ಲಕ್ನೋ: ಬಿಹಾರದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 95 ಮಕ್ಕಳನ್ನು ರಕ್ಷಿಸಲಾಗಿದೆ.
![](https://pratidhvani.com/wp-content/uploads/2024/04/pro-3.webp)
ಬಿಹಾರದಿಂದ (Bihar) ಉತ್ತರ ಪ್ರದೇಶಕ್ಕೆ ಸಾಗಿಸುತ್ತಿದ್ದ 95 ಮಕ್ಕಳನ್ನು ಅಯೋಧ್ಯೆಯಲ್ಲಿ (Ayodhya) ಮಕ್ಕಳ ಆಯೋಗದ (Child Commission) ಅಧಿಕಾರಿಗಳು ರಕ್ಷಿಸಿದ್ದಾರೆ. ಮಕ್ಕಳ ಕಳ್ಳಸಾಗಾಣಿಕೆಯ ಆತಂಕ ಈಗ ಮನೆ ಮಾಡಿದೆ.
![](https://pratidhvani.com/wp-content/uploads/2024/04/childrens.jpg)
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸರ್ವೇಶ್ ಅವಸ್ತಿ, ಯುಪಿ ಮಕ್ಕಳ ಆಯೋಗದ ಸದಸ್ಯೆ ಸುಚಿತ್ರಾ ಚತುರ್ವೇದಿ ತಂಡ ಮಕ್ಕಳನ್ನು ರಕ್ಷಿಸಿದೆ. ಇಲ್ಲಿ ಸಾಗಿಸುತ್ತಿದ್ದ ಮಕ್ಕಳ ಪೋಷಕರಿಂದ ಯಾವುದೇ ಒಪ್ಪಿಗೆ ಪತ್ರ ಅಲ್ಲಿದ್ದವರ ಬಳಿ ಇರಲಿಲ್ಲ. ಸಾಗಿಸುತ್ತಿದ್ದ ವಾಹನದಲ್ಲಿ ಸುಮಾರು 4 ರಿಂದ 12 ವರ್ಷದೊಳಗಿನ ಮಕ್ಕಳಿದ್ದಾರೆ. ಮಕ್ಕಳ ಪೋಷಕರನ್ನು ಸಂಪರ್ಕಿಸಲಾಗುತ್ತಿದೆ. ಮಕ್ಕಳಿಗೆ ವೈದ್ಯಕೀಯ ನೆರವು ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.