ಮುಡಾ ಪ್ರಕರಣದಲ್ಲಿ (Muda scam) ಸಿಎಂ ಸಿದ್ದರಾಮಯ್ಯ (Cm siddaramaiah) ಅರ್ಜಿ ವಿಚಾರಣೆಯಲ್ಲಿ ಹೊರಹೊಮ್ಮಿರುವುದು ಪೊಲಿಟಿಕಲ್ ಜಡ್ಜ್ ಮೆಂಟ್ (Political judgement) ಎಂಬ ವಿವಾದಾತ್ಮಕ ಹೇಳಿಕೆ ಹಿನ್ನೆಲೆ, ಜಮೀರ್ ವಿರುದ್ಧ ತೀವ್ರ ಟೀಕೆಗಳು ಕೇಳಿ ಬಂದು.

ಹೀಗಾಗಿ ವಸತಿ ಸಚಿವ ಜಮೀರ್ ಅಹಮ್ಮದ್ (Zameer ahmemad khan) ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ನ್ಯಾಯಾಲಯದ ತೀರ್ಪನ್ನ ರಾಜಕೀಯ ತೀರ್ಪು ಎಂಬ ಹೇಳಿಕೆ ನೀಡಿಲ್ಲ. ನ್ಯಾಯಾಲಯದ ಬಗ್ಗೆ ನನಗೆ ಗೌರವ ಇದೆ, ಬಾಯಿ ತಪ್ಪಿ ನಾನು ಹೇಳಿದ್ದೇನೆ.ಆ ಹೇಳಿಕೆ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಈ ವಿಷಯದಲ್ಲಿ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾನು ಮಾತನಾಡಿದ್ದೇನೆ. ಪೊಲಿಟಿಕಲ್ ಜಡ್ಜ್ಮೆಂಟ್ ಅಂತ ಹೇಳಿದ್ದೆ.ಆದ್ರೆ ನಾನು ಹೇಳಿದ ಅರ್ಥ ಪೊಲಿಟಿಕಲ್ ಬೆನಿಫಿಟ್ (Political benifit) ತೆಗೆದುಕೊಳ್ಳಲು ಅನ್ನೋದು ಅಂತ ಹೇಳಿದ್ದಾರೆ.