ಕರ್ನಾಟಕ ಅಷ್ಟೇ ಅಲ್ಲದೆ ರಾಷ್ಟ್ರ ಮಟ್ಟದಲ್ಲೂ ವಿಡಿಯೋ ವೈರಲ್ ಕೇಸ್ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಲೈಂಗಿಕ ದೌರ್ಜ್ಯನ Sexual Harassment ಕೇಸ್ನಲ್ಲಿ ಆರೋಪಿ ಆಗಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಕಿಡ್ನ್ಯಾಪ್ Kidnap Case ಕೇಸ್ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಶನಿವಾರ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಜನಪ್ರತಿನಿಧಿಗಳ ಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ದೇವೇಗೌಡರ H.D Devegowda ಮನೆಯಲ್ಲೇ ಇದ್ದ ರೇವಣ್ಣನನ್ನು SIT ಟೀಂ ಬಂಧನಕ್ಕೆ ಒಳಪಡಿಸಿದೆ. ಆದರೆ ಇದನ್ನೆಲ್ಲಾ ಮೊದಲೇ ಅರಿತಿದ್ದ ರೇವಣ್ಣ H.D Revanna, ರಾಘವೇಶ್ವರ ಶ್ರೀಗಳನ್ನು Raghaveswara Shree ಗೌಪ್ಯ ಸ್ಥಳದಲ್ಲಿ ಭೇಟಿ ಮಾಡಿ ಸಲಹೆ ಸೂಚನೆಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ರಾಘವೇಶ್ವರ ಶ್ರೀಗಳ ಕೊಟ್ಟಿರುವ ಸಲಹೆ ಏನು ಅನ್ನೋದನ್ನು ನಿಮ್ಮ Prathidvani ಬಿಡಿಸಿಡುವ ಪ್ರಯತ್ನ ಮಾಡಿದೆ.
![](https://pratidhvani.com/wp-content/uploads/2024/05/IMG-20240505-WA0019-1024x575.jpg)
ರಾಘವೇಶ್ವರ ಶ್ರೀಗಳು ಪೀಠದಲ್ಲಿ ಹೇಳಿದ್ದು ಸುಳ್ಳಾಗಲ್ವಾ..?
ರಾಮಚಂದ್ರಾಪುರ ಮಠದ ಶ್ರೀಗಳಾದ ರಾಘವೇಶ್ವರ ಶ್ರೀಗಳಿಗೆ ಸೇರಿದ ಮಠ, ಹತ್ತಾರು ಶಾಖಾ ಮಠಗಳು ರಾಜ್ಯಾದ್ಯಂತ ಇದ್ದು, ರಾಘವೇಶ್ವರ ಶ್ರೀಗಳನ್ನು ನಂಬುವ ಜನರು ಇಂದಿಗೂ ಕಡಿಮೆ ಆಗಿಲ್ಲ. ಶ್ರೀಗಳ ಮೇಲೆ ಕೇಳಿಬಂದಿದ್ದ ಆರೋಪದಿಂದ ಹೊರಬಂದ ಬಳಿಕವೂ ಶ್ರೀಗಳನ್ನು ನಂಬುವ ಜನ ಯೆಥೇಚ್ಛವಾಗಿದ್ದಾರೆ. ಅಷ್ಟಕ್ಕೂ ಶ್ರೀಗಳು ಪೀಠದಲ್ಲಿ ಧ್ಯಾನಕ್ಕೆ Dhyana ಕುಳಿತಾಗ, ಭಕ್ತರು Devotees ಹೇಳಿಕೊಳ್ಳುವ ಸಮಸ್ಯೆಗೆ ಮನಸ್ಸಿಗೆ ತೋಚಿದ ಸಲಹೆ ನೀಡುತ್ತಾರೆ. ಆ ಸಲಹೆಗಳನ್ನು ಚಾಚೂತಪ್ಪದೆ ಪಾಲನೆ ಮಾಡಿದರೆ, ಮುಂದಿನ ಸಮಸ್ಯೆಗಳು ಕರ್ಪೂರದಂತೆ ಕರಗಿ ಹೋಗುತ್ತದೆ ಎನ್ನುವುದು ರಾಮಚಂದ್ರಾಪುರ ಮಠದ ಭಕ್ತರ ನಂಬಿಕೆ. ಇದೇ ಕಾರಣಕ್ಕಾಗಿ ಸಮಸ್ಯೆಗಳ ಸಂಕೋಲೆಯಲ್ಲಿ ಸಿಲುಕುವ ಮುನ್ಸೂಚನೆ ಅರಿತಿದ್ದ ಹೆಚ್.ಡಿ ರೇವಣ್ಣ ರಾಘವೇಶ್ವರ ಶ್ರೀಗಳನ್ನು ಭೇಟಿ ಮಾಡಿ ಸಲಹೆ Suggestions ಪಡೆದಿದ್ದಾರೆ ಎನ್ನುವುದು ಗಮನಾರ್ಹ
![](https://pratidhvani.com/wp-content/uploads/2024/05/IMG-20240505-WA0020.jpg)
.
ರೇವಣ್ಣಗೆ ಶ್ರೀಗಳು ಕೊಟ್ಟಿರುವ ಸಲಹೆ ಏನಿರಬಹುದು..?
ರೇವಣ್ಣ ಮಹಾನ್ ದೈವಭಕ್ತ ಅನ್ನೋದ್ರಲ್ಲಿ ಅನುಮಾನವಿಲ್ಲ. ಶಾಸ್ತ್ರ, ಜ್ಯೋತಿಷ್ಯವನ್ನು ಚಾಚೂತಪ್ಪದೆ ಪಾಲಿಸುವ ರೇವಣ್ಣ, ಶನಿವಾರ ಬಂಧನದ ವೇಳೆಯಲ್ಲೂ ಕೆಲವೊಂದು ನಿಯಮಗಳನ್ನು ಪಾಲಿಸಿದರು. ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ ಆಗ್ತಿದ್ದ ಹಾಗೆ ಸಂಜೆ 6.30ಕ್ಕೆ ಎಸ್ಐಟಿ ಅಧಿಕಾರಿಗಳ ತಂಡ ದೇವೇಗೌಡರ ಮನೆ ಬಾಗಿಲು ಬಡಿದಿತ್ತು. ಆದರೆ ಸಂಜೆ 6.50ಕ್ಕೂ ಮುನ್ನ ಬಾಗಿಲು Did Not Open Door ತೆರೆಯಲಿಲ್ಲ. ಆ ಬಳಿಕ ಬಾಗಿಲು ತೆರೆದ ರೇವಣ್ಣ ಯಾವುದೇ ಪ್ರತಿರೋಧವನ್ನೂ ತೋರಿಸದೆ ಅಧಿಕಾರಿಗಳ ಜೊತೆಗೆ ಹೆಜ್ಜೆ ಹಾಕಿದ್ದರು. ಸಂಜೆ 6.50 ರ ಬಳಿಕವೇ ಪೊಲೀಸರಿಗೆ ಹೆಚ್.ಡಿ ರೇವಣ್ಣ ಶರಣಾಗಿದ್ದು ಯಾಕೆ..? ಅನ್ನೋ ಚರ್ಚೆ ಕೂಡ ಮಾಧ್ಯಮಗಳಲ್ಲಿ ನಡೆದಿತ್ತು. ಲಗ್ನ ಸರಿಯಿಲ್ಲದ ಕಾರಣಕ್ಕೆ ಕಾದು ಬಾಗಿಲು ತೆರೆದಿದ್ದರು ಎನ್ನಲಾಗಿತ್ತು.
![](https://pratidhvani.com/wp-content/uploads/2024/05/IMG-20240506-WA0000.jpg)
ರಾಘವೇಶ್ವರ ಶ್ರೀಗಳ ಸೂಚನೆ ಪಾಲಿಸ್ತಿದ್ದಾರಾ ರೇವಣ್ಣ..?
ಇನ್ನೂ ಭಾನುವಾರ ಮಧ್ಯಾಹ್ನದಿಂದಲೇ ಜಡ್ಜ್ Judge ಎದುರು ಹಾಜರು ಮಾಡಲು ಎಸ್ಐಟಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಎಲ್ಲಾ ಮಾಧ್ಯಮಗಳಲ್ಲೂ ಕೆಲವೇ ಕ್ಷಣಗಳಲ್ಲಿ ಜಡ್ಜ್ ಎದುರು ಹಾಜರು ಅನ್ನೋ ಸುದ್ದಿ ಪದೇ ಪದೇ ಬರುತ್ತಲೇ ಇತ್ತು. ಆದರೂ ಜಡ್ಜ್ ಎದುರು ಹಾಜರಾಗಿದ್ದು ಕೂಡ ಸಂಜೆ 6.50ರ Evening After 6.50PM ಬಳಿಕ ಅನ್ನೋದು ವಿಶೇಷ. ಸಾಮಾನ್ಯವಾಗಿ ಹೈಪ್ರೊಫೈಲ್ ಕೇಸ್ಗಳಲ್ಲಿ ಅಧಿಕಾರಿಗಳು ಹೆಚ್ಚಿನ ಸಮಸ್ಯೆ ತಂದುಕೊಳ್ಳಲು ಬಯಸಲ್ಲ. ಅರೆಸ್ಟ್ ಮಾಡ್ತಿದ್ದ ಹಾಗೆ ನೇರವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿ ಕೋರ್ಟ್/ಜಡ್ಜ್ ಎದುರು ಹಾಜರು ಮಾಡುತ್ತಾರೆ. ಆದರೆ ರೇವಣ್ಣನ ವಿಚಾರದಲ್ಲಿ ಹಾಗೆ ಆಗಲಿಲ್ಲ. 24 ಗಂಟೆಯಲ್ಲಿ ಹಾಜರು ಮಾಡಲಾಗಿದೆ. ಇದೆಲ್ಲವನ್ನೂ ನೋಡಿದಾಗ ರಾಘವೇಶ್ವರ ಶ್ರೀಗಳು ಕೊಟ್ಟಿರುವ ಸಲಹೆ ಸೂಚನೆಯನ್ನು ರೇವಣ್ಣ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಎಂದೆನಿಸುತ್ತದೆ ಅಲ್ಲವೇ..?
ಕೃಷ್ಣಮಣಿ