• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನಾಲ್ಕು ಗೋಡೆಯ ನಡುವೆ ನಡೆಯುವುದು ಜಾತಿ ನಿಂದನೆ ಅಲ್ಲ: ಸುಪ್ರೀಂ ಕೋರ್ಟ್

by
November 7, 2020
in ದೇಶ
0
ನಾಲ್ಕು ಗೋಡೆಯ ನಡುವೆ ನಡೆಯುವುದು ಜಾತಿ ನಿಂದನೆ ಅಲ್ಲ: ಸುಪ್ರೀಂ ಕೋರ್ಟ್
Share on WhatsAppShare on FacebookShare on Telegram

ಎರಡು ವರ್ಷಗಳ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ ಮೂಲ ಆಶಯವನ್ನು ದುರ್ಬಲಗೊಳಿಸಿದೆ ಎಂಬ ಆಕ್ರೋಶಕ್ಕೆ ಕಾರಣವಾಗಿದ್ದ ವಿವಾದಾತ್ಮಕ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಇದೀಗ ಮತ್ತೊಂದು ಅಂತಹದ್ದೇ ತೀರ್ಪು ನೀಡಿದ್ದು, ನಾಲ್ಕು ಗೋಡೆಯ ನಡುವೆ ಎಸ್ಸಿ/ಎಸ್ಟಿ ಸಮುದಾಯದ ವ್ಯಕ್ತಿಗೆ ಮಾಡುವ ನಿಂದನೆ ಅಥವಾ ಅವಮಾನವನ್ನು ದೌರ್ಜನ್ಯ ತಡೆ ಕಾಯ್ದೆ ವ್ಯಾಪ್ತಿಯಲ್ಲಿ ಅಪರಾಧ ಎನ್ನಲಾಗದು ಎಂದಿದೆ.

ADVERTISEMENT

ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರಿಗೆ ಆಕೆಯ ಮನೆಯ ಒಳಗೆ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪರಿಶಿಷ್ಟ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳ ವಿರುದ್ಧದ ಎಲ್ಲಾ ಬಗೆಯ ಬೆದರಿಕೆ, ದೌರ್ಜನ್ಯ, ಅವಮಾನ ಮತ್ತು ನಿಂದನೆಗಳೆಲ್ಲವನ್ನೂ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ(ಜಾತಿ ನಿಂದನೆ) ವ್ಯಾಪ್ತಿಯ ಅಪರಾಧಗಳೆಂದು ಪರಿಗಣಿಸಲಾಗದು. ಕೇವಲ ಸಂತ್ರಸ್ತರು ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದಾರೆ ಎಂಬುದರ ಮೇಲೆ ಅವರ ವಿರುದ್ಧದ ಎಲ್ಲಾ ಬಗೆಯ ಅಪರಾಧಗಳನ್ನೂ ಈ ಕಾಯ್ದೆಯಡಿ ನೋಡಲಾಗದು. ಪರಿಶಿಷ್ಟ ಸಮುದಾಯಗಳಿಗೆ ಸೇರಿದ ವ್ಯಕ್ತಿಯ ವಿರುದ್ಧದ ಅಪರಾಧವನ್ನು ಅವರ ಜಾತಿಯ ಕಾರಣಕ್ಕೆ ಅವರನ್ನು ಅವಮಾನಗೊಳಿಸುವ, ನಿಂದಿಸುವ, ಘನತೆಗೆ ಧಕ್ಕೆ ತರುವ, ಕಿರುಕುಳ ಅಥವಾ ದೌರ್ಜನ್ಯಕ್ಕೆ ಒಳಪಡಿಸುವ ಉದ್ದೇಶದಿಂದಲೇ ನಡೆಸಿದ್ದರೆ ಮಾತ್ರ ಅದನ್ನು ಈ ಕಾಯ್ದೆಯಡಿ ಪರಿಗಣಿಸಬಹುದು ಎಂದು ಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್, ಹೇಮಂತ್ ಗುಪ್ತಾ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ. ಸಾರ್ವಜನಿಕವಾಗಿ, ಸಾಕ್ಷ್ಯಗಳ ಎದುರಲ್ಲಿ ನಡೆಸಿದ ನಿಂದನೆ ಮತ್ತು ದೌರ್ಜನ್ಯಗಳನ್ನು ಮಾತ್ರ ಜಾತಿ ನಿಂದನೆ ಪ್ರಕರಣವೆಂದು ಪರಿಗಣಿಸಬಹುದು. 2008ರ ತನ್ನದೇ ತೀರ್ಪಿನ ಹಿನ್ನೆಲೆಯಲ್ಲಿ ಈ ‘ಸಾರ್ವಜನಿಕ ಸ್ಥಳ’ ಅಥವಾ ‘ಸಾರ್ವಜನಿಕ ಗಮನದ ಯಾವುದೇ ಸ್ಥಳ’ ಎಂಬುದನ್ನು ಅರ್ಥೈಸಲಾಗಿದೆ ಎಂಬುದನ್ನೂ ಪೀಠ ಸ್ಪಷ್ಟಪಡಿಸಿದೆ.

ಮನೆಯ ಹೊರಗೆ, ಮನೆಯ ಅಂಗಳದಲ್ಲಿ ಸಾರ್ವಜನಿಕರಿಗೆ, ದಾರಿಹೋಕರಿಗೆ ಕಾಣಿಸುವ ರೀತಿಯಲ್ಲಿ ಘಟನೆ ನಡೆದಿದ್ದರೆ ಖಂಡಿತವಾಗಿಯೂ ಅದು ಜಾತಿ ನಿಂದನೆ ಕಾಯ್ದೆಯ ವ್ಯಾಪ್ತಿಯೊಳಗೆ ಬರುತ್ತದೆ. ಆದರೆ, ಒಂದು ವೇಳೆ ಅಂತಹ ನಿಂದನೆ ಮತ್ತು ದೌರ್ಜನ್ಯದ ಘಟನೆ ಮನೆಯ ನಾಲ್ಕು ಗೋಡೆಗಳ ನಡುವೆ, ಸಾರ್ವಜನಿಕರ ಅವಗಾಹನೆಗೆ ಬರದ ರೀತಿಯಲ್ಲಿ ನಡೆದಿದ್ದರೆ, ಅದನ್ನು ಇತರೆ ಕಾನೂನುಗಳಡಿ ಸಾಮಾನ್ಯ ಅಪರಾಧವೆಂದು ಪರಿಗಣಿಸಬಹುದೇ ವಿನಃ, ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಗಣಿಸಲಾಗದು ಎಂಬುದನ್ನು ಪೀಠ ಹೇಳಿದೆ.

ಈ ನಿರ್ದಿಷ್ಟ ಪ್ರಕರಣದಲ್ಲಿ ಮಹಿಳೆಯ ಮನೆಯ ನಾಲ್ಕು ಗೋಡೆಯ ನಡುವೆ ಆರೋಪಿ ನಿಂದಿಸಿರುವುದಾಗಿ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಹಾಗಾಗಿ ಜಾತಿ ನಿಂದನೆ ಕಾಯ್ದೆಯ ವ್ಯಾಪ್ತಿಯಲ್ಲಿ ಇದನ್ನು ಅಪರಾಧ ಎಂದು ಪರಿಗಣಿಸಲಾಗದು. ಉಳಿದಂತೆ ಆ ವ್ಯಕ್ತಿಯ ವಿರುದ್ಧದ ಆರೋಪಗಳನ್ನು ಸಾಮಾನ್ಯ ಕಾನೂನುಗಳಡಿ ಪರಿಗಣಿಸಿ, ಪ್ರತ್ಯೇಕ ಪ್ರಕರಣದ ದಾಖಲಿಸಿಕೊಂಡು ವಿಚಾರಣೆ ನಡೆಸಬಹುದು ಎಂದು ನಿರ್ದೇಶನ ನೀಡಿದ ಪೀಠ, ಜಾತಿ ನಿಂದನೆ ಕಾಯ್ದೆಯಡಿ ಸಲ್ಲಿಸಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದೆ.

ಜಾತಿ ನಿಂದನೆ ಕಾಯ್ದೆಯ ಮೂಲ ಆಶಯ, ಯಾವುದೇ ಪರಿಶಿಷ್ಟ ಜಾತಿ/ ಪಂಗಡದ ವ್ಯಕ್ತಿಗಳಿಗೆ ಅವರ ಜಾತಿಯ ಕಾರಣಕ್ಕಾಗಿ ಮಾಡುವ ಅವಮಾನ, ನಿಂದನೆ, ದೌರ್ಜನ್ಯಗಳನ್ನು ತಡೆಯುವುದು ಮತ್ತು ಅಂತಹ ಉದ್ದೇಶಿತ ಕೃತ್ಯಗಳನ್ನು ಎಸಗುವ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಾಗಿದೆ. ಸಮಾಜದ ದುರ್ಬಲ ಸಮುದಾಯಗಳ ವಿರುದ್ಧ ಮೇಲ್ಜಾತಿಯ ಜನ ನಡೆಸುವ ದಬ್ಭಾಳಿಕೆಯನ್ನು ತಡೆಯುವುದು ಜಾತಿ ನಿಂದನೆ ಕಾಯ್ದೆಯ ಉದ್ದೇಶ. ಆದರೆ, ಅಂತಹ ಸಮುದಾಯಗಳ ಜನರ ವಿರುದ್ಧ ನಡೆಯುವ ಎಲ್ಲಾ ಅಪರಾಧಗಳನ್ನೂ ಈ ಕಾಯ್ದೆಯಡಿ ಜಾತಿ ಉದ್ದೇಶಿತ ಅಪರಾಧಗಳು ಎಂದು ಪರಿಗಣಿಸಲಾಗದು ಎಂಬುದು ತೀರ್ಪಿನ ಸಾರಾಂಶ.

Tags: SCs/STssupreme courtಜಾತಿ ನಿಂದನೆಸುಪ್ರೀಂ ಕೋರ್ಟ್
Previous Post

ಸರ್ಕಾರಿ ನೌಕರರ ಕುಟುಂಬ ಸದಸ್ಯರನ್ನು ನಿಯಂತ್ರಿಸುವುದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ – ಸಿದ್ದರಾಮಯ್ಯ

Next Post

ಕರ್ನಾಟಕ: 2258 ಹೊಸ ಕರೋನಾ ಪ್ರಕರಣಗಳು ಪತ್ತೆ

Related Posts

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!
Top Story

ಅನಗತ್ಯ ಹೇಳಿಕೆ ನೀಡಿದ್ರೆ ಶಿಸ್ತುಕ್ರಮ : ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್‌ ವಾರ್ನ್..!

by ಪ್ರತಿಧ್ವನಿ
April 13, 2026
0

ಬೆಂಗಳೂರು : ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು" ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ...

Read moreDetails
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

ಕೈ ಶಾಸಕರ ದೆಹಲಿ ಯಾತ್ರೆ : ಹೈಕಮಾಂಡ್‌ ಭೇಟಿಯ ಹಿಂದೆ ಯಾರ ಕೈವಾಡ.? ಸಂಪುಟ ವಿಸ್ತರಣೆಯಾದ್ರೆ ಯಾರಿಗೆಲ್ಲ ಮಂತ್ರಿಗಿರಿ..?

April 13, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್ ಎಲ್ಲಿದ್ದಾರೆ ?

April 13, 2026
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
Next Post
ಕರ್ನಾಟಕ: 2258 ಹೊಸ ಕರೋನಾ ಪ್ರಕರಣಗಳು ಪತ್ತೆ

ಕರ್ನಾಟಕ: 2258 ಹೊಸ ಕರೋನಾ ಪ್ರಕರಣಗಳು ಪತ್ತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada