![](https://pratidhvani.com/wp-content/uploads/2024/06/Cricket-World-Cup-2023-Havan-puja-across-the-country-to-make-1024x686.jpg)
ಟೀಂ ಇಂಡಿಯಾ ಇಂದಿನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಗೆದ್ದು ಬೀಗುವ ವಿಶ್ವಾಸದಲ್ಲಿದೆ. ಈಗಾಗಲೇ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಫೈನಲ್ ಪಂದ್ಯ ಗೆದ್ದಿರುವ ಹುಮ್ಮಸ್ಸಿನಲ್ಲಿದ್ದು, ಇಂದು ವೆಸ್ಟ್ಇಂಡೀಸ್ನ ಬಾರ್ಬಡಾಸ್ ಮೈದಾನದನಲ್ಲಿ ರಾತ್ರಿ 8 ಗಂಟೆಗೆ ಫೈನಲ್ ಪಂದ್ಯ ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಬ್ಲೂಬಾಯ್ಸ್ ಕಾದಾಡಲಿದ್ದು, 16 ವರ್ಷಗಳ ಬಳಿಕ ಭಾರತ ಮತ್ತೆ ಟಿ-20 ವಿಶ್ವಕಪ್ ಮುಡಿಗೇರಿಸಿಕೊಳ್ಳೋ ತವಕದಲ್ಲಿದೆ.
![](https://pratidhvani.com/wp-content/uploads/2024/06/GRPF4k6W0AA7Mts-820x1024.jpeg)
ಟಿ-20 ವಿಶ್ವಕಪ್ ಫೈನಲ್ ಮ್ಯಾಚ್ ನಡೆಯೋ ಪಿಚ್ ಕೂಡ ಭಾರತಕ್ಕೆ ಅನುಕೂಲವಾಗಿದೆ. ಬಾರ್ಬಡಾಸ್ನಲ್ಲಿ ಈ ಬಾರಿ ಒಟ್ಟು 8 ಪಂದ್ಯಗಳು ನಡೆದಿವೆ.. ಮೊದಲ ಪಂದ್ಯ ಸೂಪರ್ ಓವರ್ನಲ್ಲಿ ಮುಕ್ತಾಯ ಆದ್ರೆ, 2ನೇ ಪಂದ್ಯ ಮಳೆಗೆ ಬಲಿಯಾಗಿತ್ತು.. 3 ಪಂದ್ಯಗಳಲ್ಲಿ ಬ್ಯಾಟ್ ಮಾಡಿದ ತಂಡ ಗೆಲುವು ಸಾಧಿಸಿದೆ.. 2 ಬಾರಿ ಚೇಸ್ ಮಾಡಿದ ತಂಡ ಗೆದ್ದು ಬೀಗಿದೆ.. ಈ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭಾರತ ಗೆಲುವು ಸಾಧಿಸಿತ್ತು. ಆದ್ರೆ ದಕ್ಷಿಣ ಆಫ್ರಿಕಾಗೆ ಇದೇ ಮೊದಲ ಬಾರಿಗೆ ಈ ಪಿಚ್ನಲ್ಲಿ ಪಂದ್ಯ ಆಡಲಿದೆ.. ಹೀಗಾಗಿ, ಭಾರತಕ್ಕೆ ಪಿಚ್ ಅನುಕೂಲಕಾರಿ ಎನ್ನಲಾಗ್ತಿದೆ.
ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ರೋಚಕ ಕದನವನ್ನ ಕಣ್ತುಂಬಿಕೊಳ್ಳೋದಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ.. ಈ ಬಾರಿ ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಆಟಗಾರರು ಉತ್ತಮವಾಗಿ ಪ್ರದರ್ಶನ ನೀಡ್ತಿದ್ದಾರೆ. ಹೀಗಾಗಿ ಭಾರತವೇ ಟ್ರೋಫಿ ಎತ್ತಿ ಹಿಡಿಯೋದು ಕನ್ಫರ್ಮ್ ಅಂತಿದ್ದಾರೆ ಅಭಿಮಾನಿಗಳು. ಇನ್ನು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಟ್ರೋಫಿ ಗೆದ್ದು ಬರಲಿ ಅಂತಾ ದೇಶಾದ್ಯಂತ ಪೂಜೆ ಪುನಸ್ಕಾರಗಳು ಜೋರಾಗಿ ನಡೆದಿವೆ. ಚಾಮರಾಜನಗರದ ಹರಳು ಕೋಟೆಯ ಜನಾರ್ಧನ ಸ್ವಾಮಿ ದೇಗುಲದಲ್ಲಿ ಕ್ರಿಕಟ್ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಮೈಸೂರಿನಲ್ಲೂ ಟೀಂ ಇಂಡಿಯಾ ಫೈನಲ್ ಪಂದ್ಯ ಗೆಲ್ಲಲಿ ಅಂತಾ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ
ಬೆಂಗಳೂರಿನಲ್ಲೂ ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಯೊಬ್ಬರು ದೇವರ ಮೊರೆ ಹೋಗಿದ್ದಾರೆ. ಅರುಣ್ ಎಂಬವವರು ರಾಜಾಜಿನಗರದ ನಿಮಿಷಾಂಭ ದೇವಸ್ಥಾನದಲ್ಲಿ ವಿಶೇಷ ಹೋಮ ಹವನ ಮಾಡಿಸಿ, ಭಾರತದ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಕರ್ನಾಟಕ ಮಾತ್ರವಲ್ಲ ದೇಶದ ಹಲವು ಕಡೆಗಳಲ್ಲೂ ಪೂಜೆ ಪುನಸ್ಕಾರ ಜೋರಾಗಿದೆ. ಉತ್ತರ ಪ್ರದೇಶದ ಕಾನ್ಪುರ, ವಾರಾಣಸಿ ಸೇರಿದಂತೆ ದೇಶಾದ್ಯಂತ ಪೂಜೆ ನಡೆಯುತ್ತಿದೆ. ರಾತ್ರಿ 7.30ಕ್ಕೆ ಟಾಸ್ ಆಗಲಿದ್ದು, ರೋಹಿತ್ ಇಂದಿನ ಪಂದ್ಯದಲ್ಲಿ ಕಮಾಲ್ ಮಾಡಿದ್ರೆ ಗೆಲುವು ಫಿಕ್ಸ್ ಎನ್ನುತ್ತಿದ್ದಾರೆ ಕ್ರಿಕೆಟ್ ತಜ್ಞರು. ಇನ್ನು ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡದ ವಿರಾಟ್ ಕೊಹ್ಲಿ ಫೈನಲ್ನಲ್ಲಿ ಕರಾಮತ್ತು ಮಾಡ್ತಾರಾ ಅನ್ನೋ ಕುತೂಹಲ ಅಭಿಮಾನಿಗಳನ್ನು ಕಾಡ್ತಿದೆ.
![](https://pratidhvani.com/wp-content/uploads/2024/06/GRKtCReXoAEgeMp-819x1024.jpeg)