Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಆರ್ಥಿಕ ಹಿಂಜರಿತಕ್ಕೆ ಹೊಳಪು ಕಳೆದುಕೊಂಡ ಗುಜರಾತ್ ವಜ್ರ!

ಆರ್ಥಿಕ ಹಿಂಜರಿತಕ್ಕೆ ಹೊಳಪು ಕಳೆದುಕೊಂಡ ಗುಜರಾತ್ ವಜ್ರ!
ಆರ್ಥಿಕ ಹಿಂಜರಿತಕ್ಕೆ ಹೊಳಪು ಕಳೆದುಕೊಂಡ ಗುಜರಾತ್  ವಜ್ರ!
Pratidhvani Dhvani

Pratidhvani Dhvani

November 27, 2019
Share on FacebookShare on Twitter

ವಿಶ್ವದ ವಜ್ರ ಹೊಳಪುಗೊಳಿಸುವ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ಗುಜರಾತ್ ನ ವಜ್ರ ಉದ್ಯಮಕ್ಕೆ ಆರ್ಥಿಕ ಹಿಂಜರಿತದ ಸಂಕಷ್ಟ ನಿಧಾನಕ್ಕೆ ಬಿಗಿಯಾಗುತ್ತಿದೆ. ಸೂರತ್ ನಲ್ಲಿ ಕೇಂದ್ರೀಕೃತವಾಗಿರುವ ಈ ಉದ್ಯಮ ಕಳೆದ ಮೂರು ವರ್ಷಗಳಿಂದಲೂ ಹಿಂಜರಿತವನ್ನು ಎದುರಿಸುತಿದ್ದು ಕಳೆದ ಮೂರು ತಿಂಗಳ ಅವಧಿಯಲ್ಲಿ 18 ಕ್ಕೂ ಹೆಚ್ಚು ವಜ್ರ ಕೆಲಸಗಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

ಹೆಚ್ಚು ಓದಿದ ಸ್ಟೋರಿಗಳು

ಗುಜರಾತ್ ಗೆಲ್ಲಲು ಪಂಚ ಸೂತ್ರಗಳ ಮೊರೆ ಹೋದ ಕಾಂಗ್ರೆಸ್

ವಾಯುಪಡೆ ಯುದ್ಧ ವಿಮಾನ ಹಾರಿಸಿದ ಅಪ್ಪ-ಮಗಳು: ಫೋಟೊ ವೈರಲ್!

ವಿಂಡ್‌ಶೀಲ್ಡ್‌ನಲ್ಲಿ ಬಿರುಕು ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್ ಜೆಟ್ ವಿಮಾನ

ವಜ್ರೋದ್ಯಮವು ಗುಜರಾತ್ ನ ಸೂರತ್ ನಗರದಲ್ಲಿ ಹೆಚ್ಚು ಕೇಂದ್ರೀಕೃತವಾಗಿದ್ದು ಈ ನಗರವೊಂದರಲ್ಲೇ ಸುಮಾರು 6 ಲಕ್ಷ ಜನ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯಮದೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ನಗರದಲ್ಲೇ 3500 ಸಣ್ಣ , ಮಧ್ಯಮ ಮತ್ತು ದೊಡ್ಡ ವಜ್ರ ಹೊಳಪುಗೊಳಿಸುವ ಕಾರ್ಖಾನೆಗಳಿದ್ದರೆ ಇಡೀ ಗುಜರಾತ್ ನಲ್ಲಿ ಒಟ್ಟು 15 ಸಾವಿರಕ್ಕೂ ಮಿಕ್ಕಿ ಕಾರ್ಖಾನೆಗಳಿದ್ದು 7 ಲಕ್ಷಕ್ಕೂ ಮಿಕ್ಕಿ ಜನರು ಇದರ ಅವಲಂಬಿತರಾಗಿದ್ದಾರೆ.

