ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದ್ದು, ರಾಜಕೀಯ ನಾಯಕರು ಈಗಾಗಲೇ ಭರ್ಜರಿ ಮತ ಪ್ರಚಾರ ನಡೆಸುತ್ತಿದ್ದಾರೆ. ಶಾಸಕ ಪ್ರೀತಂಗೌಡ ಕೂಡ ಹಾಸನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ ಈ ವೇಳೆ ಮಾತ್ನಾಡಿದ ಅವರು, ʻಜನರು ಪ್ರೀತಂಗೌಡ ಕೆಲಸ ಮಾಡಿದ್ದಾನೆ ಎಂದು ಆಶೀರ್ವಾದ ಮಾಡ್ತಿದಾರೆ. ಮೇ.13 ಕ್ಕೆ ಎರಡನೇ ರೌಂಡ್ಗೆ ತೀರ್ಪು ಗೊತ್ತಾಗುತ್ತೆ, ಆಗ ಯಾರ್ ಯಾರು ಏನೇನು ಮಾಡಬೇಕು ಎಂದು ತೀರ್ಮಾನ ಮಾಡೋಣ ಅಂತ ಟಾಂಗ್ ಕೊಟ್ಟರು. ʻಸ್ವರೂಪ್ ನನ್ನ ಮಗ ಅವನ ಗೆಲ್ಲಿಸೋದೆ ನನ್ನ ಗುರಿʼ ಎಂಬ ಭವಾನಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರೀತಂಗೌಡ, ʻಅವರ ಪ್ರೀತಿ ಸ್ವರೂಪ್ ಮೇಲೆ ಇರೋದು ಗೊತ್ತಾಗಿದೆ. ಇಬ್ಬರು ಹೊಂದಾಣಿಕೆ ಮಾಡಿಕೊಂಡಿರೋದು ಒಳ್ಳೆಯ ಬೆಳವಣಿಗೆ. 2024ಕ್ಕೆ ಅವರ ಮಗ ಎಂಪಿ ಕ್ಯಾಂಡೇಟ್ ಆಗುವುದರಿಂದ ಅವರು ಈ ಎಲ್ಲಾ ಸರ್ಕಸ್ ಮಾಡಬೇಕಾಗುತ್ತೆ. ಚುನಾವಣೆ ಮಾಡ್ತಾ ಇರೋದು 2023ರ ಅಭ್ಯರ್ಥಿ ಗೆಲ್ಲಲಿ ಅಂತ ಅಲ್ಲ. 2024ಕ್ಕೆ ಚುನಾವಣೆ ಮಾಡಲು ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಚುನಾವಣೆ ಮಾಡ್ತಾ ಇದ್ದಾರೆ. 1947ರಲ್ಲಿ ಇದೆಲ್ಲಾ ಮಾಡಿದ್ರೆ ಜನರಿಗೆ ಅರ್ಥ ಆಗ್ತಾ ಇರಲಿಲ್ಲ. ಈಗ ಏನೇ ಮಾಡಿದ್ರು ಜನರಿಗೆ ಗೊತ್ತಾಗುತ್ತೆʼ ಅಂತ ಭವಾನಿ ರೇವಣ್ಣಗೆ ತಿರುಗೇಟು ನೀಡಿದ್ರು.

ʻಹಾಸನದಲ್ಲಿ ಕ್ಯಾಂಡೇಟ್ ಹೆಸರು ಗೊತ್ತಿಲ್ಲ ಅಂದವರು ಈಗ ಮಗ ಅಂತ ಯಾಕೆ ಹೇಳ್ತಾ ಇದಾರೆ? ಇದೆಲ್ಲ ರಾಜಕಾರಣದಲ್ಲಿ ಸಹಜ ಅಲ್ವಾ? 2024 ಅವರಿಗೆ ನೆನಪಾಗ್ತಾ ಇದೆ. 2023ರ ಚುನಾವಣಾ ಫಲಿತಾಂಶ ಮುಗಿದು ಹೋಗಿದೆ. 2024ಕ್ಕಾದ್ರೂ ನಾವು ಉಳಿಬೇಕಾದ್ರೆ ಏನಾದ್ರೂ ಮಾಡಬೇಕಲ್ಲ ಅಂತ ಮಾಡ್ತಾ ಇದ್ದಾರೆ. ಮಗ ಅಮ್ಮ, ತಂದೆ ತಾಯಿ ಎಲ್ಲಾ ನೆನಪಿಗೆ ಬರ್ತಾ ಇದೆ. ಅವರು ಒಂದಾಗಿರೋದು ಅವರ ಪಾರ್ಟಿಗೆ ಒಳ್ಳೆಯದು. ಹೀಗೆ ಒಂದಾಗಿದ್ದು ಅವರ ಕಾರ್ಯಕರ್ತರಿಗೆ ಸ್ಪೂರ್ತಿ ನೀಡಲಿ ಅಂತ ಹೇಳಿದ್ರು. ʻಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ಇರಬೇಕು, ಇಲ್ಲಾಂದ್ರೆ ಕೆಲಸ ಮಾಡಬೇಕು. ಈ ಏರಿಯಾದಲ್ಲಿ ಮೂರುವರೆ ಸಾವಿರ ಮತ ಇದೆ. ಯಾವ ಕಾರಣಕ್ಕೆ ಮತ ಹಾಕಬೇಕು ಅಂತಾ ತೋರಿಸ್ತೀನಿ ನೋಡಿ ಈ ರಾಜಕಾಲುವೆ ಮಳೆಗಾಲದಲ್ಲಿ ತುಂಬಿ ಹರಿದು ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದರು.ಈಗ ಜನರು ನೆಮ್ಮದಿಯಿಂದ ಇರುವಂತೆ ಮಾಡಿದ್ದೀನಿ. ಈ ಭಾಗದ ಜನರಿಗೆ ಹಕ್ಕು ಪತ್ರ ಇರಲಿಲ್ಲ ನಾನು ಬಂದು ಕೊಡಿಸಿದ್ದೀನಿ. ಅಭಿವೃದ್ಧಿ ಅಂದರೆ ಇದುʼ ಅಂತ ಜೆಡಿಎಸ್ ನಾಯಕರಿಗೆ ಶಾಸಕ ಪ್ರೀತಂಗೌಡ ತಿರುಗೇಟು ಕೊಟ್ಟರು.