ಹಾಸನ (Hassan) ಪೆನ್ಡ್ರೈವ್ (Pendrive) ಪ್ರಕರಣ ಎಸ್ಐಟಿ (SIT) ರದ್ದು ಮಾಡಿ ಪ್ರಕರಣವನ್ನ ಸಿಬಿಐಗೆ (CBI) ವಹಿಸುವಂತೆ ಜೆಡಿಎಸ್ (Jds) ಕಾರ್ಯಕರ್ತರು ಮೈಸೂರಿನಲ್ಲಿ ವ್ಯಾಪಕ ಪ್ರತಿಭಟನೆ ಮಾಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯ (Cm siddaramiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗೆ (Dk shivakumar) ಧಿಕ್ಕಾರ ಕೂಗಿ ಜೆಡಿಎಸ್ ಕಾರ್ಯಕರ್ತರು ಪ್ರೊಟೆಸ್ಟ್ ನಡೆಸಿದ್ದಾರೆ.
![](https://pratidhvani.com/wp-content/uploads/2024/05/IMG_7521.jpeg)
ಮೈಸೂರಿನ (Mysuru) ನೂತನ ಜಿಲ್ಲಾಧಿಕಾರಿ ಕಚೇರಿ ಬಳಿ ತಲೆ ಹಾಗೂ ಕೈಗೆ ಕಪ್ಪು ಪಟ್ಟಿ ಧರಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಇನ್ನೂ ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಸಚಿವ ಸಾ ರಾ ಮಹೇಶ್ (sara mahesh) ಕಾಂಗ್ರೆಸ್ (congress) ಮುಖಂಡರು ಹೇಳಿದ ರೀತಿ ಎಸ್ ಐಟಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ರು.
ಎಸ್ಐಟಿ ಸಂತ್ರಸ್ಥೆಯಿಂದ ನ್ಯಾಯಾಧೀಶರ ಮುಂದೆ ಯಾಕೆ ಹೇಳಿಕೆ ಕೊಡಿಸಿಲ್ಲ. ಇಡೀ ಪ್ರಪಂಚದಲ್ಲಿ ಹೆಣ್ಣು ಮಕ್ಕಳ ಜೀವನವನ್ನ ಹಾಳು ಮಾಡಿದ ಪಿತಾಮಹರು ಯಾರು. ಅಧಿಕಾರಿಗಳ ಮೂಲಕ ನಮ್ಮ ಪಕ್ಷವನ್ನ ಮುಗಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಸಂತ್ರಸ್ತೆಗೆ ಹೇಳಿಕೆ ನೀಡುವಂತೆ ಬಲವಂತ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು.