Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಅಯೋಧ್ಯೆ ವಿವಾದ ಮುಂದುವರಿಸಿದರೆ ಭಾರತೀಯ ಮುಸ್ಲಿಂರಿಗೆ ಮಾರಕ

ಅಯೋಧ್ಯೆ ವಿವಾದ ಮುಂದುವರಿಸಿದರೆ ಭಾರತೀಯ ಮುಸ್ಲಿಂರಿಗೆ ಮಾರಕ
ಅಯೋಧ್ಯೆ ವಿವಾದ ಮುಂದುವರಿಸಿದರೆ ಭಾರತೀಯ ಮುಸ್ಲಿಂರಿಗೆ ಮಾರಕ

November 25, 2019
Share on FacebookShare on Twitter

ಅಯೋಧ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದರೆ ಭಾರತೀಯ ಮುಸ್ಲಿಂ ಸಮುದಾಯಕ್ಕೆ ಮಾರಕವಾಗಲಿದೆ ಎಂಬ ಆತಂಕ ವ್ಯಕ್ತವಾಗಲಿದೆಯೇ?

ಹೆಚ್ಚು ಓದಿದ ಸ್ಟೋರಿಗಳು

ಚಾರ್‌ಧಾಮ್‌ ಹಾದಿಗೆ ದುಡಿಮೆಗಾರರ ಹಾಸುಗಲ್ಲು : ನಾ ದಿವಾಕರ ಅವರ ಬರಹ ಭಾಗ – 2

Bank: 18 ಕೋಟಿ ರೂಪಾಯಿ ದರೋಡೆ

ಮತದಾನ ಮುಗಿದ ಮರು ದಿನವೇ ಗ್ಯಾಸ್ ಬೆಲೆ ಹೆಚ್ಚಳ

ಹೌದು. ಮುಸ್ಲಿಂ ಸಮುದಾಯದ ಕೆಲವು ಮುಖಂಡರು ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಮಾರು 100 ಮಂದಿ ಮುಸ್ಲಿಂ ಸಮುದಾಯದ ಮುಖಂಡರು, ಬುದ್ಧಿಜೀವಿಗಳು, ಪತ್ರಕರ್ತರು, ವಾಣಿಜ್ಯೋದ್ಯಮಿಗಳು, ಕವಿಗಳು, ಕಲಾವಿದರು, ಚಿತ್ರನಿರ್ಮಾಕರು ಸೇರಿದಂತೆ ಇನ್ನಿತರೆ ಕ್ಷೇತ್ರಗಳ ಗಣ್ಯರು ಮೇಲ್ಮನವಿ ಸಲ್ಲಿಸುವುದು ಸೂಕ್ತವಲ್ಲ ಎಂದಿದ್ದಾರೆ.

ಈಗಾಗಲೇ ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ಆಯೋಧ್ಯೆಯ ವಿವಾದಿತ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಮತ್ತು ಮುಸ್ಲಿಂರಿಗೆ ಪರ್ಯಾಯವಾಗಿ 5 ಎಕರೆ ಭೂಮಿಯನ್ನು ನೀಡಬೇಕೆಂದು ಆದೇಶ ನೀಡಿದೆ.

ಈ ಸಂಬಂಧ ಸಹಿ ಹಾಕಿರುವ ವಿವಿಧ ಕ್ಷೇತ್ರಗಳ ಈ ಮುಸ್ಲಿಂ ಗಣ್ಯರು ದೇಶದಲ್ಲಿ ಅಯೋಧ್ಯೆ ವಿಚಾರ ಜೀವಂತವಾಗಿದ್ದಷ್ಟು ಕಾಲ ಮಾರಕವಾಗುತ್ತದೆ. ಇದು ಭಾರತೀಯ ಮುಸ್ಲಿಂರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.

ಈ ಗಣ್ಯರು, “ನಾವು ನಮ್ಮ ಮುಸ್ಲಿಂ ಸಮುದಾಯದವರಲ್ಲಿ ಕೇಳಿಕೊಳ್ಳುವುದೇನೆಂದರೆ ಕಳೆದ ಮೂರು ದಶಕಗಳಷ್ಟು ಹಳೆಯದಾದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದಲ್ಲಿ ಹಲವಾರು ಮುಸ್ಲಿಂರ ಮುಗ್ಧಜೀವಗಳನ್ನು ಮತ್ತು ಆಸ್ತಿಪಾಸ್ತಿಯನ್ನು ಕಳೆದುಕೊಂಡಿರುವುದು ಒಂದು ಕಡೆಯಾದರೆ, ಸಂಘಪರಿವಾರದ ರಾಜಕೀಯದ ಮೇಲಾಟ ಮತ್ತೊಂದು ಕಡೆಯಲ್ಲಿಲ್ಲಿತ್ತು. ಇದರಿಂದ ನಾವು ಪಾಠ ಕಲಿತ್ತಿಲ್ಲವೇ? ಈ ಸಂದರ್ಭದಲ್ಲಿ ನಡೆದ ಕೋಮುಗಲಭೆಗಳಲ್ಲಿ ಬಡ ಮುಸ್ಲಿಂರು ಬೆಲೆ ತೆತ್ತಿದ್ದಾರಲ್ಲವೇ?’’ ಎಂದು ಹೇಳಿದ್ದಾರೆ.

ಈ ಮಂದಿರ-ಮಸೀದಿ ವಿವಾದ ಕೇವಲ ಸಂಘಪರಿವಾರದ ನಿಜವಾದ ಅಜೆಂಡಾಕ್ಕೆ ರಕ್ಷಾಕವಚವಾಗಲು ನೆರವಾಯಿತು. ಅದು ಜಾತ್ಯತೀತ ಪ್ರಜಾತಂತ್ರ ವ್ಯವಸ್ಥೆಗೆ ಪರ್ಯಾಯವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾರ್ಪಡಿಸುವ ಒಂದು ವ್ಯವಸ್ಥೆಯಾಗಿದೆ ಎಂಬ ಆತಂಕವನ್ನು ಗಣ್ಯರು ವ್ಯಕ್ತಪಡಿಸಿದ್ದಾರೆ.

ಈ ಕುರಿತಾದ ಒಂದು ಪತ್ರವನ್ನು ಸಿದ್ಧಪಡಿಸಿ ಅದಕ್ಕೆ ಸಹಿ ಹಾಕಿರುವ ಇವರೆಲ್ಲರೂ, ಒಂದು ವೇಳೆ ಈ ವಿವಾದವನ್ನು ಕೋರ್ಟಿನಲ್ಲಿ ಮುಂದುವರಿಸಿದ್ದೇ ಆದಲ್ಲಿ ಮುಸ್ಲಿಂ ವಿರೋಧಿ ಕಾರರ್ಯತಂತ್ರಗಳಿಗೆ ಮತ್ತಷ್ಟು ಆಹಾರ ನೀಡಿದಂತಾಗುತ್ತದೆ ಮತ್ತು ಕೋಮು ಶಕ್ತಿಗಳು ಒಗ್ಗೂಡಲು ನೆರವಾದಂತಾಗುತ್ತದೆ. ಈ ವಿವಾದವನ್ನು ಮುಂದುವರಿಸದಿರುವುದು ಲೇಸು. ಇದರಿಂದ ಬಹುಸಂಖ್ಯಾತರಲ್ಲಿ ಲಕ್ಷಾಂತರ ಜಾತ್ಯತೀತ ಜನರ ಮನಸನ್ನು ಗೆಲ್ಲಬಹುದಾಗಿದೆ. ಇದು ದೇಶ ಮತ್ತು ಸಮುದಾಯದ ಹಿತಾಸಕ್ತಿಗೆ ಉತ್ತಮ ಹೆಜ್ಜೆಯಾಗಲಿದೆ’’ ಎಂದು ತಮ್ಮ ಮನವಿ ಪತ್ರದಲ್ಲಿ ಕೋರಿದ್ದಾರೆ.

ಗಣ್ಯರು ಬಿಡುಗಡೆ ಮಾಡಿರುವ ಹೇಳಿಕೆಯ ಪೂರ್ಣಪಾಠ ಇಲ್ಲಿದೆ:-

“ಈ ಕೆಳಗೆ ಸಹಿ ಮಾಡಿರುವ ನಾವು, ಅಯೋಧ್ಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೆಲವು ಮುಸ್ಲಿಂ ನಾಯಕರು ಮುಂದಾಗಿರುವುದಕ್ಕೆ ನಮಗೆ ಆತಂಕ ಉಂಟಾಗಿದೆ. ನಾವು ಭಾರತೀಯ ಮುಸ್ಲಿಂ ಸಮುದಾಯದ ಅತೃಪ್ತಿಯನ್ನು ಈ ಮೂಲಕ ತೋಡಿಕೊಳ್ಳುತ್ತಿದ್ದೇವೆ. ನ್ಯಾಯಾಲಯ ನೀಡಿರುವ ತೀರ್ಪಿಗೆ ಸಂವಿಧಾನ ಪರಿಣತರು ಮತ್ತು ಜಾತ್ಯತೀತ ಸಂಘಸಂಸ್ಥೆಗಳು ಬದ್ಧರಾಗಿದ್ದು, ಅದರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆದರೆ, ನ್ಯಾಯಾಲಯ ನೀಡಿರುವ ಈ ತೀರ್ಪು ನ್ಯಾಯಸಮ್ಮತವಾಗಿಲ್ಲ ಎಂದು ಹೇಳುವುದೇ ಆದಲ್ಲಿ ಅಯೋಧ್ಯೆ ವಿವಾದವನ್ನು ಮತ್ತಷ್ಟು ವರ್ಷಗಳವರೆಗೆ ಜೀವಂತವಾಗಿಟ್ಟರೆ ಅದು ಭಾರತೀಯ ಮುಸ್ಲಿಂರಿಗೆ ಮಾರಕವಾಗುತ್ತದೆಯೇ ಹೊರತು ನೆರವಾಗುವುದಿಲ್ಲ.

ಮೂರು ದಶಕಗಳ ಕಾಲ ನಡೆದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದಿಂದ ನಾವೇನು ಕಳೆದುಕೊಂಡಿದ್ದೇವೆ ಮತ್ತು ಎಷ್ಟು ಗಳಿಸಿದ್ದೇವೆ ಎಂಬುದನ್ನು ಮುಸ್ಲಿಂ ಬಾಂಧವರು ವಿಚಾರ ಮಾಡಬೇಕಿದೆ. ಹಲವಾರು ಮುಸ್ಲಿಂರು ಜೀವ ಕಳೆದುಕೊಂಡಿದ್ದಾರೆ, ಸಾಕಷ್ಟು ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ.

ಮೇಲ್ಮನವಿ ಸಲ್ಲಿಸುವಂತೆ ಮುಸ್ಲಿಂರಿಗೆ ಹಲವಾರು ಮಂದಿ ಸಲಹೆ ನೀಡಿದ್ದಾರೆ. ಆದರೆ, ನಮ್ಮ ಮುಸ್ಲಿಂ ಬಾಂಧವರಿಗೆ ಕಳಕಳಿಯ ಮನವಿಯೆಂದರೆ ಈ ವಿವಾದದಿಂದ ದೂರ ಸರಿಯಿರಿ. ಏಕೆಂದರೆ, ಇದು ಸಂಘಪರಿವಾರದ ಅಜೆಂಡಾದ ಮುಖವಾಡ ಧರಿಸಲು ನೆರವಾಗುತ್ತದೆ ಮತ್ತು ನಮ್ಮ ಜಾತ್ಯತೀತ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಹಿಂದೂ ರಾಷ್ಟ್ರವನ್ನಾಗಿಸುವ ಕುತಂತ್ರಕ್ಕೆ ನೆರವಾಗಲಿದೆ.

ಈ ಮನವಿ ಪತ್ರಕ್ಕೆ ಹೈದ್ರಾಬಾದ್ ನ ಸಾಮಾಜಿಕ ಕಾರ್ಯಕರ್ತ ಆರಿಝ್ ಮೊಹ್ಮದ್, ಚೆನ್ನೈನ ವಕೀಲ ಎ.ಜೆ.ಜಾವದ್, ಮುಂಬೈನ ಲೇಖಕ, ಅಂಕಣಕಾರ(ಮರಾಠಿ) ಅಬ್ದುಲ್ ಖಾದರ್ ಮುಕದಮ್, ಸಾಮಾಜಿಕ ಕಾರ್ಯಕರ್ತ ಅಫೇಕ್ ಅಜಾದ್, ನಾಸಿಕ್ ನ ಪತ್ರಕರ್ತ ಅಫ್ತಬ್ ಖಾನ್, ಸಾಮಾಜಿಕ ಕಾರ್ಯಕರ್ತ, ಹೊಟೇಲ್ ಉದ್ಯಮಿ ಅಫ್ಲಲ್ ಪಟೇಲ್ ಸೇರಿದಂತೆ 91 ಮಂದಿ ಮುಸ್ಲಿಂ ಗಣ್ಯರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ಕೃಪೆ: ದಿ ವೈರ್

RS 500
RS 1500

SCAN HERE

Pratidhvani Youtube

«
Prev
1
/
6193
Next
»
loading
play
ಸಮೀಕ್ಷೆ ನೋಡಿ ಶಾಕ್ ಆಯ್ತು..!#siddaramaiah #dkshivakumar #ctravi #bjp #congress #brs #telangana
play
ಸಿಎಂ ಗೆ ಮನವಿ ಮಾಡಿದ ಸಿಟಿ ರವಿ..! #siddaramaiah #dkshivakumar #ctravi #bjp #congress #shcool #children
«
Prev
1
/
6193
Next
»
loading

don't miss it !

ಕನಕ ನಾಯಕ: ಬ್ರಾಹ್ಮಣ್ಯದ ಒಳಹೊಕ್ಕು ಬ್ರಾಹ್ಮಣ್ಯವನ್ನು ಟೀಕಿಸಿದ ಸಂತ – ಡಾ. ಜೆ ಎಸ್ ಪಾಟೀಲ ಅವರ ಬರಹ
ಅಂಕಣ

ಕನಕ ನಾಯಕ: ಬ್ರಾಹ್ಮಣ್ಯದ ಒಳಹೊಕ್ಕು ಬ್ರಾಹ್ಮಣ್ಯವನ್ನು ಟೀಕಿಸಿದ ಸಂತ – ಡಾ. ಜೆ ಎಸ್ ಪಾಟೀಲ ಅವರ ಬರಹ

by ಡಾ | ಜೆ.ಎಸ್ ಪಾಟೀಲ
December 1, 2023
ದುಬೈಗೆ ಕರೆದುಕೊಂಡು ಹೋಗಿಲ್ಲ ಎಂದು ಪತಿಯನ್ನು ಹೊಡೆದು ಸಾಯಿಸಿದ ಪತ್ನಿ
Top Story

ದುಬೈಗೆ ಕರೆದುಕೊಂಡು ಹೋಗಿಲ್ಲ ಎಂದು ಪತಿಯನ್ನು ಹೊಡೆದು ಸಾಯಿಸಿದ ಪತ್ನಿ

by ಪ್ರತಿಧ್ವನಿ
November 25, 2023
ಅಮಿತ್ ಶಾ, ಮೋದಿ ಇಬ್ಬರು ನನ್ನ ಜೀವ ತೆಗೆದರು : ವಿ ಸೋಮಣ್ಣ ಬೇಸರ
ಕರ್ನಾಟಕ

ಅಮಿತ್ ಶಾ, ಮೋದಿ ಇಬ್ಬರು ನನ್ನ ಜೀವ ತೆಗೆದರು : ವಿ ಸೋಮಣ್ಣ ಬೇಸರ

by Prathidhvani
November 25, 2023
ನಾನು ಮತ್ತು ಗುಂಡ ೨ ಟೈಟಲ್ ಟೀಸರ್ ದ್ರುವಸರ್ಜಾ ಬಿಡುಗಡೆ
ಸಿನಿಮಾ

ನಾನು ಮತ್ತು ಗುಂಡ ೨ ಟೈಟಲ್ ಟೀಸರ್ ದ್ರುವಸರ್ಜಾ ಬಿಡುಗಡೆ

by Prathidhvani
November 30, 2023
ಕಾಂತಾರ ಅಧ್ಯಾಯ ೧’ರ ಮೊದಲ ಲುಕ್ ಬಿಡುಗಡೆ : 24ಗಂಟೆಯಲ್ಲಿ 10M ವೀಕ್ಷಣೆ
ಸಿನಿಮಾ

ಕಾಂತಾರ ಅಧ್ಯಾಯ ೧’ರ ಮೊದಲ ಲುಕ್ ಬಿಡುಗಡೆ : 24ಗಂಟೆಯಲ್ಲಿ 10M ವೀಕ್ಷಣೆ

by Prathidhvani
November 28, 2023
Next Post
ಆರ್ಥಿಕತೆ  ಕುಸಿಯುತ್ತಿದ್ದರೂ ಷೇರುಪೇಟೆ ಜಿಗಿಯುತ್ತಿರುವುದು ಏಕೆ?

ಆರ್ಥಿಕತೆ ಕುಸಿಯುತ್ತಿದ್ದರೂ ಷೇರುಪೇಟೆ ಜಿಗಿಯುತ್ತಿರುವುದು ಏಕೆ?

ದೇಸೀ`ದೃಷ್ಟಿ’ ಬಿಟ್ಟು ವಿದೇಶೀ `ದೃಷ್ಟಿ’ ಮೇಲೇಕೆ ಕಣ್ಣು?

ದೇಸೀ`ದೃಷ್ಟಿ’ ಬಿಟ್ಟು ವಿದೇಶೀ `ದೃಷ್ಟಿ’ ಮೇಲೇಕೆ ಕಣ್ಣು?

ಮೋದಿ  ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿಯಷ್ಟೇ ಅಲ್ಲಾ

ಮೋದಿ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿಯಷ್ಟೇ ಅಲ್ಲಾ, ರುಪಾಯಿ ಮೌಲ್ಯವೂ ಕುಸಿತ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist