
—ನಾ ದಿವಾಕರ—
ಸಂಸದೀಯ ಪ್ರಜಾತಂತ್ರದಲ್ಲಿ ರಾಜ್ಯಪಾಲರು ಸಂವಿಧಾನ ರಕ್ಷಕರಂತೆ ಇರಬೇಕಾಗುತ್ತದೆ
1947ರಲ್ಲಿ ವಸಾಹತುಶಾಹಿ ದಾಸ್ಯದಿಂದ ವಿಮೋಚನೆ ಪಡೆದ ಭಾರತದ ಮುಂದಿದ್ದ ಪ್ರಮುಖ ಸವಾಲೆಂದರೆ, ಸ್ವತಂತ್ರ ಭಾರತ ಆಯ್ಕೆ ಮಾಡಬೇಕಾಗಿದ್ದ ಆಡಳಿತ ವ್ಯವಸ್ಥೆಯ ಸೈದ್ಧಾಂತಿಕ ನೆಲೆ ಮತ್ತು ಸ್ವರೂಪ. ಬಹುಮಟ್ಟಿಗೆ ಸರ್ವಾನುಮತದೊಂದಿಗೆ ಭಾರತ ಆಯ್ದುಕೊಂಡಿದ್ದು ಸಂಸದೀಯ ಪ್ರಜಾಪ್ರಭುತ್ವವನ್ನು ತದನಂತರ 1950ರಲ್ಲಿ ಗಣತಂತ್ರ ವ್ಯವಸ್ಥೆಯನ್ನು. ಭಾರತದ ಸಂವಿಧಾನ ಅನುಚ್ಛೇದ 1ರಲ್ಲಿ “ ಇಂಡಿಯಾ ಅಥವಾ ಭಾರತ ರಾಜ್ಯಗಳ ಒಂದು ಒಕ್ಕೂಟ ಎಂದೂ ಕರೆಯಲಾಗುತ್ತದೆ ” ಎಂದು ಸ್ಪಷ್ಟವಾಗಿದೆ. ಅಂದರೆ ಭೌಗೋಳಿಕವಾಗಿ ಒಂದು ಸಾರ್ವಭೌಮ ರಾಷ್ಟ್ರವಾಗಿ ರೂಪುಗೊಂಡ ಭಾರತ ತನ್ನ ಬಹುಸಾಂಸ್ಕೃತಿಕ-ಬಹುಧಾರ್ಮಿಕ ಹಾಗೂ ಬಹುಭಾಷಿಕ ವೈವಿಧ್ಯತೆಗಳಿಗನುಗುಣವಾಗಿ ವಿಭಿನ್ನ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳ ರಾಜ್ಯಗಳ ಒಂದು ಒಕ್ಕೂಟವಾಗಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿಕೊಂಡಿತ್ತು.
ಸ್ವತಂತ್ರ ಭಾರತ 77 ವರ್ಷಗಳ ಪ್ರಜಾಸತ್ತಾತ್ಮಕ ಆಳ್ವಿಕೆಯನ್ನು ಪೂರೈಸಿ, ಒಂದು ಪ್ರಬುದ್ಧ ಗಣತಂತ್ರವಾಗಿ ತನ್ನ 75ನೆಯ ವರ್ಷದಲ್ಲಿದ್ದರೂ, ನಮ್ಮ ಆಡಳಿತ ನೀತಿಗಳಲ್ಲಿ, ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆಗಳ ಅವಶ್ಯಕತೆ ಎದ್ದುಕಾಣುತ್ತದೆ. ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಿಕೊಳ್ಳುವ ಜಟಿಲ ಸವಾಲುಗಳನ್ನು ಇಂದಿಗೂ ಎದುರಿಸುತ್ತಲೇ ಇದೆ. ಸ್ವಾತಂತ್ರ್ಯಾನಂತರ ಭಾರತದೊಡನೆ ವಿಲೀನಗೊಂಡ 550ಕ್ಕೂ ಹೆಚ್ಚು ರಾಜಪ್ರಭುತ್ವದ ಸಂಸ್ಥಾನಗಳನ್ನು, ಭೌಗೋಳಿಕವಾಗಿ ಭಾಷಾವಾರು ನೆಲೆಯಲ್ಲಿ ವಿಂಗಡಿಸಿ ರಾಜ್ಯಗಳನ್ನು ರೂಪಿಸಿದ ದಾರ್ಶನಿಕರು, ಈ ವೈವಿಧ್ಯಮಯ ರಾಜ್ಯಗಳನ್ನು ಒಂದಾಗಿ ಹಿಡಿದಿಡುವ ನಿಟ್ಟಿನಲ್ಲಿ ಹಾಗೂ ಮುಂದೆ ಉದ್ಭವಿಸಬಹುದಾದ ಪ್ರತ್ಯೇಕತಾ ಭಾವನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಲವು ಆಡಳಿತ ಸೂತ್ರಗಳನ್ನು ಅನುಸರಿಸಿದ್ದರು.
ರಾಜ್ಯ ಮತ್ತು ಕೇಂದ್ರಗಳ ಆಡಳಿತವ್ಯವಸ್ಥೆ
ಅವುಗಳಲ್ಲಿ ಪ್ರಮುಖವಾದದ್ದು ರಾಜ್ಯ ಸರ್ಕಾರಗಳ ಸ್ವರೂಪ ಮತ್ತು ಒಂದು ಬಲಿಷ್ಠ ಕೇಂದ್ರ ಸರ್ಕಾರದ ಸ್ಥಾಪನೆ. ಸ್ವಾತಂತ್ರ್ಯಪೂರ್ವದಲ್ಲಿದ್ದಂತೆಯೇ ಸ್ವಾತಂತ್ರ್ಯ ಹೊಸ್ತಿಲಲ್ಲೂ ಭಾರತ ಎದುರಿಸಿದ ರಾಜ್ಯಗಳ ಅಥವಾ ಪ್ರಾಂತ್ಯಗಳ ಪ್ರತ್ಯೇಕತೆಯ ಸವಾಲು ಒಂದು ಬಲಿಷ್ಠ ಕೇಂದ್ರ ಸರ್ಕಾರದ ಅನಿವಾರ್ಯತೆಯನ್ನು ಎತ್ತಿಹಿಡಿದಿತ್ತು. ದಕ್ಷಿಣದ ದ್ರಾವಿಡ ಚಳುವಳಿ, ಉತ್ತರದ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿದ್ದ ಪ್ರತ್ಯೇಕತೆಯ ಭಾವನೆಗಳನ್ನು ನಿಯಂತ್ರಿಸುವ ಒಂದು Mechanism ಅಂದರೆ ಆಡಳಿತಾತ್ಮಕ ತಂತ್ರಗಾರಿಕೆ ಆ ಸಂದರ್ಭದ ಅನಿವಾರ್ಯತೆಯಾಗಿದ್ದುದು ವಾಸ್ತವ. ಹಾಗಾಗಿ ರಾಜ್ಯಗಳಲ್ಲಿ ಸರ್ಕಾರಗಳ ಆಯ್ಕೆಯ ಪ್ರಕ್ರಿಯೆ ಸಂಸದೀಯ ಪ್ರಜಾಪ್ರಭುತ್ವದ ಮಾದರಿಯಲ್ಲೇ ರೂಪಿಸಲಾದರೂ, ರಕ್ಷಣೆ, ಹಣಕಾಸು, ದೇಶದ ಭೌಗೋಳೀಕ ಅಖಂಡತೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರಕ್ಕೆ ವಹಿಸಲಾಯಿತು.
ಹಾಗಾಗಿ ಕೇಂದ್ರ ಹಾಗೂ ರಾಜ್ಯಗಳಲ್ಲಿ ವಿಭಿನ್ನ ರಾಜಕೀಯ ಒಲವಿನ ಸರ್ಕಾರಗಳು ರಚನೆಯಾದರೂ, ಭಾರತದ ಸಾರ್ವಭೌಮತ್ವ, ಅಖಂಡತೆ ಮತ್ತು ಏಕತೆಯನ್ನು ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರಗಳ ಮೇಲೆ ನಿಯಂತ್ರಣಾಧಿಕಾರವನ್ನು ಸ್ಥಾಪಿಸುವುದು ಅಂದಿನ ಅವಶ್ಯಕತೆಯಾಗಿತ್ತು. ಈ ಹಂತದಲ್ಲಿ ರಾಜ್ಯಪಾಲ ಹುದ್ದೆಯನ್ನೂ ರೂಪಿಸಲಾಯಿತು. ಬ್ರಿಟೀಷ್ ಆಳ್ವಿಕೆಯಲ್ಲಿ ಭಾರತದ ವಿವಿಧ ಸಂಸ್ಥಾನಗಳ ಆಡಳಿತವನ್ನು ನಿರ್ವಹಿಸಲು ರೆಸಿಡೆಂಟ್ ಎಂಬ ಹುದ್ದೆಯನ್ನು ಬ್ರಿಟೀಷರು ಸೃಷ್ಟಿಸಿದ್ದರು. ಮೈಸೂರು ಸಂಸ್ಥಾನವನ್ನೂ ಸಹ ಒಂದು ಹಂತದಲ್ಲಿ ರೆಸಿಡೆಂಟ್ ಆಳಿದ್ದನ್ನು ಸ್ಮರಿಸಬಹುದು. ಈ ರೆಸಿಡೆಂಟ್ ಹುದ್ದೆಯ ಪ್ರಜಾಸತ್ತಾತ್ಮಕ ರೂಪವನ್ನು ರಾಜ್ಯಪಾಲ ಹುದ್ದೆಯಲ್ಲಿ ಕಾಣಬಹುದು. ಭಾರತದ ಗಣತಂತ್ರ ಆಯ್ಕೆ ಮಾಡಿದ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಲು ಈ ಹುದ್ದೆ ಅತ್ಯವಶ್ಯ ಎಂದೇ ಭಾವಿಸಲಾಗಿತ್ತು.

ಈ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಲ್ಲಿ ಆಯ್ಕೆಯಾಗುವ ರಾಜಕೀಯ ಪಕ್ಷಗಳು ಸಹಜವಾಗಿಯೇ ವಿಭಿನ್ನ ವಿಚಾರಧಾರೆಗಳನ್ನು ಅನುಸರಿಸುತ್ತವೆ. ಹಾಗಾಗಿ ಯಾವುದೇ ರಾಜ್ಯದಲ್ಲೂ ಭೌಗೋಳಿಕ ಪ್ರತ್ಯೇಕತೆಯ ಆಶಯಗಳಿದ್ದರೆ ಅದನ್ನು ನಿಯಂತ್ರಿಸಿ, ತಹಬಂದಿಗೆ ತರಬೇಕಾದ ಅನಿವಾರ್ಯತೆ ಇತ್ತು. ಕೇಂದ್ರ ಸರ್ಕಾರದ ಮೇಲೆ ಇದ್ದ ಜವಾಬ್ದಾರಿ ಎಂದರೆ ರಾಜ್ಯ ಸರ್ಕಾರಗಳ ಆಡಳಿತ ನಿರ್ವಹಣೆಯ ಮೇಲೆ ಅಂಕುಶ ಸಾಧಿಸುವುದು. ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಲು ಸಂವಿಧಾನ ನಿರೂಪಕರಿಗೂ ಇದು ಅಗತ್ಯವಾಗಿ ಕಂಡಿತ್ತು. ಡಾ. ಅಂಬೇಡ್ಕರ್ ಸಹ ಬಲವಾದ ಕೇಂದ್ರ ಸರ್ಕಾರದ ಪ್ರತಿಪಾದಕರಾಗಿದ್ದರು ಎನ್ನುವುದನ್ನು ಗಮನಿಸಬೇಕು. ಹಾಗಾಗಿ ಸ್ವತಂತ್ರ ಭಾರತದ ಸರ್ಕಾರವು ರೆಸಿಡೆಂಟ್ ಎಂಬ ಹುದ್ದೆಯ ಮಾದರಿಯಲ್ಲೇ ರಾಜ್ಯಪಾಲರನ್ನು ನೇಮಿಸುವ ಮಾದರಿಯನ್ನು ಅನುಸರಿಸಿತ್ತು.
ಚಾರಿತ್ರಿಕ ಸನ್ನಿವೇಶದ ಹಿನ್ನೆಲೆ
ವಿಭಜನೆಯ ಸಂದರ್ಭದಲ್ಲಿ ಸಂವಿಧಾನ ನಿರೂಪಕರಲ್ಲಿ ರಾಜ್ಯಗಳಲ್ಲಿ ಉಂಟಾಗಬಹುದಾದ ಜನಾಂಗೀಯ ಸಂಘರ್ಷ, ಕಲಹ, ಕಮ್ಯುನಿಸ್ಟ್ ಕ್ರಾಂತಿ ಮುಂತಾದ ಆತಂಕಗಳಿದ್ದವು. ಹಾಗಾಗಿ ರಾಜ್ಯಗಳು ಪ್ರತ್ಯೇಕತೆಯನ್ನು ಘೋಷಿಸುವ ಸಾಧ್ಯತೆಗಳನ್ನೂ ಮನಗಂಡಿದ್ದರು. ಹಾಗಾಗಿ ರಾಜ್ಯದ ಅಸ್ತಿತ್ವಕ್ಕೆ ಅಥವಾ ದೇಶದ ಅಖಂಡತೆಗೆ ಅಪಾಯ ಉಂಟಾದಾಗ ಮಧ್ಯಪ್ರವೇಶಿಸುವ ಒಂದು ಸಾಂವಿಧಾನಿಕ ಹುದ್ದೆಯ ಅವಶ್ಯಕತೆಯನ್ನು ಮನಗಂಡಿದ್ದರು. ಆಗಲೇ ರೆಸಿಡೆಂಟ್ ಹುದ್ದೆಯ ಮಾದರಿಯಲಿ ಗವರ್ನರ್ ಹುದ್ದೆಯನ್ನು ಸೃಷ್ಟಿಸಲಾಗಿತ್ತು. “ಈ ಅನುಚ್ಛೇದಗಳನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂಬುದನ್ನು ನಾನು ಸಂಪೂರ್ಣವಾಗಿ ಅಲ್ಲಗಳೆಯುವುದಿಲ್ಲ… ಮತ್ತು ಅಂತಹ ಅನುಚ್ಚೆದಗಳನ್ನು ಎಂದಿಗೂ ಕಾರ್ಯರೂಪಕ್ಕೆ ತರಲಾಗುವುದಿಲ್ಲ ಮತ್ತು ಅವು ಸತ್ತ ಪತ್ರವಾಗಿ ಉಳಿಯುತ್ತವೆ ಎಂಬ ಭಾವನೆಗಳನ್ನು ನಾನು ಹಂಚಿಕೊಳ್ಳುತ್ತೇನೆ ”ಎಂದು ಅಂಬೇಡ್ಕರ್ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಸ್ವತಂತ್ರ ಭಾರತದ ಪ್ರಭುತ್ವ ತನ್ನ ಆಡಳಿತಾತ್ಮಕ ಸಂರಚನೆಗಾಗಿ ಜಾಗತಿಕವಾಗಿ ಮಾನ್ಯತೆ ಪಡೆದಿದ್ದ ಮೂರು ಮಾದರಿಗಳನ್ನು ಅನುಸರಿಸಿತ್ತು. ಸಂವಿಧಾನ ರಚನೆ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ನಿರ್ಧರಿಸುವಲ್ಲಿ ಬ್ರಿಟನ್ನಿನ ಸಂಸದೀಯ ವ್ಯವಸ್ಥೆಯ ಹಲವು ಅಂಶಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಆದರೆ ಸಂವಿಧಾನ ರಚನೆಯಲ್ಲಿ ಪ್ರಧಾನ-ಮುಂಚೂಣಿ ಪಾತ್ರ ವಹಿಸಿ, ಭಾರತದ ಸಂವಿಧಾನವನ್ನು ಶ್ರೇಷ್ಠತೆಯ ಉತ್ತುಂಗಕ್ಕೇರಿಸಿದ ಡಾ. ಬಿ.ಆರ್. ಅಂಬೇಡ್ಕರ್ ರಾಜಕೀಯವಾಗಿ ಆಯ್ದುಕೊಂಡಿದ್ದು ಅಮೆರಿಕದ ಉದಾರವಾದಿ ಪ್ರಜಾಪ್ರಭುತ್ವದ (Liberal Democracy) ಮಾದರಿಯನ್ನು. ರಾಜ್ಯಗಳ ಮೇಲೆ ಅಂಕುಶ/ನಿಯಂತ್ರಣ ಸಾಧಿಸಲು ರೂಪಿಸಲಾದ ಗವರ್ನರ್ ಅಥವಾ ರಾಜ್ಯಪಾಲ ಹುದ್ದೆಯೂ ಸಹ ಈ ಮಾದರಿಯ ಒಂದು ಭಾಗ. ಆದರೆ ಅಮೆರಿಕದ ಆಡಳಿತ ವ್ಯವಸ್ಥೆಯಲ್ಲಿ ರಾಜ್ಯಪಾಲರು ಜನರಿಂದಲೇ ಆಯ್ಕೆಯಾಗುತ್ತಾರೆ. ಈ ಚುನಾಯಿತ ರಾಜ್ಯಪಾಲರು ಅಮೆರಿಕ ಸಂಯುಕ್ತ ಸಂಸ್ಥಾನ (USA)ಕ್ಕೆ ಸೇರಿದ ವಿವಿಧ ರಾಜ್ಯಗಳ ಮೇಲುಸ್ತುವಾರಿಯನ್ನು ವಹಿಸಿಕೊಳ್ಳುತ್ತಾರೆ. ಆದರೆ ಭಾರತದ ಸಂವಿಧಾನ ಕರ್ತೃಗಳು ರಾಜ್ಯಪಾಲ ಹುದ್ದೆಯನ್ನು ರೂಪಿಸುವಾಗ ಅನುಸರಿಸಿದ್ದು ಆಸ್ಟ್ರೇಲಿಯಾ ಮಾದರಿಯನ್ನು. ಅಲ್ಲಿ ಗವರ್ನರ್ಗಳನ್ನು ಕೇಂದ್ರ ಸರ್ಕಾರದಿಂದ ನೇಮಕ ಮಾಡಲಾಗುತ್ತದೆ.
ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ರಾಜ್ಯಪಾಲರಾಗಿ ನೇಮಕಗೊಂಡವರನ್ನು ಸಾಂವಿಧಾನಿಕವಾಗಿ ಉಚ್ಛ ಸ್ಥಾನದಲ್ಲಿರಿಸಲಾಗಿದೆ. ರಾಜ್ಯಪಾಲರು ರಾಜ್ಯದ ಆಡಳಿತಕ್ಕೆ ಸಂಬಂಧಿಸಿದಂತೆ ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ಹೊಂದಿರದಿದ್ದರೂ, ಕೆಲವು ವಿವೇಚನಾಧಿಕಾರಗಳನ್ನು ಈ ಹುದ್ದೆಗೆ ನೀಡಲಾಗಿದೆ. ಆದರೆ ರಾಜ್ಯಾಡಳಿತದ ವಿಷಯಗಳಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟದ ನಿರ್ಧಾರಗಳಿಗೆ ರಾಜ್ಯಪಾಲರು ಮಾನ್ಯತೆ ನೀಡಬೇಕಾಗುತ್ತದೆ. ರಾಜ್ಯ ವಿಧಾನಮಂಡಲಗಳಲ್ಲಿ ಮಂಡಿಸಿ, ಅನುಮೋದಿಸಲಾಗುವ ಮಸೂದೆಗಳನ್ನು ಅಂಗೀಕರಿಸುವ, ದೇಶದ ರಾಷ್ಟ್ರಪತಿಗಳ ಪರಿಶೀಲನೆಗಾಗಿ ಕಳುಹಿಸುವ ಅಥವಾ ಸರ್ಕಾರಕ್ಕೆ ಹಿಂದಿರುಗಿಸುವ ವಿವೇಚನಾಧಿಕಾರವನ್ನೂ ರಾಜ್ಯಪಾಲರು ಹೊಂದಿರುತ್ತಾರೆ. ಈ ಉನ್ನತಾಧಿಕಾರದ ದೃಷ್ಟಿಯಿಂದಲೇ ರಾಜ್ಯಪಾಲರಾಗಿ ನೇಮಕವಾಗುವವರು ಯಾವುದೇ ಪಕ್ಷ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಬೇಕು ಎಂಬ ಅಲಿಖಿತ ನಿಯಮವನ್ನೂ ಅನುಸರಿಸಿಕೊಂಡು ಬರಲಾಗಿದೆ. ವಾಸ್ತವಿಕ ನೆಲೆಯಲ್ಲಿ ಇದು ಸಾಕಾರವಾಗಿಲ್ಲ ಎನ್ನುವುದು ಬೇರೆ ವಿಚಾರ.

ಸ್ವತಂತ್ರ ಭಾರತದ ರಾಜಕಾರಣ
ಭಾರತದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ರಾಜ್ಯಗಳಿಗೆ ತಮ್ಮದೇ ಆಯ್ಕೆಯನ್ನು ರಾಜ್ಯಪಾಲರನ್ನಾಗಿ ನೇಮಿಸುವ ಸಂಪ್ರದಾಯ ಆರಂಭದಿಂದಲೂ ಇದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ತಮ್ಮ ಸೈದ್ಧಾಂತಿಕ ನೀತಿ ನಿಲುವುಗಳಿಗೆ ಅನುಗುಣವಾಗಿ ರಾಜ್ಯಗಳಲ್ಲಿ ರಾಜ್ಯಪಾಲರನ್ನು ನೇಮಿಸುವ ಪರಂಪರೆಗೂ ಭಾರತ ಸಾಕ್ಷಿಯಾಗಿದೆ. ರಾಜಕೀಯವಾಗಿ ಶಾಸನ ಸಭೆಗಳಲ್ಲಿ ಅವಕಾಶವನ್ನು ಪಡೆಯಲಾಗದ ಹಿರಿಯ ರಾಜಕಾರಣಿಗಳನ್ನು ನೇಮಿಸುವ ಒಂದು ಸಂಪ್ರದಾಯವನ್ನೂ ಭಾರತದ ಎಲ್ಲ ಪಕ್ಷಗಳು ಅನುಸರಿಸಿಕೊಂಡುಬಂದಿವೆ. ಇತ್ತೀಚಿನ ದಿನಗಳಲ್ಲಿ ನಿವೃತ್ತ ನ್ಯಾಯಮೂರ್ತಿಗಳು, ನಾಗರಿಕ ಸೇವಾ ಅಧಿಕಾರಿಗಳೂ ಸಹ ಈ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ. ಈ ನೇಮಕಗಳಲ್ಲಿ ನಿಷ್ಪಕ್ಷಪಾತತೆಯ ಕೊರತೆ ಇರುವುದನ್ನು ಹಲವು ಸಂದರ್ಭಗಳಲ್ಲಿ ಕಂಡಿದ್ದೇವೆ. ಕೇಂದ್ರ ಸರ್ಕಾರದ ಅಣತಿಯಂತೆ ರಾಜ್ಯ ಸರ್ಕಾರಗಳ ಮೇಲೆ ನಿಬಂಧನೆಗಳನ್ನು ಹೇರುವ ಅಥವಾ ಮಸೂದೆಗಳನ್ನು ತಡೆಹಿಡಿಯುವ ಕೆಲವು ಪ್ರಸಂಗಗಳೂ ಸಾಮಾನ್ಯವಾಗಿವೆ.
1960ರ ದಶಕದವರೆಗೂ ರಾಜ್ಯಪಾಲರ ನೇಮಕಾತಿಯಲ್ಲಿ ಅರ್ಹ ವ್ಯಕ್ತಿಗಳ ರಾಜಕೀಯ ಅಥವಾ ಸೈದ್ಧಾಂತಿಕ ನಿಷ್ಠೆ ಪ್ರಧಾನ ಮಾನದಂಡವಾಗಿರಲಿಲ್ಲ. ಬ್ರಿಟನ್ನಿನ ಸಂಸತ್ ವ್ಯವಸ್ಥೆಯಲ್ಲಿ Gubernatorial Post ಅಥವಾ ಅಲಂಕಾರಿಕ ಹುದ್ದೆ ಎಂದೇ ಭಾವಿಸಲ್ಪಡುವ ರಾಜ್ಯಪಾಲ ಹುದ್ದೆ ಭಾರತದಲ್ಲೂ ಎಷ್ಟೋ ಸಂದರ್ಭಗಳಲ್ಲಿ ಅಲಂಕಾರಿಕವಾಗಿಯೇ ಕಂಡುಬಂದಿದೆ. ಆದರೂ 1970ರ ದಶಕದಲ್ಲಿ ರಾಜ್ಯಪಾಲರಾಗಿ ತಮ್ಮ ಸಂವಿಧಾನ ನಿಷ್ಠೆ ಮತ್ತು ನಿಷ್ಪಕ್ಷಪಾತ ಧೋರಣೆಯಿಂದ ಖ್ಯಾತಿ ಪಡೆದ ಹಲವು ರಾಜ್ಯಪಾಲರನ್ನು ಭಾರತ ಇಂದು ಹೆಮ್ಮೆಯಿಂದ ಸ್ಮರಿಸಬಹುದಾಗಿದೆ. ಒಂದು ಉದಾಹರಣೆಯಾಗಿ ಕರ್ನಾಟಕ, ಹರಿಯಾಣ ಮತ್ತು ಪಂಜಾಬ್, ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ನಿವೃತ್ತ ನಾಗರಿಕ ಸೇವಾ ಅಧಿಕಾರಿ ಧರ್ಮವೀರ ಅವರನ್ನು ನೋಡಬಹುದು. ಅಂತಹ ರಾಜ್ಯಪಾಲರು ಈಗ ಕಣ್ಮರೆಯಾಗಿರುವುದು ವಾಸ್ತವ.

ಸಂವಿಧಾನ ಅನುಚ್ಛೇದ 356ರ ಪರಿಷ್ಕರಣೆಯಾಗುವವರೆಗೂ, ನ್ಯಾಯಾಂಗವು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರಗಳ ಸ್ವಾಯತ್ತತೆ ಮತ್ತು ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ನಿಯಮಗಳನ್ನು ರೂಪಿಸುವವರೆಗೂ ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ವಿರೋಧ ಪಕ್ಷಗಳ ಆಳ್ವಿಕೆಯ ರಾಜ್ಯಸರ್ಕಾರಗಳನ್ನು ಅಸ್ಥಿರಗೊಳಿಸುವ ಅಥವಾ ಪದಚ್ಯುತಗೊಳಿಸುವ ಒಂದು ಸಂಪ್ರದಾಯ ಜಾರಿಯಲ್ಲಿದ್ದುದು ವಾಸ್ತವ. ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ನೆಹರೂ ಸರ್ಕಾರವೇ ಎನ್ನುವುದು ವಿಡಂಬನೆ ಎನಿಸಿದರೂ ಸತ್ಯ. . 1957ರಲ್ಲಿ ಕೇರಳದ ನಂಬೂದರಿಪಾಡ್ ನೇತೃತ್ವದ ಕಮ್ಯುನಿಸ್ಟ್ ಪಕ್ಷದ ಚುನಾಯಿತ ಬಹುಮತದ ಸರ್ಕಾರವನ್ನು ಉರುಳಿಸುವ ಮೂಲಕ ಕಾಂಗ್ರೆಸ್ ಈ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು. ಇದಕ್ಕೂ ಮುನ್ನ1950ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ಮರುವರ್ಷವೇ ಬಹುಮತ ಹೊಂದಿದ್ದ ಪಂಜಾಬ್ ಸರ್ಕಾರವನ್ನು ಪದಚ್ಯುತಗೊಳಿಸಲಾಗಿತ್ತು ಆದರೆ ಅದು ಚುನಾಯಿತ ಸರ್ಕಾರವಾಗಿರಲಿಲ್ಲ. ಚುನಾಯಿತ ಸರ್ಕಾರಗಳಲ್ಲಿ ನಂಬೂದರಿಪಾಡ್ ಸರ್ಕಾರವೇ ಪ್ರಥಮ.
ಅಂದಿನಿಂದ ಈವರೆಗೆ ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರಗಳನ್ನು ಪದಚ್ಯುತ ಗೊಳಿಸಲು ಬಳಸಲಾಗುತ್ತಿದ್ದ ಸಂವಿಧಾನ ಪರಿಚ್ಛೇದ 356 , ನೂರಕ್ಕೂ ಹೆಚ್ಚು ಸಲ ಬಳಕೆಯಾಗಿದೆ. ಸರ್ಕಾರಿಯಾ ಆಯೋಗದ ವರದಿಯಲಿ ಉಲ್ಲೇಖಿಸಿರುವಂತೆ 1951 ರಿಂದ 1987ರ ನಡುವೆ 75 ಬಾರಿ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿತ್ತು. ಇವುಗಳ ಪೈಕಿ 52 ಪ್ರಸಂಗಗಳಲ್ಲಿ ಸಂವಿಧಾನ ವಿಧಿ 356ರ ದುರ್ಬಳಕೆ ಮಾಡಲಾಗಿತ್ತು. ಇಂದಿರಾಗಾಂಧಿ ಆಳ್ವಕೆಯಲ್ಲಿ 48 ಬಾರಿ 356ರ ಬಳಕೆಯಾಗಿತ್ತು. ನಾಲ್ಕು ಬಾರಿ ತುರ್ತುಪರಿಸ್ಥಿತಿಯಲ್ಲಿ ಬಳಸಲಾಗಿತ್ತು. 1977ರಲ್ಲಿ ಅಧಿಕಾರಕ್ಕೆ ಬಂದ ಜನತಾಪಕ್ಷ ಮೊರಾರ್ಜಿ ದೇಸಾಯಿ ಆಳ್ವಿಕೆಯಲ್ಲಿ 13 ಬಾರಿ ಬಳಕೆಯಾಗಿತ್ತು. ಚರಣ್ ಸಿಂಗ್ ಸರ್ಕಾರ ನಾಲ್ಕು ಬಾರಿ ಬಳಸಿತ್ತು. ಇಂದಿರಾ 1980ರಲ್ಲಿ ಮರು ಆಯ್ಕೆಯಾದಾಗ ವಿರೋಧ ಪಕ್ಷಗಳು ಇದ್ದ ಒಂಬತ್ತು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರು.ಈಗ ಸಂವಿಧಾನ ಅನುಚ್ಛೇದ 356ರ ಬಳಕೆಯಾಗುತ್ತಿಲ್ಲ ಎಂದರೆ ಅದಕ್ಕೆ ರಾಜಕೀಯ ಪ್ರಬುದ್ಧತೆ ಬೆಳೆದಿದೆ ಅಥವಾ ರಾಜಕೀಯ ಪಕ್ಷಗಳು ಹೆಚ್ಚು ಸಂವಿಧಾನಬದ್ಧವಾಗಿವೆ ಎಂದರ್ಥವಲ್ಲ. ಸುಪ್ರೀಂಕೋರ್ಟ್ ಇದರ ಮೇಲೆ ನಿರ್ಬಂಧ ಹೇರಿದೆ. 1994ರಲ್ಲಿ ಎಂಟು ರಾಜ್ಯಗಳ ಒಂಬತ್ತು ನ್ಯಾಯಾಧೀಶರ ಸುಪ್ರೀಂಕೋರ್ಟ್ ನ್ಯಾಯಪೀಠ 356ರ ದುರ್ಬಳಕೆಯ ವಿರುದ್ಧ ನಿರ್ದೇಶನಗಳನ್ನು ನೀಡಿತ್ತು. 1988ರ ಸರ್ಕಾರಿಯಾ
ಈ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಲ್ಲಿ ಆಯ್ಕೆಯಾಗುವ ರಾಜಕೀಯ ಪಕ್ಷಗಳು ಸಹಜವಾಗಿಯೇ ವಿಭಿನ್ನ ವಿಚಾರಧಾರೆಗಳನ್ನು ಅನುಸರಿಸುತ್ತವೆ. ಹಾಗಾಗಿ ಯಾವುದೇ ರಾಜ್ಯದಲ್ಲೂ ಭೌಗೋಳಿಕ ಪ್ರತ್ಯೇಕತೆಯ ಆಶಯಗಳಿದ್ದರೆ ಅದನ್ನು ನಿಯಂತ್ರಿಸಿ, ತಹಬಂದಿಗೆ ತರಬೇಕಾದ ಅನಿವಾರ್ಯತೆ ಇತ್ತು. ಕೇಂದ್ರ ಸರ್ಕಾರದ ಮೇಲೆ ಇದ್ದ ಜವಾಬ್ದಾರಿ ಎಂದರೆ ರಾಜ್ಯ ಸರ್ಕಾರಗಳ ಆಡಳಿತ ನಿರ್ವಹಣೆಯ ಮೇಲೆ ಅಂಕುಶ ಸಾಧಿಸುವುದು. ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಲು ಸಂವಿಧಾನ ನಿರೂಪಕರಿಗೂ ಇದು ಅಗತ್ಯವಾಗಿ ಕಂಡಿತ್ತು. ಡಾ. ಅಂಬೇಡ್ಕರ್ ಸಹ ಬಲವಾದ ಕೇಂದ್ರ ಸರ್ಕಾರದ ಪ್ರತಿಪಾದಕರಾಗಿದ್ದರು ಎನ್ನುವುದನ್ನು ಗಮನಿಸಬೇಕು. ಹಾಗಾಗಿ ಸ್ವತಂತ್ರ ಭಾರತದ ಸರ್ಕಾರವು ರೆಸಿಡೆಂಟ್ ಎಂಬ ಹುದ್ದೆಯ ಮಾದರಿಯಲ್ಲೇ ರಾಜ್ಯಪಾಲರನ್ನು ನೇಮಿಸುವ ಮಾದರಿಯನ್ನು ಅನುಸರಿಸಿತ್ತು.
ಚಾರಿತ್ರಿಕ ಸನ್ನಿವೇಶದ ಹಿನ್ನೆಲೆ
ವಿಭಜನೆಯ ಸಂದರ್ಭದಲ್ಲಿ ಸಂವಿಧಾನ ನಿರೂಪಕರಲ್ಲಿ ರಾಜ್ಯಗಳಲ್ಲಿ ಉಂಟಾಗಬಹುದಾದ ಜನಾಂಗೀಯ ಸಂಘರ್ಷ, ಕಲಹ, ಕಮ್ಯುನಿಸ್ಟ್ ಕ್ರಾಂತಿ ಮುಂತಾದ ಆತಂಕಗಳಿದ್ದವು. ಹಾಗಾಗಿ ರಾಜ್ಯಗಳು ಪ್ರತ್ಯೇಕತೆಯನ್ನು ಘೋಷಿಸುವ ಸಾಧ್ಯತೆಗಳನ್ನೂ ಮನಗಂಡಿದ್ದರು. ಹಾಗಾಗಿ ರಾಜ್ಯದ ಅಸ್ತಿತ್ವಕ್ಕೆ ಅಥವಾ ದೇಶದ ಅಖಂಡತೆಗೆ ಅಪಾಯ ಉಂಟಾದಾಗ ಮಧ್ಯಪ್ರವೇಶಿಸುವ ಒಂದು ಸಾಂವಿಧಾನಿಕ ಹುದ್ದೆಯ ಅವಶ್ಯಕತೆಯನ್ನು ಮನಗಂಡಿದ್ದರು. ಆಗಲೇ ರೆಸಿಡೆಂಟ್ ಹುದ್ದೆಯ ಮಾದರಿಯಲಿ ಗವರ್ನರ್ ಹುದ್ದೆಯನ್ನು ಸೃಷ್ಟಿಸಲಾಗಿತ್ತು. “ಈ ಅನುಚ್ಛೇದಗಳನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂಬುದನ್ನು ನಾನು ಸಂಪೂರ್ಣವಾಗಿ ಅಲ್ಲಗಳೆಯುವುದಿಲ್ಲ… ಮತ್ತು ಅಂತಹ ಅನುಚ್ಚೆದಗಳನ್ನು ಎಂದಿಗೂ ಕಾರ್ಯರೂಪಕ್ಕೆ ತರಲಾಗುವುದಿಲ್ಲ ಮತ್ತು ಅವು ಸತ್ತ ಪತ್ರವಾಗಿ ಉಳಿಯುತ್ತವೆ ಎಂಬ ಭಾವನೆಗಳನ್ನು ನಾನು ಹಂಚಿಕೊಳ್ಳುತ್ತೇನೆ ”ಎಂದು ಅಂಬೇಡ್ಕರ್ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಸ್ವತಂತ್ರ ಭಾರತದ ಪ್ರಭುತ್ವ ತನ್ನ ಆಡಳಿತಾತ್ಮಕ ಸಂರಚನೆಗಾಗಿ ಜಾಗತಿಕವಾಗಿ ಮಾನ್ಯತೆ ಪಡೆದಿದ್ದ ಮೂರು ಮಾದರಿಗಳನ್ನು ಅನುಸರಿಸಿತ್ತು. ಸಂವಿಧಾನ ರಚನೆ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ನಿರ್ಧರಿಸುವಲ್ಲಿ ಬ್ರಿಟನ್ನಿನ ಸಂಸದೀಯ ವ್ಯವಸ್ಥೆಯ ಹಲವು ಅಂಶಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಆದರೆ ಸಂವಿಧಾನ ರಚನೆಯಲ್ಲಿ ಪ್ರಧಾನ-ಮುಂಚೂಣಿ ಪಾತ್ರ ವಹಿಸಿ, ಭಾರತದ ಸಂವಿಧಾನವನ್ನು ಶ್ರೇಷ್ಠತೆಯ ಉತ್ತುಂಗಕ್ಕೇರಿಸಿದ ಡಾ. ಬಿ.ಆರ್. ಅಂಬೇಡ್ಕರ್ ರಾಜಕೀಯವಾಗಿ ಆಯ್ದುಕೊಂಡಿದ್ದು ಅಮೆರಿಕದ ಉದಾರವಾದಿ ಪ್ರಜಾಪ್ರಭುತ್ವದ (Liberal Democracy) ಮಾದರಿಯನ್ನು. ರಾಜ್ಯಗಳ ಮೇಲೆ ಅಂಕುಶ/ನಿಯಂತ್ರಣ ಸಾಧಿಸಲು ರೂಪಿಸಲಾದ ಗವರ್ನರ್ ಅಥವಾ ರಾಜ್ಯಪಾಲ ಹುದ್ದೆಯೂ ಸಹ ಈ ಮಾದರಿಯ ಒಂದು ಭಾಗ. ಆದರೆ ಅಮೆರಿಕದ ಆಡಳಿತ ವ್ಯವಸ್ಥೆಯಲ್ಲಿ ರಾಜ್ಯಪಾಲರು ಜನರಿಂದಲೇ ಆಯ್ಕೆಯಾಗುತ್ತಾರೆ. ಈ ಚುನಾಯಿತ ರಾಜ್ಯಪಾಲರು ಅಮೆರಿಕ ಸಂಯುಕ್ತ ಸಂಸ್ಥಾನ (USA)ಕ್ಕೆ ಸೇರಿದ ವಿವಿಧ ರಾಜ್ಯಗಳ ಮೇಲುಸ್ತುವಾರಿಯನ್ನು ವಹಿಸಿಕೊಳ್ಳುತ್ತಾರೆ. ಆದರೆ ಭಾರತದ ಸಂವಿಧಾನ ಕರ್ತೃಗಳು ರಾಜ್ಯಪಾಲ ಹುದ್ದೆಯನ್ನು ರೂಪಿಸುವಾಗ ಅನುಸರಿಸಿದ್ದು ಆಸ್ಟ್ರೇಲಿಯಾ ಮಾದರಿಯನ್ನು. ಅಲ್ಲಿ ಗವರ್ನರ್ಗಳನ್ನು ಕೇಂದ್ರ ಸರ್ಕಾರದಿಂದ ನೇಮಕ ಮಾಡಲಾಗುತ್ತದೆ.
ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ರಾಜ್ಯಪಾಲರಾಗಿ ನೇಮಕಗೊಂಡವರನ್ನು ಸಾಂವಿಧಾನಿಕವಾಗಿ ಉಚ್ಛ ಸ್ಥಾನದಲ್ಲಿರಿಸಲಾಗಿದೆ. ರಾಜ್ಯಪಾಲರು ರಾಜ್ಯದ ಆಡಳಿತಕ್ಕೆ ಸಂಬಂಧಿಸಿದಂತೆ ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ಹೊಂದಿರದಿದ್ದರೂ, ಕೆಲವು ವಿವೇಚನಾಧಿಕಾರಗಳನ್ನು ಈ ಹುದ್ದೆಗೆ ನೀಡಲಾಗಿದೆ. ಆದರೆ ರಾಜ್ಯಾಡಳಿತದ ವಿಷಯಗಳಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟದ ನಿರ್ಧಾರಗಳಿಗೆ ರಾಜ್ಯಪಾಲರು ಮಾನ್ಯತೆ ನೀಡಬೇಕಾಗುತ್ತದೆ. ರಾಜ್ಯ ವಿಧಾನಮಂಡಲಗಳಲ್ಲಿ ಮಂಡಿಸಿ, ಅನುಮೋದಿಸಲಾಗುವ ಮಸೂದೆಗಳನ್ನು ಅಂಗೀಕರಿಸುವ, ದೇಶದ ರಾಷ್ಟ್ರಪತಿಗಳ ಪರಿಶೀಲನೆಗಾಗಿ ಕಳುಹಿಸುವ ಅಥವಾ ಸರ್ಕಾರಕ್ಕೆ ಹಿಂದಿರುಗಿಸುವ ವಿವೇಚನಾಧಿಕಾರವನ್ನೂ ರಾಜ್ಯಪಾಲರು ಹೊಂದಿರುತ್ತಾರೆ. ಈ ಉನ್ನತಾಧಿಕಾರದ ದೃಷ್ಟಿಯಿಂದಲೇ ರಾಜ್ಯಪಾಲರಾಗಿ ನೇಮಕವಾಗುವವರು ಯಾವುದೇ ಪಕ್ಷ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳಬೇಕು ಎಂಬ ಅಲಿಖಿತ ನಿಯಮವನ್ನೂ ಅನುಸರಿಸಿಕೊಂಡು ಬರಲಾಗಿದೆ. ವಾಸ್ತವಿಕ ನೆಲೆಯಲ್ಲಿ ಇದು ಸಾಕಾರವಾಗಿಲ್ಲ ಎನ್ನುವುದು ಬೇರೆ ವಿಚಾರ.

ಸ್ವತಂತ್ರ ಭಾರತದ ರಾಜಕಾರಣ
ಭಾರತದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ರಾಜ್ಯಗಳಿಗೆ ತಮ್ಮದೇ ಆಯ್ಕೆಯನ್ನು ರಾಜ್ಯಪಾಲರನ್ನಾಗಿ ನೇಮಿಸುವ ಸಂಪ್ರದಾಯ ಆರಂಭದಿಂದಲೂ ಇದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ತಮ್ಮ ಸೈದ್ಧಾಂತಿಕ ನೀತಿ ನಿಲುವುಗಳಿಗೆ ಅನುಗುಣವಾಗಿ ರಾಜ್ಯಗಳಲ್ಲಿ ರಾಜ್ಯಪಾಲರನ್ನು ನೇಮಿಸುವ ಪರಂಪರೆಗೂ ಭಾರತ ಸಾಕ್ಷಿಯಾಗಿದೆ. ರಾಜಕೀಯವಾಗಿ ಶಾಸನ ಸಭೆಗಳಲ್ಲಿ ಅವಕಾಶವನ್ನು ಪಡೆಯಲಾಗದ ಹಿರಿಯ ರಾಜಕಾರಣಿಗಳನ್ನು ನೇಮಿಸುವ ಒಂದು ಸಂಪ್ರದಾಯವನ್ನೂ ಭಾರತದ ಎಲ್ಲ ಪಕ್ಷಗಳು ಅನುಸರಿಸಿಕೊಂಡುಬಂದಿವೆ. ಇತ್ತೀಚಿನ ದಿನಗಳಲ್ಲಿ ನಿವೃತ್ತ ನ್ಯಾಯಮೂರ್ತಿಗಳು, ನಾಗರಿಕ ಸೇವಾ ಅಧಿಕಾರಿಗಳೂ ಸಹ ಈ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ. ಈ ನೇಮಕಗಳಲ್ಲಿ ನಿಷ್ಪಕ್ಷಪಾತತೆಯ ಕೊರತೆ ಇರುವುದನ್ನು ಹಲವು ಸಂದರ್ಭಗಳಲ್ಲಿ ಕಂಡಿದ್ದೇವೆ. ಕೇಂದ್ರ ಸರ್ಕಾರದ ಅಣತಿಯಂತೆ ರಾಜ್ಯ ಸರ್ಕಾರಗಳ ಮೇಲೆ ನಿಬಂಧನೆಗಳನ್ನು ಹೇರುವ ಅಥವಾ ಮಸೂದೆಗಳನ್ನು ತಡೆಹಿಡಿಯುವ ಕೆಲವು ಪ್ರಸಂಗಗಳೂ ಸಾಮಾನ್ಯವಾಗಿವೆ.
1960ರ ದಶಕದವರೆಗೂ ರಾಜ್ಯಪಾಲರ ನೇಮಕಾತಿಯಲ್ಲಿ ಅರ್ಹ ವ್ಯಕ್ತಿಗಳ ರಾಜಕೀಯ ಅಥವಾ ಸೈದ್ಧಾಂತಿಕ ನಿಷ್ಠೆ ಪ್ರಧಾನ ಮಾನದಂಡವಾಗಿರಲಿಲ್ಲ. ಬ್ರಿಟನ್ನಿನ ಸಂಸತ್ ವ್ಯವಸ್ಥೆಯಲ್ಲಿ Gubernatorial Post ಅಥವಾ ಅಲಂಕಾರಿಕ ಹುದ್ದೆ ಎಂದೇ ಭಾವಿಸಲ್ಪಡುವ ರಾಜ್ಯಪಾಲ ಹುದ್ದೆ ಭಾರತದಲ್ಲೂ ಎಷ್ಟೋ ಸಂದರ್ಭಗಳಲ್ಲಿ ಅಲಂಕಾರಿಕವಾಗಿಯೇ ಕಂಡುಬಂದಿದೆ. ಆದರೂ 1970ರ ದಶಕದಲ್ಲಿ ರಾಜ್ಯಪಾಲರಾಗಿ ತಮ್ಮ ಸಂವಿಧಾನ ನಿಷ್ಠೆ ಮತ್ತು ನಿಷ್ಪಕ್ಷಪಾತ ಧೋರಣೆಯಿಂದ ಖ್ಯಾತಿ ಪಡೆದ ಹಲವು ರಾಜ್ಯಪಾಲರನ್ನು ಭಾರತ ಇಂದು ಹೆಮ್ಮೆಯಿಂದ ಸ್ಮರಿಸಬಹುದಾಗಿದೆ. ಒಂದು ಉದಾಹರಣೆಯಾಗಿ ಕರ್ನಾಟಕ, ಹರಿಯಾಣ ಮತ್ತು ಪಂಜಾಬ್, ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ನಿವೃತ್ತ ನಾಗರಿಕ ಸೇವಾ ಅಧಿಕಾರಿ ಧರ್ಮವೀರ ಅವರನ್ನು ನೋಡಬಹುದು. ಅಂತಹ ರಾಜ್ಯಪಾಲರು ಈಗ ಕಣ್ಮರೆಯಾಗಿರುವುದು ವಾಸ್ತವ.

ಸಂವಿಧಾನ ಅನುಚ್ಛೇದ 356ರ ಪರಿಷ್ಕರಣೆಯಾಗುವವರೆಗೂ, ನ್ಯಾಯಾಂಗವು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರಗಳ ಸ್ವಾಯತ್ತತೆ ಮತ್ತು ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ನಿಯಮಗಳನ್ನು ರೂಪಿಸುವವರೆಗೂ ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ವಿರೋಧ ಪಕ್ಷಗಳ ಆಳ್ವಿಕೆಯ ರಾಜ್ಯಸರ್ಕಾರಗಳನ್ನು ಅಸ್ಥಿರಗೊಳಿಸುವ ಅಥವಾ ಪದಚ್ಯುತಗೊಳಿಸುವ ಒಂದು ಸಂಪ್ರದಾಯ ಜಾರಿಯಲ್ಲಿದ್ದುದು ವಾಸ್ತವ. ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ನೆಹರೂ ಸರ್ಕಾರವೇ ಎನ್ನುವುದು ವಿಡಂಬನೆ ಎನಿಸಿದರೂ ಸತ್ಯ. . 1957ರಲ್ಲಿ ಕೇರಳದ ನಂಬೂದರಿಪಾಡ್ ನೇತೃತ್ವದ ಕಮ್ಯುನಿಸ್ಟ್ ಪಕ್ಷದ ಚುನಾಯಿತ ಬಹುಮತದ ಸರ್ಕಾರವನ್ನು ಉರುಳಿಸುವ ಮೂಲಕ ಕಾಂಗ್ರೆಸ್ ಈ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು. ಇದಕ್ಕೂ ಮುನ್ನ1950ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ಮರುವರ್ಷವೇ ಬಹುಮತ ಹೊಂದಿದ್ದ ಪಂಜಾಬ್ ಸರ್ಕಾರವನ್ನು ಪದಚ್ಯುತಗೊಳಿಸಲಾಗಿತ್ತು ಆದರೆ ಅದು ಚುನಾಯಿತ ಸರ್ಕಾರವಾಗಿರಲಿಲ್ಲ. ಚುನಾಯಿತ ಸರ್ಕಾರಗಳಲ್ಲಿ ನಂಬೂದರಿಪಾಡ್ ಸರ್ಕಾರವೇ ಪ್ರಥಮ.
ಅಂದಿನಿಂದ ಈವರೆಗೆ ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರಗಳನ್ನು ಪದಚ್ಯುತ ಗೊಳಿಸಲು ಬಳಸಲಾಗುತ್ತಿದ್ದ ಸಂವಿಧಾನ ಪರಿಚ್ಛೇದ 356 , ನೂರಕ್ಕೂ ಹೆಚ್ಚು ಸಲ ಬಳಕೆಯಾಗಿದೆ. ಸರ್ಕಾರಿಯಾ ಆಯೋಗದ ವರದಿಯಲಿ ಉಲ್ಲೇಖಿಸಿರುವಂತೆ 1951 ರಿಂದ 1987ರ ನಡುವೆ 75 ಬಾರಿ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿತ್ತು. ಇವುಗಳ ಪೈಕಿ 52 ಪ್ರಸಂಗಗಳಲ್ಲಿ ಸಂವಿಧಾನ ವಿಧಿ 356ರ ದುರ್ಬಳಕೆ ಮಾಡಲಾಗಿತ್ತು. ಇಂದಿರಾಗಾಂಧಿ ಆಳ್ವಕೆಯಲ್ಲಿ 48 ಬಾರಿ 356ರ ಬಳಕೆಯಾಗಿತ್ತು. ನಾಲ್ಕು ಬಾರಿ ತುರ್ತುಪರಿಸ್ಥಿತಿಯಲ್ಲಿ ಬಳಸಲಾಗಿತ್ತು. 1977ರಲ್ಲಿ ಅಧಿಕಾರಕ್ಕೆ ಬಂದ ಜನತಾಪಕ್ಷ ಮೊರಾರ್ಜಿ ದೇಸಾಯಿ ಆಳ್ವಿಕೆಯಲ್ಲಿ 13 ಬಾರಿ ಬಳಕೆಯಾಗಿತ್ತು. ಚರಣ್ ಸಿಂಗ್ ಸರ್ಕಾರ ನಾಲ್ಕು ಬಾರಿ ಬಳಸಿತ್ತು. ಇಂದಿರಾ 1980ರಲ್ಲಿ ಮರು ಆಯ್ಕೆಯಾದಾಗ ವಿರೋಧ ಪಕ್ಷಗಳು ಇದ್ದ ಒಂಬತ್ತು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರು.

ಈಗ ಸಂವಿಧಾನ ಅನುಚ್ಛೇದ 356ರ ಬಳಕೆಯಾಗುತ್ತಿಲ್ಲ ಎಂದರೆ ಅದಕ್ಕೆ ರಾಜಕೀಯ ಪ್ರಬುದ್ಧತೆ ಬೆಳೆದಿದೆ ಅಥವಾ ರಾಜಕೀಯ ಪಕ್ಷಗಳು ಹೆಚ್ಚು ಸಂವಿಧಾನಬದ್ಧವಾಗಿವೆ ಎಂದರ್ಥವಲ್ಲ. ಸುಪ್ರೀಂಕೋರ್ಟ್ ಇದರ ಮೇಲೆ ನಿರ್ಬಂಧ ಹೇರಿದೆ. 1994ರಲ್ಲಿ ಎಂಟು ರಾಜ್ಯಗಳ ಒಂಬತ್ತು ನ್ಯಾಯಾಧೀಶರ ಸುಪ್ರೀಂಕೋರ್ಟ್ ನ್ಯಾಯಪೀಠ 356ರ ದುರ್ಬಳಕೆಯ ವಿರುದ್ಧ ನಿರ್ದೇಶನಗಳನ್ನು ನೀಡಿತ್ತು. 1988ರ ಸರ್ಕಾರಿಯಾ ಆಯೋಗವು 356ರ ಬಳಕೆಯಲ್ಲಿ ನಡೆಯುತ್ತಿದ್ದ ರಾಜಕೀಯ ದುರುದ್ದೇಶಗಳನ್ನು ಸ್ಪಷ್ಟಪಡಿಸಿತ್ತು. 1980ರ ದಶಕದಲ್ಲಿ ಭಜನ್ ಲಾಲ್ ಹರಿಯಾಣ ಮುಖ್ಯಮಂತ್ರಿಯಾದ ಸಂದರ್ಭವನ್ನು ಇಲ್ಲಿ ಸ್ಮರಿಸಬಹುದು. ಬಹುಮತ ಹೊಂದಿದ್ದ ದೇವಿಲಾಲ್ ಸದನಕ್ಕೆ ಪ್ರವೇಶಿಸುವ ಮುನ್ನವೇ ರಾಜ್ಯಪಾಲರು ಭಜನ್ ಲಾಲ್ ಬಣಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿದ್ದರು. ಆಗ ಆರಂಭವಾಗಿದ್ದು ಆಯಾರಾಮ್ ಗಯಾರಾಮ್ ಸಂಪ್ರದಾಯ.
ರಾಜ್ಯಪಾಲ ಹುದ್ದೆಗೆ ಪಕ್ಷದ ನಿಷ್ಠಾವಂತರನ್ನು ನೇಮಿಸುವ ಒಂದು ಪರಂಪರೆಯನ್ನು ಕಾಂಗ್ರೆಸ್, ಬಿಜೆಪಿ ಮತ್ತು ಸಮ್ಮಿಶ್ರ ಸರ್ಕಾರಗಳೂ ಶ್ರದ್ಧೆಯಿಂದ ಅನುಸರಿಸಿವೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ಸಂಪ್ರದಾಯ ಮತ್ತಷ್ಟು ವೈವಿಧ್ಯತೆಯನ್ನೂ, ರಾಜಕೀಯವಾಗಿ ಸ್ವೀಕೃತಿಯನ್ನೂ ಪಡೆದುಕೊಂಡಿದೆ. ಅದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಇದನ್ನು ಬಳಸಿಕೊಂಡು ರಾಜ್ಯ ಸರ್ಕಾರಗಳನ್ನು ಪಲ್ಪಟಗೊಳಿಸಲು ನೆರವಾಗುತ್ತಿದೆ. ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ವಿರೋಧ ಪಕ್ಷದ ಶಾಸಕರನ್ನು ಸಾರಾಸಗಟಾಗಿ ಸೆಳೆದುಕೊಳ್ಳುವ ರಾಜಕೀಯ ಪ್ರವೃತ್ತಿಯನ್ನೂ ಕಂಡಿದ್ದೇವೆ. ಇಲ್ಲಿ ರಾಜ್ಯಪಾಲರ ಪಾತ್ರ ಬಹುಮುಖ್ಯವಾದುದು. ಈ ನಡುವೆಯೂ ಗುರುತಿಸಬಹುದಾದ ಒಂದು ಹೊಳೆಯುವ ನಕ್ಷತ್ರ ಎಂದರೆ ಎಂ.ಎಂ. ಥಾಮಸ್. ತಾವು ಕೇಂದ್ರ ಸರ್ಕಾರದ ಅಣತಿಯಂತೆ ನಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಕ್ಕೇ 1990-92ರಲ್ಲಿ ನಾಗಾಲ್ಯಾಂಡ್ ರಾಜ್ಯಪಾಲರಾಗಿದ್ದ ಎಂ ಎಂ ಥಾಮಸ್ ಅವರನ್ನು ವಜಾಗೊಳಿಸಲಾಗಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲಲಿ ವಜಾಗೊಂಡಿರುವ ಏಕೈಕ ರಾಜ್ಯಪಾಲ ಎಂ.ಎಂ. ಥಾಮಸ್.

ವರ್ತಮಾನ ರಾಜಕಾರಣದ ಬಾಧ್ಯತೆ
ಭಾರತದ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಿಕೊಂಡು ಚುನಾಯಿತ ರಾಜ್ಯ ಸರ್ಕಾರಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರಾಮಾಣಿಕವಾಗಿ ಯೋಚನೆ ಮಾಡಬೇಕಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಬಿಜೆಪಿ ನಾಯಕರೊಬ್ಬರು ರಾಜ್ಯ ಸರ್ಕಾರ ಉರುಳಿಸಲು 6500 ಕೋಟಿ ರೂ ಬೇಕಾಗುತ್ತದೆ ( ಪ್ರತಿ ಶಾಸಕರಿಗೆ 100 ಕೋಟಿರೂಗಳಂತೆ ) ಎಂದು ಹೇಳಿರುವುದು, ಮತ್ತೋರ್ವ ನಾಯಕರು 1000 ಕೋಟಿ ರೂಗಳನ್ನು ನಿಗದಿಪಡಿಸಿರುವುದು, ಬದಲಾಗುತ್ತಿರುವ ಅಧಿಕಾರ ರಾಜಕಾರಣದ ಲಕ್ಷಣವಾಗಿಯೇ ಕಾಣುತ್ತದೆ. ಚುನಾಯಿತ ಶಾಸಕ/ಸಂಸದರನ್ನು ವಾಸ್ತವವಾಗಿ ಖರೀದಿಸುವ ಒಂದು ಭ್ರಷ್ಟ ಸಂಪ್ರದಾಯಕ್ಕೂ ಕರ್ನಾಟಕ ಹಲವು ಬಾರಿ ಸಾಕ್ಷಿಯಾಗಿದೆ. ಈ ಎಲ್ಲ ಅಸಾಂವಿಧಾನಿಕ ನಡೆಗಳನ್ನು ನಿಯಂತ್ರಿಸಲಾಗದಿದ್ದರೂ, ಇದರಿಂದ ಉಂಟಾಗುವ ರಾಜಕೀಯ ಪಲ್ಲಟಗಳ ಮೇಲೆ ಅಂಕುಶ ಸಾಧಿಸಲು ರಾಜ್ಯಪಾಲರ ಕಚೇರಿಗೆ ಸಾಧ್ಯವಾಗುತ್ತದೆ.
ಇತ್ತೀಚೆಗೆ ಸುಪ್ರೀಂಕೋರ್ಟ್ ನ್ಯಾಯಪೀಠವೂ ಸಹ ರಾಜ್ಯಪಾಲರ ಕಾರ್ಯನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಸಾಂವಿಧಾನಿಕ ಕಚೇರಿಯನ್ನು ಬಳಸಿಕೊಂಡು ರಾಜ್ಯಪಾಲರು ಪ್ರಜಾಪ್ರಭುತ್ವವನ್ನು ನಗಣ್ಯಗೊಳಿಸುವ ಪ್ರಯತ್ನಗಳಿಗೆ ಮುಂದಾಗಬಾರದು ಎಂಬ ಎಚ್ಚರಿಕೆಯನ್ನೂ ನೀಡಿದೆ. ಭಾರತದಲ್ಲಿ ರಾಜ್ಯಪಾಲ ಕಚೇರಿಯ ನಿರ್ವಹಣೆ, ದುರ್ಬಳಕೆ, ದುರುಪಯೋಗ ಹಾಗೂ ರಾಜಕೀಯ ಸ್ವರೂಪದ ಬಗ್ಗೆ ಸರ್ಕಾರಿಯಾ ಆಯೋಗ ಅತ್ಯುತ್ತಮವಾದ ಶಿಫಾರಸುಗಳನ್ನು ನೀಡಿದೆ. ಅದನ್ನು ಪುನಃ ಪರಿಶೀಲಿಸಬೇಕಿದೆ. ಮತ್ತೊಂದೆಡೆ ನ್ಯಾಯಾಲಯಗಳ ತೀರ್ಪುಗಳು ಈ ದುರ್ಬಳಕೆಯನ್ನು ತಡೆಹಿಡಿದಿದೆ. ದುರದೃಷ್ಟವಶಾತ್ ಈ ವಿಷಯದಲ್ಲಿ, ಅಂದರೆ ರಾಜ್ಯಪಾಲರ ಕಚೇರಿ ಮತ್ತು ಅದರ ಪ್ರಜಾಸತ್ತಾತ್ಮಕ ಆಶಯಗಳ ಬಗ್ಗೆ ಸಾರ್ವಜನಿಕ ಚರ್ಚೆಗಳು ಹೆಚ್ಚಾಗಿ ನಡೆದಿಲ್ಲ. ರಾಜಕೀಯ ಪಕ್ಷಗಳೂ ಸಹ ಈ ಬಗ್ಗೆ ಹೆಚ್ಚಿನ ಗಮನ ನೀಡಿಲ್ಲ.ಈಗ ಈ ಮರು ವಿಮರ್ಶೆಗೆ ಕಾಲ ಕೂಡಿಬಂದಿದೆ. ಈ ಬಗ್ಗೆ ಚರಿತ್ರೆಯ ಪುನರಾವಲೋಕನದೊಂದಿಗೆ ಭವಿಷ್ಯ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯಪಾಲರ ಜವಾಬ್ದಾರಿ ಮತ್ತು ಸಾಂವಿಧಾನಿಕ ನೈತಿಕತೆಯ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಆರಂಭಿಸಬೇಕಿದೆ. ಸರ್ಕಾರಿಯಾ ಆಯೋಗದ ವರದಿಯನ್ನು ಸುಭದ್ರ ಕಪಾಟುಗಳಿಂದ ಹೊರತೆಗೆದು ಸಾರ್ವಜನಿಕ ಚರ್ಚೆಗೊಳಪಡಿಸುವ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಚುನಾಯಿತ ಸರ್ಕಾರಗಳನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳನ್ನೇ ಆಮಿಷಗಳ ಮೂಲಕ ಸೆಳೆದುಕೊಳ್ಳುವುದು, ಇಬ್ಭಾಗವಾದ ಪಕ್ಷದ ಬಣಗಳು ಅಧಿಕಾರ ಪಡೆಯಲೆಂದೇ ಅನುಕೂಲಕರ ಅವಕಾಶಗಳನ್ನು

ಬಳಸಿಕೊಳ್ಳುವುದು, ಆಪರೇಷನ್ ಕಮಲ, ಆಪರೇಷನ್ ಹಸ್ತ ಮೊದಲಾದ ಭ್ರಷ್ಟ ಮಾರ್ಗಗಳನ್ನು ಅನುಸರಿಸುವುದು ಇವೆಲ್ಲವೂ ರಾಜ್ಯಪಾರ ಕಚೇರಿಯನ್ನು ಬಳಸಿಕೊಳ್ಳಬಹುದಾದ ಮಾರ್ಗಗಳಾಗಿರುತ್ತವೆ.
ಆದರೆ ರಾಜಕೀಯ ನಿಷ್ಪಕ್ಷಪಾತತೆಯ ರಾಜ್ಯಪಾಲರನ್ನು ನೇಮಿಸುವ ನೈತಿಕ ಹೊಣೆಗಾರಿಕೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳ ಮೇಲಿರುತ್ತದೆ. ರಾಜ್ಯಪಾಲರಿಗೆ ಸಂವಿಧಾನ ನಿಷ್ಠೆಯೇ ಪ್ರಧಾನವಾಗಿ, ಪಕ್ಷ ನಿಷ್ಠೆ ಗೌಣವಾದಲ್ಲಿ ಇಂತಹ ಪ್ರಸಂಗಗಳನ್ನು ತಪ್ಪಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಭಾರತದ ಸಂಸದೀಯ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಸಲುವಾಗಿ ಸಾಂವಿಧಾನಿಕ ನೈತಿಕತೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಅವಶ್ಯಕತೆ ಇದೆ. ಇಂದು ಅಧಿಕಾರ ರಾಜಕಾರಣದ ಆವರಣದಲ್ಲಿರುವ ಪಕ್ಷಗಳಲ್ಲಿ ಈ ಗುಣಲಕ್ಷಣಗಳು ಎಷ್ಟಿದೆ ಎನ್ನುವುದಕ್ಕಿಂತಲೂ, ಭಾರತದ ಸುಶಿಕ್ಷಿತ ಪ್ರಬುದ್ಧ ಪ್ರಜ್ಞಾವಂತ ನಾಗರಿಕ ಸಮಾಜ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಿದೆ. ಸಂವಿಧಾನವನ್ನು ಎತ್ತಿಹಿಡಿಯುವ, ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವ ಹಾಗೂ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಆಶಯಗಳಿರುವ ರಾಜಕೀಯ ಪಕ್ಷಗಳು, ಸಂಘಟನೆಗಳು, ನಾಗರಿಕ ಸಮಾಜ ಹಾಗೂ ಬೌದ್ಧಿಕ ವಲಯ ಈ ಹಾದಿಯಲ್ಲಿ ಗಂಭೀರ ಆಲೋಚನೆ ಮಾಡಬೇಕಿದೆ. ಇದು ವರ್ತಮಾನದ ತುರ್ತು, ಭವಿಷ್ಯದ ಅವಶ್ಯಕತೆ.
(ಈ ದಿನ.ಕಾಂ ಹೊರತಂದಿರುವ ನಮ್ಮ ಕರ್ನಾಟಕ ವಿಶೇಷ ಸಂಚಿಕೆಗಾಗಿ ಬರೆದ ಲೇಖನ)
-೦-೦-೦-೦-೦