Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಅಂತೂ ಇಂತೂ ಬಂತು ಹಂಪಿ ಉತ್ಸವ…..

ಅಂತೂ ಇಂತೂ ಬಂತು ಹಂಪಿ ಉತ್ಸವ.....
ಅಂತೂ ಇಂತೂ ಬಂತು ಹಂಪಿ ಉತ್ಸವ.....

December 22, 2019
Share on FacebookShare on Twitter

ಹಂಪಿ ಅಂದರೆ ಭಾರತದ ಮೂಲೆ ಮೂಲೆಗಳಿಂದಷ್ಟೇ ಅಲ್ಲ ವಿದೇಶಿಯರನ್ನು ಆಕರ್ಷಿಸುತ್ತಿರುವ ಐತಿಹಾಸಿಕ ತಾಣ. ಅದರ ಉತ್ಸವ ಮಾತ್ರ ಅನಿವಾರ್ಯತೆ ಎಂಬಂತೆ ಆಚರಿಸಲಾಗುತ್ತಿದೆ. ದಿನಾಂಕ ಮುಂದೂಡಿ ಕೊನೆಗೂ ಮುಹೂರ್ತ ನಿಗದಿಪಡಿಸಿದ್ದು ಜನವರಿ 10 ಮತ್ತು 11 ರಂದು. ಅದು ಬರೀ ಎರಡು ದಿವಸವಂತೆ. ಹೀಗೆ ಮಾಡಿದರು ಕಲಾ ಪ್ರಿಯರು ಹಾಗೂ ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಕೂಡುವರೆ ಎಂಬುದು ಈ ಬಾರಿ ಯಕ್ಷ ಪ್ರಶ್ನೆಯಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ

SIDDARAMAIAH VS DK SHIVAKUMAR | ಇನ್ನೂ ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಗೊಂದಲ #PRATIDHVANI

RAHUL GANDHI | ರಾಹುಲ್ ಗಾಂಧಿಗೋಸ್ಕರ ಬೀದಿಗಿಳಿದ ಯುವ ಕಾಂಗ್ರೆಸ್ #PRATIDHVANI

ಈಗ ಮಾಡಬೇಕಾಗಿದ್ದು ಹಂಪಿ ಉತ್ಸವ 2019, ಅದು ನಡೆಯುತ್ತಿರುವುದು 2020ರಲ್ಲಿ. ಇದು ಅವೈಜ್ಞಾನಿಕ ಎಂಬುದು ಈ ಭಾಗದ ಜನರ ಅನಿಸಿಕೆ. ಉತ್ಸವಕ್ಕೆ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡುತ್ತದೆ. ಚುಮು ಚುಮು ಚಳಿ ಶುರುವಾಗುವ ಹೊತ್ತಿನಲ್ಲಿ ಈ ಉತ್ಸವ ನಿಗದಿಪಡಿಸಿದ್ದಕ್ಕೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಈ ಭಾಗದಲ್ಲಿ ಕೊರೆಯುವ ಚಳಿ ಹೆಚ್ಚಾಗಿರುವುದರಿಂದ ಮಹಿಳೆಯರು ಮತ್ತು ಮಕ್ಕಳು ಉತ್ಸವಕ್ಕೆ ಬಾರದೆ ಇರಬಹುದು. ಮಹಿಳೆಯರು ಮತ್ತು ಮಕ್ಕಳು ಉತ್ಸವಕ್ಕೆ ಬರದಿದ್ದರೆ ಉತ್ಸವದಲ್ಲಿ ಜನರ ಕೊರತೆ ಎದ್ದು ಕಾಣುತ್ತದೆ. ಕಲಾರಸಿಕರಿಗೆ ರಸ ಭಂಗ ವಾಗುತ್ತದೆ.

ನವೆಂಬರ್ ತಿಂಗಳಿನಲ್ಲಿ ಇಲ್ಲಿಯ ವಾತಾವರಣ ಹೆಚ್ಚು ಅನುಕೂಲಕರವಾಗಿದ್ದು, ಇದೇ ಸಮಯದಲ್ಲಿ ಹೆಚ್ಚು ಪ್ರವಾಸಿಗರು ಜಮಾಯಿಸುತ್ತಿದ್ದರು. ಇದನ್ನೆಲ್ಲ ಚರ್ಚಿಸಿ ಅಂದಿನ ಮುಖ್ಯಮಂತ್ರಿ ಎಂ ಪಿ ಪ್ರಕಾಶ್ ಈ ನವೆಂಬರ್ 3 ಮತ್ತು 4 ರಂದು ಪ್ರತಿವರ್ಷ ಆಚರಿಸೋಣ ಎಂದಿದ್ದರು.

ಬಳ್ಳಾರಿಯ ನಾಗಪ್ಪ ಉಪ್ಪಾರ, ಸಾಮಾಜಿಕ ಕಾರ್ಯಕರ್ತರು ಹೇಳುವ ಪ್ರಕಾರ, “ಬಳ್ಳಾರಿ ಜನರು ಬಿಸಿಲ ಪ್ರಿಯರು ಹೆಚ್ಚು, ಬಿಸಿಲು ಹೆಚ್ಚಾದರೂ ತಡೆದುಕೊಳ್ಳುವ ಜನರು. ಆದರೆ ಚಳಿ ಇಲ್ಲಿಯವರಿಗೆ ಸರಿಹೊಂದಲ್ಲ. ಅದು ಜನವರಿ ಕೊರೆಯುವ ಚಳಿ, ನಮಗೆಲ್ಲ ಆಗಿ ಬರೋಲ್ಲ. ಇನ್ನು ಉತ್ಸವ.. ಸಂಜೆ ಹಾಗೂ ರಾತ್ರಿಯೆಲ್ಲಾ ಕಾರ್ಯಕ್ರಮಗಳಿರುತ್ತವೆ. ಮಕ್ಕಳಿಗೆ ನೆಗಡಿ, ಜ್ವರ ಖಚಿತ, ಅದಕ್ಕೆ ಈ ಬಾರಿ ನಾವು ಹೋಗಬಾರದೆಂದು ನಿರ್ಧರಿಸಿದ್ದೇವೆ”.

ಕಲಾವಿದ ಸಂಗಪ್ಪ, ಪ್ರತಿ ಬಾರಿ ಸಂಗೀತ ಕಾರ್ಯಕ್ರಮ ನೀಡುವವರು ಹೇಳುವುದು ಹೀಗೆ, “ಕಲಾವಿದರೆಲ್ಲ ಹಂಪಿ ಉತ್ಸವ ಯಾವಾಗ ಎಂದು ಕಾಯುತ್ತಿರುತ್ತೇವೆ. ನಮಗೆ ಸಂಭಾವನೆ ಬೇಡ, ಸೂಕ್ತ ಸಮಯದಲ್ಲಿ ಉತ್ಸವ ನಡೆದರೆ ಸಾಕು. ಈ ಭಾಗದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿ ಮುಂದಿನ ಬಾರಿಯಾದರೂ ಸರಿಯಾದ ಸಮಯದಲ್ಲಿ ಅದ್ದೂರಿ ಮೂರು ದಿನಗಳ ಉತ್ಸವವನ್ನು ನಡೆಸಿಕೊಡುವವರೇ ನೋಡೋಣ”.

ಹಂಪಿಯ ವ್ಯಾಪಾರಸ್ಥ ರಾಜು ಹನುಮರಡ್ಡಿ ಅವರ ಪ್ರಕಾರ, “ಈ ಬಾರಿ ಚುನಾವಣೆಯಿಂದಾಗಿ ಉತ್ಸವ ಮುಂದೂಡಲಾಯಿತು. ಕಳೆದ ಬಾರಿ ಲೋಕಸಬಾ ಉಪಚುನಾವಣೆ, ಹೀಗೆ ಒಂದಲ್ಲ ಎರಡಲ್ಲ ಎಲ್ಲ ಕಾರಣಗಳು ಹಂಪಿ ಉತ್ಸವಕ್ಕೆ ಯಾಕೆ ಅಡ್ಡಿ. ಮೈಸೂರು ದಸರಾ ಹಾಗೂ ಇನ್ನೂ ಅನೇಕ ಉತ್ಸವಗಳು ಕರ್ನಾಟಕದಲ್ಲಿ ನಡೆಯುತ್ತವೆ. ಅವೆಲ್ಲ ಸರಿಯಾದ ಸಮಯದಲ್ಲಿ ನಡೆಯುತ್ತದೆ. ಕಲಾರಸಿಕರಿಗೆ, ಜನರಿಗೆ ಹಾಗೂ ನಮ್ಮಂತಹ ವ್ಯಾಪಾರಸ್ಥರಿಗೆ ಪ್ರತಿ ವರ್ಷಕ್ಕೊಮ್ಮೆ ಉತ್ತಮ ಆದಾಯ ತಂದುಕೊಡುವ ಈ ಉತ್ಸವ ನಮಗೆ ಕನಸಿನಂತಾಗಿದೆ. ನಮ್ಮ ವ್ಯಾಪಾರ ಬಿಡಿ, ಜನಪ್ರತಿನಿಧಿಗಳು ತಮಗೆ ಮತ ಹಾಕುವ ಜನರ ಭಾವನೆಗಳನ್ನೂ ಗೌರವಿಸದಿರುವರೆ, ಪದೇ ಪದೇ ಉತ್ಸವ ಮುಂದೂಡಿ, ಮೂರು ದಿನದ ಉತ್ಸವವನ್ನುಎರಡೇ ದಿನ ಆಚರಿಸುವುದು ಉತ್ಸವದ ಮೇಲೆ ಕರಿಛಾಯೆ ಬಿದ್ದಂತಾಗುವುದಲ್ಲವೇ”.

ಪ್ರತಿ ಬಾರಿ ಹಿಂಗೆ!!

1987ರಲ್ಲಿ ಎಂ.ಪಿ ಪ್ರಕಾಶ್ ಅವರ ಮುತುವರ್ಜಿಯಿಂದಾಗಿ ಹಂಪಿ ಉತ್ಸವವನ್ನು ಆರಂಭಿಸಲಾಗಿತ್ತು. 1988ರಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್ ಸಾಬ್ ನಿಧನರಾದರೆಂದು ಆಚರಿಸಲಿಲ್ಲ. 2000 ನೇ ಇಸವಿಯಲ್ಲಿ ಡಾ. ರಾಜ್ ಕುಮಾರ ಅವರನ್ನು ಅಪಹರಿಸಲಾಗಿದ್ದರಿಂದ ಹಂಪಿ ಉತ್ಸವವನ್ನು ಆಚರಿಸಲಿಲ್ಲ. 2002ರಲ್ಲಿ ಬರದ ನೆವದಿಂದ ಉತ್ಸವ ಮಾಡಲಾಗಲಿಲ್ಲ. 2003 ರಲ್ಲಿ ಜನವರಿ 26ಕ್ಕೆ ನಿಗದಿ ಮಾಡಲಾಗಿತ್ತು. ಉತ್ಸವವೇನೋ ವೈಭವದಿಂದ ಆರಂಭವಾಯಿತು. ಆದರೆ ಅಂದು ಮೊದಲನೆಯ ದಿನವೇ ಸ್ಥಳೀಯ ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಸೂರ್ಯನಾರಾಯಣ ಅವರು ನಿಧನರಾಗಿದ್ದರಿಂಧ ರದ್ದುಗೊಳಿಸಲಾಯಿತು. 2009 ರಲ್ಲಿ ಉತ್ತರ ಕರ್ನಾಟದಲ್ಲಿ ಪ್ರವಾಹ ಬಂತು, ಉತ್ಸವ ಕೈಬಿಟ್ಟರು. 2011 ರಲ್ಲಿ ರೆಡ್ಡಿ ಸಹೋದರರ ರಾಜಕೀಯ ಪರಿಸ್ಥಿತಿ ಬದಲಾವಣೆ ಯಾದಕಾರಣ ಹಂಪಿ ಉತ್ಸವಕ್ಕೆ ವೈಭವದ ಕೊರತೆಯಾಯಿತು. 2012ರಲ್ಲಿ ರಾಜಕೀಯ ಸ್ಥಿತಿಗಳು ಬದಲಾವಣೆಗಳ ಕಾರಣದಿಂದ ಉತ್ಸವವನ್ನೇ ಕೈಬಿಡಬೇಕಾಗಿ ಬಂತು.

2013ರಲ್ಲಿಯೂ ಹೀಗೆ ಆಗಿತ್ತು. ಜನವರಿ 18 ರಿಂದ 20ರ ವರೆಗೆ ಆಚರಿಸಲು ನಿರ್ಧಾರವಾಗಿತ್ತು. ಅದಕ್ಕೆ ಕೆಲ ಸಭೆಗಳೂ ನಡೆದವು. ನಂತರ ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಂತಿಮ ದಿನಾಂಕಕ್ಕೆ ಒಪ್ಪಿಗೆ ನೀಡಲಿಲ್ಲ. ನಂತರ ಬಿಜೆಪಿ ಸರ್ಕಾರದ ಆಂತರಿಕ ಬೆಳವಣಿಗೆಗಳು ಉತ್ಸವಕ್ಕೆ ಅಡ್ಡಿಯಾದವು.

ಆದರೆ 2008 ರಲ್ಲಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಂಪಿ ಉತ್ಸವನ್ನು ಅದ್ಧೂರಿಯಿಂದ ಆಚರಿಸಿದರು. ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ ಅಂದು ಚಾಲನೆ ನೀಡಿದ್ದು, ಹಂಪಿ ಉತ್ಸವ ರಾಷ್ಟ್ರದ ಗಮನ ಸೆಳೆಯಿತು. ನಂತರ 2010 ಜನವರಿ ಯಲ್ಲಿಯೂ ವೈಭವದಿಂದ ಆಚರಿಸಲಾಯಿತು.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

SHOBHA KARANDLAJE | ಟಿಪ್ಪು ಸುಲ್ತಾನ್ ಕನ್ನಡ.. ಹಿಂದೂ..ವಿರೋಧಿಯಾಗಿದ್ದ #PRATIDHVANI
ಇದೀಗ

SHOBHA KARANDLAJE | ಟಿಪ್ಪು ಸುಲ್ತಾನ್ ಕನ್ನಡ.. ಹಿಂದೂ..ವಿರೋಧಿಯಾಗಿದ್ದ #PRATIDHVANI

by ಪ್ರತಿಧ್ವನಿ
March 18, 2023
ಮಾರ್ಚ್ 20 ರಂದು ಮಾವು, ಗೋಡಂಬಿ ಫಸಲಿನ ಹರಾಜು..! : Auction of Mango, Cashew Crop on March 20
Top Story

ಮಾರ್ಚ್ 20 ರಂದು ಮಾವು, ಗೋಡಂಬಿ ಫಸಲಿನ ಹರಾಜು..! : Auction of Mango, Cashew Crop on March 20

by ಪ್ರತಿಧ್ವನಿ
March 18, 2023
ಬರ್ತಿದೆ ಲವ್‌ ಮಾಕ್ಟೇಲ್‌ 3..! ಗುಡ್‌ನ್ಯೂಸ್‌ ಕೊಟ್ಟ ಆದಿ-ನಿಧಿಮಾ
ಸಿನಿಮಾ

ಬರ್ತಿದೆ ಲವ್‌ ಮಾಕ್ಟೇಲ್‌ 3..! ಗುಡ್‌ನ್ಯೂಸ್‌ ಕೊಟ್ಟ ಆದಿ-ನಿಧಿಮಾ

by ಪ್ರತಿಧ್ವನಿ
March 23, 2023
A.SRINIVAS KOLAR | ಕೋಲಾರಕ್ಕೆ ಸಿದ್ದರಾಮಯ್ಯ ಬರದಿದ್ರೆ ನನಗೆ ಅವಕಾಶ ಕೊಡಿ : ಎ.ಶ್ರೀನಿವಾಸ್ |PRATIDHVANI
ಇದೀಗ

A.SRINIVAS KOLAR | ಕೋಲಾರಕ್ಕೆ ಸಿದ್ದರಾಮಯ್ಯ ಬರದಿದ್ರೆ ನನಗೆ ಅವಕಾಶ ಕೊಡಿ : ಎ.ಶ್ರೀನಿವಾಸ್ |PRATIDHVANI

by ಪ್ರತಿಧ್ವನಿ
March 20, 2023
ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ : Siddaramaiah Says He won’t be Able to Win in Kolar
Top Story

ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ : Siddaramaiah Says He won’t be Able to Win in Kolar

by ಪ್ರತಿಧ್ವನಿ
March 20, 2023
Next Post
ಬಿಹಾರದಲ್ಲಿ ಬಿಜೆಪಿಗೆ ಬಿಸಿ ತುಪ್ಪವಾದ NRC

ಬಿಹಾರದಲ್ಲಿ ಬಿಜೆಪಿಗೆ ಬಿಸಿ ತುಪ್ಪವಾದ NRC

ಮೋದಿ ಪ್ರಭಾವಳಿ ಹೆಚ್ಚಿಸಿದ ಪದಪುಂಜಗಳು ನಸು‌ನಗುತ್ತಿರುವುದೇಕೆ?

ಮೋದಿ ಪ್ರಭಾವಳಿ ಹೆಚ್ಚಿಸಿದ ಪದಪುಂಜಗಳು ನಸು‌ನಗುತ್ತಿರುವುದೇಕೆ?

ಪೌರತ್ವ ತಿದ್ದುಪಡಿ ಕಾಯ್ದೆ ಭಾರತೀಯ ಮುಸ್ಲಿಮರ ವಿರೋಧಿಯೇ?

ಪೌರತ್ವ ತಿದ್ದುಪಡಿ ಕಾಯ್ದೆ ಭಾರತೀಯ ಮುಸ್ಲಿಮರ ವಿರೋಧಿಯೇ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist