• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸದ್ದಿಲ್ಲದೇ ಬಜೆಟ್‌ನ ಅಂಕಿ ಅಂಶಗಳನ್ನು ಬದಲಾಯಿಸಿತೇ ವಿತ್ತ ಇಲಾಖೆ? 

by
February 6, 2020
in ದೇಶ
0
ಸದ್ದಿಲ್ಲದೇ ಬಜೆಟ್‌ನ ಅಂಕಿ ಅಂಶಗಳನ್ನು ಬದಲಾಯಿಸಿತೇ ವಿತ್ತ ಇಲಾಖೆ? 
Share on WhatsAppShare on FacebookShare on Telegram

ಫೆಬ್ರುವರಿ ಒಂದರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ ಮಂಡನೆ ಮಾಡುತ್ತಾ ಇಂದಿನ ಕಾಲಘಟ್ಟದಲ್ಲಿ ಡೇಟಾ ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ಮಾತನಾಡಿದರು. ನಾವು ಒದಗಿಸುವ ಡೇಟಾ ವಿಶ್ವಾಸಾರ್ಹ ಮೂಲವನ್ನು ಹೊಂದಿರಬೇಕು ಎಂದು ಅವರು ಪ್ರತಿಪಾದಿಸಿದರು. ಅವರ ಈ ಮಾತು ಅವರಿಗೇ ತಿರುಮಂತ್ರವಾಗಿದೆ. ಬಜೆಟ್‌ ಮಂಡಿಸಿದ ನಂತರ ಮಾಧ್ಯಮಗಳಿಗೆ ಎರಡು ಬಜೆಟ್‌ ಪ್ರತಿಗಳನ್ನು ನೀಡಲಾಗಿತ್ತು.

ADVERTISEMENT

PDF ಮತ್ತು Excel ಶೀಟ್‌ಗಳ ಪ್ರತ್ಯೇಕ ಪ್ರತಿಗಳನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ನೀಡಲಾಗಿತ್ತು. ಇವೆರಡನ್ನೂ ಗಮನಿಸಿದ ರಾಷ್ಟ್ರೀಯ ಮಾಧ್ಯಮವೊಂದು ಬಜೆಟ್‌ನಲ್ಲಿ ಅಂಕಿ ಅಂಶಗಳ ದೋಷವಿದೆಯೆಂದು, ಆ ಕುರಿತಾಗಿ ಹಣಕಾಸು ಇಲಾಖೆಗೆ ಇ-ಮೈಲ್‌ ಕಳುಹಿಸಿತ್ತು. ಇದನ್ನು ಮನಗಂಡ ಹಣಕಾಸು ಇಲಾಖೆ ಸದ್ದಿಲ್ಲದೇ, ಬಜೆಟ್‌ನ ಅಂಕಿ ಅಂಶಗಳನ್ನು ಬದಲಾಯಿಸಿದೆ.

“ವಿಶ್ವಾಸಾರ್ಹ ಮೂಲಗಳಿಂದ ಬಂದಿರುವ ಡೆಟಾ ವಿಶ್ಲೇಷಿಸಿ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗುವುದು,” ಎಂದಿದ್ದರು ನಿರ್ಮಲಾ ಸೀತಾರಾಮನ್‌. ಆದರೆ, ಅವರೇ ಮಂಡಿಸಿರುವ ಬಜೆಟ್‌ನ ಡೇಟಾ ಸರಿಯಿಲ್ಲದಿರುವುದು ಹಣಕಾಸು ಇಲಾಖೆಗೆ ತೀವ್ರ ಮುಜುಗರ ಉಂಟು ಮಾಡಿದೆ. ತಾವು ಹೇಳುವುದೊಂದು ಮಾಡುವುದೊಂದು ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಬಂದಿದೆ ಕೇಂದ್ರ ಸರ್ಕಾರ.

ಬಜೆಟ್‌ 2020-2021ನಲ್ಲಿ ಏನಿಲ್ಲವೆಂದರೂ ಕನಿಷ್ಟ ಪಕ್ಷ 14 ಇಂತಹ ಅಂಕಿ ಅಂಶಗಳ ದೋಷ ಇರುವುದನ್ನು ಆಂಗ್ಲ ಅಂತರ್ಜಾಲ ತಾಣ indiatoday.in ಪತ್ತೆ ಹಚ್ಚಿತ್ತು. ತಮ್ಮ ವೆಬ್‌ಸೈಟ್‌ನಲ್ಲಿ ಬಜೆಟ್‌ ಕುರಿತಾದ ವಿಶ್ಲೇ಼ಷಣೆಯನ್ನು ಬರೆಯಲು ಹೊರಟಿದ್ದವರಿಗೆ ಬಜೆಟ್‌ನಲ್ಲಿರುವ ಅಂಕಿ ಅಂಶ ದೋಷಗಳು ಕಂಡಿದ್ದವು. ಬಜೆಟ್‌ನ ಪ್ರತಿಯನ್ನು www.indiabudget.gov.in ಅಂತರ್ಜಾಲ ತಾಣದಲ್ಲಿ ಕೂಡಾ ಅಪ್ಲೋಡ್‌ ಮಾಡಲಾಗಿತ್ತು. ಇದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಬಜೆಟ್‌ ಮೀಸಲು ನೋಡಿದಾಗ ಹಲವು ಸಂಸ್ಥೆಗಳಿಗೆ ಹಾಗೂ ಯೋಜನೆಗಳಿಗೆ ಮೀಸಲಿರಿಸಿದ್ದ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಈವರೆಗೆ ಕಂಡು ಬಂದಿರುವ 14 ಅಂಕಿ ಅಂಶ ದೋಷಗಳು ಕೇವಲ ಒಂದು ಇಲಾಖೆಗೆ ಸೇರಿದಂತಹವು.

ಚಿತ್ರ ಕೃಪೆ: ಇಂಡಿಯಾ ಟುಡೆ

ಈ ಅಂಕಿ ಅಂಶದಲ್ಲಿನ ದೋಷಗಳ ಕುರಿತಾಗಿ ಇಂಡಿಯಾ ಟುಡೇ ಸಂಸ್ಥೆಯು ಹಣಕಾಸು ಇಲಾಖೆಯ ಅಧೀನದಲ್ಲಿರುವ ಆಯವ್ಯಯ ಇಲಾಖೆಗೆ ಇ-ಮೈಲ್‌ ಕಳುಹಿಸಿ ಸ್ಪಷ್ಟನೆಯನ್ನು ಕೇಳಿತ್ತು. ಈ ಸಂಧರ್ಭದಲ್ಲಿ, ಇ-ಮೈಲ್‌ಗೆ ಪ್ರತಿಕ್ರೀಯಿಸುವ ಗೋಜಿಗೆ ಹೋಗದ ಇಲಾಖೆ ಸದ್ದಿಲ್ಲದೇ ಅಂಕಿ ಅಂಶಗಳಲ್ಲಿ ಬದಲಾವಣೆಯನ್ನು ತಂದಿತು. ಇಂಡಿಯಾ ಟುಡೇ ಕಳುಹಿಸಿದ ಇ-ಮೈಲ್‌ನಲ್ಲಿ ಈ ಕೆಳಕಂಡ ಪ್ರಶ್ನೆಗಳನ್ನು ಕೇಳಲಾಗಿತ್ತು

  • ಕೇಂದ್ರ ಬಜೆಟ್‌ನಲ್ಲಿ ಮಂಡಿಸಲಾದ ಬಜೆಟ್‌ ಪ್ರತಿಗಳಲ್ಲಿ (PDF ಮತ್ತು Excel) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಬಜೆಟ್‌ನಲ್ಲಿ ಈ ರೀತಿಯ ಅಂಕಿ ಅಂಶ ದೋಷಗಳು ಏಕಾಗಿವೆ?
  • ದೋಷಪೂರಿತವಾದ ಬಜೆಟ್‌ ಪ್ರತಿಗಳಲ್ಲಿ ಯಾವ ಅಂಕಿ ಅಂಶವನ್ನು ನಾವು ವಿಶ್ಲೇಷಣೆಗೆ ಪರಿಗಣಿಸಬೇಕು?
  • ಸರ್ಕಾರವು ಈ ದೋಷಗಳನ್ನು ಸರಿಪಡಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹೊಸ ಬಜೆಟ್‌ ಪ್ರತಿಯನ್ನು ಬಿಡುಗಡೆ ಮಾಡಲಿದೆಯೇ? ಒಂದು ವೇಳೆ ಆ ರೀತಿ ಮಾಡಿದ್ದಲ್ಲಿ ಯಾವಾಗ ಹೊಸ ಬಜೆಟ್‌ ಪ್ರತಿ ಬಿಡುಗಡೆಯಾಗಬಹುದು?

ಈ ಮೂರು ಪ್ರಶ್ನೆಗಳನ್ನು ಹೊಂದಿರುವ ಇ-ಮೈಲ್‌ ಅನ್ನು ಫೆಬ್ರುವರಿ 4ರಂದು ಬೆಳಿಗ್ಗೆ 11.12ಕ್ಕೆ dprfinance@gamil.com ಇ-ಮೈಲ್‌ ವಿಳಾಸಕ್ಕೆ ಕಳುಹಿಸಲಾಗಿತ್ತು. ಈ ಇ-ಮೈಲ್‌ಗೆ ಇನ್ನೂ ಉತ್ತರ ನೀಡದ ಹಣಕಾಸು ಇಲಾಖೆ, Excel ಪ್ರತಿಯಲ್ಲಿನ ಅಂಕಿ ಅಂಶಗಳನ್ನು ತಿದ್ದಿ ಅಧಿಕೃತ ಅಂತರ್ಜಾಲ ತಾಣದಲ್ಲಿ ಮತ್ತೆ ಅಪ್ಲೋಡ್‌ ಮಾಡಿದೆ. PDFನಲ್ಲಿರುವ ಅಂಕಿ ಅಂಶಗಳನ್ನು ಉಳಿಸಿ ಕೇವಲ Excelನಲ್ಲಿದ್ದ ಅಂಕಿ ಅಂಶಗಳನ್ನು ತಿದ್ದಲಾಗಿದೆ. ಈ ವಿಷಯವನ್ನು ಯಾರ ಗಮನಕ್ಕೂ ತರದೆ ಅಂಕಿ ಅಂಶ ತಿದ್ದುಪಡಿಯ ಕಾರ್ಯ ನಡೆದಿದೆ. ಹಳೆಯ ಎರಡೂ ಪ್ರತಿಗಳು ತಮ್ಮಲ್ಲಿವೆ ಎಂದು ಇಂಡಿಯಾ ಟುಡೆ ಸಂಸ್ಥೆಯು ಹೇಳಿಕೊಂಡಿದೆ. ಹೊಸ ಪ್ರತಿಗಳಲ್ಲಿರುವ ಅಂಕಿ ಅಂಶಗಳು ಈಗ ಒಂದಕ್ಕೊಂದು ತಾಳೆಯಾಗುತ್ತಿವೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ, ವಿಶ್ವಾಸಾರ್ಹವಾದ ಮೂಲಗಳಿಂದ ಪಡೆದ ಡೆಟಾ ಬಳಸಿ ತಯಾರಿಸಿರುವ ಬಜೆಟ್‌ ಎಂದು ಹೇಳಿಕೊಂಡಿರುವ ನಿರ್ಮಾಲಾ ಸೀತಾರಾಮನ್‌ ಅವರು ಬಜೆಟ್‌ಗಾಗಿ ಪರಿಗಣಿಸಿದ ವಿಶ್ವಾಸಾರ್ಹ ಮೂಲ ವಿಕಿಪೀಡಿಯಾ. ವಿಕಿಪೀಡಿಯಾ ಅತ್ಯಂತ ಜನಪ್ರಿಯ ಅಂತರ್ಜಾಲ ತಾಣ ನಿಜ, ಆದರೆ, ಅಲ್ಲಿರುವ ಅಂಕಿ ಅಂಶಗಳು ವಿಶ್ವಾಸಾರ್ಹವೇ ಎಂಬುದು ಪ್ರಶ್ನೆ.

ಕೃಪೆ: Indiatoday.in

Tags: Budget 2020Data discrepancyNirmala SitaramanUnion Finance Ministryಬಜೆಟ್ಬಜೆಟ್‌ 2020ವಿತ್ತ ಇಲಾಖೆವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
Previous Post

ಐಟಿ ತೂಗುಗತ್ತಿಯಿಂದ ಪಾರಾದ ರಜನೀಕಾಂತ್ “ಪೌರತ್ವ” ಬೆಂಬಲಿಸಿದ್ದರ ಮರ್ಮವೇನು?

Next Post

ಕರೋನಾವೈರಸ್ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆಯೇ ಚೀನಾ?

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
Next Post
ಕರೋನಾವೈರಸ್ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆಯೇ ಚೀನಾ?

ಕರೋನಾವೈರಸ್ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆಯೇ ಚೀನಾ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada