ಹುಬ್ಬಳ್ಳಿಯ ನೇಹಾ ಹಿರೇಮಠ್ ಕೊಲೆ ಕೇಸ್ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ ಮಾಡಿದೆ. ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ‘ಆದಷ್ಟು ಬೇಗ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ’ ‘ಶೀಘ್ರ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಮನವಿ’ ಮಾಡಲಾಗಿದೆ ಎಂದಿದ್ದಾರೆ. ಈ ಮೂಲಕ ರಾಜಕೀಯ ಕೆಸರೆರಚಾಟಕ್ಕೆ ತೆರೆ ಎಳೆಯಲು ಯತ್ನ ಮಾಡಿದ್ದಾರೆ.
![](https://pratidhvani.com/wp-content/uploads/2024/04/1stgbbq_siddaramaiah_625x300_29_December_23-1024x630.png)
ನೇಹಾ ಕೊಲೆ ಕೇಸ್ ತನಿಖೆ ನಡೆಸುವ ಉದ್ದೇಶದಿಂದ ವಿಶೇಷ ಕೋರ್ಟ್ ರಚನೆ ಮಾಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇನ್ನು ನೇಹಾ ಹಿರೇಮಠ ಹತ್ಯೆ ಮಾಡಿದ ಆರೋಪಿ ಫಯಾಜ್ ಚಾಕು ಹಾಕಿದ್ದು ಒಂದಲ್ಲ, ಎರಡಲ್ಲ 14 ಬಾರಿ ಅನ್ನೋದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ.
![](https://pratidhvani.com/wp-content/uploads/2024/04/neha-fayaz-1-1024x581.webp)
ನೇಹಾ ಹಿರೇಮಠ ಹೃದಯಕ್ಕೆ ಮೊದಲು ಚಾಕು ಹಾಕಿದ್ದ ಆರೋಪಿ ಫಯಾಜ್, ಆ ಬಳಿಕ ನೇಹಾ ದೇಹದ ಮೇಲೆ 14 ಬಾರಿ ಇರಿದಿದ್ದ. ನೇಹಾ ಹಿರೇಮಠ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆ ಆಗಿದೆ. ಕುತ್ತಿಗೆಗೆ ಇರಿಯುತ್ತಿದ್ದಂತೆ ರಕ್ತನಾಳ ಕಟ್ ಆಗಿ ಅತಿಯಾದ ರಕ್ತಸ್ರಾವ ಆಗಿತ್ತು.
![](https://pratidhvani.com/wp-content/uploads/2024/04/images-24.jpg)
ತೀವ್ರ ರಕ್ತಸ್ರಾವದಿಂದ ನೇಹಾ ಪ್ರಾಣಪಕ್ಷಿ ಹಾರಿಹೋಗಿದೆ ಎಂಬ ಸಾವಿನ ಸೀಕ್ರೆಟ್ ಮರಣೋತ್ತರ ಪರೀಕ್ಷೆಯಲ್ಲಿ ರಿವೀಲ್ ಆಗಿದೆ. ನೇಹಾ ಸಾವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೀತು. ಧಾರವಾಡದಲ್ಲಿ ಅರ್ಧ ದಿನ ಬಂದ್ ಕೂಡ ಆಚರಣೆ ಮಾಡಲಾಗಿದೆ.