ಬೆಂಗಳೂರು: ಪೊಲೀಸರ ಹೆಸರೇಳಿ ರಾಬರಿ ಕೃತ್ಯ ಮಾಡಿದ್ದ 6 ಮಂದಿಯನ್ನ HAL ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ನಜಾಸ್, ಸರುಣ್, ಬೆಂಗಳೂರಿನ ವಿಷ್ಣು ಕೆ.ಟಿ, ದಿವಾಕರ್, ಮಧುಕುಮಾರ್, ಕಿರಣ್ ಬಂಧಿತ ಆರೋಪಿಗಳು.
ಇತ್ತೀಚೆಗೆ ಸ್ಪೈಸ್ ಗಾರ್ಡನ್ ಪಿಜಿ ಯುವತಿಗೆ ಕೇರಳದ ನಜಾಸ್ ಪರಿಚಯವಾಗಿದ್ದ. ಬಳಿಕ ಸಲುಗೆ ಬೆಳೆದ ಕಾರಣ ಯುವತಿ ನಜಾಸ್ ಬರ್ತ್ ಡೇ ಸೆಲೆಬ್ರೆಟ್ ಮಾಡಲು ತನ್ನ ಕೋ ಲಿವಿಂಗ್ ಪಿಜಿಗೆ ಕರೆದಿದ್ದಳು. ಈ ವೇಳೆ ನಜಾಸ್ ತನ್ನ ಗೆಳೆಯನ ಜೊತೆ ಯುವತಿಯ ಪಿಜಿಗೆ ಹೋಗಿದ್ದ. ಆದರೆ ಮಧ್ಯರಾತ್ರಿಯಲ್ಲಿ ಜೊಮೊಟೋ ಡಿಲಿವರಿ ಬಾಯ್ ಎಂದು ಬಾಗಿಲು ತಟ್ಟಿದ್ದ 4-5 ಮಂದಿ ಬಾಗಿಲು ಒಳಗೆ ಬಂದಾಗ ನಾವು ಪೊಲೀಸರು, ಪಿಜಿಯಲ್ಲಿ ಗಾಂಜಾ ಇದ್ಯಾ ಅಂತ ಹೆದರಿಸಿ, ಮನೆ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇಬ್ಬರು ಯುವತಿಯರ ಬಳಿಯಿದ್ದ ಎರಡು ಮೊಬೈಲ್ ಕಸಿದು, 5 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿ, ಕೊಡದಿದ್ದರೆ ಮತ್ತೆ ಬರುವುದಾಗಿ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದರು.

ಘಟನೆ ಬಗ್ಗೆ ಯುವತಿ HAL ಪೊಲೀಸರಿಗೆ ದೂರು ನೀಡಿದ್ದಳು. ತನಿಖೆ ವೇಳೆ ಯುವತಿ ಗೆಳೆಯ ನಜಾಸ್ ಈ ರಾಬರಿ ಪ್ಲಾನ್ ಮಾಡಿದ್ದು ಬಯಲಾಗಿದೆ. ನಜಾಸ್ ಯುವತಿ ಪಿಜಿಗೆ ಬಂದಾಗ ಏನಾದ್ರು ಸಿಗಬಹುದು ಅಂತ ತನ್ನ ಗೆಳೆಯರಿಗೆ ಕರೆ ಮಾಡಿ ರಾಬರಿ ಪ್ಲಾನ್ ಮಾಡಿದ್ದ ಎಂದು ಗೊತ್ತಾಗಿದೆ. ಬಳಿಕ ಬಂಧಿತ ಆರು ಜನರಲ್ಲಿ ಸರುಣ್ ಈ ಹಿಂದೆ ಹನಿಟ್ರ್ಯಾಪ್ ಕೇಸ್ ನಲ್ಲೂ ಬಂಧಿತನಾಗಿದ್ದ ಎಂದು ಗೊತ್ತಾಗಿದೆ. ಆದರೆ ಇದೇ ಅನುಭವ ಇಟ್ಟಕೊಂಡು ರಾಬರಿ ಮುಂದಾಗಿ ಮತ್ತೆ ಬಂಧನವಾಗಿದ್ದಾನೆ.






