ದರ್ಶನ್ & ಗ್ಯಾಂಗ್ (Darshan & gang) ಸದ್ಯ ಅಂದರ್ ಆಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case), ಇದೀಗ ಕನ್ನಡ ಸ್ವಾರ್ ನಟ, ರೇಣುಕಾಸ್ವಾಮಿ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ. ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ನೈತಿಕ ಬೆಂಬಲಕ್ಕೆ ನಿಂತಿದ್ದಾರೆ.
ಸ್ಟಾರ್ ನಟ ಧ್ರುವ ಸರ್ಜಾ (Druva sarja) ಇಂಥ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ. ಧ್ರುವ ಅಭಿಮಾನಿ ಸಂಘದ ಅಧ್ಯಕ್ಷ ರೇಣುಕಾಸ್ವಾಮಿ ಕುಟುಂಬಸ್ಥರನ್ನ ಭೇಟಿ ಮಾಡಿ, ಸಾಂತ್ವನ ಹೇಳಿ,ಜೊತೆಗೆ ಧನಸಹಾಯ ಮಾಡಿದ್ರು.
ಈ ವೇಳೆ ದೂರವಾಣಿ ಮೂಲಕ ನಟ ಧ್ರುವ ಸರ್ಜಾ ಕೂಡ ರೇಣುಕಾಸ್ವಾಮಿ ಪೋಷಕರ ಜೊತೆ ಮಾತನಾಡಿದ್ದು, ನಿಮ್ಮೊಂದಿಗೆ ಸದಾ ನಾವು ಇದ್ದೀವಿ, ಏನೇ ಇದ್ದರೂ ತಿಳಿಸಿ ಎಂದು ಧೈರ್ಯ ತುಂಬುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.