ಇಡೀ ದೇಶವೇ ಬೆಚ್ಚಿ ಬೀಳಿಸಿದ ಶ್ರದ್ದಾ ವಾಲ್ಕರ್(26) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮಗಳ ಸಾವಿಗೆ ಮಹಾರಾಷ್ಟ್ರ ಪೊಲೀಸರೆ ನೇರ ಕಾರಣ ಎಂದು ಯುವತಿ ತಂದೆ ವಿಕಾಸ್ ವಾಲ್ಕರ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ವಿಕಾಸ್ ಮೊದಲು ಮುಂಬೈನ ಪಾಲ್ಘರ್ ಪೊಲೀಸರ ವಿರುದ್ದ ತನಿಖೆ ನಡೆಸಬೇಕು ಮೊದಲಿಗೆ ಪ್ರಿಯಕರ ಅಫ್ತಾಬ್ ವಿರುದ್ದ ದೂರು ದಾಖಲಿಸಿದಾಗ ತನಿಖೆ ನಡೆಸದೆ ಬೇಜವಾಬ್ದಾರಿತನ ಮೆರೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಪ್ರಿಯಕರ ಅಫ್ತಾಬ್ನನ್ನು ಗಲ್ಲಿಗೇರಿಸಬೇಕು ಮತ್ತು ಆತನ ಕುಟುಂಬ ಸದಸ್ಯರ ವಿರುದ್ದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ 18 ವರ್ಷ ತುಂಬಿದ ನಂತರ ಯುವಕರಿಗೆ ನೀಡುವ ಸ್ವಾತಂತ್ರ್ಯದ ಬಗ್ಗೆ ಚಿಂತಿಸಬೇಕು ಮತ್ತು ಆನ್ಲೈನ್ ಡೇಟಿಂಗ್ ಆ್ಯಪ್ಗಳ ಮೇಲೆ ನಿಯಂತ್ರಣ ಹೇರಬೇಕು ಮತ್ತು 18 ವರ್ಷ ತುಂಬಿದ ನಂತರ ಯುವಕ ಯುವತಿಯರಿಗೆ ಕೌನ್ಸಿಲಿಂಗ್ನ ಅ vಶ್ಯಕತೆಯಿದೆ ಯಾಕೆಂದರೆ ನನ್ನ ಮಗಳು ಮನೆಯಿಂದ ಹೊರಡುವ ವೇಳೆ ನಾನು ಮೇಜರ್ ಎಂದು ಹೇಳಿದ್ದಳು ಎಂದು ಹೇಳಿದ್ದಾರೆ.