Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಆಧಾರ್/ಪಾನ್ ವಿವರ ನೀಡದಿದ್ದರೆ ಶೇ.20 ರಷ್ಟು ಸಂಬಳಕ್ಕೆ ಕತ್ತರಿ!

ಆಧಾರ್/ಪಾನ್ ವಿವರ ನೀಡದಿದ್ದರೆ ಶೇ.20 ರಷ್ಟು ಸಂಬಳಕ್ಕೆ ಕತ್ತರಿ!
ಆಧಾರ್/ಪಾನ್ ವಿವರ ನೀಡದಿದ್ದರೆ ಶೇ.20 ರಷ್ಟು ಸಂಬಳಕ್ಕೆ ಕತ್ತರಿ!

January 25, 2020
Share on FacebookShare on Twitter

ಕೇಂದ್ರ ಸರ್ಕಾರ ದೇಶದ ಮಧ್ಯಮ ದುಡಿಯುವ ವರ್ಗದ ನೌಕರರ ಮೇಲೆ ಕಣ್ಣು ಹಾಕಿದೆ. ತಿಂಗಳಿಗೆ ಅಲ್ಪಸ್ವಲ್ಪ ದುಡಿದು ತಿನ್ನುತ್ತಿದ್ದ ಈ ಶ್ರಮಿಕ ವರ್ಗದಿಂದಲೂ ತೆರಿಗೆ ರೂಪದಲ್ಲಿ ಹಣ ವಸೂಲಿ ಮಾಡಲು ಮುಂದಾಗಿದೆ. ಇದಕ್ಕಾಗಿ ಸರ್ಕಾರ ವಿಧಿಸಿರುವ ಷರತ್ತು ಏನೆಂದರೆ ತಿಂಗಳಿಗೆ 20,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಸಂಬಳ ಪಡೆಯುವ ಎಲ್ಲರೂ ತಮ್ಮ ಪಾನ್ ಮತ್ತು ಆಧಾರ್ ವಿವರಗಳನ್ನು ನೌಕರಿ ನೀಡಿರುವ ಉದ್ಯೋಗದಾತನಿಗೆ ಸಲ್ಲಿಸಬೇಕು. ಒಂದು ವೇಳೆ ಸಲ್ಲಿಸದೇ ಇದ್ದಲ್ಲಿ ಅಥವಾ ಈ ಮಾಹಿತಿಗಳು ಇಲ್ಲದೇ ಇದ್ದಲ್ಲಿ ಶೇ.20 ರಷ್ಟು ಸಂಬಳವನ್ನು ಕಟ್ ಮಾಡಲಾಗುತ್ತದೆ. ಇಂತಹದ್ದೊಂದು ಶಾಕಿಂಗ್ ನೀತಿ ಜಾರಿಗೆ ಬಂದಿದೆ.

ಹೆಚ್ಚು ಓದಿದ ಸ್ಟೋರಿಗಳು

ನೀರಿನ ಬಾಟಲ್‌ ಗಾಗಿ ಜಗಳ: ಚಲಿಸುವ ರೈಲಿನಿಂದ ಪ್ರಯಾಣಿಕನ್ನು ಹೊರಗೆ ಎಸೆದ ಸಿಬ್ಬಂದಿ!

ಬಿಜೆಪಿ ಜೊತೆಗಿನ ಮೈತ್ರಿ: ನಿತೀಶ್‌ ಕುಮಾರ್ ನಾಳೆ ನಿರ್ಧಾರ ಪ್ರಕಟ!

ಉಚಿತ ಶಿಕ್ಷಣ ವಿರುದ್ಧ ಇರುವವರು ದೇಶದ್ರೋಹಿಗಳು: ಅರವಿಂದ್‌ ಕೇಜ್ರಿವಾಲ್‌

ಈ ಮೂಲಕ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನತೆ ಮೇಲೆ ದಿನಕ್ಕೊಂದು ಕಾನೂನನ್ನು ಜಾರಿ ಮಾಡುತ್ತಲೇ ಬರುತ್ತಿದೆ. ಇದೀಗ ಉದ್ಯೋಗಸ್ಥರ ಮೇಲೆ ಕಣ್ಣಾಕಿರುವ ಸರ್ಕಾರ ನೌಕರರು ತಮ್ಮ ಉದ್ಯೋಗ ನೀಡಿದ ಕಂಪನಿಗೆ ಪಾನ್ ಮತ್ತು ಆಧಾರ್ ವಿವರಗಳನ್ನು ನೀಡದಿದ್ದರೆ ಅವರ ಸಂಬಳದಲ್ಲಿ ಭಾರೀ ಪ್ರಮಾಣದಲ್ಲಿ ದುಡ್ಡನ್ನು ಕಡಿತಗೊಳಿಸಲಾಗುತ್ತದೆ. ಅಂದರೆ, ಶೇಕಡಾ ಟಿಡಿಎಸ್ ಅನ್ನು ಕಡಿತಗೊಳಿಸಲಿದೆ. ಈ ನೀತಿ ಜನವರಿ 16 ರಿಂದ ದೇಶಾದ್ಯಂತ ಜಾರಿಗೆ ಬಂದಿದೆ.

ಈ ಸಂಬಂಧ ಉದ್ಯೋಗದಾತರಿಗೆ ಸುತ್ತೋಲೆ ಕಳುಹಿಸಿರುವ ಆದಾಯ ತೆರಿಗೆ ಇಲಾಖೆಯು ಪಾನ್ ಮತ್ತು ಆಧಾರ್ ವಿವರಗಳನ್ನು ನೀಡದಿರುವ ನೌಕರರ ಸಂಬಳದಲ್ಲಿ ಶೇ.20 ರಷ್ಟು ಕಡಿತ ಮಾಡಿ ಆ ಹಣವನ್ನು ಟಿಡಿಎಸ್ ಆಗಿ ತನಗೆ ಕಳುಹಿಸುವಂತೆ ಸೂಚನೆ ನೀಡಿದೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಈ ನೀತಿಯನ್ನು ರೂಪಿಸಿದ್ದು, ವಾರ್ಷಿಕ 2.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಆದಾಯವಿರುವ ನೌಕರರಿಗೆಲ್ಲರಿಗೂ ಈ ನೀತಿಯನ್ನು ಅನ್ವಯವಾಗುವಂತೆ ಮಾಡಿದೆ. ಅಂದರೆ ತಿಂಗಳಿಗೆ 20000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಸಂಬಳ ಪಡೆಯುವವರು ಕಡ್ಡಾಯವಾಗಿ ತಮ್ಮ ಪಾನ್ ಮತ್ತು ಆಧಾರ್ ವಿವರಗಳನ್ನು ನೀಡಬೇಕಿದೆ.

ಈ ವಿಭಾಗದಲ್ಲಿ ಟಿಡಿಎಸ್ ಪೇಮೆಂಟ್ ಮತ್ತು ಆದಾಯದ ಮೇಲೆ ಕಣ್ಣಿಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನೀತಿಯನ್ನು ಜಾರಿಗೆ ತಂದಿದೆ. 2018-19 ನೇ ಹಣಕಾಸು ಸಾಲಿನಲ್ಲಿ ಒಟ್ಟು ಸಂಗ್ರಹವಾದ ನೇರ ತೆರಿಗೆಯಲ್ಲಿ ಈ ವಿಭಾಗದಲ್ಲಿ ಶೇ.37 ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ಟಿಡಿಎಸ್ ಸಂಗ್ರಹ ಪ್ರಮಾಣವನ್ನು ಹೆಚ್ಚು ಮಾಡುವುದು ಮತ್ತು ತೆರಿಗೆ ವಂಚಿಸುವುದನ್ನು ತಡೆಗಟ್ಟುವ ಸಲುವಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206-ಎಎ ಪ್ರಕಾರ ನೌಕರರು ತಮ್ಮ ಪಾನ್ ಮತ್ತು ಆಧಾರ್ ವಿವರಗಳನ್ನು ಕಡ್ಡಾಯವಾಗಿ ನೀಡಬೇಕಿದೆ.

ನೌಕರರು ತಮ್ಮ ಪಾನ್ ಮತ್ತು ಆಧಾರ್ ವಿವರಗಳನ್ನು ಕೊಡಬೇಕಾಗಿರುವುದು ಕಡ್ಡಾಯ. ಒಂದು ವೇಳೆ ನೌಕರರು ಕೊಡದಿದ್ದರೆ ಅದಕ್ಕೆ ಉದ್ಯೋಗದಾತರೇ ನೇರ ಹೊಣೆಯಾಗಬೇಕಾಗುತ್ತದೆ. ಅಲ್ಲದೇ, ವಿವರಗಳನ್ನು ನೀಡದಿರುವ ನೌಕರರ ಸಂಬಳದಲ್ಲಿ ಶೇ.20 ರಷ್ಟು ಹಣವನ್ನು ಕಟ್ ಮಾಡುವ ಜವಾಬ್ದಾರಿಯೂ ಉದ್ಯೋಗದಾತರ ಮೇಲಿದೆ ಎಂದು ಆದಾಯ ತೆರಿಗೆ ಇಲಾಖೆಯ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಇನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ತೆರಿಗೆ ಪಾವತಿಸುವ ನೌಕರರಿಗೆ ಶೇ.4 ರಷ್ಟು ಶಿಕ್ಷಣ ಮತ್ತು ಆರೋಗ್ಯ ಸೆಸ್ ನಿಂದ ವಿನಾಯ್ತಿ ನೀಡಲಾಗುತ್ತದೆ.

ಸಾಲವನ್ನು ನೀಡುವ ಸಂದರ್ಭದಲ್ಲಿ ಪಾನ್ ಅಥವಾ ಆಧಾರ್ ವಿವರಗಳು ಇಲ್ಲದಿರುವುದರಿಂದ ಹಲವು ಬಗೆಯ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೌಕರರಿಗೆ ನೀಡುವ ಟಿಡಿಎಸ್ ಸ್ಟೇಟ್ ಮೆಂಟ್ ನಲ್ಲಿ ಪಾನ್ ಅಥವಾ ಆಧಾರ್ ವಿವರಗಳನ್ನು ನಮೂದಿಸುವಂತೆ ಉದ್ಯೋಗದಾತ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ಕೇಂದ್ರ ಸರ್ಕಾರ ಒಂದು ಕಡೆ ಆಧಾರ್ ಕಡ್ಡಾಯವಲ್ಲ ಎಂದು ಹೇಳುತ್ತದೆ. ಮತ್ತೊಂದು ಕಡೆ ಸರ್ಕಾರದ ಕಾರ್ಯಕ್ರಮಗಳಿಗೆ ಕಡ್ಡಾಯ ಎಂದು ಹೇಳುತ್ತದೆ. ಇನ್ನು ಹಲವಾರು ನ್ಯಾಯಾಲಯಗಳೂ ಸಹ ಆಧಾರ್ ಅನ್ನು ಒಂದು ಕಡ್ಡಾಯ ದಾಖಲೆಯಾಗಿ ಪರಿಗಣಿಸುವಂತಿಲ್ಲ ಎಂದು ಆದೇಶಗಳನ್ನು ನೀಡಿವೆ. ಆದರೆ, ಇದೀಗ ವೇತನ ಪಡೆಯುವ ನೌಕರರು ಕಡ್ಡಾಯವಾಗಿ ಪಾನ್ ಮತ್ತು ಆಧಾರ್ ವಿವರಗಳನ್ನು ನೀಡಬೇಕೆಂದು ಸುತ್ತೋಲೆ ನೀಡುವ ಮೂಲಕ ಕೇಂದ್ರ ಸರ್ಕಾರ ಮತ್ತೊಮ್ಮೆ ದೇಶದ ಜನತೆಯನ್ನು ಗೊಂದಲಕ್ಕೆ ಬೀಳುವಂತೆ ಮಾಡಿದೆ.

RS 500
RS 1500

SCAN HERE

don't miss it !

ದೇಶದಲ್ಲಿ ಕೋವಿಡ್ -19 ಹೆಚ್ಚಳ : ಪರೀಕ್ಷೆ & ಲಸಿಕೆ ಹೆಚ್ಚಿಸಲು ಕರ್ನಾಟಕ ಸೇರಿ 7 ರಾಜ್ಯಗಳಿಗೆ ಕೇಂದ್ರ ಸೂಚನೆ!
ದೇಶ

ದೇಶದಲ್ಲಿ ಕೋವಿಡ್ -19 ಹೆಚ್ಚಳ : ಪರೀಕ್ಷೆ & ಲಸಿಕೆ ಹೆಚ್ಚಿಸಲು ಕರ್ನಾಟಕ ಸೇರಿ 7 ರಾಜ್ಯಗಳಿಗೆ ಕೇಂದ್ರ ಸೂಚನೆ!

by ಪ್ರತಿಧ್ವನಿ
August 6, 2022
ಉಪರಾಷ್ಟ್ರಪತಿ ಚುನಾವಣೆಯ ಮತದಾನ ಆರಂಭ!
ದೇಶ

ಉಪರಾಷ್ಟ್ರಪತಿ ಚುನಾವಣೆ: ಜಗದೀಪ್‌ ಜಯಭೇರಿ: ಮಾರ್ಗರೇಟ್‌ ಆಳ್ವಾಗೆ ಆಘಾತ

by ಪ್ರತಿಧ್ವನಿ
August 6, 2022
ಪರ-ವಿರೋಧ ಬೇಕು-ಬೇಡಗಳ ನಡುವೆ ಸಿದ್ಧರಾಮೋತ್ಸವ
ಕರ್ನಾಟಕ

ಪರ-ವಿರೋಧ ಬೇಕು-ಬೇಡಗಳ ನಡುವೆ ಸಿದ್ಧರಾಮೋತ್ಸವ

by ನಾ ದಿವಾಕರ
August 3, 2022
ಕಾಮನ್‌ವೆಲ್ತ್ : ದಕ್ಷಣ ಆಫ್ರಿಕಾ ವಿರುದ್ಧ ಗೆದ್ದು ಫೈನಲ್ ತಲುಪಿದ ಭಾರತ ಹಾಕಿ ತಂಡ!
ಕ್ರೀಡೆ

ಕಾಮನ್‌ವೆಲ್ತ್ : ದಕ್ಷಣ ಆಫ್ರಿಕಾ ವಿರುದ್ಧ ಗೆದ್ದು ಫೈನಲ್ ತಲುಪಿದ ಭಾರತ ಹಾಕಿ ತಂಡ!

by ಪ್ರತಿಧ್ವನಿ
August 7, 2022
ಡ್ರಗ್ಸ್‌ ಪ್ರಕರಣ: ಬಾಲಿವುಡ್‌ ನಟನ ಪುತ್ರ ಸಿದ್ಧಾಂತ್‌ ಕಪೂರ್‌ ಗೆ ಸಮನ್ಸ್
ದೇಶ

ಡ್ರಗ್ಸ್‌ ಪ್ರಕರಣ: ಬಾಲಿವುಡ್‌ ನಟನ ಪುತ್ರ ಸಿದ್ಧಾಂತ್‌ ಕಪೂರ್‌ ಗೆ ಸಮನ್ಸ್

by ಪ್ರತಿಧ್ವನಿ
August 8, 2022
Next Post
ಪಾಟ್ನಾದಲ್ಲಿ ಬುರ್ಖಾ ನಿಷೇಧದ ಹಿಂದೆ ಯಾರ ಕೈವಾಡ?

ಪಾಟ್ನಾದಲ್ಲಿ ಬುರ್ಖಾ ನಿಷೇಧದ ಹಿಂದೆ ಯಾರ ಕೈವಾಡ?

ಕಣಿವೆ ರಾಜ್ಯಕ್ಕೆ ಬಂತು ಇಂಟರ್ನೆಟ್ ಸೇವೆ!

ಕಣಿವೆ ರಾಜ್ಯಕ್ಕೆ ಬಂತು ಇಂಟರ್ನೆಟ್ ಸೇವೆ!

ನಿ. CJI ಮೇಲೆ ಆರೋಪ ಮಾಡಿ ವಜಾಗೊಂಡಿದ್ದ ಮಹಿಳಾ ಉದ್ಯೋಗಿಗೆ ಮತ್ತೆ ಉದ್ಯೋಗ

ನಿ. CJI ಮೇಲೆ ಆರೋಪ ಮಾಡಿ ವಜಾಗೊಂಡಿದ್ದ ಮಹಿಳಾ ಉದ್ಯೋಗಿಗೆ ಮತ್ತೆ ಉದ್ಯೋಗ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist