ನಿನ್ನೆ ಎಸ್ಐಟಿ (SIT) ಅಧಿಕಾರಿಗಳು ದೇವೇಗೌಡರ (Devegowda) ನಿವಾಸದ ಮುಂದೆ ಜಮಾಯಿಸಿ ಬರೋಬ್ಬರಿ ಮುಕ್ಕಾಲು ಗಂಟೆ ಕಾದ್ರು ,ರೇವಣ್ಣರ (Revanna) ದರ್ಶನ ಮಾತ್ರ ಸಿಗಲಿಲ್ಲ. ಕೊನೆಗೆ ಮುಕ್ಕಾಲು ಗಂಟೆ ಕಾಯಿಸಿದ ಬಳಿಕ ತಾವೇ ಡೋರ್ (Door) ಓಪನ್ ಮಾಡಿ ಮನೆಯಿಂದ ಹೊರಬಂದ ರೇವಣ್ಣ ಎಸ್ಐಟಿ ತಂಡದ ಮುಂದೆ ಶರಣಾದ್ರು.

ಅಷ್ಟಕ್ಕೂ ಈ ಮುಕ್ಕಾಲು ಗಂಟೆ ರೇವಣ್ಣ ಮಾಡಿದ್ದೇನು ಅನ್ನೋದೆ ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿತ್ತು. ರೇವಣ್ಣ ಅರೆಸ್ಟ್ (Arrest) ಭೀತಿಯಿಂದ ಬಾಗಿಲು ತೆಗಿಯದೆ ಹೈ ಡ್ರಾಮಾ (Highdrama) ನಡೆಸಿದ್ದಾರೆ ಎನ್ನಲಾಗ್ತಿತ್ತು. ಆದ್ರೆ ವಿಷಯ ಅದಲ್ಲ.
ರೇವಣ್ಣ ಮೊದಲೇ ಎಲ್ಲದಕ್ಕೂ ಘಳಿಗೆ-ಮಹೂರ್ತ ನೋಡೋದು ಎಲ್ಲರಿಗೂ ಗೊತ್ತಿದೆ. ಹಾಗೇ ಶರಣಾಗಲು ಸಹ ಮಹೂರ್ತ ಫಿಕ್ಸ್ ಮಾಡಿಕೊಂಡಿದ್ರಂತೆ. ಸಂಜೆ 6.50ಕ್ಕೆ ಶರಣಾಗಬೇಕು ಅಂತ ರೇವಣ್ಣ ಕಾದುಕುಳಿತಿದ್ರಂತೆ. ಇದ್ದಿದ್ರಿಂದ ರೇವಣ್ಣ ಇದನ್ನ ಕಳೆದು ಲಾಭ ಲಗ್ನದಲ್ಲೇ ಶರಣಾಗ್ಬೇಕು ಅಂತ ತೀರ್ಮಾನಿಸಿದ್ರು ಎನ್ನಲಾಗ್ತಿದೆ.