Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಪ್ರವಾಸಿಗರನ್ನ ಆಕರ್ಷಿಸುತ್ತಿದೆ ತ್ಯಾವರೆಕೊಪ್ಪದ ಸಿಂಹ-ಹುಲಿಧಾಮ

ಪ್ರತಿಧ್ವನಿ

ಪ್ರತಿಧ್ವನಿ

December 13, 2022
Share on FacebookShare on Twitter


ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಫಾಲ್ಸ್‌ ಜೊತೆಗೆ ಪ್ರಕೃತಿ ಸೌಂದರ್ಯದ ಮೂಲಕ ಪ್ರವಾಸಿಗರನ್ನ ಸೆಳೆಯುತ್ತಿದ್ದ ಶಿವಮೊಗ್ಗದ ಪ್ರವಾಸಿ ತಾಣಗಳ ಪಟ್ಟಿಗೆ ಇದೀಗ ತ್ಯಾವರೆಕೊಪ್ಪದ ಸಿಂಹ-ಹುಲಿಧಾಮ ಸಹ ಸೇರ್ಪಡೆಯಾಗಿದೆ.
ಶಿವಮೊಗ್ಗ ಪಟ್ಟಣದಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಶಿವಮೊಗ್ಗ-ಸಾಗರ ಹೆದ್ದಾರಿಯಲ್ಲಿನ ತ್ಯಾವರೆಕೊಪ್ಪ ಸಿಂಹ-ಹುಲಿಧಾಮ ಸಾಕಷ್ಟು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಎರಡು ವರ್ಷಗಳ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮೃಗಾಲಯದ ನಿರ್ದೇಶಕ ಮುಕುಂದ್ ಚಂದ್ರ ಅವರ ದೂರದೃಷ್ಟಿಯಿಂದ ತ್ಯಾವರೆಕೊಪ್ಪ ಸಿಂಹ-ಹುಲಿಧಾಮ ಬದಲಾಗಿದೆ. ಶಿವಮೊಗ್ಗಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರು ಪ್ರತಿದಿನ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

ನ್ಯಾಯಸಮ್ಮತವಾಗಿ ಮೀಸಲಾತಿ ನೀಡಲಾಗಿದೆ : ಸಿಎಂ ಬೊಮ್ಮಾಯಿ


ಅರಣ್ಯಾಧಿಕಾರಿ ಮುಕುಂದ್ ಚಂದ್ರ ಅವರು ಈ ಮೃಗಾಲಯವನ್ನ ಕೇವಲ ಮನರಂಜನೆಗಷ್ಟೇ ಸೀಮಿತಗೊಳಿಸದೆ, ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಕೊರೊನಾ ನಂತರ ರಾಜ್ಯದ ಹಲವು ಮೃಗಾಲಯಗಳು ಆರ್ಥಿಕವಾಗಿ ಸಾಕಷ್ಟು ನಷ್ಟವನ್ನ ಅನುಭವಿಸಿದ್ದವು. ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದ್ದ ಹಿನ್ನೆಲೆಯಲ್ಲಿ ಮೃಗಾಲಯದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಶಿವಮೊಗ್ಗ ಮೃಗಾಲಯದ ಅಧಿಕಾರಿಗಳ ಪರಿಶ್ರಮದಿಂದ ಆರ್ಥಿಕವಾಗಿ ಸದೃಢವಾಗಿ ಉಳಿದಿದೆ.


ಪ್ರಮುಖವಾಗಿ ಪ್ರಾಣಿ ದತ್ತು ಯೋಜನೆ ಮೂಲಕ ಮೃಗಾಲಯದ ಆರ್ಥಿಕ ಸ್ಥಿತಿ ಸುಧಾರಿಸಿದೆ. ಸಾಮಾನ್ಯವಾಗಿ ಮೃಗಾಲುದ ಪ್ರಾಣಿಗಳನ್ನ ದತ್ತು ಪಡೆಯಲು ಲಕ್ಷಾಂತರ ರೂ. ನೀಡಬೇಕಾಗುತ್ತದೆ. ಆದರೆ ಇಲ್ಲಿನ ಮೃಗಾಲಯದಲ್ಲಿ ದಿನದ ಲೆಕ್ಕದಲ್ಲೂ ಪ್ರಾಣಿಗಳನ್ನ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಮೃಗಾಲಯದ ನಿರ್ದೇಶಕ ಮುಕುಂದ್ ಚಂದ್ರ ತಿಳಿಸಿದ್ದಾರೆ.
ಪ್ರಾಣಿಗಳನ್ನು ದತ್ತ ತೆಗೆದುಕೊಳ್ಳುವುದು ಎಲ್ಲಾ ಮೃಗಾಲಯಗಳಲ್ಲೂ ಇದೆ. ನಮ್ಮಲ್ಲಿ ವಿಶೇಷವಾಗಿ ಒಂದು ದಿನ ದತ್ತು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಹುಟ್ಟುಹಬ್ಬ ಮದುವೆ ವಾರ್ಷಿಕೋತ್ಸವ ಹೀಗೆ ನಾನಾ ಕಾರಣಗಳಿಗೆ ದಿನದ ಮಟ್ಟಿಗೆ ಪ್ರಾಣಿಯ ವೆಚ್ಚವನ್ನ ಬರಿಸಿ ಸೆಲೆಬ್ರೇಟ್ ಮಾಡಬಹುದು. ಒಂದು ದಿನದ ದತ್ತು ಬಹಳ ಕಡಿಮೆ ಹಣದಲ್ಲಿ ತೆಗೆದುಕೊಳ್ಳಬಹುದು. ಅತೀ ಹೆಚ್ಚು ನಿರ್ವಹಣಾ ವೆಚ್ಚ ಬರುವಂತ ಹುಲಿಗಳಿಗೆ 1500 ದಿನವೊಂದಕ್ಕೆ ನಿಗದಿಪಡಿಸಲಾಗಿದೆ. ಜಿಂಕೆಯಂತಹ ಸಣ್ಣ ಪ್ರಾಣಿಗಳಿಗೂ ಕೂಡ ಹಣ ನೀಡಿ ದತ್ತು ತೆಗೆದುಕೊಳ್ಳಬಹುದು ಎಂದರು.
ಈ ಯೋಜನೆ ಮೂಲಕ ಹಣ ಮಾಡುವ ಉದ್ದೇಶ ಇಲ್ಲದಿದ್ದರೂ, ವನ್ಯ ಜೀವಿಗಳ ಪ್ರಾಮುಖ್ಯತೆ ತಿಳಿಸುವುದು ನಮ್ಮ ಧ್ಯೇಯವಾಗಿದೆ. ಅದರಲ್ಲೂ ಮಕ್ಕಳು ಹುಟ್ಟುಹಬ್ಬ ಆಚರಿಸಿಕೊಂಡರೆ ತುಂಬಾ ಖುಷಿಪಡುತ್ತಾರೆ. ಜತೆಗೆ ಮಕ್ಕಳಲ್ಲೂ ಸಹ ಪ್ರಾಣಿಗಳ ಬಗ್ಗೆ ಅರಿವು ಮೂಡುತ್ತದೆ. ನಮ್ಮ ಮೃಗಾಲಯದ ಪ್ರಾಣಿಗಳನ್ನ ದತ್ತು ಪಡೆಯಲು ಅನುಕೂಲವಾಗುವಂತೆ ಮೃಗಾಲಯ ಪ್ರಾಧಿಕಾರದ್ದೇ ಆ್ಯಪ್ ಇದ್ದು, ಇಲ್ಲಿ ದತ್ತು ಪಡೆಯಲು ನಿಗದಿಪಡಿಸಿರುವ ದರವನ್ನು ನೋಡಬಹುದಾಗಿದೆ. ಸಾರ್ವಜನಿಕರು 50 ರೂ. ಪಾವತಿಸಿ ಸಹ ರಶೀದಿ ಪಡೆಯಬಹುದು.
ಅಲ್ಲದೇ ಈ ಮೊದಲು ಮೃಗಾಲಯಗಳಿಗೆ ಮನರಂಜನೆ ಉದ್ದೇಶದಿಂದ ಮಾತ್ರ ಬರುತ್ತಿದ್ದರು. ಆದರೆ ಈಗ ಶೈಕ್ಷಣಿಕವಾಗಿ ಕೂಡ ಮಹತ್ವವನ್ನು ಪಡೆದುಕೊಂಡಿದೆ. ನಮ್ಮ ಮೃಗಾಲಯದಲ್ಲೇ ನೀವು ಪ್ರಾಣಿಗಳ ಬಗ್ಗೆ ವಿವರಣೆ ನೀಡುವ ಶಿಕ್ಷಕರನ್ನ ಕಾಣಬಹುದು ಶಿವಮೊಗ್ಗ ಮೃಗಾಲಯ ಈಗ ಸಾಕಷ್ಟು ಬದಲಾಗಿದೆ. ಸೆಂಟ್ರಲ್ ಅಥಾರಿಟಿ ಮೂಲಕ ಯೋಜನಾ ನೀಲ ನಕ್ಷೆ ತೆಗೆದುಕೊಂಡು, ಆ ಮೂಲಕ ಮೃಗಾಲಯವನ್ನು ಸಿದ್ಧಪಡಿಸಿದ್ದೇವೆ. ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಮೃಗಾಲಯದ ನಿರ್ಮಾಣವಾಗುತ್ತಿದ್ದು, ಮೃಗಾಲಯದಲ್ಲಿ ಶುಚಿತ್ವಕ್ಕೆ ಹೆಚ್ಚು ಪ್ರಾಧ್ಯಾನ ನೀಡಲಾಗಿದೆ ಎಂದರು.
ಸುಮಾರು ಎರಡು ಕಿಲೋಮೀಟರ್ ಉದ್ದದ ಮೃಗಾಲಯ ಹಾದಿ ನಿರ್ಮಾಣವಾಗಿದೆ. ಸಫಾರಿಯಲ್ಲಿ ನೋಡುವ ಹುಲಿ ಸಿಂಹಗಳನ್ನ ಮೃಗಾಲಯದಲ್ಲೂ ನೋಡಬಹುದಾಗಿದ್ದು, ವಿಶೇಷವೆಂದರೆ ಇಲ್ಲಿನ ಕಾಡುಕೋಣದ ಸಫಾರಿ ಎಲ್ಲರನ್ನ ಆಕರ್ಷಿಸಿದೆ. ಇದೀಗ ಮೃಗಾಲಯ ಪ್ರತಿ ತಿಂಗಳು ಮೂರು ಲಕ್ಷ ಪ್ರವಾಸಿಗರನ್ನ ಆಕರ್ಷಿಸುತ್ತಿದ್ದು, ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇವೆ. ಈ ಮೃಗಾಲು 250 ಹೆಕ್ಟೇರ್‌ ಪ್ರದೇಶದಲ್ಲಿದ್ದು, 35ಕ್ಕೂ ಹೆಚ್ಚು ಪ್ರಭೇದದ 250ಕ್ಕೂ ಹೆಚ್ಚು ಪ್ರಾಣಿಗಳು ಇಲ್ಲಿವೆ ಎಂದು ಮುಕುಂದ್ ಹೇಳಿದರು.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ನಿಮ್ಮಂತಹ ಪುಕ್ಕಲು ಸರ್ವಾಧಿಕಾರಿಗೆ ಹೆದರಲ್ಲ: ಮೋದಿ ವಿರುದ್ಧ ಪ್ರಿಯಾಂಕ ಗುಡುಗು.!
Top Story