ಜಾಗತಿಕ ಆರ್ಥಿಕ ಹಿಂಜರಿತ, ಜಿಎಸ್ಟಿ ಜಾರಿ ಮತ್ತು ಬಹು ಮುಖ್ಯವಾಗಿ ನೋಟು ಅಮಾನ್ಯೀಕರಣದ ಪರಿಣಾಮದಿಂದಾಗಿ 60 ಸಾವಿರ ವಜ್ರ ಕಾರ್ಮಿಕರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಸೂರತ್ ನಗರವೊಂದರಲ್ಲೇ 13 ಸಾವಿರ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. 2017 ರ ದೀಪಾವಳಿ ಹಬ್ಬದ ನಂತರ ನೂರಾರು ವಜ್ರ ಕೈಗಾರಿಕೆಗಳು ಉತ್ಪಾದನೆಯನ್ನು ನಿಲ್ಲಿಸಿವೆ. ದೀಪಾವಳಿ ರಜೆಯ ನಂತರ ಹಣಕಾಸಿನ ಮುಗ್ಗಟ್ಟಿನ ಕಾರಣದಿಂದಾಗಿ ಶೇಕಡಾ 30 ರಷ್ಟು ಕಾರ್ಖಾನೆಗಳು ಪುನಃ ಬಾಗಿಲು ತೆರೆಯಲೇ ಇಲ್ಲ.

ಗುಜರಾತ್ ವಜ್ರ ಕಾರ್ಮಿಕರ ಸಂಘದ ಪ್ರಕಾರ 2018 ರ ವರ್ಷವೊಂದರಲ್ಲೇ ಸುಮಾರು 7 ಕಾರ್ಮಿಕರು ಉದ್ಯೋಗ ನಷ್ಟದ ಕಾರಣದಿಂದಾಗಿ ಅತ್ಮಹತ್ಯೆ ಮಾಡಿಕೊಂಡಿದ್ದು ಈ ವರ್ಷ ಈ ಸಂಖ್ಯೆ 10 ಕ್ಕಿಂತ ಹೆಚ್ಚಗಿದೆ. ಆರ್ಥಿಕ ಹಿಂಜರಿತದಿಂದಾಗಿ ಉದ್ಯಮ ಅತ್ಯಂತ ಕಠಿಣ ಸನ್ನಿವೇಶವನ್ನು ಎದುರಿಸುತ್ತಿದೆ. ಈ ನಡುವೆ ಗೀತಾಂಜಲಿ ಜೆಮ್ಸ್ ಕಂಪೆನಿಯ ಪ್ರವರ್ತಕನಾಗಿದ್ದ ವಂಚಕ ನೀರವ್ ಮೋದಿ , ಮೇಹುಲ್ ಚೋಕ್ಸಿ ಮತ್ತು ಜತಿನ್ ಮೆಹ್ತ ಅವರು ಬ್ಯಾಂಕ್ ಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ದೇಶ ಬಿಟ್ಟು ಓಡಿ ಹೋದ ನಂತರ ಬ್ಯಾಂಕುಗಳೂ ಉದ್ಯಮಿಗಳಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ.

ಮೊದಲೆಲ್ಲ ವಜ್ರ ಕಾರ್ಖಾನೆಗಳು ದಿನಕ್ಕೆ ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುತಿದ್ದವು ಜತೆಗೇ ಭರಪೂರ ಕೆಲಸ ಇರುತಿತ್ತು. ಈಗ ಕಾರ್ಖಾನೆಗಳು ಒಂದೇ ಶಿಫ್ಟ್ ಜಾರಿಗೊಳಿಸಿವೆ. ನೂರಾರು ಕಾರ್ಖಾನೆಗಳು ಕೆಲಸದ ಅವಧಿಯನ್ನೇ ಕಡಿತಗೊಳಿಸಿವೆ. ಈಗ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಕಾರ್ಮಿಕನೂ ಆತಂಕದಿಂದಲೇ ದಿನ ದೂಡುವಂತಾಗಿದೆ. ಏಕೆಂದರೆ ಯಾವುದೇ ಕ್ಷಣದಲ್ಲಿ ಕಾರ್ಖಾನೆಯು ಅವರನ್ನು ವಜಾಗೊಳಿಸಬಹುದು ಅಥವಾ ಕೆಲಸದ ಅವಧಿಯನ್ನೇ ಕಡಿತಗೊಳಿಸಬಹುದು. ಪ್ರಸ್ತುತ ಸಾಮಾನ್ಯ ವಜ್ರ ಕಾರ್ಮಿಕನೊಬ್ಬ ದಿನವೊಂದಕ್ಕೆ ಸುಮಾರು 600 ರೂಪಾಯಿಗಳ ಕೂಲಿ ಪಡೆಯುತಿದ್ದು ತಿಂಗಳಿಗೆ 18 ಸಾವಿರದಷ್ಟಾಗುತ್ತಿದೆ. ದಿಢೀರನೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸುವ ಕಾರ್ಖಾನೆಗಳ ಮಾಲೀಕರು ಅವರಿಗೆ ಕನಿಷ್ಟ ಪಕ್ಷ ತಿಂಗಳ ಸಂಬಳದ ಪರಿಹಾರವನ್ನೂ ನೀಡುತ್ತಿಲ್ಲ. ಕೊನೆಗೆ ಕಾರ್ಮಿಕ ಸಂಘಟನೆಗಳು ಮತ್ತು ಉದ್ಯಮಿಗಳ ಸಂಘಟನೆಯ ಮಾತುಕತೆಯ ನಂತರ ಇದೀಗ ಕೆಲಸದಿಂದ ತೆಗೆಯುವ ಕಾರ್ಮಿಕರಿಗೆ ಎರಡು ತಿಂಗಳ ಸಂಬಳವನ್ನು ಪರಿಹಾರವಾಗಿ ನೀಡಲಾಗುತ್ತಿದೆ. .

ಮೊದಲೆಲ್ಲ ದೀಪಾವಳಿ ಹಬ್ಬ ಬಂತೆಂದಂರೆ ಕಾರ್ಮಿಕರಲ್ಲಿ ಸಂಭ್ರಮ ಮನೆ ಮಾಡಿರುತಿತ್ತು ಏಕೆಂದರೆ ಹಬ್ಬಕ್ಕೆ 2 ವಾರಗಳ ರಜೆ ಸಿಗುತಿತ್ತು ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಖಾನೆಗಳು ಕೆಲಸಗಾರರಿಗೆ ಒಂದು ಅಥವಾ ಎರಡು ತಿಂಗಳ ಸಂಬಳವನ್ನು ಬೋನಸ್ ಆಗಿ ನೀಡುವ ಪರಿಪಾಠ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಯಾವ ಕಾರ್ಖಾನೆಯೂ ಕಾರ್ಮಿಕರಿಗೆ ಬೋನಸ್ ನೀಡಿಲ್ಲ. ವಜ್ರದ ಬೇಡಿಕೆ ಕುಸಿದಿರುವುದೇ ಇದಕ್ಕೆ ಕಾರಣ.

ವಜ್ರ ಪಾಲಿಷ್ ಮಾಡುವ ಉದ್ಯಮವು ಕೇಂದ್ರ ಸರ್ಕಾರದಿಂದ ಸಂಪೂರ್ಣ ಜಿಎಸ್ಟಿ ತೆರಿಗೆ ರದ್ದು ಮಾಡಿ ಉದ್ಯಮದ ಬೆಳವಣಿಗೆಗೆ ಸಹಕರಿಸಬೇಕೆಂದು ಒತ್ತಾಯಿಸುತ್ತಿದೆ . ಆದರೆ ಸರ್ಕಾರ ಕಚ್ಚಾ ವಜ್ರಗಳಿಗೆ ಶೇಕಡಾ 0.25 ರಷ್ಟು ಮತ್ತು ಪಾಲಿಷ್ ಮಾಡಿದ ವಜ್ರಗಳಿಗೆ ಶೇಕಡಾ 3 ರಷ್ಟು ತೆರಿಗೆ ವಿಧಿಸುತ್ತಿದೆ. ಕಚ್ಚಾ ವಜ್ರಗಳನ್ನು ವಾಣಿಜ್ಯ ನಗರಿ ಮುಂಬೈನಿಂದ ಕೊರಿಯರ್ ಮೂಲಕ ಸೂರತ್ ಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಪಾಲಿಷ್ ಮಾಡಿ ಪುನಃ ಮುಂಬೈಗೆ ಕೊರಿಯರ್ ಮೂಲಕ ಕಳಿಸಲಾಗುತ್ತಿದೆ. ಆದರೆ ತೆರಿಗೆಯ ಬಿಸಿ ತಪ್ಪಿಸಿಕೊಳ್ಳಲು ಅಕ್ರಮವಾಗಿ ವಜ್ರಗಳನ್ನು ಸಾಗಿಸುವ ಪ್ರಕರಣಗಳೂ ಹೆಚ್ಚಾಗಿವೆ.

“ವಜ್ರ ಉದ್ಯಮವು ತುಂಬಾ ಕೆಟ್ಟ ಸ್ಥಿತಿಯಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2019 ರ ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ರಫ್ತು 12% ನಷ್ಟು ಕುಸಿತವನ್ನು ನಾವು ದಾಖಲಿಸಿದ್ದೇವೆ. ಕೆಲವು ವಿಷಯಗಳನ್ನು ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಕ್ಕಟ್ಟು ಉಲ್ಪಣಗೊಳ್ಳಲಿದೆ ಎಂದು ಉದ್ಯಮಿಗಳ ಅಭಿಪ್ರಾಯವಾಗಿದೆ.

ಭಾರತವು ವಜ್ರ ಮತ್ತು ಅಭರಣ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದ್ದು ಈ ರಂಗವು ದೇಶದ ಜಿಡಿಪಿಯಲ್ಲಿ ಶೇಕಡಾ ೭ ರಷ್ಟು ಪಾಲನ್ನು ಹೊಂದಿದೆ. ದೇಶದ ಒಟ್ಟು ರಫ್ತಿನಲ್ಲಿ ಇದರ ಪಾಲು ಶೇಕಡಾ 15 ರಷ್ಟಿದೆ. ವಿಶ್ವದ ವಜ್ರ ಮಾರುಕಟ್ಟೆಯಲ್ಲಿ ಸಿಂಹ ಪಾಲನ್ನು ಭಾರತ ಹೊಂದಿದ್ದು ಕೌಶಲ್ಯವುಳ್ಳ ಲಕ್ಷಾಂತರ ಕಾರ್ಮಿಕರು ಇಲ್ಲಿ ದುಡಿಯುತಿದ್ದಾರೆ. ವಿಶ್ವದಲ್ಲಿ ಮಾರಾಟವಾಗುವ ಶೇಕಡಾ ೭೫ ರಷ್ಟು ವಜ್ರಗಳು ಭಾರತದಲ್ಲೇ ಸಂಸ್ಕರಣಗೊಂಡಿರುತ್ತವೆ ಇದು ದೇಶದ ಹೆಗ್ಗಳಿಕೆ. ದಿನೇ ದಿನೇ ಹಿಗ್ಗುತ್ತಿರುವ ಈ ರಂಗದಲ್ಲಿ ಸರ್ಕಾರ ಶೇಕಡಾ ನೂರರಷ್ಟು ವಿದೇಶೀ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿ ಕೊಟ್ಟಿದೆ.

ಆರ್ಥಿಕ ಹಿಂಜರಿತ ಇರದಿದ್ದರೆ ದೇಶದ ವಜ್ರ ಸಂಸ್ಕರಣಾ ಉದ್ಯಮವು 2022 ರ ವೇಳೆಗೆ 12 ಲಕ್ಷ ಕಾರ್ಮಿಕರಿಗೆ ಉದ್ಯೋಗ ನೀಡಲಿರುವದಾಗಿ ಉದ್ಯಮ ಮೂಲಗಳು ತಿಳಿಸಿವೆ. ಆದರೆ ಹಿಂಜರಿತದಿಂದಾಗಿ ಉದ್ಯೋಗ ಹೆಚ್ಚಳಗೊಳ್ಳುವುದು ಕನಸಿನ ಮಾತಾಗಿದ್ದು ಇರುವ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗದಂತೆ ತಡೆಯಲು ಕೇಂದ್ರ ಸರ್ಕಾರ ಕೂಡಲೇ ಉತ್ತೇಜಕ ಕ್ರಮಗಳನ್ನು ಪ್ರಕಟಿಸಬೇಕಿದೆ. ಇಲ್ಲದಿದ್ದರೆ ರೈತರ ಆತ್ಮಹತ್ಯೆಗಳಂತೆ ಇದೂ ಕೂಡ ಮುಂದುವರೆಯುವುದು ಖಚಿತವಾಗಿದೆ.

RS 500
RS 1500

SCAN HERE

don't miss it !

ಕೋವಿಡ್ ಹೆಚ್ಚಳ : TAC ನಿಂದ ಮಾಸ್ಕ್ ಕಡ್ಡಾಯಕ್ಕೆ ಸೂಚನೆ : ಆರೋಗ್ಯ ಇಲಾಖೆ ದಂಡ ಪ್ರಯೋಗಕ್ಕೆ‌ ಚಿಂತನೆ !
ಕರ್ನಾಟಕ

ಕೋವಿಡ್ ಹೆಚ್ಚಳ : TAC ನಿಂದ ಮಾಸ್ಕ್ ಕಡ್ಡಾಯಕ್ಕೆ ಸೂಚನೆ : ಆರೋಗ್ಯ ಇಲಾಖೆ ದಂಡ ಪ್ರಯೋಗಕ್ಕೆ‌ ಚಿಂತನೆ !

by ಕರ್ಣ
June 29, 2022
ಎಸಿಬಿ ಟ್ರ್ಯಾಪ್ ಕಾರ್ಯಾಚರಣೆ: ಬೆಂಗಳೂರಿನ ಉಪ ತಹಶೀಲ್ದಾರ್/ ಮ್ಯಾನೇಜರ್ ಬಲೆಗೆ!
ಕರ್ನಾಟಕ

ಎಸಿಬಿ ಟ್ರ್ಯಾಪ್ ಕಾರ್ಯಾಚರಣೆ: ಬೆಂಗಳೂರಿನ ಉಪ ತಹಶೀಲ್ದಾರ್/ ಮ್ಯಾನೇಜರ್ ಬಲೆಗೆ!

by ಪ್ರತಿಧ್ವನಿ
July 5, 2022
ಸಿಎಂ ಬೊಮ್ಮಾಯಿಯವರ ಮೇಲೆ ಭರವಸೆ ಇಟ್ಟು ಹೋರಾಟ ಮುಂದೂಡಲಾಗಿದೆ: ಮೃತ್ಯುಂಜಯ ಸ್ವಾಮೀಜಿ
ಕರ್ನಾಟಕ

ಸಿಎಂ ಬೊಮ್ಮಾಯಿಯವರ ಮೇಲೆ ಭರವಸೆ ಇಟ್ಟು ಹೋರಾಟ ಮುಂದೂಡಲಾಗಿದೆ: ಮೃತ್ಯುಂಜಯ ಸ್ವಾಮೀಜಿ

by ಪ್ರತಿಧ್ವನಿ
June 30, 2022
ಭಾರತ- ಇಂಗ್ಲೆಂಡ್‌ ಟೆಸ್ಟ್‌ ಗೆ ಮಳೆ ಅಡ್ಡಿ: ಭಾರತಕ್ಕೆ ಆರಂಭಿಕ ಆಘಾತ
ಕ್ರೀಡೆ

ಭಾರತ- ಇಂಗ್ಲೆಂಡ್‌ ಟೆಸ್ಟ್‌ ಗೆ ಮಳೆ ಅಡ್ಡಿ: ಭಾರತಕ್ಕೆ ಆರಂಭಿಕ ಆಘಾತ

by ಪ್ರತಿಧ್ವನಿ
July 1, 2022
ನಾಳೆಯಿಂದ ಬೆಂಗಳೂರಿನಲ್ಲಿ JDS ಜನತಾಮಿತ್ರ : 17 ದಿನ ರಾಜಧಾನಿಯಲ್ಲಿ ಜನ ಸಂಪರ್ಕ ಕಾರ್ಯಕ್ರಮ!
ಕರ್ನಾಟಕ

ನಾಳೆಯಿಂದ ಬೆಂಗಳೂರಿನಲ್ಲಿ JDS ಜನತಾಮಿತ್ರ : 17 ದಿನ ರಾಜಧಾನಿಯಲ್ಲಿ ಜನ ಸಂಪರ್ಕ ಕಾರ್ಯಕ್ರಮ!

by ಪ್ರತಿಧ್ವನಿ
June 30, 2022
Next Post
ಹಳೆಯ ಧಾರವಾಡದ ರೈಲು ನಿಲ್ದಾಣ

ಹಳೆಯ ಧಾರವಾಡದ ರೈಲು ನಿಲ್ದಾಣ, ಈಗ ಬರಿ ನೆನಪು ಮಾತ್ರ

ಯಶವಂತಪುರ ಉಪಚುನಾವಣೆ ಇಲ್ಲಿದೆ ಜನಮತ

ಯಶವಂತಪುರ ಉಪಚುನಾವಣೆ ಇಲ್ಲಿದೆ ಜನಮತ

ಬಿಜೆಪಿಯಲ್ಲಿ ಯಡಿಯೂರಪ್ಪ ಹಿಡಿತ ಬಲಪಡಿಸಿದ ಮಹಾರಾಷ್ಟ್ರ ವಿದ್ಯಮಾನ

ಬಿಜೆಪಿಯಲ್ಲಿ ಯಡಿಯೂರಪ್ಪ ಹಿಡಿತ ಬಲಪಡಿಸಿದ ಮಹಾರಾಷ್ಟ್ರ ವಿದ್ಯಮಾನ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist