಯವಸ್ಥೆಯೂ ಇಲ್ಲ. ಇತ್ತ ನಡೆಯಲೂ ಸಾಧ್ಯವಿಲ್ಲ ಎಂಬ ಚಿಂತೆಗೆ ಬಿದ್ದರು. ಈ ವೇಳೆ ಜ್ಯೋತಿ ಕುಮಾರಿ ಸೈಕಲ್‌ ಮೇಲೆ ಕೂರಿಸಿ ತಂದೆಯನ್ನು ಊರಿಗೆ ಕರೆದೊಯ್ಯುವ ಮಾತನ್ನಾಡಿದಳು. ಇದು ಕಷ್ಟಸಾಧ್ಯ ಎಂಬುವುದು ಆಕೆಗೂ ಗೊತ್ತಿತ್ತು. ಆದರೆ ಬದುಕಿನ ಅನಿವಾರ್ಯತೆ ಮೋಹನ್‌ ಪಾಸ್ವಾನ್‌ರನ್ನು ಮಗಳ ಮಾತಿಗೆ ಬಾಗುವಂತೆ ಮಾಡಿತು. ತಮ್ಮ ಬಳಿ ಇದ್ದ ಅಲ್ಪ ಸ್ವಲ್ಪ ಹಣಕೊಟ್ಟು ಅಲ್ಲೇ ಪಕ್ಕದಲ್ಲೇ ಇದ್ದ ಸೈಕಲ್‌ ವೊಂದನ್ನು ಖರೀದಿಸಿ ಊರಿಗೇ ಹೊರಟೇ ಬಿಟ್ಟರು ಇಬ್ಬರು.

ಅದು 1,200 ಕಿ.ಮೀ ದೂರದ ಪ್ರಯಾಣ. ಮಗಳಿಗೆ ದೂರದ ಲೆಕ್ಕವೇ ಇರಲಿಲ್ಲ. ಸೈಕಲ್‌ ಹಿಂಬದಿ ಸೀಟಿನಲ್ಲಿ ತಂದೆಯನ್ನು ಕೂರಿಸಿ 15 ವರ್ಷದ ಬಾಲಕಿ ಜ್ಯೋತಿ ಕುಮಾರಿ ನಡು ನೆತ್ತಿ ಸೀಳುವಂತ ಬಿಸಿಲಿನಲ್ಲಿ ಪೆಡಲ್‌ ತುಳಿಯುತ್ತಾ ಸಾಗಿದಳು. ಹಿಂದೆ ಮಗಳ ಸೊಂಟವನ್ನು ಗಟ್ಟಿ ಹಿಡಿದು ಕೂತಿದ್ದ ತಂದೆ ಮೋಹನ್‌ ಪಾಸ್ವಾನ್‌ ಕಣ್ಣಲಿ ನೀರು ಜಿನುಗಿತ್ತು. ಸುಸ್ತಾದರೆ ದಾರಿ ಮಧ್ಯೆ ಕಾಣುವ ಮರದ ಕೆಳಗೆ ವಿಶ್ರಾಂತಿ. ದಾರಿ ಹೋಕರು ಕೊಡುವ ಆಹಾರ ಮತ್ತು ಅಲ್ಪಸ್ವಲ್ಪ ದೂರ ಯಾವುದಾದರು ಟ್ರಕ್‌ಗಳು ಹತ್ತಿಸಿಕೊಂಡು ಲಿಫ್ಟ್‌ ಕೊಟ್ಟರೆ ಅದೂ ಕೂಡ. ಹೀಗೆ 1,200 ಕೀ.ಮೀ ದೂರ ಸಾಗಿತು ಆ ಎಳಸು ಜೀವ.

Also Read: ಮತ್ತೆ ಕಣ್ಣೀರಾದ ಪ್ರಭುತ್ವ: ಮುಸ್ಲಿಂ ಗೆಳೆಯನ ಮಡಿಲಲ್ಲಿ ಅಸುನೀಗಿದ ಹಿಂದೂ ಯುವಕ.!

ದಿನಕ್ಕೆ 30ರಿಂದ 40 ಕೀ.ಮೀ ದೂರ ಸೈಕಲ್‌ ತುಳಿದು ಸಾಗುವುದರ ಜೊತೆಗೆ ಟ್ರಕ್‌ ಚಾಲಕರು ಯಾರಾದರು ಲಿಫ್ಟ್‌ ಕೊಟ್ಟರೆ ಅದು ಸೇರಿ 100 ಕ್ಕೂ ಹೆಚ್ಚು ಕೀ.ಮೀ ದೂರ ಇವರ ಪ್ರಯಾಣ ಸಾಗುತ್ತಿತ್ತು. ಕೊನೆಗೆ ಹತ್ತು ದಿನಗಳ ಬಳಿಕ ಊರು ಕಣ್ಣೆದುರಿಗೆ ಬಂದು ನಿಂತಿತು. ಆ ಕ್ಷಣ ಬದುಕು ಗೆದ್ದು ಬಂದ ಖುಷಿ ಅವರಲ್ಲಿತು. ಬಿಹಾರದ ದರ್ಭಂಗದ ತಮ್ಮ ಸೂರು ಸೇರಿದ ಬಳಿಕ ಇಬ್ಬರು ಕೂಡ ಸಮೀಪದ ಆಸ್ಪತ್ರೆಗೆ ಹಾಜರಾಗಿದ್ದಾರೆ. ಅಲ್ಲದೆ ಇಬ್ಬರು ಕೂಡ ಸದ್ಯಕ್ಕೆ ಕ್ವಾರಂಟೈನ್‌ನಲ್ಲಿದ್ದಾರೆ. ಇವರ ಈ ಸಾಹಸಮಯ ಯಾತ್ರೆ ಈಗ ಬಿಹಾರದ ಉದ್ದಗಲಕ್ಕೂ ಸುದ್ದಿಯಾಗಿದೆ. ಅಲ್ಲದೆ ಊರು ಸೇರಿದ ಕೂಡಲೇ ಆಸ್ಪತ್ರೆಯ ಮೆಟ್ಟಿಲೇರಿದ ಇವರ ಪ್ರಜ್ಞೆಯನ್ನು ಜನರು ಶ್ಲಾಘಿಸಿದ್ದಾರೆ.

ಹೀಗೆ ಜ್ಯೋತಿ ಕುಮಾರಿ 1,200 ಕೀ.ಮೀ ದೂರ ಶ್ರವಣಕುಮಾರನಂತೆ ತನ್ನ ತಂದೆಯನ್ನು ಹೊತ್ತುಕೊಂಡು ಪ್ರಯಾಣ ಬೆಳೆಸಿದ್ದಾಳೆ. ಈಕೆಗೆ ಕೇವಲ 15 ವರ್ಷ ವಯಸ್ಸು ಅನ್ನೋದನ್ನ ಮಾತ್ರ ಮರೆಯದಿರಿ. ಈ ದೇಶದ ಆಡಳಿತ ವ್ಯವಸ್ಥೆ ಜನರ ಪಾಲಿಗೆ ಪರಿತ್ಯಾಗಿಯಾಗುತ್ತಿರುವುದು ದೇಶ ಮುಂದೆ ಸಾಗಬಹುದಾಗ ಹಾದಿಯನ್ನು ನಿಚ್ಚಳಗೊಳಿಸುತ್ತಿದೆ. ವಲಸೆ ಕಾರ್ಮಿಕರ ಈ ಪಾಡು ನೋಡಿಯೂ ಸರ್ಕಾರದ ಕಣ್ಣು ತೆರೆಯದೆ ಇರುವುದಕ್ಕೆ ಹೇಳುವುದಾದರು ಏನು.?

Tags: 115year200kmBihartoHariyanacovid19CycleJourneyGirlLockdownmigrantworkers
Previous Post

ಕರೋನಾ ಮಧ್ಯೆಯೂ ಸದಾ ನೆನಪಾಗಿ ಉಳಿದಿರುವ ದಾದಿಯರ ಪಾಲಿನ ಆರಾಧಕಿ ʼಲಿನಿʼ!

Next Post

ಸೋನಿಯಾ ಗಾಂಧಿ ಮೇಲೆ ಪ್ರಕರಣ ದಾಖಲಿಸಿದ ಅಧಿಕಾರಿ ಅಮಾನತಿಗೆ ಡಿಕೆಶಿ ಆಗ್ರಹ

Related Posts

Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
0

ಬಿಹಾರ ಚುನಾವಣೆ ಪ್ರಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಬಿಹಾರ ಚುನಾವಣಾ ಪ್ರಚಾರಕ್ಕೆ ಕರೆ ಬಂದರೆ ಅಗತ್ಯವಾಗಿ ತೆರಳುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಜಯ...

Read moreDetails

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

November 3, 2025

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

November 3, 2025
Next Post
ಸೋನಿಯಾ ಗಾಂಧಿ ಮೇಲೆ ಪ್ರಕರಣ ದಾಖಲಿಸಿದ ಅಧಿಕಾರಿ ಅಮಾನತಿಗೆ ಡಿಕೆಶಿ ಆಗ್ರಹ

ಸೋನಿಯಾ ಗಾಂಧಿ ಮೇಲೆ ಪ್ರಕರಣ ದಾಖಲಿಸಿದ ಅಧಿಕಾರಿ ಅಮಾನತಿಗೆ ಡಿಕೆಶಿ ಆಗ್ರಹ

Please login to join discussion

Recent News

Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
ಬಿಹಾರ ವಿಧಾನಸಭೆ ಚುನಾವಣೆ: ತೇಜಸ್ವಿ ಯಾದವ್ ಗೆಲುವಿಗೆ ದಾರಿ ಮಾಡಿಕೊಡುತ್ತಾ ಎನ್‌ಡಿಎ..?
Top Story

ಬಿಹಾರ ವಿಧಾನಸಭೆ ಚುನಾವಣೆ: ತೇಜಸ್ವಿ ಯಾದವ್ ಗೆಲುವಿಗೆ ದಾರಿ ಮಾಡಿಕೊಡುತ್ತಾ ಎನ್‌ಡಿಎ..?

by ಪ್ರತಿಧ್ವನಿ
November 3, 2025
ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ
Top Story

ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿ

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada