‘ಚಾಲೆಂಜಿಂಗ್ ಸ್ಟಾರ್’ ಪ್ರೀತಿಯ ದರ್ಶನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ದೇವರು ನಿಮ್ಮ ಸಂಕಷ್ಟಗಳನ್ನೆಲ್ಲ ದೂರ ಮಾಡಲಿ, ಇನ್ನೂ ಹೆಚ್ಚಿನ ಕಲಾ ಸೇವೆಗಾಗಿ ಉತ್ತಮ ಆಯುಷ್ಯ, ಆರೋಗ್ಯ ಮತ್ತು ಯಶಸ್ಸನ್ನು ನೀಡಲಿ ಎಂದು ಮಾಜಿ ಸಂಸದೆ ಹಾಗೂ ದರ್ಶನ್ ಅವರ ನೆಚ್ಚಿನ ಸುಮಲತಾ ಅಂಬರೀಷ್, ನಟ ಅಂಬರೀಶ್ ಜೊತೆಗಿನ ದರ್ಶನ್ ಫೋಟೋ ಶೇರ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಮಗನಿಗೆ ಪ್ರೀತಿಯ ತಾಯಿ ಹರಸಿದ್ದಾರೆ.

ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲಿನಲ್ಲಿದ್ದಾರೆ. ಇತ್ತೀಚಿಗಷ್ಟೇ ಅವರ ಅನುಪಸ್ಥಿಯಲ್ಲಿಯೇ ಬಹುನಿರೀಕ್ಷಿತ ಚಿತ್ರ ದಿ ಡೆವಿಲ್ ಸಿನಿಮಾ ಬಿಡುಗಡೆಯಾಗಿತ್ತು. ಅಭಿಮಾನಿಗಳು ಸಿನಿಮಾವನ್ನು ಎತ್ತಿ ಹಿಡಿಯುವ ಮೂಲಕ ನೆಚ್ಚಿನ ನಟನ ಮೇಲಿನ ಅಭಿಮಾನ ಮೆರೆದಿದ್ದರು. ಆದರೆ ಇಂದೂ ಸಹ ದರ್ಶನ್ ಗೈರಿನಲ್ಲಿಯೇ ಫ್ಯಾನ್ಸ್ ಬೇಸರದಲ್ಲಿ ಹುಟ್ಟು ಹಬ್ಬ ಆಚರಿಸುವಂತಾಗಿದೆ.