ನಿಮ್ಮಂತಹ ಪುಕ್ಕಲು ಸರ್ವಾಧಿಕಾರಿಗೆ ಹೆದರಲ್ಲ: ಮೋದಿ ವಿರುದ್ಧ ಪ್ರಿಯಾಂಕ ಗುಡುಗು.!

by ಪ್ರತಿಧ್ವನಿ
March 24, 2023
ಸಿದ್ದರಾಮಯ್ಯರನ್ನು ಸೇಫ್​ ಮಾಡಲು ಬಿಡುಗಡೆಯಾಗಿದೆ ಈ ಮೊದಲ ಪಟ್ಟಿ : ಎಐಸಿಸಿ ಪ್ಲಾನ್​ ಏನು ಗೊತ್ತೇ..?
Top Story

ಸಿದ್ದರಾಮಯ್ಯರನ್ನು ಸೇಫ್​ ಮಾಡಲು ಬಿಡುಗಡೆಯಾಗಿದೆ ಈ ಮೊದಲ ಪಟ್ಟಿ : ಎಐಸಿಸಿ ಪ್ಲಾನ್​ ಏನು ಗೊತ್ತೇ..?

by ಮಂಜುನಾಥ ಬಿ
March 25, 2023
Siddaramaiah | ಬಿಜೆಪಿಯಲ್ಲಿ ಎಲ್ರು ಭ್ರಷ್ಟರೇ..ಇವ್ರ ಮುಖ ಜನ್ರಿಗೆ ತೋರಿಸಲು ಇವ್ರಿಗೆ ಆಗ್ತಿಲ್ಲ..!
ಇದೀಗ

Siddaramaiah | ಬಿಜೆಪಿಯಲ್ಲಿ ಎಲ್ರು ಭ್ರಷ್ಟರೇ..ಇವ್ರ ಮುಖ ಜನ್ರಿಗೆ ತೋರಿಸಲು ಇವ್ರಿಗೆ ಆಗ್ತಿಲ್ಲ..!

by ಪ್ರತಿಧ್ವನಿ
March 21, 2023
ದೇಶವನ್ನು ಹಿಂದುಳಿಸುತ್ತಿರುವ ನೆಹರು ದ್ವೇಷ
Uncategorized

ದೇಶವನ್ನು ಹಿಂದುಳಿಸುತ್ತಿರುವ ನೆಹರು ದ್ವೇಷ

by ಡಾ | ಜೆ.ಎಸ್ ಪಾಟೀಲ
March 23, 2023
ರಾಜ್ಯ ವಿಧಾನಸಭಾ ಚುನಾವಣೆ ಮುಹೂರ್ತಕ್ಕೆ ಕ್ಷಣಗಣನೆ..!
Top Story

ರಾಜ್ಯ ವಿಧಾನಸಭಾ ಚುನಾವಣೆ ಮುಹೂರ್ತಕ್ಕೆ ಕ್ಷಣಗಣನೆ..!

by ಪ್ರತಿಧ್ವನಿ
March 24, 2023
Next Post
ಡಿ. 14 ರಂದು 114 ‘ನಮ್ಮ ಕ್ಲಿನಿಕ್‌’ ಗಳ ಉದ್ಘಾಟನೆ: ಸಚಿವ ಡಾ.ಕೆ.ಸುಧಾಕರ್‌

ಡಿ. 14 ರಂದು 114 'ನಮ್ಮ ಕ್ಲಿನಿಕ್‌' ಗಳ ಉದ್ಘಾಟನೆ: ಸಚಿವ ಡಾ.ಕೆ.ಸುಧಾಕರ್‌

ಸುಳ್ಯದಲ್ಲಿ ಗೆಳತಿ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಪತಿ.!; ಪತ್ನಿ ಮಾಡಿದ್ದೇನು ..?

ಸುಳ್ಯದಲ್ಲಿ ಗೆಳತಿ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಪತಿ.!; ಪತ್ನಿ ಮಾಡಿದ್ದೇನು ..?

ಬಾಡಿಗೆ ಕಟ್ಟುವಂತೆ ನೋಟಿಸ್:ಮಚ್ಚುಹಿಡಿದು ಬಂದ “ಲೇಡಿ ಡಾನ್”

ಬಾಡಿಗೆ ಕಟ್ಟುವಂತೆ ನೋಟಿಸ್:ಮಚ್ಚುಹಿಡಿದು ಬಂದ "ಲೇಡಿ ಡಾನ್"

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist