• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸರ್ವ ಜಾತಿ, ಧರ್ಮಗಳ ಜನರ ರಕ್ತ ಕೆಂಪು, ಬೆವರು ಉಪ್ಪು: ಡಿಸಿಎಂ ಡಿ.ಕೆ.ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
September 8, 2025
in Top Story, ಕರ್ನಾಟಕ, ರಾಜಕೀಯ
0
ಸರ್ವ ಜಾತಿ, ಧರ್ಮಗಳ ಜನರ ರಕ್ತ ಕೆಂಪು, ಬೆವರು ಉಪ್ಪು: ಡಿಸಿಎಂ ಡಿ.ಕೆ.ಶಿವಕುಮಾರ್
Share on WhatsAppShare on FacebookShare on Telegram

ಜಾತಿ ಮೇಲೆ ನಿಂತ ವ್ಯಕ್ತಿ ನಾನಲ್ಲ

ADVERTISEMENT

ಬಂಗಾರಪ್ಪನವರು ನನ್ನ ತಿದ್ದಿ, ತೀಡಿ ಬೆಳೆಸಿದ ಗುರುಗಳು

ಬೆಂಗಳೂರು, ಸೆ.07:

“ಜಗತ್ತಿನ ಯಾವುದೇ ಧರ್ಮದವರ, ಜಾತಿಯ, ಕರಿಯ, ಬಿಳಿಯ ಜನಾಂಗದ ವ್ಯಕ್ತಿಗಳ ರಕ್ತದ ಬಣ್ಣ ಕೆಂಪಾಗಿರುತ್ತದೆ. ಎಲ್ಲರ ಕಣ್ಣೀರು, ಬೆವರಿನ ರುಚಿ ಉಪ್ಪಾಗಿಯೇ ಇರುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ನಾರಾಯಣ ಗುರುಗಳ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

“ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ ದೇವನೊಬ್ಬ ನಾಮ ಹಲವು. ಇದೇ ತತ್ವವನ್ನು ನಾರಾಯಣ ಗುರುಗಳು ಸಾರಿದ್ದು” ಎಂದು ಹೇಳಿದರು.

Siddaramaiah: ಬಸವಣ್ಣವರ ವಚನ ಹೇಳ್ತಾರೆ.. ಆದ್ರೆ ಅದೇ ಕ್ಷಣದಲ್ಲಿ ನಿಮ್ಮ ಜಾತಿ ಯಾವುದೇ ಅಂತಾ ಕೇಳ್ತಾರೆ

ಜಾತಿ ಮೇಲೆ ನಿಂತ ವ್ಯಕ್ತಿ ನಾನಲ್ಲ

“ಜಾತಿ ಹೇಳಬೇಡ, ಜಾತಿ ಕೇಳಬೇಡ, ಜಾತಿ ಮಾಡದೆ ಬದುಕನ್ನು ಸಾಗಿಸು ಎಂದವರು ನಾರಾಯಣ ಗುರುಗಳು. ಶೋಷಿತ ವರ್ಗಗಳಿಗೆ ದೇವರನ್ನು ತೋರಿಸಿದ ಸಂತಶ್ರೇಷ್ಠರು. ಇವರ ಆಚಾರ, ವಿಚಾರದಲ್ಲಿ ನಾವುಗಳು ನಡೆಯಲೇ ಬೇಕು. ನಾನು ಜಾತಿ ಮೇಲೆ ನಿಂತಿರುವ ವ್ಯಕ್ತಿಯಲ್ಲ. ಪ್ರೀತಿ, ವಿಶ್ವಾಸಕ್ಕೆ, ಮಾನವನ ಬದುಕಿನ ಉನ್ನತಿ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುವವನು. ನನ್ನನ್ನು ಬಳಸಿಕೊಂಡು ಕೆಲಸ ಮಾಡಿಕೊಳ್ಳಿ” ಎಂದರು.

ಬಂಗಾರಪ್ಪನವರು ನನ್ನ ತಿದ್ದಿ, ತೀಡಿ ಬೆಳೆಸಿದ ಗುರುಗಳು

“ಬಂಗಾರಪ್ಪ ಅವರು ಪಕ್ಷಕ್ಕೆ ರಾಜಿನಾಮೆ ನೀಡುವ ಸಂದರ್ಭ ಬಂದಿತು. ಆಗ ನಾನು ಮತ್ತು ಬೆಳ್ಳಿಯಪ್ಪ ಅವರ ಬಳಿ ಹೋಗಿ ‘ನಾವು ಏನು ಮಾಡುವುದು’ ಎಂದೆವು. ಅವರ ತಲೆಯಲ್ಲಿ ಬೇರೆ ಪಕ್ಷ ಕಟ್ಟುವ ಆಲೋಚನೆಯಿತ್ತು. ಆದರೂ ನನ್ನ ಬೆಳವಣಿಗೆ ಬಗ್ಗೆ ಕಳಕಳಿಯಿದ್ದ ಅವರು ಎಸ್.ಎಂ.ಕೃಷ್ಣ ಅವರ ಜೊತೆಯಲ್ಲಿ ಹೋಗು ಎಂದರು. ನನಗೆ ಎಸ್.ಎಂ.ಕೃಷ್ಣ ಅವರು ಬೇರೆ ರೀತಿಯಲ್ಲಿ ಗುರುವಾದರೆ. ನನಗೆ ಮಾರ್ಗದರ್ಶನ ನೀಡಿ, ಅಡಿಪಾಯ ಹಾಕಿ, ತಿದ್ದಿ ತೀಡಿದವರು ಬಂಗಾರಪ್ಪನವರು” ಎಂದರು.

“1979 ರಿಂದಲೂ ನಾನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ನೆನೆಯಲೇ ಬೇಕು. ನನ್ನ ರಾಜಕಾರಣದ ಬದುಕಿನಲ್ಲಿ ಅವರ ಶಿಷ್ಯನಾಗಿ ಬೆಳೆದೆ. ನನ್ನನ್ನು ಚಿಕ್ಕ ವಯಸ್ಸಿಗೆ ಮಂತ್ರಿ ಮಾಡಿ ಬೆಳೆಸಿದವರು” ಎಂದರು.

“ವಿದ್ಯಾರ್ಥಿ ನಾಯಕನಾಗಿದ್ದ ನನ್ನ ಮೇಲೆ ಅಪಾರ ವಿಶ್ವಾಸವನ್ನಿಟ್ಟಿದ್ದರು. ನನ್ನಲ್ಲಿ ನಾಯಕತ್ವದ ಗುಣವಿದೆ ಎಂದು ಇವನನ್ನು ಬೆಳೆಸಬೇಕು ಎಂದು ನನ್ನ ಬಗ್ಗೆ ವಿಶೇಷವಾದ ಅನ್ಯೂನ್ಯತೆಯನ್ನಿಟ್ಟುಕೊಂಡಿದ್ದರು” ಎಂದರು.

“ಮಧು ಬಂಗಾರಪ್ಪ ಅವರು ಅವರ ತಂದೆಯ ಜೊತೆಯಲ್ಲಿಯೇ ಬೇರೆ ಪಕ್ಷಕ್ಕೆ ಹೋಗಿದ್ದರು. ನಾನು ಆ ಕಡೆ ಸರಿಯಿಲ್ಲ ಎಂದು ಎಳೆದುಕೊಂಡು ಬಂದೆ. ನಾನು ಜೊತೆಯಲ್ಲಿ ಇದ್ದೇನೆ ಎಂದು ಅವರಿಗೆ ಹೇಳಿದೆ.‌ ಖಾತೆ ಹಂಚಿಕೆ ವೇಳೆ ಸ್ವಲ್ಪ ಹೆಚ್ಚು ಕಡಿಮೆಯಾಗಿತ್ತು. ನಾನು,‌‌ ಸಿದ್ದರಾಮಯ್ಯ ಅವರು, ಸುರ್ಜೇವಾಲ ಅವರು ಚರ್ಚೆ ಮಾಡಿ ಪ್ರಾಥಮಿಕ ಶಿಕ್ಷಣದ ಜವಾಬ್ದಾರಿ ನೀಡಿದೆವು. ಇಂದು ನಾರಾಯಣ ಗುರುಗಳ ಹಾದಿಗೆ ಆಧಾರ ಸ್ಥಂಭವಾಗಿ ನಿಂತು ಕೆಲಸ ಮಾಡುತ್ತಿದ್ದಾರೆ” ಎಂದರು.

“ಜನಾರ್ದನ ಪೂಜಾರಿಯವರನ್ನು ಸಹ ನಾನು ಮರೆಯುವಂತಿಲ್ಲ. ಈ ಹಿಂದೆ ಮಾರವಾಡಿಗಳ ಬಳಿ ಅಡವಿಟ್ಟು ಹೆಚ್ಚಿನ ಬಡ್ಡಿಗೆ ಹಣ ಪಡೆಯಬೇಕಿತ್ತು. ಇಂತಹ ಸಂದರ್ಭದಲ್ಲಿ ಬಡವರಿಗೆ ಸಾಲಮೇಳ ಮಾಡಿ ಹಣಕಾಸಿನ ನೆರವು ನೀಡಿದವರು. ಬ್ಯಾಂಕ್ ನವರೇ ಮನೆ ಬಾಗಿಲಿಗೆ ಹೋಗಿ ಸೇವೆ ನೀಡುವ ಸೌಲಭ್ಯ ಒದಗಿಸಿದರು” ಎಂದು ಹೇಳಿದರು.

Tags: Bangarappabangarappa familyBJPCongress PartyDKShivakumarಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಅತಿವೃಷ್ಟಿಯಿಂದ ಅಪಾರ ಹಾನಿ – ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ 

Next Post

ರಾಜ್ಯದಲ್ಲಿ ಮತಾಂಧರ ಹಾವಳಿ ಮಿತಿ ಮೀರಿದೆ – ಹಿಂದೂಗಳು ಗಣೇಶ ಹಬ್ಬವನ್ನೂ ನೆಮ್ಮದಿಯಾಗಿ ಆಚರಿಸಲಿಲ್ಲ : ಬಿ.ವೈ ವಿಜಯೇಂದ್ರ 

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
Next Post
ರಾಜ್ಯದಲ್ಲಿ ಮತಾಂಧರ ಹಾವಳಿ ಮಿತಿ ಮೀರಿದೆ – ಹಿಂದೂಗಳು ಗಣೇಶ ಹಬ್ಬವನ್ನೂ ನೆಮ್ಮದಿಯಾಗಿ ಆಚರಿಸಲಿಲ್ಲ : ಬಿ.ವೈ ವಿಜಯೇಂದ್ರ 

ರಾಜ್ಯದಲ್ಲಿ ಮತಾಂಧರ ಹಾವಳಿ ಮಿತಿ ಮೀರಿದೆ - ಹಿಂದೂಗಳು ಗಣೇಶ ಹಬ್ಬವನ್ನೂ ನೆಮ್ಮದಿಯಾಗಿ ಆಚರಿಸಲಿಲ್ಲ : ಬಿ.ವೈ ವಿಜಯೇಂದ್ರ 

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada