ರಷ್ಯಾದ ಆಕ್ರಮಣದಿಂದ ಅಕ್ಷರಸಂ ತತ್ತರಿಸಿರುವ ಉಕ್ರೇನ್ ಈಗ ಸಂಪೂರ್ಣ ರಣಾಂಗಣವಾಗಿ ಬದಲಾಗಿದೆ. ರಷ್ಯಾದೊಂದಿಗೆ ಮಾತುಕತೆಗೆ ಸಿದ್ಧ ಆದರೆ ಬೆಲಾರಸ್ನಲ್ಲಿ ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಹೇಳಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ (ukraine, russia) ನಡುವಿನ ಕದನ ಸಂಬಂಧ ಮಾತುಕಥೆಗೆ ರಷ್ಯಾವು ಉಕ್ರೇನ್ಅನ್ನು ಬೆಲಾರಸ್ಗೆ (Belarus) ಆಹ್ವಾನಿಸಿದೆ. ರಷ್ಯಾದ ನಿಯೋಗ ಕೂಡ ಬೆಲಾರಸ್ನಲ್ಲಿದೆ. ಆದರೆ ಉಕ್ರೇನ್ ಮಾತುಕತೆಗೆ ಸಿದ್ಧ ಆದರೆ ಬೆಲಾರಸ್ನಲ್ಲಿ ಸಾಧ್ಯವಿಲ್ಲ ಎಂದು ತನ್ನದೇ ಆದ ಕಾರಣಗಳನ್ನು ಉಕ್ರೇನ್ ನೀಡಿದೆ.
‘‘ಉಕ್ರೇನ್ಗೆ ಮಾತುಕತೆ ನಡೆಸಲು ಮುಕ್ತ ಮನಸ್ಸಿದೆ. ಆದರೆ ಬೆಲಾರಸ್ನಲ್ಲ. ಕಾರಣ, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲುಬೆಲಾರಸ್ಅನ್ನು ಲಾಂಚ್ ಪ್ಯಾಡ್ನಂತೆ ಬಳಸುತ್ತಿದೆ. ಆದ್ದರಿಂದ ಅಲ್ಲಿ ಮಾತುಕತೆ ನಡೆಸುವುದಿಲ್ಲ’’ ಎಂದಿದೆ. ಅಷ್ಟೇ ಅಲ್ಲ, ಈ ಮಾತುಕತೆಗೆ ‘ವಾರ್ಸಾ, ಬ್ರಟಿಸ್ಲಾವಾ, ಬುಡಾಪೆಸ್ಟ್, ಇಸ್ತಾಂಬುಲ್, ಬಕು’ ಮೊದಲಾದ ಪ್ರದೇಶಗಳನ್ನು ಹೆಸರಿಸಿದ್ದೆವು’ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ಭಾನುವಾರ ರಷ್ಯಾದ ಪಡೆಗಳು ಉಕ್ರೇನ್ನ ಎರಡನೇ ಅತಿದೊಡ್ಡ ನಗರವಾದ, ಸದ್ಯ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಖಾರ್ಕಿವ್ಗೆ ಪ್ರವೇಶಿಸಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಖಾರ್ಕಿವ್ ಬೀದಿಗಳಲ್ಲಿ ಹೋರಾಟದ ವರದಿಗಳಾಗಿವೆ. ರಷ್ಯಾದ ಪಡೆಗಳು ನಗರಕ್ಕೆ ನುಗ್ಗಿ ದಾಳಿ ಆರಂಭಿಸಿವೆ.