ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್*Ajit Pawar) ಅವರ ವಿಮಾನ ಅಪಘಾತ ಆಗುವ ಆರು ನಿಮಿಷಗಳ ಮೊದಲು ಅವರು ಮಾಡಿದ ಫೋನ್ ಕರೆಯ ರೆಕಾರ್ಡಿಂಗ್ ಈಗ ಹೊರಬಂದಿದೆ.ಜನವರಿ 28, 2026 ರಂದು ಬಾರಾಮತಿ ವಿಮಾನ ನಿಲ್ದಾಣದಲ್ಲಿ ವಿಮಾನ ಪತನಗೊಳ್ಳುವ ಸ್ವಲ್ಪ ಸಮಯದ ಮೊದಲು ಅಜಿತ್ ಪವಾರ್ ಅವರು ತಮ್ಮ ಸೋದರಸಂಬಂಧಿ ಮತ್ತು ಪಕ್ಷದ ಕಾರ್ಯಕರ್ತ ಶ್ರೀಜಿತ್ ಪವಾರ್ ಅವರೊಂದಿಗೆ ಮಾತನಾಡಿದ್ದರು ಎನ್ನಲಾಗುತ್ತಿದೆ.

ಇಬ್ಬರು ನಾಯಕರ ನಡುವಿನ ಸಂಭಾಷಣೆ ಹೀಗಿತ್ತು:
ಅಜಿತ್ ಪವಾರ್: ನಾವು ಎಲ್ಲ ಜಾತಿ ಮತ್ತು ಧರ್ಮಗಳನ್ನು ನಮ್ಮೊಂದಿಗೆ ಕರೆದುಕೊಂಡು ಹೋಗಬೇಕು.
ಶ್ರೀಜೀತ್ ಪವಾರ್: ದಾದಾ, ನಾನು ನನಗೆ ಅನಿಸಿದ್ದನ್ನು ಹೇಳಿದ್ದೇನೆ.
ಅಜಿತ್ ಪವಾರ್: ಜಿಲ್ಲಾ ಪರಿಷತ್ನಲ್ಲಿ ಸೂಪೆ ಗುಂಪಿನಿಂದ ಮಾಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದೆ. ನಾವು ಎಲ್ಲರಿಗೂ ನ್ಯಾಯ ಒದಗಿಸಲು ಪ್ರಯತ್ನಿಸಿದ್ದೇವೆ.
ಶ್ರೀಜೀತ್ ಪವಾರ್: ಹೌದು, ದಾದಾ, ನಿಮಗೆ ಸರಿ ಎಂದು ಭಾವಿಸುವ ಯಾವುದೇ ನಿರ್ಧಾರ ತೆಗೆದುಕೊಳ್ಳಿ.

ನಾನು ಅವರಿಗೆ ಒಂದು ನಿರ್ದಿಷ್ಟ ವಿಷಯದ ಕುರಿತು ಸಂದೇಶ ಕಳುಹಿಸಿದ್ದೆ. ನೆಟ್ವರ್ಕ್ ಕವರೇಜ್ ಸಿಕ್ಕ ತಕ್ಷಣ ಅವರು ನನಗೆ ಕರೆ ಮಾಡಿದರು. ನಾವು ಎಲ್ಲ ಜಾತಿ ಮತ್ತು ಧರ್ಮಗಳನ್ನು ನಮ್ಮೊಂದಿಗೆ ಕರೆದೊಯ್ಯುತ್ತಿದ್ದೇವೆ ಎಂದು ಅವರು ಹೇಳಿದರು.ಈ ಆಡಿಯೋ ಬಹಿರಂಗಗೊಳ್ಳಲು ಕಾರಣವೇನೆಂದರೆ ಅಜಿತ್ ದಾದಾ ಅವರ ಕೊನೆಯ ಉಸಿರಿನವರೆಗೂ ಅವರ ಆಲೋಚನೆಗಳು ಏನೆಂದು ಮಹಾರಾಷ್ಟ್ರಕ್ಕೆ ತಿಳಿಯುವಂತೆ ಮಾಡಲು ಈ ಕರೆ ರೆಕಾರ್ಡಿಂಗ್ ಅನ್ನು ಎಲ್ಲರ ಗಮನಕ್ಕೆ ತರುವ ಪ್ರಯತ್ನ ಇದಾಗಿದೆ’ ಎಂದು ಶ್ರೀಜೀತ್ ಪವಾರ್ ಹೇಳಿದರು.






