ಇಂದು (ಮಾ.೭) ಸಿಎಂ ಸಿದ್ದರಾಮಯ್ಯ (Cm siddaramaiah) 2025-26ನೇ ಸಾಲಿನ ಬಜೆಟ್ (2025-26 state budget) ಮಂಡನೆ ವೇಳೆ ಸ್ವಾರಸ್ಯಕರ ಪ್ರಸಂಗ ನಡೆದಿದ್ದು, ಒಳ ಮೀಸಲಾತಿ ವಿಚಾರ ಸದ್ದು ಮಾಡಿದೆ.

ಹೌದು, ಸಿಎಂ ಸಿದ್ದರಾಮಯ್ಯ ಸುಧೀರ್ಘವಾಗಿ ಬಜೆಟ್ ಮಂಡನೆ ಮಾಡುವ ವೇಳೆ, ಕೂಡಲೇ ಒಳ ಮೀಸಲಾತಿ ಜಾರಿ ಮಾಡುವಂತೆ ಸದನದ ಗ್ಯಾಲರಿಯಲ್ಲಿ ಘೋಷಣೆಗಳನ್ನು ಕೂಗಲಾಗಿದೆ.
ಸಿಎಂ ಸಿದ್ದರಾಮಯ್ಯ ಬಜೆಟ್ ಓದುವಾಗ ಈ ರೀತಿ ಕೂಗು ಕೇಳಿಬಂದಿದ್ದು, ಈ ವೇಳೆ ಸಿಎಂ ಕೆಲ ಕಾಲ ಬಜೆಟ್ ಓದುವುದನ್ನು ನಿಲ್ಲಿಸಿದ್ದರು. ಆ ನಂತರ ಸ್ಪೀಕರ್ ಆದೇಶದ ಅನ್ವಯ ಘೋಷಣೆ ಕೂಗಿದ ವ್ಯಕ್ತಿಗಳನ್ನು ಮಾರ್ಷಲ್ ಗಳು ವಶಕ್ಕೆ ಪಡೆದಿದ್ದಾರೆ.